AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವುಗಳ ಸಹಾಯದಿಂದ ತುಕ್ಕು ಹಿಡಿದ ಕಬ್ಬಿಣ, ಸ್ಟೀಲ್‌ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು

ಮನೆಯಲ್ಲಿರುವ ಅನೇಕ ವಸ್ತುಗಳು ಕಬ್ಬಿಣ ಮತ್ತು ಸ್ಟೀಲ್‌ನದ್ದಾಗಿರುತ್ತವೆ. ಹೌದು ಬಾಗಿಲಿನ ಹಿಡಿಕೆ, ಕಿಟಕಿ ರಾಡ್‌, ಗೇಟ್‌, ಬಾಲ್ಕಿನಿ ರೇಲಿಂಗ್‌ ಇವೆಲ್ಲವೂ ಬಹುತೇಕ ಸ್ಟೀಲ್‌ ಅಥವಾ ಕಬ್ಬಿಣದ್ದಾಗಿರುತ್ತವೆ. ಧೂಳು, ಮಳೆ ನೀರಿನ ಕಾರಣದಿಂದಾಗಿ ಸಮಯ ಕಳೆದಂತೆ ಈ ವಸ್ತುಗಳು ತುಕ್ಕು ಹಿಡಿಯಲು ಪ್ರಾರಂಭಿಸುತ್ತವೆ. ಇದು ಮನೆಯ ಒಟ್ಟಾರೆ ನೋಟವನ್ನೇ ಹಾಳು ಮಾಡಿಬಿಡುತ್ತದೆ. ಹೀಗಿರುವಾಗ ಇವುಗಳನ್ನು ಸ್ವಚ್ಛಗೊಳಿಸಲು ದುಬಾರಿ ಕ್ಲೀನರ್‌ಗಳನ್ನು ಬಳಸುವ ಬದಲುಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ತುಕ್ಕು ತೆಗೆದುಹಾಕಬಹುದು.

ಇವುಗಳ ಸಹಾಯದಿಂದ ತುಕ್ಕು ಹಿಡಿದ ಕಬ್ಬಿಣ, ಸ್ಟೀಲ್‌ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 17, 2026 | 7:29 PM

Share

ಸಾಮಾನ್ಯವಾಗಿ ಕಬ್ಬಿಣ ಮತ್ತು ಸ್ಟೀಲ್‌ ವಸ್ತುಗಳು ಕಾಲ ಕಳೆದಂತೆ ತುಕ್ಕು (rust) ಹಿಡಿಯಲು ಪ್ರಾರಂಭಿಸುತ್ತವೆ. ಅದರಲ್ಲೂ ಈ ಮನೆ ಗೇಟ್‌, ಬಾಲ್ಕನಿ ರೇಲಿಂಗ್‌, ಕಿಟಕಿ ರಾಡ್‌ಗಳು ಧೂಳು ಮತ್ತು ಮಳೆ ನೀರಿನಿಂದಾಗಿ ತುಕ್ಕು ಹಿಡಿಯಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಹೊಳಪು ಕೂಡ ಮಸುಕಾಗುತ್ತದೆ. ಇದಲ್ಲದೆ ಬಾಗಿಲಿನ ಹಿಡಿಕೆ, ಕತ್ತರಿ, ಕಬ್ಬಿಣದ ಪಾತ್ರೆಗಳು ಸಹ ತುಕ್ಕು ಹಿಡಿಯುತ್ತವೆ. ತುಕ್ಕು ಹಿಡಿದಂತಹ ಈ ವಸ್ತುಗಳನ್ನು ಸ್ವಚ್ಛಗೊಳಿಸಲು ಅನೇಕರು ದುಬಾರಿ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ರಾಸಾಯನಿಕಯುಕ್ತ ಉತ್ಪನ್ನಗಳು ಸರಿಯಾದ ಫಲಿತಾಂಶಗಳನ್ನು ನೀಡುವುದಿಲ್ಲ. ಹೀಗಿರುವಾಗ ಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ತುಕ್ಕು ಹಿಡಿದ ಸ್ಟೀಲ್‌ ಮತ್ತು ಕಬ್ಬಿಣದ ವಸ್ತುಗಳನ್ನು ಸುಲಭವಾಗಿ ಕ್ಲೀನ್‌ ಮಾಡಬಹುದು.

ತುಕ್ಕು ಹಿಡಿದ ಕಬ್ಬಿಣ, ಸ್ಟೀಲ್‌ ವಸ್ತುಗಳನ್ನು ಕ್ಲೀನ್‌ ಮಾಡೋದೇಗೆ?

ವಿನೆಗರ್ ಬಳಸಿ:

ತುಕ್ಕು ಹಿಡಿದ ವಸ್ತುಗಳನ್ನು ಕ್ಲೀನ್‌ ಮಾಡಲು ನೀವು ವಿನೆಗರ್‌ ಕೂಡ ಬಳಸಬಹುದು.  ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಅದನ್ನು ತುಕ್ಕು ಹಿಡಿದ ವಸ್ತುಗಳ ಮೇಲೆ ಸಿಂಪಡಿಸಿ ಮತ್ತು 5-10 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಮೃದುವಾದ ಬಟ್ಟೆಯಿಂದ ಒರೆಸಿ. ವಿನೆಗರ್‌ನಲ್ಲಿರುವ ಆಮ್ಲವು ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಅಡಿಗೆ ಸೋಡಾ ಮತ್ತು ನಿಂಬೆ ಮಿಶ್ರಣ:

ಬಾಗಿಲಿನ ಹಿಡಿಕೆ, ಬಾಲ್ಕನಿ ರೇಲಿಂಗ್‌ ಅಥವಾ ಇನ್ಯಾವುದೇ ಕಬ್ಬಿಣ ಮತ್ತು ಸ್ಟೀಲ್‌ ವಸ್ತುಗಳು ತುಕ್ಕು ಹಿಡಿದಿದ್ದರೆ ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ನಿಂಬೆಯನ್ನು ಬಳಕೆ ಮಾಡಬಹುದು. ಸ್ವಲ್ಪ ನಿಂಬೆ ರಸವನ್ನು ಅಡಿಗೆ ಸೋಡಾದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಇದನ್ನು ತುಕ್ಕು ಹಿಡಿದ ವಸ್ತುಗಳಿಗೆ ಲೇಪಿಸಿ 15-20 ನಿಮಿಷಗಳ ಕಾಲ ಬಿಡಿ. ನಂತರ, ಹಳೆಯ ಹಲ್ಲುಜ್ಜುವ ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ:

ಅಡುಗೆ ಸೋಡಾ ಮತ್ತು ನೀರನ್ನು ಸೇರಿಸಿ ದಪ್ಪ ಪೇಸ್ಟ್ ಮಾಡಿ ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ಬ್ರಷ್ ಅಥವಾ ಬಟ್ಟೆಯಿಂದ ಸ್ಕ್ರಬ್ ಮಾಡಿ. ಈ ಪೇಸ್ಟ್ ತುಕ್ಕು ಸಡಿಲಗೊಳಿಸುತ್ತದೆ, ಸುಲಭವಾಗಿ ತೆಗೆಯಬಹುದು.

ತೆಂಗಿನ ಎಣ್ಣೆ: 

ಕಿಟಕಿ, ಬಾಗಿಲಿನ ಹಿಡಿಕೆಗಳಲ್ಲಿ ಸ್ವಲ್ಪ ತುಕ್ಕು ಇದ್ದರೆ, ಹಳೆಯ ಹಲ್ಲುಜ್ಜುವ ಬ್ರಷ್‌ಗೆ ತೆಂಗಿನ ಎಣ್ಣೆಯನ್ನು ಹಚ್ಚಿ ತುಕ್ಕು ಹಿಡಿದ ಜಾಗವನ್ನು ಉಜ್ಜಿಕೊಳ್ಳಿ. ಇದು ತುಕ್ಕು ತೆಗೆದುಹಾಕುತ್ತದೆ ಮತ್ತು ಎಣ್ಣೆ ಅಂಶ ತುಕ್ಕು ರೂಪುಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಡಬ್ಬಗಳಲ್ಲಿ ಶೇಖರಿಸಿಡುವ ಅಕ್ಕಿಯಲ್ಲಿ ಹುಳಗಳಾಗಂತೆ ತಡೆಯಲು ಸಿಂಪಲ್‌ ಟಿಪ್ಸ್‌ ಪಾಲಿಸಿ

ನಿಂಬೆ ಮತ್ತು ಉಪ್ಪು: 

ಆಮ್ಲೀಯ ಗುಣವನ್ನು ಹೊಂದಿರುವ ನಿಂಬೆ ತುಕ್ಕು ತೆಗೆಯುವಲ್ಲಿ ಬಹಳ ಪರಿಣಾಮಕಾರಿ. ತುಕ್ಕು ಹಿಡಿದ ಸ್ಟೀಲ್‌, ಕಬ್ಬಿಣದ ವಸ್ತುಗಳ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ ಮತ್ತು ಅದರ ಮೇಲೆ ನಿಂಬೆ ರಸವನ್ನು ಹಿಂಡಿ. ಅರ್ಧ ಗಂಟೆಯ ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದರಿಂದ ಸುಲಭವಾಗಿ ತುಕ್ಕು ತೆಗೆದುಹಾಕಬಹುದು.

ಬೋರಾಕ್ಸ್ ಪೌಡರ್:

ಕಬ್ಬಿಣದ ವಸ್ತುಗಳಿಂದ ತುಕ್ಕು ತೆಗೆಯಲು ಬೋರಾಕ್ಸ್ ಪೌಡರ್ ಅನ್ನು ಸಹ ಬಳಸಬಹುದು. ಇದನ್ನು ಮಾಡಲು, ಮೂರರಿಂದ ನಾಲ್ಕು ಟೀ ಚಮಚ ಬೋರಾಕ್ಸ್ ಪೌಡರ್ ತೆಗೆದುಕೊಂಡು ಅದನ್ನು ಒಂದು ಟೀ ಚಮಚ ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ತುಕ್ಕು ಹಿಡಿದ ಜಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಬಿಡಿ. ನಂತರ, ಸ್ಯಾಂಡ್‌ ಪೇಪರ್‌ನಿಂದ ಉಜ್ಜಿ, ಇದರಿಂದ ತುಕ್ಕು ಹೋಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್