AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರೇ ಮೈಸೂರಿಗೆ ಹೋದ್ರೆ ‘ಮಧುವನ’ ಕ್ಕೆ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?

ಮೈಸೂರಿನ ಮಧುವನವು ಒಡೆಯರ್ ರಾಜಮನೆತನದ ಸ್ಮಶಾನಭೂಮಿಯಾಗಿದ್ದು, ಅರಸರ ಹಾಗೂ ಅವರ ಕುಟುಂಬದವರ ಸ್ಮಾರಕಗಳನ್ನು ಹೊಂದಿದೆ. ಮೈಸೂರು ಅರಮನೆಗೆ ಬರುವ ಅನೇಕರಿಗೆ ಇದರ ಇತಿಹಾಸ ತಿಳಿದಿಲ್ಲ. ವಾಸ್ತುಶಿಲ್ಪ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿರುವ ಈ ಸ್ಥಳಕ್ಕೆ ಪ್ರವೇಶ ನಿರ್ಬಂಧಿತವಾಗಿದ್ದು, ಸಂಶೋಧಕರು ಮತ್ತು ಇತಿಹಾಸಾಸಕ್ತರಿಗೆ ಮಾತ್ರ ಅವಕಾಶ. ಮೈಸೂರು ಇತಿಹಾಸದ ಮತ್ತೊಂದು ಮುಖವನ್ನು ಇದು ಅನಾವರಣಗೊಳಿಸುತ್ತದೆ.

ಪ್ರವಾಸಿಗರೇ ಮೈಸೂರಿಗೆ ಹೋದ್ರೆ 'ಮಧುವನ' ಕ್ಕೆ ಭೇಟಿ ನೀಡಲೇಬೇಕು: ಇಲ್ಲಿ ಏನಿದೆ ಗೊತ್ತಾ?
ಮಧುವನImage Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Feb 09, 2026 | 10:23 AM

Share

ಮೈಸೂರಿನ ಒಂದು ವಿಶೇಷ ಮತ್ತು ಐತಿಹಾಸಿಕ ತಾಣವಾದ ‘ಮಧುವನ’ (Madhuvana)ವೂ ಒಂದು. ಮೈಸೂರು ಅರಮನೆಯನ್ನು ನೋಡಲು ಬರುವ ಅನೇಕ ಪ್ರವಾಸಿಗರಿಗೆ ಈ ಮಧುವನದ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ. ಮೈಸೂರಿನ ಮಧುವನವು ಕೇವಲ ಒಂದು ಬಡಾವಣೆಯಲ್ಲ, ಇದು ಮೈಸೂರು ಒಡೆಯರ್ ರಾಜಮನೆತನದವರ ಸ್ಮಶಾನ ಅಥವಾ ‘ರಾಜವಂಶಸ್ಥರ ಸಮಾಧಿ’ ಪ್ರವಿತ್ರ ಸ್ಥಳ ಇದು. ಒಂದು ಕಾಲದಲ್ಲಿ ಕೇವಲ ಕುಟುಂಬದವರು ಮಾತ್ರ ಭೇಟಿ ನೀಡುತ್ತಿದ್ದ ಈ ಸ್ಥಳವು ಈಗ ತನ್ನ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಮಹತ್ವದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಮೈಸೂರು ಆಳಿದ ಪ್ರಮುಖ ರಾಜರ ಮತ್ತು ಅವರ ಕುಟುಂಬದವರ ಸುಂದರವಾದ ಸ್ಮಾರಕಗಳು (Cenotaphs) ಇವೆ.

ಇಲ್ಲಿರುವ ಸ್ಮಾರಕಗಳನ್ನು ಅಮೃತಶಿಲೆ ಅಥವಾ ಕಲ್ಲಿನಲ್ಲಿ ಬಹಳ ನಾಜೂಕಾಗಿ ಕೆತ್ತಲಾಗಿದೆ. ಪ್ರತಿಯೊಂದು ಸಮಾಧಿಯ ಮೇಲಿರುವ ಗುಮ್ಮಟಗಳು ಮತ್ತು ಕೆತ್ತನೆಗಳು ಮೈಸೂರಿನ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ಇವುಗಳನ್ನು ನೋಡಲು ಹೋದರೆ ಒಂದು ರೀತಿಯ ನಿಶ್ಯಬ್ದ ಮತ್ತು ಅಧ್ಯಾತ್ಮಿಕ ಅನುಭವ ಸಿಗುತ್ತದೆ.

ಇಲ್ಲಿದೆ ಮಹತ್ವ ಏನು?

ಇಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಅನೇಕ ರಾಜರ ಸ್ಮಾರಕಗಳಿವೆ.

ಇತ್ತೀಚೆಗೆ ಈ ಸ್ಥಳವನ್ನು ಸ್ವಚ್ಛವಾಗಿಟ್ಟು, ಪ್ರವಾಸಿಗರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.

ಮೈಸೂರು ಇತಿಹಾಸದ ಮೇಲೆ ಆಸಕ್ತಿ ಇರುವವರಿಗೆ ಇದು ಅತ್ಯುತ್ತಮ ತಾಣವಾಗಿದೆ.

ಇದು ಮೈಸೂರಿನ ಅಗ್ರಹಾರ ಮತ್ತು ಶ್ರೀರಾಂಪುರಕ್ಕೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಅರಮನೆಯಿಂದ ಕೇವಲ 3-4 ಕಿ.ಮೀ ದೂರದಲ್ಲಿದೆ. ನೀವು ಮೈಸೂರು ಅರಮನೆಯ ವೈಭವವನ್ನು ನೋಡಿದ ನಂತರ, ರಾಜರ ಇತಿಹಾಸದ ಮತ್ತೊಂದು ಮುಖವನ್ನು ನೋಡಲು ಮಧುವನಕ್ಕೆ ಭೇಟಿ ನೀಡುವುದು ಉತ್ತಮ ಮಧುವನವು ಮೂಲತಃ ಮೈಸೂರು ರಾಜಮನೆತನದ ಖಾಸಗಿ ಸ್ಮಶಾನವಾಗಿರುವುದರಿಂದ, ಇಲ್ಲಿಗೆ ಪ್ರವಾಸಿಗರಿಗೆ ಮುಕ್ತ ಪ್ರವೇಶ ಯಾವಾಗಲೂ ಇರುವುದಿಲ್ಲ. ಸಾಮಾನ್ಯವಾಗಿ, ಸಂಶೋಧಕರು, ಇತಿಹಾಸ ಆಸಕ್ತರು ಅಥವಾ ಪೂರ್ವಾನುಮತಿ ಪಡೆದವರಿಗೆ ಮಾತ್ರ ಒಳಗೆ ಹೋಗಲು ಅವಕಾಶವಿರುತ್ತದೆ.

ಇಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧಗಳಿವೆ. ಇದು ರಾಜಮನೆತನದ ಗೌರವ ಮತ್ತು ಪಾವಿತ್ರ್ಯತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಇದನ್ನು ಪಾಲಿಸುವುದು ಕಡ್ಡಾಯ. ರಾಜಮನೆತನದ ಪುಣ್ಯತಿಥಿಗಳು ಅಥವಾ ವಿಶೇಷ ಪೂಜೆಗಳ ಸಂದರ್ಭದಲ್ಲಿ ಹೊರಗಿನವರಿಗೆ ಪ್ರವೇಶ ಸಂಪೂರ್ಣವಾಗಿ ಬಂದ್ ಇರುತ್ತದೆ. ಒಂದು ವೇಳೆ ಪ್ರವೇಶಕ್ಕೆ ಅವಕಾಶ ಸಿಕ್ಕರೆ, ಸಾಮಾನ್ಯವಾಗಿ ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ಮಾತ್ರ ಅವಕಾಶವಿರುತ್ತದೆ.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮುರುಡೇಶ್ವರಕ್ಕೆ ಪ್ರವಾಸ ಹೋಗುವವರಿಗೆ kstdcನಿಂದ ವಿಶೇಷ ಪ್ಯಾಕೇಜ್​​

ಪ್ರಮುಖ ಸ್ಮಾರಕಗಳು:

ಮುಮ್ಮಡಿ ಕೃಷ್ಣರಾಜ ಒಡೆಯರ್ ಸ್ಮಾರಕ: ಮಧುವನದ ಅತಿ ಸುಂದರ ಮತ್ತು ಭವ್ಯವಾದ ಸ್ಮಾರಕಗಳಲ್ಲಿ ಇದು ಒಂದು. ಇವರು ಮೈಸೂರು ಇತಿಹಾಸದಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದವರು ಮತ್ತು ಕಲೆ, ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು.

ಚಾಮರಾಜ ಒಡೆಯರ್ ಸ್ಮಾರಕ: ಕಲ್ಕತ್ತಾದಲ್ಲಿ ನಿಧನರಾದ ಇವರ ಸ್ಮರಣಾರ್ಥವಾಗಿ ಇಲ್ಲಿ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ. ಇವರ ಸಮಾಧಿಯ ಮೇಲಿರುವ ವಾಸ್ತುಶಿಲ್ಪವು ರೋಮನ್ ಮತ್ತು ಇಂಡೋ-ಸಾರ್ಸೆನಿಕ್ ಶೈಲಿಯ ಮಿಶ್ರಣದಂತೆ ಕಾಣುತ್ತದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ: ಮೈಸೂರನ್ನು ‘ಮಾದರಿ ರಾಜ್ಯ’ವನ್ನಾಗಿ ಮಾಡಿದ ರಾಜರ್ಷಿ ನಾಲ್ವಡಿ ಅವರ ಸ್ಮಾರಕವು ಅತ್ಯಂತ ಸರಳ ಮತ್ತು ಪವಿತ್ರವಾಗಿದೆ.

ಇತರ ಸ್ಮಾರಕಗಳು: ಇಲ್ಲಿ ರಾಜರ ಪತ್ನಿಯರು (ರಾಣಿಯರು) ಮತ್ತು ರಾಜಮನೆತನದ ಇತರ ಪ್ರಮುಖ ಸದಸ್ಯರ ಸ್ಮಾರಕಗಳೂ ಇವೆ. ಪ್ರತಿಯೊಂದು ಸ್ಮಾರಕದ ಮೇಲೂ ಅವರ ಹೆಸರು ಮತ್ತು ಕಾಲಘಟ್ಟವನ್ನು ಕೆತ್ತಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!