AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ಪ್ರೀತಿಯಿಂದ ತಿರಸ್ಕೃತಗೊಂಡಿದ್ದೀರಾ? ಪ್ರಸ್ತುತ ಸ್ಥಿತಿಯನ್ನು ನಿಭಾಯಿಸುವುದು ಹೇಗೆ, ಈ ಸಲಹೆಗಳು ನಿಮಗೆ ಸಹಾಯವಾಗಬಹುದು

ನಾವು ಒಬ್ಬರನ್ನು ಇಷ್ಟಪಟ್ಟಿದ್ದೇವೆ ಎಂದ ಮಾತ್ರಕ್ಕೆ ಅವರೂ ಕೂಡ ನಮ್ಮನ್ನು ಇಷ್ಟಪಡಬೇಕೆಂದೇನಿಲ್ಲವಲ್ಲ. ಕೆಲವರಿಗೆ ಕೆಲವು ಸಂಗತಿಗಳಲ್ಲಿ ನೀವು ಇಷ್ಟವಾಗಿರಬಹುದು, ಕೆಲವೊಂದು

Relationship Tips: ಪ್ರೀತಿಯಿಂದ ತಿರಸ್ಕೃತಗೊಂಡಿದ್ದೀರಾ? ಪ್ರಸ್ತುತ ಸ್ಥಿತಿಯನ್ನು ನಿಭಾಯಿಸುವುದು ಹೇಗೆ, ಈ ಸಲಹೆಗಳು ನಿಮಗೆ ಸಹಾಯವಾಗಬಹುದು
Love RejectionImage Credit source: AskApril
TV9 Web
| Edited By: |

Updated on:Sep 01, 2022 | 12:23 PM

Share

ನಾವು ಒಬ್ಬರನ್ನು ಇಷ್ಟಪಟ್ಟಿದ್ದೇವೆ ಎಂದ ಮಾತ್ರಕ್ಕೆ ಅವರೂ ಕೂಡ ನಮ್ಮನ್ನು ಇಷ್ಟಪಡಬೇಕೆಂದೇನಿಲ್ಲವಲ್ಲ. ಕೆಲವರಿಗೆ ಕೆಲವು ಸಂಗತಿಗಳಲ್ಲಿ ನೀವು ಇಷ್ಟವಾಗಿರಬಹುದು, ಕೆಲವೊಂದು ವಿಷಯದಲ್ಲಿ ಇಷ್ಟವಾಗದೆ ಇದ್ದಾಗ ನಿಮ್ಮನ್ನು ತಿರಸ್ಕರಿಸಲೂಬಹುದು, ಅವೆಲ್ಲವೂ ಅವರ ಮನಸ್ಥಿತಿಗೆ ಬಿಟ್ಟಿದ್ದು. ಹಾಗೆಂದ ಮಾತ್ರಕ್ಕೆ ನೀವು ನಡೆದುಕೊಳ್ಳುವ ರೀತಿಯೇ ಸರಿಯಿಲ್ಲ ಎಂದು ನೀವು ಅಂದುಕೊಳ್ಳುವುದು ಬೇಡ.

ಜೀವನವೆಂದ ಮೇಲೆ ಸೆಲೆಕ್ಷನ್, ರಿಜೆಕ್ಷನ್ ಎಲ್ಲವೂ ಸಾಮಾನ್ಯ, ಬೇಸರವಾಗುತ್ತದೆ ಆದರೂ ಜೀವನದಲ್ಲಿ ಮುಂದುವರೆಯಲೇಬೇಕಲ್ಲವೇ? ಅದೇ ಕೊರಗಿನಲ್ಲಿದ್ದರೆ ಆತ/ಆಕೆ ನಿಮಗೆ ಮತ್ತೆ ಸಿಗುತ್ತಾರೆಯೇ? ಹಾಗಾಗಿ ನೀವು ತಿರಸ್ಕಾರವನ್ನು ಆರೋಗ್ಯಕರವಾಗಿ ಎದುರಿಸುವುದು ಹೇಗೆ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ನಮ್ಮಲ್ಲಿ ಪ್ರತಿಯೊಬ್ಬರೂ ಯಶಸ್ಸಿನ ಕೀಲಿಯ ಹಿಂದೆ ಓಡುತ್ತಾರೆ ಆದರೆ ನಿರಾಕರಣೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನಾವು ಪ್ರಜ್ಞಾಪೂರ್ವಕವಾಗಿ ಯೋಚಿಸದ ಹೊರತು ಬೇರೆ ದಾರಿ ಇಲ್ಲ.

ನಿರಾಕರಣೆಯನ್ನು ನಿಮ್ಮ ಸೋಲು ಎಂದು ಭಾವಿಸಿದರೆ ಅದು ನಿಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ, ಹಾಗೆಯೇ ಮುಂದೊಂದು ದಿನ ದೊಡ್ಡ ಅಪಾಯವನ್ನೇ ನೀವು ಎದುರಿಸಬೇಕಾಗಬಹುದು.

ನಿಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು, ಕೆಲವು ಸಂದರ್ಭಗಳಲ್ಲಿ, ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

ಹಂತ 1: ನಿರಾಕರಣೆಯ ನೋವನ್ನು ಸ್ವೀಕರಿಸಿ ಉದಾಹರಣೆಗೆ: ನೀವು ಒಂದು ಉದ್ಯೋಗವನ್ನರಸಿ ಹೋಗಿರುತ್ತೀರಿ ಎಂದುಕೊಳ್ಳಿ ಆ ಕೆಲಸ ನಿಮಗೇ ಸಿಗಬೇಕೆಂದೇನಿಲ್ಲವಲ್ಲ, ಜೀವನವೂ ಕೂಡ ಹಾಗೆಯೇ ಇಂದು ತಿರಸ್ಕೃತಗೊಂಡ ನಿಮಗೆ ಇನ್ನೆಲ್ಲೋ ಒಳ್ಳೆಯ ಕೆಲಸ ಕಾದಿದೆ ಎಂದರ್ಥ. ಹಾಗೆಯೇ ಪ್ರೀತಿಯಲ್ಲಿ ತಿರಸ್ಕೃತಗೊಂಡರೆ ಇನ್ನೂ ಉತ್ತಮ ಹುಡುಗ/ಹುಡುಗಿ ನಿಮಗೆ ಸಿಗಬಹುದಲ್ಲವೇ? ಈ ರೀತಿ ಆಲೋಚಿಸಿ.

-ನಿಮಗೆ ನೋವಾಗಿಲ್ಲ ಎನ್ನುವ ರೀತಿ ಬಿಂಬಿಸುವ ಅವಶ್ಯಕತೆ ಇಲ್ಲ -ನಿಮಗೆ ಕೆಲಸ ಸಿಕ್ಕಿಲ್ಲ ಎನ್ನುವ ನೋವಿದೆ -ನೀವು ಇಷ್ಟಪಟ್ಟವರು ನಿಮ್ಮನ್ನು ದೂರ ಇಟ್ಟಾಗ ನೋವಾಗುವುದು ಸಹಜ

ಹಂತ 2: ನಿಮ್ಮ ಆಂತರಿಕ ವಿಮರ್ಶೆಯನ್ನು ನಿಲ್ಲಿಸಿ

ಉದಾಹರಣೆ: ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನು ಮತ್ತೆ ನೋಡಲು ಬಯಸುವುದಿಲ್ಲ. -ನಿಮ್ಮಿಬ್ಬರ ನಡುವೆ ಹೊಂದಾಣಿಕೆಯಿಲ್ಲ ಎಂದಾದಾಗ ಜತೆಗಿದ್ದು ಪ್ರತಿಯೊಂದು ವಿಚಾರಕ್ಕೂ ಜಗಳವಾಡುವುದಕ್ಕಿಂತ ದೂರವಾಗುವುದೇ ಉತ್ತಮ.

-ನಿಮ್ಮಲ್ಲಿ ಏನೋ ತಪ್ಪಾಗಿದೆ ಎಂಬ ಕಾರಣಕ್ಕಾಗಿ ಅಲ್ಲ

-ನಿಮ್ಮ ಬಗ್ಗೆ ನೀವು ದೂಷಿಸುವುದನ್ನು ಬಿಡಿ, ಒಂದೇ ಕೈಯಿಂದ ಚಪ್ಪಾಳೆ ತಟ್ಟಲಾಗದು ಹಾಗೆಯೇ ನಿಮ್ಮದೊಂದೇ ತಪ್ಪಿರುವುದಿಲ್ಲ ಇಬ್ಬರದ್ದೂ ಸರಾಸರಿ ಇರುತ್ತದೆ. ಹಾಗಾಗಿ ನಿಮ್ಮನ್ನು ನೀವು ದೂಷಿಸುವುದನ್ನು ನಿಲ್ಲಿಸಿ.

ಹಂತ 3: ನೀವು ಇದರಿಂದ ಏನು ಕಲಿತಿರಿ ಎಂಬುದನ್ನು ತಿಳಿಯಲು ಪ್ರಯತ್ನಿಸಿ

-ಒಮ್ಮೆ ನೀವು ನೋವನ್ನು ಒಪ್ಪಿಕೊಂಡರೆ, ಅಂತಿಮವಾಗಿ ನಿಮಗೆ ಏನು ಅನುಭವ ದೊರೆಯಿತು ಎಮಬುದರ ಬಗ್ಗೆ ಆಲೋಚಿಸಿ. -ಇದರಿಂದ ನಾನು ಕಲಿತ ಪ್ರಮುಖ ವಿಷಯ ಯಾವುದು?

-ಮುಂದಿನ ಬಾರಿ ಯಾವ ರೀತಿಯ ತಪ್ಪಾಗದಂತೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Thu, 1 September 22

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​