AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪಾತಿ ಮಾಡಿ ಸ್ವಲ್ಪ ಹೊತ್ತಿಗೆ ಗಟ್ಟಿಯಾಗುತ್ತಾ? ಬೆಣ್ಣೆಯಂತೆ ಮೃದುವಾಗಲು ಈ ಟಿಪ್ಸ್ ಪಾಲಿಸಿ

ಚಪಾತಿ ಮಾಡಿಟ್ಟ ಕೆಲವೇ ನಿಮಿಷಗಳಲ್ಲಿ ಗಟ್ಟಿಯಾಗುವುದು ಸಾಮಾನ್ಯ. ಇದು ಹಲವರ ಸಮಸ್ಯೆ. ಮಾಡಿಟ್ಟ ಕೆಲವು ನಿಮಿಷ ಮಾತ್ರ ಅವು ಮೃದುವಾಗಿರುತ್ತವೆ. ಪಕ್ಕಕ್ಕೆ ಇಟ್ಟಾಗ ಗಟ್ಟಿಯಾಗಿ ಮುರಿದು ತಿನ್ನಲು ಕಷ್ಟವಾಗುತ್ತದೆ. ಈ ರೀತಿಯ ಈ ಸಮಸ್ಯೆಯನ್ನು ನಿವಾರಿಸಿ ಚಪಾತಿ 24 ಗಂಟೆಗಳ ಕಾಲ ಮೃದುವಾಗಿರಲು ಈ ಹೊಸ ಟ್ರಿಕ್ ಅನ್ನು ಪಾಲಿಸಬೇಕು. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು ನೀವು ಕೂಡ ಇದನ್ನು ಪಾಲಿಸುವ ಮೂಲಕ ದಿನ ಪೂರ್ತಿ ಮೃದುವಾಗಿರುವ ಚಪಾತಿಯನ್ನು ತಿನ್ನಬಹುದಾಗಿದೆ. ಹಾಗಾದರೆ ಯಾವ ರೀತಿ ಸಲಹೆಯನ್ನು ಪಾಲಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಪಾತಿ ಮಾಡಿ ಸ್ವಲ್ಪ ಹೊತ್ತಿಗೆ ಗಟ್ಟಿಯಾಗುತ್ತಾ? ಬೆಣ್ಣೆಯಂತೆ ಮೃದುವಾಗಲು ಈ ಟಿಪ್ಸ್ ಪಾಲಿಸಿ
Soft Chapatis
ಪ್ರೀತಿ ಭಟ್​, ಗುಣವಂತೆ
|

Updated on: Aug 30, 2025 | 3:15 PM

Share

ನಮ್ಮ ಅನೇಕರ ಮನೆಗಳಲ್ಲಿ ಎದುರಿಸುವ ದೊಡ್ಡ ಸಮಸ್ಯೆಯೆಂದರೆ ಚಪಾತಿಗಳು ಬೇಗ ಗಟ್ಟಿಯಾಗುವುದು. ಪ್ರತಿನಿತ್ಯ ಚಪಾತಿ ತಿನ್ನುವವರ ಮನೆಗಳಲ್ಲಿಯೂ ಈ ರೀತಿಯ ಸಮಸ್ಯೆ ಇದ್ದೇ ಇರುತ್ತದೆ. ಚಪಾತಿ (Chapati) ಮಾಡಿಟ್ಟ ಕೆಲವು ನಿಮಿಷ ಮಾತ್ರ ಅವು ಮೃದುವಾಗಿರುತ್ತವೆ. ನಂತರ, ಅದನ್ನು ತಿನ್ನುವುದಕ್ಕೆ ಪಕ್ಕಕ್ಕೆ ಇಟ್ಟ ಸ್ವಲ್ಪ ಹೊತ್ತಿಗೆ ತಿನ್ನಲು ಕಷ್ಟವಾಗುತ್ತದೆ. ಆದರೆ ಈ ರೀತಿಯ ಸಮಸ್ಯೆಯನ್ನು ನಿವಾರಿಸಲು, ಜೊತೆಗೆ ಚಪಾತಿಯನ್ನು 24 ಗಂಟೆಗಳ ಕಾಲ ಮೃದುವಾಗಿಡಲು ಜನರು ಹೊಸ ಹೊಸ ಟ್ರಿಕ್ ಗಳನ್ನು ಪಾಲಿಸುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು ನೀವು ಕೂಡ ಇದನ್ನು ಪಾಲಿಸುವ ಮೂಲಕ ದಿನ ಪೂರ್ತಿ ಮೃದುವಾಗಿರುವ ಚಪಾತಿಯನ್ನು ತಿನ್ನಬಹುದಾಗಿದೆ. ಹಾಗಾದರೆ ಯಾವ ರೀತಿ ಸಲಹೆಯನ್ನು ಪಾಲಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಪಾತಿ ಹಿಟ್ಟನ್ನು ಹೇಗೆ ತಯಾರಿಸಬೇಕು?

ಚಪಾತಿ ಮೃದುವಾಗಲು, ಮೊದಲು ಚಪಾತಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು, ಹಾಲು, ಒಂದು ಚಮಚ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಇವುಗಳನ್ನು ಸೇರಿಸುವುದರಿಂದ ಹಿಟ್ಟು ಮೃದುವಾಗುತ್ತದೆ. ಜೊತೆಗೆ ಹಾಲಿನಲ್ಲಿರುವ ಪ್ರೋಟೀನ್‌ಗಳು ತೇವಾಂಶವನ್ನು ಉಳಿಸಿಕೊಡಿರುವುದರಿಂದ ಚಪಾತಿ ಬೇಗನೆ ಗಟ್ಟಿಯಾಗುವುದನ್ನು ತಡೆಯುತ್ತದೆ.

ಹಿಟ್ಟನ್ನು ಕಲಸಿ ತಕ್ಷಣ ಅದನ್ನು ಲಟ್ಟಿಸಬೇಡಿ. ಒಂದು ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ 20 ರಿಂದ 30 ನಿಮಿಷಗಳ ಕಾಲ ಆ ಹಿಟ್ಟಿನ ಉಂಡೆಯನ್ನು ಅದರ ಮೇಲಿಟ್ಟು ಮುಚ್ಚಳ ಮುಚ್ಚಿ ಬದಿಗಿಡಿ. ಈ ರೀತಿ ಮಾಡುವುದರಿಂದ ಅದರಲ್ಲಿರುವ ಗ್ಲುಟನ್ ಸಡಿಲಗೊಳ್ಳುತ್ತದೆ ಮತ್ತು ಅದು ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದು ಹಿಟ್ಟನ್ನು ಮೃದುವಾಗಿಸುತ್ತದೆ ಮತ್ತು ಅದು ಸುಲಭವಾಗಿ ಲಟ್ಟಿಸುವಂತಿರುತ್ತದೆ. ಮಾತ್ರವಲ್ಲ ಪ್ಯಾನ್ ಮೇಲೆ ಹಾಕಿದಾಗಲೂ ಕೂಡ ಅದು ಚೆನ್ನಾಗಿ ಬೇಯುತ್ತದೆ.

ಇದನ್ನೂ ಓದಿ
Image
ಗೋಧಿ ಬದಲು ಗ್ಲುಟನ್‌ ಫ್ರೀ ಆಗಿರುವ ಈ ಹಿಟ್ಟಿನಿಂದ ಚಪಾತಿ ಮಾಡಿ ನೋಡಿ
Image
ರಾತ್ರಿ ಚಪಾತಿ ತಿನ್ನುತ್ತೀರಾ? ನಿಮ್ಮಲ್ಲಿ ಖಂಡಿತ ಈ ಬದಲಾವಣೆ
Image
ಈ ರೀತಿ ಮಾಡಿದ್ರೆ ಕೈಗೆ ಅಂಟಿಕೊಂಡ ಹಿಟ್ಟು ಸುಲಭವಾಗಿ ಬಿಡುತ್ತೆ
Image
ಚಪಾತಿ ಮೃದುವಾಗಿ ಬರಲು ಈ ಕೆಲಸ ಮೊದ್ಲು ಮಾಡಿ

ರೊಟ್ಟಿ ಪ್ಯಾನ್ ಮೇಲೆ ಉಬ್ಬುವಾಗ ಅದರೊಳಗೆ ಹಬೆ ತುಂಬಿ ಪದರವಾಗುತ್ತದೆ. ಇದು ಚಪಾತಿ ಮೃದುವಾಗಲು ಸಹಾಯ ಮಾಡುತ್ತದೆ. ಆದರೆ ಚಪಾತಿಯನ್ನು ಪ್ಯಾನ್‌ನಿಂದ ಬೇಗನೆ ತೆಗೆಯಬಾರದು ಹಾಗಂತ ಹೆಚ್ಚು ಹೊತ್ತು ಇಡಬಾರದು. ಹಾಗೆ ಮಾಡಿದರೂ ಚಪಾತಿ ಗಟ್ಟಿಯಾಗುತ್ತದೆ. ಎರಡೂ ಬದಿ ಚಿನ್ನದ ಕಲೆ ಕಾಣಿಸಿಕೊಂಡು ಬಲೂನ್‌ ನಂತೆ ಚೆನ್ನಾಗಿ ಉಬ್ಬಿದಾಗ ಚಪಾತಿಯನ್ನು ಪ್ಯಾನ್‌ನಿಂದ ತೆಗೆಯಿರಿ.

ಇದನ್ನೂ ಓದಿ: ಈ ಧಾನ್ಯದಿಂದ ಮಾಡಿದ ಚಪಾತಿ ತಿಂದು ನೋಡಿ! ಆರೋಗ್ಯ ಸಮಸ್ಯೆಯೇ ಬರುವುದಿಲ್ಲ

ಚಪಾತಿ ಮೃದುವಾಗಿರಲು ಏನು ಮಾಡಬೇಕು?

ಆದರೆ ಅವುಗಳನ್ನು ಹೊರಗಿಡದೆ ಅವುಗಳನ್ನು ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಇರಿಸಿ, ಅದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಚಪಾತಿಗಳು ಬೇಗನೆ ಒಣಗುವುದನ್ನು ತಡೆಯುತ್ತದೆ. ಬಳಿಕ ಅವುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ, ನಾವು ತಯಾರಿದ ಚಪಾತಿ ಗಂಟೆಗಟ್ಟಲೆ ಮೃದುವಾಗಿರುತ್ತವೆ. ನೀವು ಅವುಗಳನ್ನು ಊಟಕ್ಕೆ ಕೊಂಡೊಯ್ಯಬಹುದು ಅಥವಾ ದೀರ್ಘ ಪ್ರಯಾಣ ಮಾಡುವಾಗಲೂ ಕೂಡ ತೆಗೆದುಕೊಂಡು ಹೋಗಬಹುದು. ಮಾತ್ರವಲ್ಲ ಬೆಳಿಗ್ಗೆ ತಯಾರಿಸಿ ಮರುದಿನದ ವರೆಗೆ ತಿನ್ನಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ