AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೌಚಾಲಯಕ್ಕಿಂತ ಕೊಳಕಾದ 5 ಗೃಹೋಪಯೋಗಿ ವಸ್ತುಗಳು ಇವೆ ನೋಡಿ

ಮನೆಯಲ್ಲಿ ಅತ್ಯಂತ ಕೊಳಕುವುಳ್ಳ ಸ್ಥಳವೆಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಈ ಶೌಚಾಲಯ. ಆದರೆ ನಾವು ದಿನನಿತ್ಯ ಉಪಯೋಗಿಸುವ ಈ ವಸ್ತುಗಳು ಕೂಡ ಅತ್ಯಂತ ಕೊಳಕು ವಸ್ತುಗಳ ಸಾಲಿಗೆ ಸೇರಿವೆಯಂತೆ. ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ಅವರು ನಾವು ದಿನನಿತ್ಯ ಮುಟ್ಟುವ ಈ ವಸ್ತುಗಳು ಹೆಚ್ಚಿನ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ ಎಂದು ಹೇಳಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಶೌಚಾಲಯಕ್ಕಿಂತ ಕೊಳಕಾದ 5 ಗೃಹೋಪಯೋಗಿ ವಸ್ತುಗಳು ಇವೆ ನೋಡಿ
ಡಾ. ಮನನ್ ವೋರಾImage Credit source: Pinterest/ Instagram
ಸಾಯಿನಂದಾ
|

Updated on: Oct 10, 2025 | 5:28 PM

Share

ಸಾಮಾನ್ಯವಾಗಿ ಟಾಯ್ಲೆಟ್ ಹಾಗೂ ಬಾತ್‌ರೂಮ್‌ನ್ನು ಅತ್ಯಂತ ಕೊಳಕಿನ ಸ್ಥಳವೆಂದು ಕೊಳ್ಳುತ್ತೇವೆ. ಹೀಗಾಗಿ ವಾರಕ್ಕೊಮ್ಮೆಯಾದ್ರು ಶೌಚಾಲಯ ಹಾಗೂ ಸ್ನಾನಗೃಹದ ಸ್ವಚ್ಛತೆಗೆ ಹೆಚ್ಚಿನವರು ಗಮನ ಹರಿಸ್ತಾರೆ. ಆದರೆ ಹೆಚ್ಚಿನವರಿಗೆ ಈ ವಿಷ್ಯ ತಿಳಿದೇ ಇಲ್ಲ. ಶೌಚಾಲಯದ ಸೀಟಿಗಿಂತಲೂ ಕೊಳಕು ನಾವು ದಿನನಿತ್ಯ ಬಳಸುವ ಈ ಗೃಹಪಯೋಗಿ ವಸ್ತುಗಳಂತೆ (Household items). ಹೌದು, ಟಿವಿ ರಿಮೋಟ್‌ಗಳು, ಸ್ಮಾರ್ಟ್‌ಫೋನ್‌ಗಳು, ಕಟಿಂಗ್ ಬೋರ್ಡ್‌ಗಳು ಸೇರಿದಂತೆ ಈ ಐದು ವಸ್ತುಗಳು ತುಂಬಾನೇ ಕೊಳಕು. ಇದರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ ಎಂದು ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ (Orthopeadic Surgeon Dr. Manan Vora) ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ಶೌಚಾಲಯಕ್ಕಿಂತ ಹೆಚ್ಚು ಕೊಳಕು ಈ ಗೃಹಪಯೋಗಿ ವಸ್ತುಗಳು

ಟಿವಿ ರಿಮೋಟ್ : ಟಿವಿ ರಿಮೋಟ್ ನಿಂದ ಕೊಳಕು ಇರುತ್ತದೆ. ಎಣ್ಣೆಯುಕ್ತ ಕೈಗಳಿಂದ ರಿಮೋಟ್ ಮುಟ್ಟುತ್ತೇವೆ, ಆದರೆ ನಾವು ಅದರ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ
Image
ಸ್ವಿಚ್‌ಬೋರ್ಡ್‌ ಸ್ವಚ್ಛಗೊಳಿಸುವ ಸಿಂಪಲ್‌ ಸಲಹೆಗಳು
Image
ಡೈಪರ್ ಬಳಸಿ ದದ್ದುಗಳು ಕಂಡುಬರುತ್ತಿದ್ದರೆ ಈ ಸಿಂಪಲ್ ಟ್ರಿಕ್ಸ್ ಪಾಲಿಸಿ
Image
ಬೆವರಿನ ವಾಸನೆ ಹೋಗಲಾಡಿಸಲು ಈ 20 ರೂಪಾಯಿ ವಸ್ತುವನ್ನು ಬಳಸಿ
Image
ಚಪಾತಿ ಹೆಚ್ಚು ಗಂಟೆಗಳ ಕಾಲ ಮೃದುವಾಗಿಡಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ಕಟಿಂಗ್ ಬೋರ್ಡ್ : ತರಕಾರಿಗಳು, ಹಣ್ಣುಗಳು ಮತ್ತು ಇತರ ಆಹಾರಗಳನ್ನು ಕತ್ತರಿಸಲು ಬಳಸುವ ಈ ಕಟಿಂಗ್ ಬೋರ್ಡ್ ಕೊಳಕು ವಸ್ತುಗಳ ಸಾಲಿಗೆ ಸೇರಿವೆ. ಕತ್ತರಿಸಿದ ನಂತರದಲ್ಲಿ ಈ ಕಟಿಂಗ್ ಬೋರ್ಡ್ ಸಂಪೂರ್ಣವಾಗಿ ಒಣಗದಿದ್ದರೆ, ಅಥವಾ ಇದರಲ್ಲಿ ಆಹಾರ ತುಂಡುಗಳು ಉಳಿದು ಬ್ಯಾಕ್ಟಿರಿಯಾ ಬೆಳೆಯಲು ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ವೀಡಿಯೋ ಇಲ್ಲಿದೆ ನೋಡಿ

ಫೋನ್ : ಡೈನಿಂಗ್ ಟೇಬಲ್ ನಿಂದ ಹಿಡಿದು ಶೌಚಾಲಯದವರೆಗೆ ಫೋನ್ ಗಳನ್ನು ಬಳಸುತ್ತೇವೆ. ಬಸ್‌ಗಳು, ಕ್ಯಾಬ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಫೋನ್ ಬಳಸುತ್ತೇವೆ. ಆದರೆ ಅದರ ಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆ ಗಮನ ಹರಿಸುವುದಿಲ್ಲ.

ದಿಂಬಿನ ಕವರ್ : ಲಾಲಾರಸ ಹಾಗೂ ಬೆವರು ಕೂಡ ದಿಂಬಿನ ಕವರ್ ಮೇಲೆ ಸಂಗ್ರಹವಾಗುತ್ತದೆ. ದಿಂಬಿನ ಹೊದಿಕೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಇದು ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂದು ಹೇಳಿದ್ದಾರೆ ವೈದ್ಯರು.

ಸ್ಪಂಜುಗಳು: ಅಡುಗೆಮನೆಯ ಸ್ಪಂಜುಗಳನ್ನು ಯಾರು ಕೂಡ ಸ್ವಚ್ಛಗೊಳಿಸುವುದಿಲ್ಲ. ಇದು ತೇವವಾಗಿ ಉಳಿಯುತ್ತದೆ, ಇದರಲ್ಲಿ ಉಳಿಯುವ ಆಹಾರದ ಕಣಗಳು ಬ್ಯಾಕ್ಟೀರಿಯಾಗಳು ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಈ ಕ್ಲೀನಿಂಗ್‌ ಸಲಹೆ ಅನುಸರಿಸಿದ್ರೆ ಸಾಕು ನಿಮ್ಮ ಮನೆಯ ಸ್ವಿಚ್‌ಬೋರ್ಡ್‌ ಪಳಪಳ ಹೊಳೆಯುತ್ತದೆ

ದಿನನಿತ್ಯ ಬಳಸುವ ಈ ವಸ್ತುಗಳ ಮೇಲಿನ ಸೂಕ್ಷ್ಮಜೀವಿಗಳನ್ನು ಕಡಿಮೆಗೊಳಿಸಲು ಇಲ್ಲಿದೆ ಸಲಹೆ

  • ವಾರಕ್ಕೊಮ್ಮೆಯಾದರೂ ಟಿವಿ ರಿಮೋಟ್‌ಗಳನ್ನು ಧೂಳುಗಳಿದ್ದಲ್ಲಿ ಒರೆಸುತ್ತಾ ಸ್ವಚ್ಛವಾಗಿಟ್ಟುಕೊಳ್ಳಿ. ಅನಾರೋಗ್ಯದ ಸಮಯದಲ್ಲಿ ಇದನ್ನು ಪ್ರತಿದಿನ ಸ್ವಚ್ಛಗೊಳಿಸಿ.
  • ಕಟಿಂಗ್ ಬೋರ್ಡ್‌ಗಳನ್ನು ಬಳಸಿದ ನಂತರ ಸ್ವಚ್ಛಗೊಳಿಸಿ, ನಿಯಮಿತವಾಗಿ ಸ್ಯಾನಿಟೈಸ್ ಮಾಡಿ.
  • ಸ್ಮಾರ್ಟ್‌ಫೋನ್‌ಗಳನ್ನು ಆಗಾಗ ಒರೆಸುತ್ತ ಇರಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ಬಳಸುತ್ತಿದ್ದರೆ ಪ್ರತಿದಿನ ಒರೆಸಿ.
  • ವಾರಕ್ಕೊಮ್ಮೆ ದಿಂಬಿನ ಕವರ್‌ಗಳನ್ನು ತೊಳೆಯಿರಿ ಹಾಗೂ ದಿಂಬಿನ ಕವರ್ ಬದಲಾಯಿಸುತ್ತಾ ಇರಿ.
  • ಅಡುಗೆಮನೆಯ ಸ್ಪಂಜುಗಳನ್ನು ವಾರಕ್ಕೊಮ್ಮೆ ಬದಲಾಯಿಸಿ ಅಥವಾ ಸ್ವಚ್ಛಗೊಳಿಸಿ, ತೇವಾಂಶವು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಸ್ವಚ್ಛಗೊಳಿಸಿದ ನಂತರ ಈ ವಸ್ತುಗಳನ್ನು ಸಂಪೂರ್ಣವಾಗಿ ಒಣಗಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

`

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!