AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Malav: 10 ಸಾವಿರದಲ್ಲಿ ಆರಂಭಿಸಿದ ಜೇನುಸಾಕಣೆಯಲ್ಲಿ ಇಂದು 25 ಲಕ್ಷ ರೂ. ಗಳಿಸುತ್ತಿರುವ ರೈತ

10,000 ರೂಪಾಯಿ ಬಂಡವಾಳದೊಂದಿಗೆ ತನ್ನ ಯಶಸ್ವಿ ಜೇನುಸಾಕಣೆ ಉದ್ಯಮವನ್ನು ಪ್ರಾರಂಭಿಸಿ ಪ್ರಸ್ತುತ ವರ್ಷಕ್ಕೆ 25 ಲಕ್ಷ ರೂಪಾಯಿ ಗಳಿಸುತ್ತಿರುವ ರೈತ ನರೇಂದ್ರ ಮಾಲವ್ ಅವರ ಜೀವನ ಗಾಥೆ.

Narendra Malav: 10 ಸಾವಿರದಲ್ಲಿ ಆರಂಭಿಸಿದ ಜೇನುಸಾಕಣೆಯಲ್ಲಿ ಇಂದು 25 ಲಕ್ಷ ರೂ. ಗಳಿಸುತ್ತಿರುವ ರೈತ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 05, 2023 | 3:31 PM

ಜೇನುತುಪ್ಪವು ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇಂತಹ ಸಿಹಿಯಾದ ಜೇನು ತಯಾರಿಸುವ ರೈತರಲ್ಲಿ ಒಬ್ಬರಾದ ರಾಜಸ್ಥಾನದ ಕೋಟಾದ ರೈತ ನರೇಂದ್ರ ಮಾಲವ್. ಇವರು ಜೇನುಸಾಕಣೆಯಲ್ಲಿ ಪರಿಣತರಾಗಿದ್ದು ಅದರಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಕಾರ್ಯಕ್ಕೆ ಅವರು ಗೌರವ, ಪ್ರಶಂಸೆಗಳ ಜತೆಗೆ ಲಕ್ಷಗಟ್ಟಲೆ ಲಾಭ ಗಳಿಸುತ್ತಾರೆ. ಈ ಯಶಸ್ವಿ ರೈತ ಕೋಟಾ ಮೂಲದ ನರೇಂದ್ರ ಮಾಲವ್ ಕೃಷಿ ವಿಜ್ಞಾನ ಕೇಂದ್ರದಿಂದ ಕೋಟಾದಲ್ಲಿ ಜೇನುಸಾಕಣೆ ತರಬೇತಿಯನ್ನು ಪಡೆದು 2004ರಲ್ಲಿ ಜೇನುಸಾಕಣೆಯನ್ನು ಪ್ರಾರಂಭಿಸಿದರು. ಅವರು ಜೇನುತುಪ್ಪದ ಜೊತೆಗೆ ಜೇನುನೊಣಗಳನ್ನು ಮಾರಾಟ ಮಾಡುತ್ತಾರೆ. ಜೇನು ಮಾರಾಟಕ್ಕಿಂತ ಜೇನುನೊಣಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ಅವರು ಹೇಳುತ್ತಾರೆ.

ಮಾಲವ್ ತನ್ನ ಜೇನುಸಾಕಣೆ ವ್ಯವಹಾರವನ್ನು ಪ್ರಾರಂಭಿಸಲು ಕೇವಲ 10,000 ರೂ. ತೊಡಿಗಿಸಿದ್ದರಂತೆ. ಈಗ ಮಾಲವ್ ಮತ್ತು ಅವರ ಸಹೋದರ ಮಹೇಂದ್ರ ಮಾಳವ್ ಇಬ್ಬರೂ ಜೇನು ಸಾಕಣೆದಾರರಾಗಿದ್ದು, ವರ್ಷಕ್ಕೆ ದೊಡ್ಡ ಮೊತ್ತವನ್ನು ಗಳಿಸುತ್ತಿದ್ದಾರೆ. ಕೋಟಾದಲ್ಲಿ ಜೇನುಸಾಕಣೆಯ ಸೀಸನ್ 8 ತಿಂಗಳವರೆಗೆ ಇರುತ್ತದೆ. ಬಳಿಕ ಅದೇ ಜಾಗದಲ್ಲಿ ಸಾಸಿವೆ ಮತ್ತು ಕೊತ್ತಂಬರಿ ಬೆಳೆಗಳು ಬೆಳೆಯುತ್ತಾರೆ.

ವಾರ್ಷಿಕ ಆದಾಯ 25 ಲಕ್ಷ ರೂ.

ಮಾಲವ್ ಅವರಿಗೆ ಜೇನುಸಾಕಣೆಯಿಂದ ವಾರ್ಷಿಕ ಆದಾಯ 25 ಲಕ್ಷ ರೂ. ಇದರ ಜತೆಗೆ ಏಳೆಂಟು ಮಂದಿ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಜೇನು ಪೆಟ್ಟಿಗೆಗಳನ್ನು ಹೊಲಗಳಲ್ಲಿ ಇರಿಸುವ ಮೂಲಕ ಜೇನುನೊಣಗಳನ್ನು ಕೂರಿಸಲಾಗುತ್ತದೆ ಎಂದು ಮಾಲವ್ ತಮ್ಮ ಕೆಲಸದ ಬಗ್ಗೆ ವಿವರಿಸಿದ್ದು. ಪ್ರಸ್ತುತ, ಮಾಲವ್ 1300 ಜೇನುನೊಣಗಳ ಪೆಟ್ಟಿಗೆ ಹೊಂದಿದ್ದು ಒಂದು ಪೆಟ್ಟಿಗೆ ವರ್ಷಕ್ಕೆ 7 ರಿಂದ 8 ಬಾರಿ ಹಾಗೂ ಅದರಲ್ಲಿ ಪ್ರತಿ ವರ್ಷ 25 ರಿಂದ 30 ಕೆಜಿ ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ. ಅಲ್ಲದೆ ಅವರು ಶುದ್ಧ ಜೇನುತುಪ್ಪದ ಜೊತೆಗೆ ಫೆನ್ನೆಲ್, ಕೊತ್ತಂಬರಿ, ಸಾಸಿವೆಯ ಜೇನುತುಪ್ಪವನ್ನು ಒಳಗೊಂಡಂತೆ ಹಲವಾರು ವಿಧದ ಜೇನುತುಪ್ಪವನ್ನು ತಯಾರಿಸುತ್ತಾರೆ.

ಇದನ್ನೂ ಓದಿ: ಕೃಷಿ ಜೊತೆಗೆ ಉಪಕಸಬುಗಳಿಂದ ಭರ್ಜರಿ ಲಾಭ: ಜೇನು ಕೃಷಿ ಮಾಡುವ ಮೂಲಕ ಮಾದರಿಯಾದ ಚಿತ್ರದುರ್ಗ ರೈತ

ಜೇನುಸಾಕಣೆಗೆ ಅಗತ್ಯ ನಿರ್ವಹಣೆ

ಜೇನು ಸಾಕಾಣಿಕೆಗೆ ಹೆಚ್ಚಿನ ನಿರ್ವಹಣೆಯ ಅಗತ್ಯವಿದೆ ಎಂದು ಮಾಲವ್ ಹೇಳುತ್ತಾರೆ. ಹೆಚ್ಚು ನಿರ್ವಹಣೆಯೊಂದಿಗೆ ಮಾತ್ರ ಒಳ್ಳೆಯ ಆರ್ಥಿಕ ಫಲಿತಾಂಶ ಸಾಧಿಸಲು ಸಾಧ್ಯವಾಗುತ್ತದೆ. ಜೇನು ಸಾಕಾಣಿಕೆ ಉದ್ಯಮದ ಕುರಿತು ಮಾರ್ಗದರ್ಶನ ನೀಡಿದ ನರೇಂದ್ರ ಮಾಳವ್ ಅವರು ಜೇನುಸಾಕಣೆ ಉದ್ಯಮವನ್ನು ರಚಿಸಲು ನಿರ್ಧರಿಸಿದರೆ, ಅವರು 25 ರಿಂದ 50 ಪೆಟ್ಟಿಗೆಗಳನ್ನು ನೀಡುವ ಮೂಲಕ ಮೊದಲು 25 ರಿಂದ 30 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ