AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧದಲ್ಲಿ ಪರಸ್ಪರ ಗೌರವವನ್ನು ಹೇಗೆ ವ್ಯಕ್ತಪಡಿಸುವುದು? ಇಲ್ಲಿದೆ ತಜ್ಞರ ಸಲಹೆ

ದಾಂಪತ್ಯ ಆಗಿರಲಿ ಅಥವಾ ಪ್ರೇಮ ಸಂಬಂಧ ಆಗಿರಲಿ ಅಲ್ಲಿ ಪರಸ್ಪರ ಗೌರವವನ್ನು ತೋರುವುದರಿಂದ ಪ್ರೀತಿಯು ಆಳವಾಗಿ ಬೇರೂರುತ್ತದೆ.

Relationship: ಸಂಬಂಧದಲ್ಲಿ ಪರಸ್ಪರ ಗೌರವವನ್ನು ಹೇಗೆ ವ್ಯಕ್ತಪಡಿಸುವುದು? ಇಲ್ಲಿದೆ ತಜ್ಞರ ಸಲಹೆ
ಸಾಂದರ್ರಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 30, 2023 | 6:53 PM

Share

ಪರಸ್ಪರ ಗೌರವವನ್ನು ತೋರುವುದು ಆರೋಗ್ಯಕರ ಸಂಬಂಧದ ಅಡಿಪಾಯವಾಗಿದೆ. ಯಾವುದೇ ಸಂಬಂಧವು ಸಾಕಷ್ಟು ಏರಿಳಿತಗಳ ಮೂಲಕ ಸಾಗುತ್ತದೆ. ಆದರೆ ಗೌರವವನ್ನು ನೀಡುವ ಮೂಲಕ ಹಾಗೂ ಪರಸ್ಪರ ಅರ್ಥ ಮಾಡಿಕೊಳ್ಳುವ ಮೂಲಕ ಸಂಬಂಧವನ್ನು ಉಳಿಸಿಕೊಳ್ಳಬಹುದು. ಗೌವರವವು ಆರೋಗ್ಯಕರ ಸಂಬಂಧದ ಪ್ರಮುಖ ಭಾಗವಾಗಿದೆ. ಸಂಬಂಧಗಳು ಒಂದಿಷ್ಟು ಸವಾಲುಗಳನ್ನು ಹೊಂದಿದ್ದರೂ, ಆ ಸಮಯದಲ್ಲಿ ಗೌರವವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ನಿಮ್ಮ ಸಂಗಾತಿಯ ಹಿತಾಸಕ್ತಿಗಳನ್ನು ಕಡೆಗಣಿಸುವುದು, ಅವರನ್ನು ಕೀಳಾಗಿ ಕಾಣುವುದು, ಅವರ ಮಾತುಗಳನ್ನು ಕಡೆಗಣಿಸುವುದು ಅಥವಾ ಅವರ ಭಾವನೆಗಳ ಕುರಿತು ಅಸಡ್ಡೆ ತೋರಿಸುವುದು ಇವೆಲ್ಲವೂ ಸಂಬಂಧವನ್ನು ಕ್ಷೀಣಿಸುತ್ತದೆ ಎಂದು ಸೈಕೋಥೆರಪಿಸ್ಟ್ ಹೆಚ್ ಸ್ಯಾಂಡರ್ಸ್ ಅವರು ಹೇಳುತ್ತಾರೆ.

ಸಂಬಂಧದಲ್ಲಿ ಗೌರವವನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ:

ಸಂಗಾತಿಯ ಬಗ್ಗೆ ಚೆನ್ನಾಗಿ ಮಾತನಾಡಿ: ಇತರರ ಮುಂದೆ ನಿಮ್ಮ ಸಂಗಾತಿಯ ಬಗ್ಗೆ ಧನಾತ್ಮಕವಾಗಿ ಮಾತನಾಡಿ. ಇದು ನಿಮ್ಮ ಸಂಗಾತಿಯ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಾಗೂ ಸಂಬಂಧದಲ್ಲಿ ಅವರಿಗೆ ವಿಶ್ವಾಸ ಮೂಡುತ್ತದೆ.

ತಮಾಷೆ ಅಥವಾ ಕೀಟಲೆ: ಪ್ರತಿಯೊಬ್ಬರು ತಮ್ಮ ಸಂಬಂಧದಲ್ಲಿ ತಮಾಷೆಯನ್ನು ಹೊಂದಿರುತ್ತಾರೆ. ಆದರೆ ತಮಾಷೆಯ ಮಿತಿಗಳ ಬಗ್ಗೆ ತಿಳಿದಿರಬೇಕು ಹಾಗೂ ಯಾವ ಸಮಯದಲ್ಲಿ ತಮಾಷೆ ಮಾಡಬೇಕು ಎಂಬುವುದರ ಬಗ್ಗೆ ತಿಳಿದಿರಬೇಕು. ಎಲ್ಲಾ ಸಮಯದಲ್ಲೂ ಕೀಟಲೆ ಮಾಡುವುದು ಸಂಗಾತಿಗೆ ನೋವುಂಟು ಮಾಡಬಹುದು ಆದ್ದರಿಂದ ಸಂಗಾತಿಯ ಮನಸ್ಥಿಗೆ ಅನುಗುಣವಾಗಿ ತಮಾಷೆ ಮಾಡಿ.

ಇದನ್ನೂ ಓದಿ;Relationship: ದೂರವಾದ ಸಂಬಂಧವನ್ನು ಸುಧಾರಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ತಪ್ಪುಗಳು: ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡಿಯೇ ಮಾಡುತ್ತಾರೆ. ನಾವು ಅದಕ್ಕೆ ಕೋಪ ಮಾಡದೆ ಅದನ್ನು ಮೃದುವಾಗಿ ಸ್ವೀಕರಿಸಲು ಕಲಿಯಬೇಕು. ಹಾಗೂ ಸಂಗಾತಿಯ ತಪ್ಪುಗಳನ್ನು ಕ್ಷಮಿಸಬೇಕು. ನಿಮ್ಮ ಕ್ಷಮೆಯು ನಿಮ್ಮ ಸಂಗಾತಿಯನ್ನು ಇನ್ನೂ ಉತ್ತಮವಾಗಿ ರೂಪಿಸುತ್ತದೆ.

ಅಭಿಪ್ರಾಯಗಳನ್ನು ವ್ಯಕ್ತಪಡಿಸಿ: ನಿಮ್ಮ ಸಂಗಾತಿಯ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಿ. ಹಾಗೂ ಏನೇ ಅಭಿಪ್ರಾಯಗಳಿದ್ದರೂ ಅದನ್ನು ಮುಕ್ತವಾಗಿ ವ್ಯಕ್ತಪಡಿಸಿ. ಇದರಿಂದ ಸಂಬಮಧದಲ್ಲಿ ಯಾವುದೇ ಮುಚ್ಚುಮರೆಗಳು ಇರುವುದಿಲ್ಲ.

ಆಲಿಸಿ: ನಿಮ್ಮ ಸಂಗಾತಿಯು ಯಾವುದೇ ವಿಷಯಗಳನ್ನು ಹೇಳಲು ಪ್ರಯತ್ನಿಸಿದಾಗ ಅವರ ಮಾತುಗಳನ್ನು ಕೇಳಿ. ಜೊತೆಗೆ ಅವರಿಗೆ ಆ ವಿಷಯದಲ್ಲಿ ಬೆಂಬಲವನ್ನು ನೀಡಿ.

ಸಹಾನುಭೂತಿ: ನೀವು ನಿಮ್ಮ ಸಂಗಾತಿಯ ಸೂಕ್ಷ್ಮ ಮನಸ್ಥಿತಿಯ ಬಗ್ಗೆ ತಿಳಿದಿರಬೇಕು. ಹಾಗೂ ಅವರಿಗೆ ನೋವಾಗದಂತೆ ಸಹಾನುಭೂತಿಯಿಂದ ವರ್ತಿಸಬೇಕು.

ಕ್ಷಮೆಯಾಚಿಸಿ: ನೀವು ಏನೇ ತಪ್ಪುಗಳನ್ನು ಮಾಡಿದರೂ, ಅಹಂ ಭಾವನೆಯನ್ನು ಪಕ್ಕಕ್ಕಿಟ್ಟು ಮನಸಾರೆ ಕ್ಷಮೆಯಾಚಿಸಿ. ಇದು ನಿಮ್ಮ ಸಂಬಮಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಮೆಚ್ಚುಗೆ: ಸಂಗಾತಿಯ ಪ್ರತಿಯೊಂದು ಕಾರ್ಯದಲ್ಲೂ ಬೆಂಬಲವಾಗಿ ನಿಂತು ಅವರಿಗೆ ಮೆಚ್ಚುಗೆ ಸೂಚಿಸುವ ಮೂಲಕ ಗೌರವ ನೀಡುವುದು ಮುಖ್ಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Thu, 30 March 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ