AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ; ಮತ್ತೆ ನೋಂದಣಿ ಬೇಕಾ? ಯಾವ ಲಸಿಕೆ? ಇಲ್ಲಿದೆ ಮಾಹಿತಿ

ಈ ಹೊಸಹಂತದ ಲಸಿಕೆ ಅಭಿಯಾನದ ಬಗ್ಗೆ ಕೆಲವೊಂದು ಪ್ರಶ್ನೆಗಳು ಏಳುತ್ತವೆ. ಯಾವ ಲಸಿಕೆ ನೀಡಲಾಗುತ್ತದೆ? ಇದೀಗ ಮೂರನೇ ಡೋಸ್​ ಲಸಿಕೆ ಪಡೆಯುವವರು ಮತ್ತೊಮ್ಮೆ ನೋಂದಣಿ ಮಾಡಿಸಿಕೊಳ್ಳಬೇಕಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ.

ಇಂದಿನಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ; ಮತ್ತೆ ನೋಂದಣಿ ಬೇಕಾ? ಯಾವ ಲಸಿಕೆ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jan 10, 2022 | 8:21 AM

Share

ದೇಶದಲ್ಲಿ ಮತ್ತೊಮ್ಮೆ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಸೋಂಕಿನ ಕೇಸ್​ಗಳು ಪತ್ತೆಯಾಗುತ್ತಿವೆ. ಈ ಮಧ್ಯೆ ಭಾರತದಲ್ಲಿ ಇಂದಿನಿಂದ ಹೊಸ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ. ಆರೋಗ್ಯ ಕಾರ್ಯಕರ್ತರು ಸೇರಿ, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಮತ್ತು 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮೂರನೇ ಡೋಸ್ (ಬೂಸ್ಟರ್ ಡೋಸ್​) ಹಾಕುವ ಕಾರ್ಯ ಇಂದಿನಿಂದ ಶುರುವಾಗಲಿದೆ. ರಾಷ್ಟ್ರರಾಜಧಾನಿ ದೆಹಲಿ ಸೇರಿ ಎಲ್ಲ ಕಡೆಗಳಲ್ಲೂ ಈ ಹಂತದ ಲಸಿಕೆ ಅಭಿಯಾನಕ್ಕೆ, ಲಸಿಕಾ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲದರ ಮಧ್ಯೆ ಈ ಹೊಸಹಂತದ ಲಸಿಕೆ ಅಭಿಯಾನದ ಬಗ್ಗೆ ಕೆಲವೊಂದು ಪ್ರಶ್ನೆಗಳು ಏಳುತ್ತವೆ. ಯಾವ ಲಸಿಕೆ ನೀಡಲಾಗುತ್ತದೆ? ಇದೀಗ ಮೂರನೇ ಡೋಸ್​ ಲಸಿಕೆ ಪಡೆಯುವವರು ಮತ್ತೊಮ್ಮೆ ನೋಂದಣಿ ಮಾಡಿಸಿಕೊಳ್ಳಬೇಕಾ? ಎರಡನೇ ಡೋಸ್​ ತೆಗೆದುಕೊಂಡು ಎಷ್ಟು ಕಾಲದ ನಂತರ ಈ ಮೂರನೇ ಡೋಸ್​ ತೆಗೆದುಕೊಳ್ಳಬಹುದು? ಎಂಬಿತ್ಯಾದಿ ಪ್ರಶ್ನೆಗಳಿವೆ. 

ಮೂರನೇ ಡೋಸ್​ಗೇ ಯಾವ ಲಸಿಕೆ? ಬೂಸ್ಟರ್​ ಡೋಸ್​​ಗೆ ಲಸಿಕೆ ಬದಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅಂದರೆ ಮೂರನೇ ಡೋಸ್​ ಪಡೆಯುವ ವ್ಯಕ್ತಿ ಈ ಹಿಂದೆ ಎರಡು ಡೋಸ್​ಗಳನ್ನು ಯಾವ ಲಸಿಕೆ ಪಡೆದಿದ್ದಾರೋ ಅದೇ ಲಸಿಕೆಯನ್ನೇ ಮೂರನೇ ಡೋಸ್​ ಆಗಿ ನೀಡಲಾಗುತ್ತದೆ. ಅಂದರೆ ಹಿಂದಿನ ಎರಡು ಡೋಸ್​ ಕೊವಿಶೀಲ್ಡ್​ ಪಡೆದಿದ್ದರೆ ಮೂರನೇ ಡೋಸ್​ ಕೂಡ ಕೊವಿಶೀಲ್ಡ್ ಇರುತ್ತದೆ, ಹಿಂದೆ ಎರಡು ಡೋಸ್​ ಕೊವ್ಯಾಕ್ಸಿನ್​ ಪಡೆದಿದ್ದರೆ ಮೂರನೇ ಡೋಸ್ ಕೂಡ ಕೊವ್ಯಾಕ್ಸಿನ್​ ಇರುತ್ತದೆ.

ಮತ್ತೆ ನೋಂದಣಿ ಅಗತ್ಯವಿಲ್ಲ ಈಗಾಗಲೇ ಎರಡು ಡೋಸ್ ಪಡೆದಿರುವ, ಆಯ್ದ ವರ್ಗಗಳ ಜನರಿಗೆ ಮಾತ್ರ ಕೊರೊನಾ ಲಸಿಕೆ ಮೂರನೇ ಡೋಸ್ ನೀಡಲಾಗುತ್ತಿದ್ದು, ಈ ಮೂರನೇ ಡೋಸ್ ಪಡೆಯುವವರು ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಅವರು ಕೊವಿನ್ ಆ್ಯಪ್​ ಮೂಲಕ ಅಪಾಯಿಂಟ್​ಮೆಂಟ್​ ತೆಗೆದುಕೊಳ್ಳಬಹುದು. ಯಾಕೆಂದರೆ ಮೂರನೇ ಡೋಸ್​ ಪಡೆಯುವವರಿಗಾಗಿಯೇ ಕೊವಿನ್​ ಆ್ಯಪ್​​ನಲ್ಲಿ ಹೀಗಿದ್ದೊಂದು ಫೀಚರ್​​ನ್ನು ಅಳವಡಿಸಲಾಗಿದೆ. ಹಾಗಂತ ಈ ಅಪಾಯಿಂಟ್​ಮೆಂಟ್​ ಕಡ್ಡಾಯವಲ್ಲ. ನೀವು ನೇರವಾಗಿಯೂ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಬಹುದು. ಅಲ್ಲಿಯೂ ಕೂಡ ನೀವು ಮರು ನೋಂದಣಿ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಇನ್ನು ಹೀಗೆ ಮೂರನೇ ಡೋಸ್ ಲಸಿಕೆ ಪಡೆಯುವವರು ಎರಡನೇ ಡೋಸ್​ ಪಡೆದು 9 ತಿಂಗಳು ಆಗಿರಬೇಕು.

60ವರ್ಷ ಮೇಲ್ಪಟ್ಟವರಿಗೆ ಸರ್ಟಿಫಿಕೇಟ್​ ಬೇಕಾ? 60 ವರ್ಷ ಮೇಲ್ಪಟ್ಟು, ಇತರ ರೋಗಗಳಿಂದ ಬಳಲುತ್ತಿರುವವರು ಯಾವುದೇ ವೈದ್ಯರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಸರ್ಟಿಫಿಕೇಟ್​​ನ್ನು ಕೊಡಬೇಕಾಗಿಲ್ಲ. ಆದರೆ ಲಸಿಕೆ ಪಡೆಯುವುದಕ್ಕೂ ಮೊದಲು ತಾವು ಚಿಕಿತ್ಸೆ ಪಡೆಯುತ್ತಿರುವ ವೈದ್ಯರೊಂದಿಗೆ ಒಮ್ಮೆ ಸಮಾಲೋಚನೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಈಗಾಗಲೇ ಹೇಳಿಕೆ ನೀಡಿದೆ.

ಆರೋಗ್ಯ ಕಾರ್ಯಕರ್ತರ ಕುಟುಂಬಕ್ಕೆ ಇಲ್ಲ ಲಸಿಕೆ ಈ ಹಂತದಲ್ಲಿ ಸದ್ಯ ಆರೋಗ್ಯ ಕಾರ್ಯಕರ್ತರು, ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರಿಗೆ ಮಾತ್ರ ಮೂರನೇ ಡೋಸ್​ ನೀಡುವುದಾಗಿ ಕೊವಿಡ್ 19 ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಆರೋಗ್ಯ ಕಾರ್ಯಕರ್ತರು ಮತ್ತಿತರ ವರ್ಗದವರ ಕುಟುಂಬದವರಿಗೆ ಮೂರನೇ ಡೋಸ್​ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಯಾವೆಲ್ಲ ದಾಖಲೆಗಳು ಬೇಕು? ಮೂರನೇ ಡೋಸ್​ ಲಸಿಕೆ ಪಡೆದ ಬಳಿಕವೂ ನಿಮಗೆ ಒಂದು ಸರ್ಟಿಫಿಕೇಟ್​ ಸಿಗುತ್ತದೆ. ನೋಂದಣಿಯ ಅಗತ್ಯವೇನೂ ಇರುವುದಿಲ್ಲ. ಹಾಗಿದ್ದಾಗ್ಯೂ ನೀವು ಮೂರನೇ ಡೋಸ್​ ತೆಗೆದುಕೊಳ್ಳಲು ಕೇಂದ್ರಕ್ಕೆ ಹೋಗುವಾಗ ನಿಮ್ಮ ವೋಟರ್ ಐಡಿ, ಆಧಾರ್​ ಕಾರ್ಡ್​, ಪಾನ್​ ಕಾರ್ಡ್​, ಡ್ರೈವಿಂಗ್​ ಲೈಸೆನ್ಸ್​ ಇನ್ನೇನಾದರೂ ತೆಗೆದುಕೊಂಡು ಹೋಗಬೇಕು. ಅದರ ಆಧಾರದ ಮೇಲೆ ಮೂರನೇ ಡೋಸ್ ನೀಡಲಾಗುತ್ತದೆ.

ಇದನ್ನೂ ಓದಿ: ‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​

Published On - 8:11 am, Mon, 10 January 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ