Workouts: ವ್ಯಾಯಾಮದ ಬಳಿಕ ನೀವು ಈ ತಪ್ಪುಗಳನ್ನು ಮಾಡಲೇಬೇಡಿ, ದೇಹಕ್ಕೆ ಹಾನಿ ಮಾಡುವ ಅಭ್ಯಾಸಗಳ ಬದಲಿಸಿಕೊಳ್ಳಿ

ಉತ್ತಮ ಆರೋಗ್ಯಕ್ಕಾಗಿ ನೀವು ನಿತ್ಯ ವ್ಯಾಯಾಮ ಮಾಡುತ್ತಿರಬಹುದು, ಆದರೆ ವ್ಯಾಯಾಮದ ಬಳಿಕ ನೀವು ಮಾಡುವ ಕೆಲವು ಅಭ್ಯಾಸಗಳಿಂದ ನಿಮ್ಮ ದೇಹಕ್ಕೆ ಹಾನಿಯಾಗಬಹುದು.

Workouts: ವ್ಯಾಯಾಮದ ಬಳಿಕ ನೀವು ಈ ತಪ್ಪುಗಳನ್ನು ಮಾಡಲೇಬೇಡಿ, ದೇಹಕ್ಕೆ ಹಾನಿ ಮಾಡುವ ಅಭ್ಯಾಸಗಳ ಬದಲಿಸಿಕೊಳ್ಳಿ
ವ್ಯಾಯಾಮ
Follow us
| Updated By: ನಯನಾ ರಾಜೀವ್

Updated on: Jan 12, 2023 | 7:00 AM

ಉತ್ತಮ ಆರೋಗ್ಯಕ್ಕಾಗಿ ನೀವು ನಿತ್ಯ ವ್ಯಾಯಾಮ ಮಾಡುತ್ತಿರಬಹುದು, ಆದರೆ ವ್ಯಾಯಾಮದ ಬಳಿಕ ನೀವು ಮಾಡುವ ಕೆಲವು ಅಭ್ಯಾಸಗಳಿಂದ ನಿಮ್ಮ ದೇಹಕ್ಕೆ ಹಾನಿಯಾಗಬಹುದು. ನೀವು ಬೆಳಗ್ಗೆ ಜಾಗಿಂಗ್ ಹೋದರೆ ಮನೆಗೆ ಹೋಗಿ ಏನು ಮಾಡುತ್ತೀರಿ, ಸ್ನಾನ ಮಾಡಿ ನಿಮ್ಮ ದಿನನಿತ್ಯದ ಕೆಲಸಕ್ಕೆ ಕೂರುತ್ತೀರಿ ಅಲ್ಲವೇ? ನಾವೆಲ್ಲರೂ ನಮ್ಮ ಜೀವನದಲ್ಲಿ ಕಾರ್ಯನಿರತರಾಗಿದ್ದರೂ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ದಿನಗಳನ್ನು ಯೋಜಿಸುತ್ತಿದ್ದರೂ, ಓಡಿದ ಬಳಿಕ ಕೆಲವು ಚಟುವಟಿಕೆಗಳನ್ನು ಮಾಡುವುದು ನಿಮ್ಮ ವ್ಯಾಯಾಮದ ಪ್ರಯತ್ನಗಳಿಗೆ ಅಡ್ಡಿಯಾಗಬಹುದು.

ಯಾವುದೇ ರೀತಿಯ ದೈಹಿಕ ಚಟುವಟಿಕೆಯನ್ನು ಮಾಡುವ ಮೊದಲು ನೀವು ಅನುಸರಿಸುವ ನಿಯಮವೆಂದರೆ ವ್ಯಾಯಾಮಕ್ಕೆ ಮೊದಲು ಮತ್ತು ನಂತರ ದೇಹವನ್ನು ಹೈಡ್ರೀಕರಿಸುವುದು. ಈ ಪ್ರಮುಖ ಹಂತವನ್ನು ತಪ್ಪಿಸಿಕೊಂಡರೆ ನಿಮ್ಮ ವ್ಯಾಯಾಮದ ಅವಧಿಯನ್ನು ಕಡಿಮೆ ಪರಿಣಾಮಕಾರಿಯಾಗಿ ಮಾಡಬಹುದು.

ವ್ಯಾಯಾಮದ ನಂತರ, ನಮ್ಮ ಶಕ್ತಿಯು ಕಡಿಮೆಯಾಗುತ್ತದೆ ಮತ್ತು ನಾವು ಬೆವರುವಿಕೆಯಿಂದ ದೇಹದಲ್ಲಿ ನೀರಿನ ಅಂಶವನ್ನು ಕಳೆದುಕೊಳ್ಳುತ್ತೇವೆ. ಪೌಷ್ಟಿಕ ಆಹಾರ ಮತ್ತು ಕುಡಿಯುವ ನೀರು ನಿಮ್ಮ ಓಟದ ಸಮಯದಲ್ಲಿ ಸ್ನಾಯುಗಳನ್ನು ಮರುನಿರ್ಮಾಣ ಮಾಡಲು ಮತ್ತು ಇಂಧನ ತುಂಬಲು ಸಹಾಯ ಮಾಡುತ್ತದೆ.

ಹೆಚ್ಚು ಆಹಾರ ಸೇವಿಸಬೇಡಿ

ಹೆಚ್ಚು ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಏಕೆಂದರೆ ಅದು ನಿಮ್ಮ ವ್ಯಾಯಾಮದ ಮೇಲೂ ಪರಿಣಾಮ ಬೀರಬಹುದು. ವ್ಯಾಯಾಮದ ನಂತರ ವಿಶ್ರಾಂತಿ ಪಡೆಯುವುದು ನಿಮ್ಮ ಹೃದಯ ಬಡಿತ ಹಾಗೂ ಉಸಿರಾಟವನ್ನು ಸಮತೋಲನಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ.

ಅದೇ ಬಟ್ಟೆಯಲ್ಲಿ ಇರಬೇಡಿ ವ್ಯಾಯಾಮ ಅಥವಾ ಜಾಗಿಂಗ್ ಬಳಿಕ ಸ್ವಲ್ಪ ಆಲಸ್ಯ ಅನುಭವಿಸುವುದು ಸಹಜ, ಆದರೆ ಅದೇ ಬೆವರುವ ಬಟ್ಟೆಯಲ್ಲಿ ಉಳಿಯುವುದು ಒಳ್ಳೆಯದಲ್ಲ. ನಿಮ್ಮ ವ್ಯಾಯಾಮದ ನಂತರ ನಿಮ್ಮ ಬಟ್ಟೆಗಳನ್ನು ಆವರಿಸುವ ಬೆವರು ಬ್ಯಾಕ್ಟೀರಿಯಾಗಳು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದೇ ಒದ್ದೆ ಬಟ್ಟೆಯನ್ನು ದೀರ್ಘಕಾಲ ಧರಿಸುವುದರಿಂದ ಶೀತವೂ ಉಂಟಾಗುತ್ತದೆ. ಆದ್ದರಿಂದ, ನೀವು ಮನೆಗೆ ಬಂದ ತಕ್ಷಣ ನಿಮ್ಮ ವ್ಯಾಯಾಮದ ಬಟ್ಟೆಗಳನ್ನು ಲಾಂಡ್ರಿ ಬ್ಯಾಗ್‌ನಲ್ಲಿ ಎಸೆಯಿರಿ.

ಒಂದೊಮ್ಮೆ ನೀವು ಹೆಚ್ಚು ಬೆವರಿಲ್ಲದಿದ್ದರೂ, ಒದ್ದೆಯಾದ ಬಟ್ಟೆಗಳು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು, ಹಾಗಾಗಿ ನೀವು ತಕ್ಷಣ ಸ್ನಾನ ಮಾಡದಿದ್ದರೂ ಬಟ್ಟೆಗಳನ್ನು ಬದಲಾಯಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ