AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2020ರಲ್ಲಿ ಸ್ಥಾಪಿತವಾದ ಪಿಎಂ-ಕೇರ್ಸ್​​​ ಫಂಡ್​​ನಲ್ಲಿ ಒಂದು ವರ್ಷದಲ್ಲಿ ಸಂಗ್ರಹವಾದ ಹಣವೆಷ್ಟು? ಖರ್ಚಾಗಿದ್ದೆಷ್ಟು?-ಇಲ್ಲಿದೆ ವಿವರ

ಮೊದಲ ವರ್ಷದಲ್ಲಿ ಸಂಗ್ರಹವಾದ ಹಣದಲ್ಲಿ 3,976 ಕೋಟಿ ರೂ. ಖರ್ಚಾಗಿದ್ದು, ಇನ್ನೂ  7,014 ಕೋಟಿ ರೂಪಾಯಿ ಬಳಕೆಯಾಗದೆ ಹಾಗೇ ಉಳಿದಿದೆ ಎಂದು ವೆಬ್​ಸೈಟ್​​ನಲ್ಲಿ ಉಲ್ಲೇಖಿಸಲಾಗಿದೆ.

2020ರಲ್ಲಿ ಸ್ಥಾಪಿತವಾದ ಪಿಎಂ-ಕೇರ್ಸ್​​​ ಫಂಡ್​​ನಲ್ಲಿ ಒಂದು ವರ್ಷದಲ್ಲಿ ಸಂಗ್ರಹವಾದ ಹಣವೆಷ್ಟು? ಖರ್ಚಾಗಿದ್ದೆಷ್ಟು?-ಇಲ್ಲಿದೆ ವಿವರ
ಪ್ರಧಾನಿ ಮೋದಿ
TV9 Web
| Edited By: |

Updated on:Feb 08, 2022 | 10:49 AM

Share

ಕೊವಿಡ್​ 19 ಸಾಂಕ್ರಾಮಿಕ ಪ್ರಾರಂಭವಾದ ಬಳಿಕ 2020ರ ಮಾರ್ಚ್​ 27ರಂದು ಪಿಎಂ ಕೇರ್ಸ್​ ಫಂಡ್​ (PM-CARES Fund-Prime Minister’s Citizen Assistance and Relief in Emergency Situations Fund) ಶುರುವಾಗಿದೆ. ಸದ್ಯ ಇರುವ ಕೊವಿಡ್​ 19 ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಇಂಥ ಸಾಂಕ್ರಾಮಿಕಗಳ ವಿರುದ್ಧ ಹೋರಾಡುವುದು, ನಿಯಂತ್ರಣ ಮತ್ತು ಪರಿಹಾರಕ್ಕೆ ಅನುಕೂಲವಾಗುವ ಸಲುವಾಗಿ ನಿಧಿ ಸಂಗ್ರಹ ಮಾಡಲು ಈ ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಸಂದರ್ಭದಲ್ಲಿ ಪರಿಹಾರ ನಿಧಿ ಅಥವಾ ಪಿಎಂ ಕೇರ್ಸ್​ ಫಂಡ್​​ನ್ನು ಸ್ಥಾಪಿಸಿದ್ದು ಪ್ರಧಾನಮಂತ್ರಿಗಳು ಇದರ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಹೀಗೆ 2020ರಲ್ಲಿ ಸ್ಥಾಪಿತವಾದ ಪಿಎಂ ಕೇರ್ಸ್​ ಫಂಡ್​​ನಲ್ಲಿ 2021ರ ಮಾರ್ಚ್​​ವರೆಗೆ ಅಂದರೆ ಒಂದು ವರ್ಷದಲ್ಲಿ 10,999 ಕೋಟಿ ರೂಪಾಯಿ ಸಂಗ್ರಹವಾಗಿದೆ ಮತ್ತು ಅದರಲ್ಲಿ 3,976 ಕೋಟಿ ರೂಪಾಯಿ ಅಥವಾ ಒಟ್ಟು ಹಣದ ಶೇ.36.17ರಷ್ಟು ಖರ್ಚಾಗಿದೆ ಎಂದು ಫಂಡ್​​ನ ವೆಬ್​ಸೈಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಪಿಎಂ ಕೇರ್ಸ್​ ಫಂಡ್​​​ನಲ್ಲಿರುವ ಹಣ ಯಾವುದೇ ನೈಸರ್ಗಿಕ ವಿಪತ್ತಿನ ಪರಿಹಾರಕ್ಕೆ ನೀಡಲಾಗುವುದಿಲ್ಲ. ಅದಕ್ಕಾಗಿಯೇ ಬೇರೆ ನಿಧಿಗಳು ಈಗಾಗಲೇ ಇವೆ. ಪಿಎಂ ಕೇರ್ಸ್​ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ಇರುತ್ತದೆ. ಮೊದಲ ವರ್ಷದಲ್ಲಿ ಸಂಗ್ರಹವಾದ ಹಣದಲ್ಲಿ 3,976 ಕೋಟಿ ರೂ. ಖರ್ಚಾಗಿದ್ದು, ಇನ್ನೂ  7,014 ಕೋಟಿ ರೂಪಾಯಿ ಬಳಕೆಯಾಗದೆ ಹಾಗೇ ಉಳಿದಿದೆ ಎಂದು ವೆಬ್​ಸೈಟ್​​ನಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಖರ್ಚಾದ ಹಣದಲ್ಲಿ ಗರಿಷ್ಠ ಖರ್ಚಾಗಿದ್ದು, ಕೊವಿಡ್​ 19 ಲಸಿಕೆ ಡೋಸ್​​ಗಳ ಖರೀದಿಗೆ ಎಂದು ಹೇಳಲಾಗಿದೆ. ಅಂದರೆ 1,392 ಕೋಟಿ ರೂಪಾಯಿ (ಶೇ.35) ವೆಚ್ಚದಲ್ಲಿ 66 ಮಿಲಿಯನ್​ ಡೋಸ್​ಗಳನ್ನು  ಖರೀದಿ ಮಾಡಲಾಗಿದೆ. ಅದಾದ ಬಳಿಕ ಒಟ್ಟು 1,311 ಕೋಟಿ ರೂಪಾಯಿ (ಶೇ.33) ಯನ್ನು 50 ಸಾವಿರ ಮೇಡ್​​ ಇನ್​ ಇಂಡಿಯಾ (ಸ್ವದೇಶಿ) ವೆಂಟಿಲೇಟರ್​ ಖರೀದಿಗೆ ಮತ್ತು 1000 ಕೋಟಿ ರೂಪಾಯಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ವಲಸಿಗರ ಕಲ್ಯಾಣಕ್ಕಾಗಿ ಕೊಡಲಾಗಿದೆ ಎಂದು ವಿವರಿಸಲಾಗಿದೆ.

ಇನ್ನು ಪಿಎಂ ಕೇರ್ಸ್​ ಫಂಡ್​​ನ  201 ಕೋಟಿ ರೂಪಾಯಿಯನ್ನು ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 162 ಪ್ರೆಶರ್​ ಸ್ವಿಂಗ್​ ಅಡ್ಸಾರ್ಪ್​ಶನ್​ (PSA) ವೈದ್ಯಕೀಯ ಆಮ್ಲಜನಕ ಜನರೇಶನ್​ ಘಟಕಗಳನ್ನು ಅಳವಡಿಸಲು ವಿನಿಯೋಗಿಸಲಾಗಿದೆ. 9 ರಾಜ್ಯಗಳಲ್ಲಿ 16 ಆರ್​ಟಿಪಿಸಿಆರ್​ ತಪಾಸಣಾ ಲ್ಯಾಬ್​ ಪ್ರಾರಂಭಿಸಲು ಹಾಗೂ ಮುಜಾಫರ್​​ಪುರ ಮತ್ತು ಪಾಟ್ನಾದ ಕೊವಿಡ್ 19 ಆಸ್ಪತ್ರೆಗಳಲ್ಲಿ 500 ಹಾಸಿಗೆಗಳನ್ನು ನಿರ್ಮಿಸಲು 50 ಕೋಟಿ ರೂಪಾಯಿ ನೀಡಲಾಗಿದೆ. ಎರಡು ಸ್ವಾಯಸ್ಥ ಸಂಸ್ಥೆ ಪ್ರಯೋಗಾಲಯಗಳನ್ನು, ಕೊವಿಡ್​ 19 ವ್ಯಾಕ್ಸಿನ್ ಬ್ಯಾಚ್​​ಗಳ ತಪಾಸಣೆಗಾಗಿ ಸೆಂಟ್ರಲ್​ ಡ್ರಗ್​ ಲ್ಯಾಬೋರೇಟರಿಗಳನ್ನಾಗಿ ನವೀಕರಿಸಲು  ಪಿಎಂ ಕೇರ್ಸ್​ ಫಂಡ್​​ನಿಂದ 20 ಕೋಟಿ ರೂ.ಕೊಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಅಂದಹಾಗೆ, ಪಿಎಂ ಕೇರ್ಸ್​ ಫಂಡ್​ ಪ್ರಾರಂಭ ಮಾಡುವಾಗ ಆರಂಭಿಕವಾಗಿ ಅದರಲ್ಲಿ 3077 ಕೋಟಿ ರೂಪಾಯಿ ಇತ್ತು. 2021ರ ಮಾರ್ಚ್​ ಹೊತ್ತಿಗೆ 7679 ಕೋಟಿ ರೂ.ದೇಣಿಗೆ ಪಡೆದಿದೆ. ಅಸಲು ಮೊತ್ತದ ಮೇಲೆ  235 ಕೋಟಿ ರೂ.ಬಡ್ಡಿ ಹೊಂದಿದೆ. ಈ ಹಿಂದೆ ಸೆಪ್ಟೆಂಬರ್​​ನಲ್ಲಿ ಪಿಎಂ ಕೇರ್ಸ್​ ಬಗ್ಗೆ ಮಾಹಿತಿ ಕೇಳಿದಾಗ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಕಾರ್ಯಾಲಯಗಳು ಅದನ್ನು ನಾವು ಕೊಡಲು ಸಾಧ್ಯವಿಲ್ಲ ಎಂದಿದ್ದವು. ಪಿಎಂ ಕೇರ್ಸ್​ ಫಂಡ್​​  ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಯಾಕೆಂದರೆ ಇದು ಸಾರ್ವಜನಿಕ ಪ್ರಾಧಿಕಾರವಲ್ಲ. ಹಾಗೇ, ಇದನ್ನು ಕೇಂದ್ರ ಸರ್ಕಾರದ ಅಂಗಸಂಸ್ಥೆಯೆಂದು ಪರಿಗಣಿಸುವಂತಿಲ್ಲ ಎಂದಿದ್ದವು.

ಇದನ್ನೂ ಓದಿ: ನದಿ ಜೋಡಣೆಗೆ ಬಸವರಾಜ ಬೊಮ್ಮಾಯಿ ವಿರೋಧ! ದೆಹಲಿಯಲ್ಲಿ ಸಿಎಂ ಹೇಳಿದ್ದೇನು?

Published On - 9:06 am, Tue, 8 February 22

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ