AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramadan 2024: ರಂಜಾನ್ ಹಬ್ಬ; ಭಾರತದಲ್ಲಿ ಚಂದ್ರನ ದರ್ಶನ ಯಾವಾಗ?

ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರನ ದರ್ಶನವು ರಂಜಾನ್ ಆರಂಭ ಮತ್ತು ಅಂತ್ಯವನ್ನು ಸೂಚಿಸುತ್ತದೆ. ರಂಜಾನ್ ತಿಂಗಳನ್ನು ಮುಸ್ಲಿಮರು ಆಧ್ಯಾತ್ಮಿಕತೆ, ಹೆಚ್ಚಿದ ಭಕ್ತಿ ಮತ್ತು ಆರಾಧನೆಯಲ್ಲಿ ಕಳೆಯುತ್ತಾರೆ. ರಂಜಾನ್ ಹಿಂದಿನ ಪಾಪಗಳಿಗೆ ಕ್ಷಮೆಯನ್ನು ಪಡೆಯಲು ಮತ್ತು ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡಲು ಸೂಕ್ತ ಸಮಯವಾಗಿದೆ. ಆದ್ದರಿಂದ ಮುಸ್ಲಿಮರು ಹೆಚ್ಚಿದ ಭಕ್ತಿ, ಹೃತ್ಪೂರ್ವಕ ಪ್ರಾರ್ಥನೆಗಳ ಮೂಲಕ ರಂಜಾನ್ ಮಾಸವನ್ನು ಆಚರಿಸುತ್ತಾರೆ. ಕುರಾನ್ ಅನ್ನು ಪಠಿಸಲು ಸಮಯವನ್ನು ಮೀಸಲಿಡುತ್ತಾರೆ.

Ramadan 2024: ರಂಜಾನ್ ಹಬ್ಬ; ಭಾರತದಲ್ಲಿ ಚಂದ್ರನ ದರ್ಶನ ಯಾವಾಗ?
ರಂಜಾನ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 08, 2024 | 1:51 PM

ರಂಜಾನ್ ಇಸ್ಲಾಂನಲ್ಲಿ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಮುಸ್ಲಿಮರಿಗೆ ಇದು ಬಹಳ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ ದಿನವಾಗಿದೆ. ಈ ಹಬ್ಬ 29ರಿಂದ 30 ದಿನಗಳವರೆಗೆ ಇರುತ್ತದೆ. ರಂಜಾನ್ ಉಪವಾಸ, ಪ್ರಾರ್ಥನೆ, ಪ್ರತಿಬಿಂಬ ಮತ್ತು ಸಮುದಾಯದ ಅವಧಿಯಾಗಿದೆ. ಇಸ್ಲಾಮಿಕ್ ನಂಬಿಕೆಯ ಪ್ರಕಾರ ಪ್ರವಾದಿ ಮುಹಮ್ಮದ್‌ಗೆ ಕುರಾನ್‌ನ ಮೊದಲ ಬಹಿರಂಗಪಡಿಸುವಿಕೆಯ ಸ್ಮರಣಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ. ಆದರೂ ಇಸ್ಲಾಮಿಕ್ ಪವಿತ್ರ ತಿಂಗಳ ಆರಂಭವು ಚಂದ್ರನ ದರ್ಶನದ ಮೇಲೆ ಅವಲಂಬಿತವಾಗಿರುತ್ತದೆ.

ಭಾರತದಲ್ಲಿ ರಂಜಾನ್ ಯಾವಾಗ ಪ್ರಾರಂಭವಾಗುತ್ತದೆ?:

ಭಾರತದಲ್ಲಿ ರಂಜಾನ್ 2024ರ ದಿನಾಂಕವು ಮೆಕ್ಕಾದಲ್ಲಿ ಚಂದ್ರನ ವೀಕ್ಷಣೆಯನ್ನು ಅವಲಂಬಿಸಿ ಮಾರ್ಚ್ 11 ಅಥವಾ 12ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಅರ್ಧಚಂದ್ರಾಕಾರದ ರಂಜಾನ್ ಚಂದ್ರನನ್ನು ಸೌದಿ ಅರೇಬಿಯಾದಲ್ಲಿ ಮೊದಲು ನೋಡಲಾಗುತ್ತದೆ. ನಂತರ ಸಾಮಾನ್ಯವಾಗಿ ಅದಾದ 1 ದಿನದ ನಂತರ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಆಗ್ನೇಯ ಏಷ್ಯಾದ ದೇಶಗಳಲ್ಲಿ ರಂಜಾನ್ ಚಂದ್ರ ಕಂಡುಬರುತ್ತದೆ.

ಇದನ್ನೂ ಓದಿ: ಪ್ರತಿ ವರ್ಷ ನಿಗೂಢವಾಗಿ ಬೆಳೆಯುತ್ತಲೇ ಇದೆ ಮಾತಂಗೇಶ್ವರ ಮಹಾದೇವ ದೇವಸ್ಥಾನ

ಸೌರ ಅಥವಾ ಜಾರ್ಜಿಯನ್ ಕ್ಯಾಲೆಂಡರ್ ಅನ್ನು ಬಳಸುವ ಪ್ರಪಂಚದ ಉಳಿದ ಭಾಗಗಳಿಗೆ ವ್ಯತಿರಿಕ್ತವಾಗಿ ಇಸ್ಲಾಂ ಚಂದ್ರನ ಅಥವಾ ಹಿಜ್ರಿ ಕ್ಯಾಲೆಂಡರ್ ಅನ್ನು ಬಳಸುತ್ತದೆ. ಇದು 354 ದಿನಗಳನ್ನು ಹೊಂದಿದೆ ಮತ್ತು ಚಂದ್ರನ ಚಕ್ರದ ಹಂತಗಳನ್ನು ಆಧರಿಸಿದೆ. ಪ್ರತಿ ವರ್ಷ 10 ಅಥವಾ 11 ದಿನ ಮುಂಚಿತವಾಗಿ ರಂಜಾನ್ ಆಚರಿಸಲಾಗುತ್ತದೆ. 2023ರಲ್ಲಿ ಮಾರ್ಚ್ 24ರಂದು ಭಾರತದಲ್ಲಿ ಅರ್ಧಚಂದ್ರ ಗೋಚರವಾಗಿತ್ತು.

ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಕುವೈತ್, ಲೆಬನಾನ್, ಓಮನ್, ಪಾಕಿಸ್ತಾನ, ಸೌದಿ ಅರೇಬಿಯಾ, ಯುಕೆ, ಯುಎಸ್, ಟರ್ಕಿ, ಮಾಲ್ಡೀವ್ಸ್ ಮುಂತಾದ ದೇಶಗಳಲ್ಲಿ ರಂಜಾನ್ ಮಾರ್ಚ್ 11ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಭಾರತ, ಬಾಂಗ್ಲಾದೇಶ, ಇಂಡೋನೇಷ್ಯಾ, ಈಜಿಪ್ಟ್, ರಂಜಾನ್ ಮಾರ್ಚ್ 12ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.

ಇದನ್ನೂ ಓದಿ: Ramadan 2024: ರಂಜಾನ್ ಉಪವಾಸ ಮಾಡುತ್ತೀರಾ?; WHO ನೀಡಿರುವ ಸೂಚನೆಗಳಿವು

ರಂಜಾನ್ ಆಚರಣೆಗಳು ಮತ್ತು ಉಪವಾಸದ ಮಾಹಿತಿ:

ಪ್ರಪಂಚದಾದ್ಯಂತ ಇರುವ ಮುಸ್ಲಿಮರು ರಂಜಾನ್ ತಿಂಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಮುಸ್ಸಂಜೆಯ ನಂತರ ತಿನ್ನುವ ಇಫ್ತಾರ್ ಮತ್ತು ಮುಂಜಾನೆ ಮೊದಲು ತಿನ್ನುವ ಸುಹೂರ್ ಉಪವಾಸದ ಅವಧಿಯಲ್ಲಿ ಎರಡು ಪ್ರಾಥಮಿಕ ಊಟಗಳಾಗಿವೆ. ಕುಟುಂಬಗಳು ಮತ್ತು ಸಮುದಾಯಗಳು ಸಾಮಾನ್ಯವಾಗಿ ಇಫ್ತಾರ್ ಹಬ್ಬದಂದು ತಮ್ಮ ಉಪವಾಸವನ್ನು ಮುರಿಯುತ್ತಾರೆ. ಇಫ್ತಾರ್ ಸಮಯವನ್ನು ಸೂರ್ಯಾಸ್ತದ ಮೂಲಕ ನಿರ್ಧರಿಸಲಾಗುತ್ತದೆ. ಆದ್ದರಿಂದ, ಅವುಗಳು ಸಹ ಪ್ರತಿದಿನ ಬದಲಾಗುತ್ತವೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಸೂರ್ಯಾಸ್ತದ ಸಮಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಭಾರತದಲ್ಲಿನ ವಿಶಾಲವಾದ ಭೌಗೋಳಿಕ ವ್ಯತ್ಯಾಸಗಳ ಕಾರಣದಿಂದ ಇಫ್ತಾರ್ ಸಮಯದಲ್ಲಿ ಗಮನಾರ್ಹ ವ್ಯತ್ಯಾಸಗಳು ಉಂಟಾಗುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ