AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Peace Day 2025: ಯುದ್ಧ ಸಂಘರ್ಷ ನಿಲ್ಲಲಿ, ಶಾಂತಿ, ಮಾನವೀಯತೆ ನೆಲೆಸಲಿ; ವಿಶ್ವ ಶಾಂತಿ ದಿನದ ಮಹತ್ವದ ಬಗ್ಗೆ ತಿಳಿಯಿರಿ

ಇಂದಿಗೂ ಸಹ, ಪ್ರಪಂಚದ ಬಹುಪಾಲು ಭಾಗದಲ್ಲಿ ಆಂತರಿಕ, ಬಾಹ್ಯ ಸಂಘರ್ಷಗಳು, ಹಿಂಸಾಚಾರಗಳು ನಡೆಯುತ್ತಿವೆ. ಹೀಗಿರುವಾಗ ಭೂಮಿಯ ಮೇಲೆ ಮಾನವೀಯತೆ ಮತ್ತು ಶಾಂತಿ ನೆಲೆಸಬೇಕು ಎನ್ನುವ ಉದ್ದೇಶದಿಂದ ಎಲ್ಲಾ ದೇಶಗಳಲ್ಲೂ ಶಾಂತಿಯನ್ನು ಕಾಪಾಡಬೇಕೆಂದು ಪ್ರತಿವರ್ಷ ಸೆಪ್ಟೆಂಬರ್‌ 21 ರಂದು ವಿಶ್ವ ಶಾಂತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

World Peace Day 2025: ಯುದ್ಧ ಸಂಘರ್ಷ ನಿಲ್ಲಲಿ, ಶಾಂತಿ, ಮಾನವೀಯತೆ ನೆಲೆಸಲಿ; ವಿಶ್ವ ಶಾಂತಿ ದಿನದ ಮಹತ್ವದ ಬಗ್ಗೆ ತಿಳಿಯಿರಿ
ವಿಶ್ವ ಶಾಂತಿ ದಿನImage Credit source: Google
ಮಾಲಾಶ್ರೀ ಅಂಚನ್​
|

Updated on:Sep 21, 2025 | 10:16 AM

Share

ಶಾಂತಿಯು (Peace)ಸಾಮರಸ್ಯ ಸಮಾಜದ ಕೀಲಿಯಾಗಿದೆ. ಶಾಂತಿ ನೆಲೆಗೊಂಡರೆ ಮಾತ್ರ ಪ್ರತಿಯೊಂದು ದೇಶವೂ ಸಹೋದರತ್ವದಿಂದ ಇರಲು ಹಾಗೂ ಮಾನವರಾದ ನಾವು ಸುಸ್ಥಿರ ಜೀವನವನ್ನು ನಡೆಸಲು ಸಾಧ್ಯವೇ ಹೊರತು ಯುದ್ಧ ಮತ್ತು ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇತಿಹಾಸ ತೆರೆದು ನೋಡಿದರೆ ವಿಶ್ವವು ಅನೇಕ ಯುದ್ಧಗಳು ಮತ್ತು ಹಿಂಸಾಚಾರ ಚಟುವಟಿಕೆಗಳಿಂದ ನಳುಗಿ ಹೋಗಿವೆ. ಅದರಲ್ಲೂ ವಿಶ್ವ ಯುದ್ಧದ ಸಂದರ್ಭದಲ್ಲಿ ವಿಶ್ವದಲ್ಲಿ ಶಾಂತಿ ಎಂಬುದೇ ಇರಲಿಲ್ಲ. ಅಷ್ಟೇ ಯಾಕೆ ಇಂದಿಗೂ ಸಹ ಪ್ರಪಂಚದ ಒಂದಷ್ಟು ಭಾಗಗಳಲ್ಲಿ ಆಂತರಿಕ, ಬಾಹ್ಯ ಸಂಘರ್ಷಗಳು, ಹಿಂಸಾಚಾರಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಶಾಂತಿ ಹಾಗೂ ಮಾನವೀಯತೆಯ ಮಹತ್ವವನ್ನು ಸಾರಲು ಪ್ರತಿವರ್ಷ ಸೆಪ್ಟೆಂಬರ್‌ 21 ರಂದು ವಿಶ್ವ ಶಾಂತಿ ದಿನವನ್ನು (World Peace Day) ಆಚರಿಸಲಾಗುತ್ತದೆ.

ವಿಶ್ವ ಶಾಂತಿ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರಪಂಚದಾದ್ಯಂತ ಶಾಂತಿಯನ್ನು ಕಾಪಾಡಲು, ಅಂತಾರಾಷ್ಟ್ರೀಯ ಯುದ್ಧಗಳನ್ನು ಕೊನೆಗೊಳಿಸಲು ಮತ್ತು ರಾಷ್ಟ್ರ ರಾಷ್ಟ್ರಗಳ ನಡುವೆ ಸಹೋದರತ್ವವನ್ನು ಬೆಳೆಸುವ ಸಲುವಾಗಿ 1981 ರಲ್ಲಿ ವಿಶ್ವ ಶಾಂತಿ ದಿನವನ್ನು ಆಚರಿಸಲು ನಿರ್ಧರಿಸಿತು. 1982 ರಲ್ಲಿ ಈ ದಿನವನ್ನು ಸೆಪ್ಟೆಂಬರ್‌ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಯಿತು. ಹೀಗೆ 1982 ರಿಂದ 2001 ರ ವರೆಗೆ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂಬರ್‌ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಗುತ್ತಿತ್ತು. ನಂತರ ವಿಶ್ವ ಸಂಸ್ಥೆಯು 2002 ರಿಂದ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂಬರ್‌ 21 ನೇ ತಾರೀಕಿನಂದು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಸೆಪ್ಟೆಂಬರ್‌ 21 ರಂದು ಆಚರಿಸಲಾಗುತ್ತಿದೆ.

ವಿಶ್ವ ಶಾಂತಿ ದಿನದಂದು ನ್ಯೂಯಾರ್ಕ್‌ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ  ವಿಶ್ವಸಂಸ್ಥೆಯ ಶಾಂತಿ ಗಂಟೆಯನ್ನು ಬಾರಿಸಲಾಗುತ್ತದೆ. ಜೊತೆಗೆ ಈ ವಿಶೇಷ ದಿನದಂದು ಎಲ್ಲಾ ರಾಷ್ಟ್ರಗಳಲ್ಲೂ ಶಾಂತಿಯ ಸಂಕೇತವಾಗಿ ಬಿಳಿ ಪಾರಿವಾಳವನ್ನು ಹಾರಿಸುವ ಸಂಪ್ರದಾಯವಿದೆ.

ಇದನ್ನೂ ಓದಿ
Image
ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು, ಅವುಗಳ ರಕ್ಷಣೆ ಅತ್ಯಗತ್ಯ
Image
ಪರಿಸರ ಸಮತೋಲನದಿಂದ ಕೃಷಿಯವರೆಗೆ ಬಿದಿರಿನ ಉಪಯೋಗ ಹಲವು
Image
ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ
Image
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಉದ್ದೇಶವನ್ನು ತಿಳಿಯಿರಿ

ವಿಶ್ವ ಶಾಂತಿ ದಿನದ ಮಹತ್ವವೇನು?

  • ವ್ಯಕ್ತಿಗಳು ಸಮುದಾಯಗಳು ಮತ್ತು ರಾಷ್ಟ್ರ ರಾಷ್ಟ್ರಗಳ ನಡುವೆ ಶಾಂತಿ, ತಿಳುವಳಿಕೆ, ಸಹಯೋಗವನ್ನು ಬೆಳೆಸುವುದು.
  • ಸಂಘರ್ಷಗಳನ್ನು ಪರಿಹರಿಸುವುದು, ಹಿಂಸಾಚಾರವನ್ನು ಕಡಿಮೆ ಮಾಡುವುದು.
  • ದೇಶ ದೇಶಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು.

ಈ ದಿನದಂದು ವಿಶ್ವಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮತ್ತು ಶಾಂತಿಯ ಅಗತ್ಯವನ್ನು ಎತ್ತಿ ಹಿಡಿಯಲು ವಿವಿಧ ಕಾರ್ಯಕ್ರಮಗಳನ್ನು, ಸಭೆ ಸಮ್ಮೇಳನಗಳನ್ನು ಆಯೋಜಿಸುತ್ತವೆ.

ಇದನ್ನೂ ಓದಿ: ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು; ಅವುಗಳ ರಕ್ಷಣೆ ಅತ್ಯಗತ್ಯ

ಶಾಂತಿಯುತ ದೇಶಗಳು ಯಾವುವು ಗೊತ್ತಾ?

ಜಾಗತಿಕ ಶಾಂತಿ ಸೂಚ್ಯಂಕದ ಪ್ರಕಾರ ಟಾಪ್ 10 ಶಾಂತಿಯುತ ದೇಶಗಳು ಯಾವುವು ಎಂದರೆ,

  1. ಐಸ್ಲ್ಯಾಂಡ್
  2. ಐರ್ಲೆಂಡ್
  3. ಆಸ್ಟ್ರಿಯಾ
  4. ನ್ಯೂಜಿಲೆಂಡ್
  5. ಸಿಂಗಾಪುರ
  6. ಸ್ವಿಟ್ಜರ್ಲ್ಯಾಂಡ್
  7. ಪೋರ್ಚುಗಲ್
  8. ಡೆನ್ಮಾರ್ಕ್
  9. ಸ್ಲೊವೇನಿಯಾ
  10. ಮಲೇಷ್ಯಾ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 am, Sun, 21 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ