Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಆವಿಯಾಗುವ ವಿಧಾನ ಕಲಬೆರಕೆಯನ್ನು ಬಹಿರಂಗಪಡಿಸುತ್ತದೆ: IISc ಅಧ್ಯಯನ

ಬಳಕೆ ಮಾಡುತ್ತಿರುವ ಹಾಲು ಶುದ್ಧವಾಗಿದೆಯೇ? ಅಥವಾ ಕಲಬೆರಿಕೆಯದ್ದೇ? ಎಂಬುದನ್ನು ತಿಳಿದುಕೊಳ್ಳಲು ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್ (IISc) ಸಂಶೋಧನೆ ಕೈಗೊಂಡಿದೆ.

ಹಾಲು ಆವಿಯಾಗುವ ವಿಧಾನ ಕಲಬೆರಕೆಯನ್ನು ಬಹಿರಂಗಪಡಿಸುತ್ತದೆ: IISc ಅಧ್ಯಯನ
ಹಾಲು ಆವಿಯಾಗುವ ವಿಧಾನ ಕಲಬೆರಕೆಯನ್ನು ಬಹಿರಂಗಪಡಿಸುತ್ತದೆ
Follow us
TV9 Web
| Updated By: shruti hegde

Updated on: Oct 29, 2021 | 9:16 AM

ರಾಸಾಯನಿಕಗಳು ಮತ್ತು ನೀರು ಸೇರಿಸಿ ಹಾಲು ಕಲರಬೆರಿಕೆ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಇದು ಗ್ರಾಹಕರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಬಳಕೆ ಮಾಡುತ್ತಿರುವ ಹಾಲು ಶುದ್ಧವಾಗಿದೆಯೇ? ಅಥವಾ ಕಲಬೆರಿಕೆಯದ್ದೇ? ಎಂಬುದನ್ನು ತಿಳಿದುಕೊಳ್ಳಲು ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್ (IISc) ಸಂಶೋಧನೆ ಕೈಗೊಂಡಿದೆ. ಹಾಲು ಆವಿಯಾದ ನಂತರ ಶೇಖರಣೆಯ ಮಾದರಿಗಳನ್ನು ಅಧ್ಯಯನ ನಡೆಸುವ ಮೂಲಕ ಸಂಶೋಧನೆ ನಡೆಸಲಾಗಿದೆ. ಇದು ಅತ್ಯಂತ ಕಡಿಮೆ ವೆಚ್ಚದ ಪರಿಣಾಮಕಾರಿ ವಿಧಾನ ಎಂದು peer-reviewed journal, ACS Omega ದಲ್ಲಿ ಪ್ರಕಟಿಸಲಾಗಿದೆ.

ಹಾಲಿನಲ್ಲಿ ಕಲಬೆರಿಕೆಯಾಗಿದೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಸಂಶೋಧಕರು ಆವಿಯಾದ ನಂತರ ಉಳಿದ ಶೇಖರಣೆಯ ಮಾದರಿಗಳನ್ನು ಅಧ್ಯಯನ ಮಾಡಿದರು. ಹಾಲಿನಂತಹ ದ್ರವ ವಸ್ತುಗಳು ಸಂಪೂರ್ಣವಾಗಿ ಆವಿಯಾದ ಬಳಿಕ ಸಣ್ಣ ಕಣಗಳು ಉಳಿಯುತ್ತದೆ. ಇವುಗಳ ಶೇಖರಣೆಯ ಆಧಾರದ ಮೇಲೆ ಅಧ್ಯಯನ ನಡೆಸಲಾಗಿದೆ.

ನೀರು ಅಥವಾ ಯೂರಿಯಾದೊಂದಿಗೆ ಸೇರಿರುವ ಹಾಲು ಮತ್ತು ಶುದ್ಧವಾದ ಹಾಲು ವಿಭಿನ್ನವಾದ ಮಾದರಿಯನ್ನು ತೋರಿಸಿದೆ. ಕಲಬೆರಕೆಯಿಲ್ಲದ ಹಾಲಿನಲ್ಲಿ ಆವಿಯಾಗುವ ರೀತಿ ಕೇಂದ್ರೀಯವಾಗಿತ್ತು. ಕಲಬೆರಕೆಯಾದ ಹಾಲಿನಲ್ಲಿ ನೀರು ಎಷ್ಟು ಸೇರಿಸಲ್ಪಟ್ಟಿದೆ ಎಂಬುದರ ಆಧಾರದ ಮೇಲೆ ಆವಿಯಾದ ಬಳಿಕ ಶೇಖರಣೆಯ ಮಾದರಿಯಲ್ಲಿ ಬದಲಾಯಿತು ಎಂದು IISc ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಯೂರಿಯಾ ಕೇಂದ್ರ ಮಾದರಿಯನ್ನು (central pattern) ಬದಲಾಯಿಸಿತು. ಇದು ಭಾಷ್ಪಶೀಲವಲ್ಲದ ಘಟಕವಾದ್ದರಿಂದ ಅದು ಆವಿಯಾಗುವುದಿಲ್ಲ. ಅದರ ಬದಲಿಗೆ ಸ್ಪಟಿಕೀಕರಣಗೊಳಗ್ಳುತ್ತದೆ. ಆವಿಯಾಗುವ ಹಾಲಿನ ಪಾತ್ರೆಯಲ್ಲಿ ಪರಿಧಿಯ ಉದ್ದಕ್ಕೂ ವಿಸ್ತರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಧಾನದಿಂದ IISc ಸಂಶೋಧಕರ ತಂಡವು ನೀರಿನ ಸಾಂದ್ರತೆಯನ್ನು ಶೇ 30ರಷ್ಟು ಮತ್ತು ದುರ್ಬಲಗೊಳಿಸಿದ ಹಾಲಿನಲ್ಲಿ ಶೇ 0.4ರಷ್ಟು ಕಡಿಮೆ ಯೂರಿಯಾ ಸಾಂದ್ರೆತೆಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಇದನ್ನು ಯಾವುದೇ ಸ್ಥಳದಲ್ಲಿಯೂ ಮಾಡಬಹುದು. ಯಾವುದೇ ನಿರ್ದಿಷ್ಟ ಪ್ರಯೋಗಾಲಯ ಬೇಕಂತಿಲ್ಲ. ದೂರದ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಬಳಸಲು ಸುಲಭದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಸಂಶೋಧಕ ವೀರಕೇಶ್ವರ ಕುಮಾರ್ ಹೇಳಿದ್ದಾರೆ.

ಹಾಲಿನ ಜೊತೆಗೆ ಇತರ ದ್ರವ ವಸ್ತುಗಳಲ್ಲಿಯೂ ಅಥವಾ ಪಾನೀಯಗಳಲ್ಲಿ ಕಲಬೆರಕೆಯನ್ನು ಪರೀಕ್ಷಿಸಲು ಈ ತಂತ್ರವನ್ನು ಉಪಯೋಗಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಬಾಷ್ಪಶೀಲ ದ್ರವಗಳಲ್ಲಿನ ಕಲ್ಮಶಗಳನ್ನು ಪತ್ತೆ ಹಚ್ಚಲು ಈ ವಿಧಾನವನ್ನು ಬಳಸಬಹುದು. ಜೇನುತುಪ್ಪದಂತಹ ಉತ್ಪನ್ನಗಳಲ್ಲಿ ಕಲಬರಕೆ ಪತ್ತೆ ಹಚ್ಚಲು ಈ ವಿಧಾನವನ್ನು ವಿಸ್ತರಿಸಬೇಕಿದೆ ಎಂದು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಷ್ಮಿತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎಲ್ಲಾ ಕಲಬೆರಕೆಗಳ ಮಾದರಿಗಳನ್ನು ಪರಿಶೀಲನೆಯ ನಂತರ ಅವುಗಳನ್ನು ಚಿತ್ರದ ಮೂಲಕ ವಿಶ್ಲೇಷಣೆ ಮಾಡಬಹುದು. ಉದಾಹರಣೆಗೆ ಕಲಬೆರಕೆಗಳನ್ನು ನಿಖರವಾಗಿ ಪತ್ತೆಹಚ್ಚಲು ಆವಿಯಾದ ನಂತರ ಉಳಿದ ಶೇಖರಣೆಯ ಮಾದರಿ ಫೋಟೋಗಳನ್ನು ಇತರ ಮಾದರಿಗಳೊಂದಿಗೆ ಹೋಲಿಸಬಹುದು. ಮುಂದಿನ ವಿಧಾನದಲ್ಲಿ ಹಾಲಿನೊಂದಿಗೆ ಎಣ್ಣೆಯಂತಹ ವಸ್ತುಗಳನ್ನು ಕಲಬೆರಕೆ ಮಾಡುವುದನ್ನು ಪರೀಕ್ಷಿಸಬಹುದು ಎಂದು ಸುಷ್ಮಿತಾ ಹೇಳಿದ್ದಾರೆ.

ಇದನ್ನೂ ಓದಿ:

World Heart Day: ಪಿಸಿಒಎಸ್ ನಿಮ್ಮ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ

DIMHANS report: ಧಾರವಾಡ ಜಿಲ್ಲೆಯಲ್ಲಿ ಯಶಸ್ವೀ ಆನ್‌ಲೈನ್ ಶಿಕ್ಷಣ -ಖ್ಯಾತ ಮನಶಾಸ್ತ್ರಜ್ಞರ ತಂಡದಿಂದ ಅಧ್ಯಯನ ವರದಿ ಸಲ್ಲಿಕೆ

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು