AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss Breakfast: ತೂಕ ನಷ್ಟಕ್ಕೆ ಸಹಕಾರಿ ಈ ರುಚಿಕರ ಜೋಳದ ಉಪ್ಪಿಟ್ಟು

ಈ ಜೋಳದ ಉಪ್ಪಿಟ್ಟು ಆರೋಗ್ಯಕರವಾಗಿದೆ ಹಾಗೂ ತುಂಬಾ ರುಚಿಕರವಾಗಿದೆ ಜೊತೆಗೆ ತೂಕನಷ್ಟಕ್ಕೂ ಇದು ಸಹಕಾರಿ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

Weight Loss Breakfast: ತೂಕ ನಷ್ಟಕ್ಕೆ ಸಹಕಾರಿ ಈ ರುಚಿಕರ ಜೋಳದ ಉಪ್ಪಿಟ್ಟು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 05, 2023 | 2:07 PM

Share

ಭಾರತೀಯರ ಜನಪ್ರಿಯ ಪಾಕವಿಧಾನಗಳಲ್ಲಿ ಉಪ್ಪಿಟ್ಟು ಕೂಡಾ ಒಂದು. ಇದು ಪೊಷಕಾಂಶಗಳಿಂದ ಉತ್ತಮ ಉಪಹಾರವಾಗಿದೆ. ಹೆಚ್ಚಿನ ಭಾರತೀಯ ಮನೆಗಳಲ್ಲಿ ಹೆಚ್ಚಾಗಿ ಉಪ್ಪಿಟ್ಟು ಬೆಳಗ್ಗಿನ ಉಪಹಾರವಾಗಿರುತ್ತದೆ. ಅನೇಕ ವಿಧಾನಗಳಲ್ಲಿ ಈ ಉಪ್ಪಿಟ್ಟನ್ನು ತಯಾರಿಸಲಾಗುತ್ತದೆ. ಕೆಲವರು ಉಪ್ಪಿಟ್ಟಿಗೆ ಡ್ರೈöÊ ಫ್ರೂಟ್ಸ್, ಮೊಸರು ಹಾಗೂ ಕೆಲವರು ತರಕಾರಿಗಳನ್ನು ಬಳಸಿ ಉಪ್ಪಿಟನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಉಪ್ಪಿಟ್ಟನ್ನು ರವೆಯನ್ನು ಬಳಸಿ ತಯಾರಿಸಲಾಗುತ್ತದೆ. ಆದರೆ ನೀವು ತೂಕ ಇಳಿಸಿಕೊಳ್ಳವ ಆಹಾರ ಕ್ರಮದಲ್ಲಿದ್ದರೆ, ನೀವು ಜೋಳವನ್ನು ಬಳಸಿ ಉಪ್ಪಿಟ್ಟನ್ನು ತಯಾರಿಸಬಹುದು, ಇದು ನಿಮಗೆ ಪೋಷಕಾಂಶವನ್ನು ನೀಡುವುದರ ಜೊತೆಗೆ ನಿಮ್ಮ ತೂಕನಷ್ಟಕ್ಕೂ ಇದು ಸಹಕಾರಿಯಾಗಿದೆ.

ತೂಕ ನಷ್ಟಕ್ಕೆ ಉಪ್ಪಿಟ್ಟು ಒಳ್ಳೆಯದೇ? ಜೋಳದ ಉಪ್ಪಿಟ್ಟಿನ ಆರೋಗ್ಯ ಪ್ರಯೋಜನಗಳು

ಫೈಬರ್‌ನಿಂದ ಸಮೃದ್ಧವಾಗಿದೆ: ಜೋಳವು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಈ ಜೋಳದ ಉಪ್ಪಿಟ್ಟು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರ ಹೆಚ್ಚಿನ ಫೈಬರ್ ಅಂಶವು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಪ್ರೋಟೀನ್‌ನ ಅತ್ಯುತ್ತಮ ಮೂಲ: ತೂಕ ಇಳಿಸಿಕೊಳ್ಳಲು ಬಯಸುವವರು ಹೆಚ್ಚಾಗಿ ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ಸೇವಿಸುತ್ತಾರೆ. ಜೋಳದ ಉಪ್ಪಿಟ್ಟು ಕೂಡಾ ಉತ್ತಮ ಪ್ರೋಟೀನ್‌ನ ಮೂಲವಾಗಿದೆ. ಮತ್ತು ಇದು ಅನಾರೋಗ್ಯಕರ ಕಡುಬಯಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Weight loss tips: ತೂಕ ಇಳಿಸಿಕೊಳ್ಳಲು ಈ ಹಣ್ಣಿನ ಜ್ಯೂಸ್ ಕುಡಿಯಿರಿ? ಇಲ್ಲಿದೆ ತಜ್ಞರ ಸಲಹೆ

ಕಡಿಮೆ ಗ್ಲೆಸೆಮಿಕ್ ಸೂಚ್ಯಂಕ: ಕಡಿಮೆ ಗ್ಲೆಸೆಮಿಕ್ ಸೂಚಿಯನ್ನು ಹೊಂದಿರುವ ಕೆಲವು ಆಹಾರಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇಂತಹ ಆಹಾರಗಳು ರಕ್ತದಲ್ಲಿ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಮಧುಮೇಹಿಗಳಿಗೂ ಜೋಳ ತಿನ್ನಲು ಶಿಫಾರಸು ಮಡಬಹಬುದು.

ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ: ನೀವು ತೂಕ ಇಳಿಸಿಕೊಳ್ಳುವ ಆಹಾರಕ್ರಮದಲ್ಲಿರುವಾಗ, ದೇಹದಲ್ಲಿ ಸಮತೋಲನವನ್ನು ಕಂಡುಕೊಳ್ಳುವುದು ಕೆಲವೊಮ್ಮೆ ಸವಾಲಾಗಬಹುದು. ಇದರ ಪರಿಣಾಮವಾಗಿ ನಿಮ್ಮಲ್ಲಿ ಸುಸ್ತಾ ಕೂಡ ಆಗಬಹುದು. ಜೋಳವನ್ನು ಸೇವಿಸುವುದರಿಂದ ನಿಮ್ಮ ಆಯಾಸವನ್ನು ನಿರ್ವಹಿಸಬಹುದು.

ಮನೆಯಲ್ಲಿಯೇ ಜೋಳದ ಉಪ್ಪಿಟ್ಟನ್ನು ಮಾಡುವುದು ಹೇಗೆ:

ಈ ಉಪ್ಪಿಟ್ಟನ್ನು ಮಾಡಲು ನೀವು ಸಂಪೂರ್ಣ ಜೋಳ ಅಥವಾ ಜೋಳದ ಹಿಟ್ಟನ್ನು ಬಳಸಬಹುದು. ನೀವು ಹಿಟ್ಟನ್ನು ಬಳಸುತ್ತಿದ್ದರೆ, ಒಂದೊಳ್ಳೆ ತುಂಬಾ ರುಚಿಯಾಗಿರಬೇಕಾದರೆ, ಅದಕ್ಕೆ ಸ್ವಲ್ಪ ರವೆಯನ್ನು ಮಿಶ್ರಣ ಮಾಡಬಹುದು. ಜೋಳದ ಉಪ್ಪಿಟ್ಟನ್ನು ಇತರ ಉಪ್ಪಿಟ್ಟಿನಂತೆಯೇ ಹೆಚ್ಚಿನ ಪದಾರ್ಥಗಳನ್ನು ಸೇರಿಸಿ ತಯಾರಿಸಬಹುದು. ಉಪ್ಪಿಟ್ಟಿನ ರುಚಿ ಮತ್ತು ಪೌಷ್ಟಿಕಾಂಶವನ್ನು ಹೆಚ್ಚಿಸಲು ಈರುಳ್ಳಿ, ಹಸಿರು ಬಟಾಣಿ, ಕ್ಯಾರೆಟ್, ಕ್ಯಾಪ್ಸಿಕಮ್ ಮುಂತಾದ ನಿಮ್ಮ ಆಯ್ಕೆಯ ತರಕಾರಿಗಳನ್ನು ಬಳಸಬಹುದು.

ತಯಾರಿಸುವ ವಿಧಾನ: ನೀವು ಸಂಪೂರ್ಣ ಜೋಳವನ್ನು ಬಳಸುತ್ತಿದ್ದರೆ, ಅದನ್ನು ರಾತ್ರಿಯಿಡಿ ನೆನೆಸಿಟ್ಟು ಮರುದಿನ ಅದನ್ನು ಉಪ್ಪು ಮತ್ತು ನೀರು ಸೇರಿಸಿ 3 ಸೀಟಿ ಬರುವವರೆಗೆ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆಯನ್ನು ಸೇರಿಸಿ ಫ್ರೈ ಮಾಡಿ ನಂತರ ಅದಕ್ಕೆ ಕರಿಬೇವಿನ ಎಲೆ, ಇಂಗು, ಹಸಿಮೆಣಸಿನಕಾಯಿ ಹಾಗೂ ಶುಂಠಿಯನ್ನು ಸೇರಿಸಿ. ಬಳಿಕ ಸಣ್ಣದಾಗಿ ಕೊಚ್ಚಿದ ಈರುಳ್ಳಿಯನ್ನು ಸೇರಿಸಿ ಅದನ್ನು ಅರೆಪಾರದರ್ಶಕವಾಗುವವರೆಗೆ ಹುರಿಯಿರಿ. ನೀವು ಒಂದು ವೇಳೆ ಜೋಳದ ಹಿಟ್ಟನ್ನು ಬಳಸುತ್ತಿದ್ದರೆ ಈ ಹಂತದಲ್ಲಿಯೇ ಹಿಟ್ಟನ್ನು ಕಡಾಯಿಗೆ ಹಾಕಿಕೊಳ್ಳಿ. ಜೊತೆಗೆ ಬೇಯಿಸಿದ ಬಟಾಣಿ ಮತ್ತು ಇತರ ತರಕಾರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನೀವು ಸಂಪೂರ್ಣ ಜೋಳವನ್ನು ಬಳಸುತ್ತಿದ್ದರೆ ಈ ಹಂತದಲ್ಲಿ ಅದನ್ನು ಕಡಾಯಿಗೆ ಸೇರಿಸಿ ಸುಮಾರು ಮೂರು ನಿಮಿಷಗಳ ಕಾಲ ಹುರಿಯಿರಿ. ಮತ್ತು ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಉಪ್ಪಿಟ್ಟು ಸವಿಯಲು ಸಿದ್ಧ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್