AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ರಾಶಿಯವರಿಗೆ ಸರಿಹೊಂದುವ ಉದ್ಯೋಗಾವಕಾಶಗಳು ಹೀಗಿವೆ ನೋಡಿ

Best Jobs for Astrological Signs: ತಾಂತ್ರಿಕ ಪಾಂಡಿತ್ಯದ ಕೆಲಸ ನಿಮಗೆ ಸರಿಯಾದ ವೇದಿಕೆಯಾಗಿದೆ. ನೀವು ತಂತ್ರಜ್ಞಾನವನ್ನು ಪ್ರೀತಿಸುತ್ತೀರಿ ಮತ್ತು ಅದನ್ನು ನಿಮಗಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳಿ. ತಂತ್ರಜ್ಞಾನದ ಉನ್ನತ ಜ್ಞಾನವು ನಿಮ್ಮ ಸೃಜನಶೀಲತೆಯನ್ನು ಪೋಷಿಸಬಲ್ಲದು. ನಿಮ್ಮ ವೃತ್ತಿಜೀವನಕ್ಕೆ ಇದು ನಿಜವಾಗಿಯೂ ಸಹಾಯಕವಾಗಬಹುದು.

ವಿವಿಧ ರಾಶಿಯವರಿಗೆ ಸರಿಹೊಂದುವ ಉದ್ಯೋಗಾವಕಾಶಗಳು ಹೀಗಿವೆ ನೋಡಿ
ವಿವಿಧ ರಾಶಿಯವರಿಗೆ ಸರಿಹೊಂದುವ ಉದ್ಯೋಗಾವಕಾಶಗಳು ಹೀಗಿವೆ ನೋಡಿ
ಸಾಧು ಶ್ರೀನಾಥ್​
|

Updated on:Feb 15, 2024 | 9:04 AM

Share

ನೀವು ನಿಮ್ಮ ವೃತ್ತಿಜೀವನದ ಹಾದಿಯ ಬಗ್ಗೆ ಸ್ಪಷ್ಟತೆಯೊಂದಿಗೆ ಮುನ್ನಡೆ ಸಾಧಿಸುತ್ತಿದ್ದರೂ ನಿಮ್ಮ ಕೌಶಲ್ಯ ಅಭಿರುಚಿಗೆ ತಕ್ಕಂತೆ ಪರಿಪೂರ್ಣ ಕೆಲಸದ ಪಾತ್ರವನ್ನು ಕಂಡುಹಿಡಿಯುವುದು ಸಹ ಒಂದು ಕಾರ್ಯವಾಗಿದೆ. ನಿಮಗೆ ಸೂಕ್ತವಾದ ಮತ್ತು ನಿಮ್ಮನ್ನು ಪ್ರೇರೇಪಿಸುವಂತೆ ಮಾಡುವುದು ಅದರ ಗುರಿಯಾಗಿದೆ. ನಿಮ್ಮ ರಾಶಿಚಕ್ರದ ಚಿಹ್ನೆಗೆ ತಕ್ಕಂತೆ ನಿಮಗಾಗಿ ಉತ್ತಮ ಕೆಲಸವನ್ನು ಕಂಡುಕೊಳ್ಳಲು ಇದನ್ನು ಓದಿ.

ಮೇಷ: ಮೇಷ ರಾಶಿಯವರು, ಅದ್ಭುತ ವ್ಯಕ್ತಿತ್ವವನ್ನು ಹೊಂದಿರುವ ನೀವು ನಿಮ್ಮ ಮೇಲಿನ ನಂಬಿಕೆ ಮತ್ತು ಅತ್ಮವಿಶ್ವಾಸದಿಂದ ಜೀವನದಲ್ಲಿ ಮತ್ತು ಉದ್ಯೋಗದಲ್ಲಿ ಯಶಸ್ಸು ಸಾಧಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆದ್ದರಿಂದ, ಒಬ್ಬ ವಾಣಿಜ್ಯೋದ್ಯಮಿ ಅಥವಾ ಟಿವಿ ಕಾರ್ಯಕ್ರಮಗಳ ಆಂಕರ್​ ಸಹ ಆಗಬಹುದು ನೀವಿ. ನೀವು ಪ್ರಚಾರದಲ್ಲಿರಲು ಹೇಗೆ ಇಷ್ಟಪಡುತ್ತೀರಿ ಎಂಬುದರ ಜೊತೆಗೆ, ರಾಜಕಾರಣಿಯಾಗಿ ಹೇಗೆ ಕೆಲಸ ಮಾಡಬಲ್ಲಿರಿ ಎಂಬೆರಡರ ಸಂಯೋಜನೆಯೂ ಆಗಿರಬಹುದು ಮೇಷ ರಾಶಿಯವರು.

ವೃಷಭ: ನೀವು ಪ್ರತಿಯೊಂದು ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಲು ಇಷ್ಟಪಡುತ್ತೀರಿ. ಇದು ನಿಮಗೆ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಖಂಡಿತವಾಗಿಯೂ ಬೋಧನೆ ಅಥವಾ ಕಾನೂನು ಜಗತ್ತಿನಲ್ಲಿ ಉದ್ಯೋಗಾವಕಾಶ ಸೃಷ್ಟಿಸಿಕೊಳ್ಳಲು ನಿಮ್ಮ ಅದೃಷ್ಟವನ್ನು ಪ್ರಯತ್ನಿಸಿ.

ಮಿಥುನ: ತಾಂತ್ರಿಕ ಪಾಂಡಿತ್ಯದ ಕೆಲಸ ನಿಮಗೆ ಸರಿಯಾದ ವೇದಿಕೆಯಾಗಿದೆ. ನೀವು ತಂತ್ರಜ್ಞಾನವನ್ನು ಪ್ರೀತಿಸುತ್ತೀರಿ ಮತ್ತು ಅದನ್ನು ನಿಮಗಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳಿ. ತಂತ್ರಜ್ಞಾನದ ಉನ್ನತ ಜ್ಞಾನವು ನಿಮ್ಮ ಸೃಜನಶೀಲತೆಯನ್ನು ಪೋಷಿಸಬಲ್ಲದು. ನಿಮ್ಮ ವೃತ್ತಿಜೀವನಕ್ಕೆ ಇದು ನಿಜವಾಗಿಯೂ ಸಹಾಯಕವಾಗಬಹುದು. ಗ್ರಾಫಿಕ್ ಡಿಸೈನರ್ ಅಥವಾ ಫಿಲ್ಮ್ ಮೇಕರ್ ಆಗಿ ಕೆಲಸ ಮಾಡುವುದು ನಿಮಗೆ ಸೂಕ್ತವಾದೀತು.

ಕರ್ಕಾಟಕ: ಸಮಾಜ ಮತ್ತು ಸಮಾಜದಲ್ಲಿನ ಜನರ ವಿಷಯಕ್ಕೆ ಬಂದಾಗ ನೀವು ತುಂಬಾ ಚಿಂತನಶೀಲ ವ್ಯಕ್ತಿತ್ವವನ್ನು ಹೊಂದಿರುತ್ತೀರಿ. ನೀವು ಮಾರ್ಪಾಡು ತರಲು ಬಯಸುತ್ತೀರಿ. ಹೀಗಾಗಿ, ಸಾಮಾಜಿಕ ಕಾರ್ಯಕರ್ತ ಅಥವಾ ಮಾನವ ಸಂಪನ್ಮೂಲ ವ್ಯಕ್ತಿ ವೃತ್ತಿಯು ನಿಮಗೆ ಸಮಂಜಸವಾದೀತು.

ಸಿಂಹ: ಹಣಕಾಸು ಮತ್ತು ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನೀವು ಇಷ್ಟಪಡುತ್ತೀರಿ. ಉತ್ತಮ ಗಣಿತ ಕೌಶಲ್ಯಗಳು ಮತ್ತು ಮಾರಾಟ ಪ್ರತಿನಿಧಿಗಾಗಿ ಗೌರವದ ವ್ಯಕ್ತಿತ್ವವನ್ನು ಹೊಂದಿರುವ ನೀವು ಉತ್ತಮ ರಿಯಲ್ ಎಸ್ಟೇಟ್ ಏಜೆಂಟ್ ಅಥವಾ ಬ್ಯಾಂಕರ್ ಆಗುತ್ತೀರಿ.

ಕನ್ಯಾ: ವ್ಯಾಕರಣ ಪಂಡಿತರೇ ನೀವು? ಇರಬಹುದು! ಕನ್ಯಾ ರಾಶಿಯವರು ಸಾಹಿತ್ಯ ಮತ್ತು ಭಾಷೆಗಳನ್ನು ಪ್ರೀತಿಸುತ್ತಾರೆ. ಆದ್ದರಿಂದ, ಈ ಕ್ಷೇತ್ರದಲ್ಲಿ ಸಂಪಾದಕ ಅಥವಾ ಬರಹಗಾರರಂತಹ ಕೆಲಸವನ್ನು ಮುಂದುವರಿಸಲು ಬಯಸುತ್ತಾರೆ. ಅನುವಾದವು ನೀವು ಹುಡುಕಬಹುದಾದ ವಿಷಯವೂ ಆಗಿರಬಹುದು.

ತುಲಾ: ತುಲಾ ರಾಶಿಯವರಾದ ನೀವು ಪ್ರಕೃತಿಯ ವಿವಿಧ ಪ್ರತಿಕೃತಿಗಳು ಮತ್ತು ಸ್ಥಳಗಳ ಸೌಂದರ್ಯವನ್ನು ಪ್ರೀತಿಸುತ್ತೀರಿ. ನೀವು ಅದರ ಭಾಗವಾಗಿರಲು ಇಷ್ಟಪಡುತ್ತೀರಿ ಅಥವಾ ನೀವು ಯಾವುದೇ ರೀತಿಯಲ್ಲಿ ಅದನ್ನು ಪ್ರದರ್ಶಿಸಬಹುದು. ನರ್ತಕಿ ಅಥವಾ ಪ್ರವಾಸಿ ಮಾರ್ಗದರ್ಶಿಯಾಗುವುದು ನಿಮಗೆ ನಿಜವಾಗಿಯೂ ಸಂತೋಷವನ್ನು ನೀಡುತ್ತದೆ.

ವೃಶ್ಚಿಕ: ನಿಮ್ಮಿಂದ ನಿಗೂಢತೆಯನ್ನು ಭೇದಿಸಬೇಕಾಗಿದೆ. ನೀವು ಚೇಸ್‌ನ ರೋಮಾಂಚನವನ್ನು ಇಷ್ಟಪಡುತ್ತೀರಿ. ಹೀಗಾಗಿ, ಪತ್ತೇದಾರಿ ಅಥವಾ ಪೊಲೀಸ್ ಅಧಿಕಾರಿಯ ಕೆಲಸವು ನಿಮಗಾಗಿ ಕಾದಿದೆ.

ಧನು ರಾಶಿ: ಜಗತ್ತನ್ನು ಉತ್ತಮಗೊಳಿಸಲು ನೀವು ಹೆಚ್ಚು ಹೆಚ್ಚು ಗುರಿಗಳನ್ನು ಹೊಂದಿದ್ದೀರಿ. ನಿಮ್ಮ ಸಂವಹನ ಕೌಶಲ್ಯಗಳನ್ನು ಒಗ್ಗೂಡಿಸಿಕೊಂಡರೆ ನೀವು ಮಾಡಲು ಸಾಧ್ಯವಾಗದೇ ಇರುವುದು ನಿಜವಾಗಿಯೂ ಯಾವುದೂ ಇಲ್ಲ. ಆದಾಗ್ಯೂ, ಸಚಿವರಾಗುವುದು ಅಥವಾ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತಜ್ಞರಾಗುವುದು ನಿಮಗೆ ಅದ್ಭುತಗಳನ್ನು ತಂದೊಡ್ಡುತ್ತದೆ.

ಮಕರ: ಕಷ್ಟಜೀವಿಗಳು – ನೀವು ಕಠಿಣ ಪರಿಶ್ರಮವನ್ನು ಇಷ್ಟಪಡುತ್ತೀರಿ. ಇದು ನೀವು ಗಳಿಸುವ ಗ್ರೇಡ್‌ಗಳಲ್ಲಿ ಅಥವಾ ನೀವು ತೆಗೆದುಕೊಳ್ಳುವ ಯಾವುದೇ ಪ್ರಯತ್ನದಲ್ಲಿ ನಿಮ್ಮ ಸಾಧನೆಯನ್ನು ಎತ್ತಿತೋರಿಸುತ್ತದೆ. ವ್ಯವಸ್ಥಾಪಕ ಅಥವಾ ಆಡಳಿತಗಾರ ಅಥವಾ ಐಟಿ ವಲಯದ ಯಾವುದೇ ಕೆಲಸವು ನಿಮಗೆ ಯೋಗ್ಯವಾಗಿರುತ್ತದೆ.

ಕುಂಭ: ಈ ರಾಶಿಯವರು ಕಲೆ ಮತ್ತು ಕಲಾವಿದರು. ನೀವು ಜೀವನದಲ್ಲಿ ಅಥವಾ ವೃತ್ತಿಜೀವನದಲ್ಲಿ ಸವಾಲುಗಳನ್ನು ಪ್ರೀತಿಸುತ್ತೀರಿ. ಬಹುಶಃ ಡಿಸೈನರ್ ಅಥವಾ ಆವಿಷ್ಕಾರಕನಂತೆ ನಿಮ್ಮ ಗಮನವನ್ನು ಸೆಳೆಯುವ ಯಾವುದನ್ನಾದರೂ ಆಯ್ಕೆ ಮಾಡುವತ್ತ ಗಮನಹರಿಸಿ.

ಮೀನ: ವೀಕ್ಷಣೆ ಮತ್ತು ಗ್ರಹಿಕೆ ನಿಮ್ಮ ಬಲವಾದ ಅಸ್ತ್ರವಾಗಿದೆ. ಆದ್ದರಿಂದ, ಮನಶ್ಶಾಸ್ತ್ರಜ್ಞ ಅಥವಾ ವರ್ಣಚಿತ್ರಕಾರ ಕೆಲಸ ನಿಮಗೆ ಆಸಕ್ತಿಯ ವೃತ್ತಿಯಾಗಿರಬಹುದು.

Published On - 9:03 am, Thu, 15 February 24

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು