AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ; ಹಿಂದೂ ದೇವರನ್ನು ಅಣಕಿಸಿದ್ದ ಅಜ್ಮೇರ್​​ ಚಿಸ್ತಿ ಮಗ ಆದಿಲ್​​ ಯೂ ಟರ್ನ್

ಭಗವಾನ್ ವಿಷ್ಣುವಿನ ಅವತಾರ ತರ್ಕಬದ್ಧವಲ್ಲದ್ದು. ಭಗವಾನ್ ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ? ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಸಾಬೀತು ಮಾಡಲಿ ಎಂದು ಚಿಸ್ತಿ ಸವಾಲೆಸೆದಿದ್ದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ; ಹಿಂದೂ ದೇವರನ್ನು ಅಣಕಿಸಿದ್ದ ಅಜ್ಮೇರ್​​ ಚಿಸ್ತಿ ಮಗ ಆದಿಲ್​​ ಯೂ ಟರ್ನ್
ಸಯ್ಯದ್ ಆದಿಲ್ ಚಿಸ್ತಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Jul 14, 2022 | 1:00 PM

Share

ಜೈಪುರ್: ಹಿಂದೂ ದೇವರನ್ನು ಮತ್ತು ನಂಬಿಕೆಗಳನ್ನು ಅಣಕಿಸಿದ್ದ ಸರವರ ಚಿಸ್ತಿಯ ಮಗ ಸಯ್ಯದ್ ಆದಿಲ್ ಚಿಸ್ತಿ (Syed Aadil Chishti) ನಾನು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಆ ಮಾತು ಹೇಳಿಲ್ಲ ಎಂದಿದ್ದಾರೆ. ನಾನು ನೂಪುರ್ ಶರ್ಮಾ (Nupur Sharma) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದೆ ಅಷ್ಟೇ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ನನ್ನ ವಿಡಿಯೊವನ್ನು ಎಡಿಟ್ ಮಾಡಿ ಅದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಚಿಸ್ತಿ  ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಅವರು 33 ಕೋಟಿ ಹಿಂದೂ ದೇವತೆಗಳ ಅಸ್ತಿತ್ವ ಬಗ್ಗೆ ಪ್ರಶ್ನಿಸಿದ್ದಾರೆ. ಭಗವಾನ್ ವಿಷ್ಣುವಿನ ಅವತಾರ ತರ್ಕಬದ್ಧವಲ್ಲದ್ದು. ಭಗವಾನ್ ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಯಾವ ರೀತಿ ಸಮರ್ಥಿಸಿಕೊಳ್ಳುತ್ತಾರೆ? ಹನುಮಾನ್ ಅಥವಾ ಗಣೇಶನ ಅಸ್ತಿತ್ವವನ್ನು ನೂಪುರ್ ಶರ್ಮಾ ಸಾಬೀತು ಮಾಡಲಿ ಎಂದು ಚಿಸ್ತಿ ಸವಾಲೆಸೆದಿದ್ದರು. ಅಜ್ಮೇರ್ ಶರೀಫ್ ದರ್ಗಾದ ಖಾದಿಮ್ ಸಯ್ಯದ್ ಸರವರ್ ಚಿಸ್ತಿ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ ಎರಡು ದಿನಗಳ ನಂತರ ಆದಿಲ್ ಚಿಸ್ತಿಯ ಈ ಹೇಳಿಕೆ ಬಂದಿದೆ. ಪ್ರವಾದಿ ಮೊಹಮ್ಮದ್​​ಗೆ ( Prophet Muhamad) ಅವಹೇಳನ ಮಾಡಿದರೆ ಇಡೀ ಭಾರತವೇ ನಡುಗುತ್ತದೆ, ಇದು ಶಿರಚ್ಛೇದ ಕೃತ್ಯಗಳಲ್ಲಿ ನಿಲ್ಲುವುದಿಲ್ಲ ಎಂದು ಅವರು ಹೇಳಿದ್ದರು. ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ಮುಸ್ಲಿಮರು ಶಿರಚ್ಛೇದ ಮಾಡಿದ ಬೆನ್ನಲ್ಲೇ  ಚಿಸ್ತಿಯ ಈ ಹೇಳಿಕೆ ಬಂದಿತ್ತು.

ಪ್ರವಾದಿ ಮೊಹಮ್ಮದ್ ಗೆ ಅವಮಾನ ಮಾಡಿದರೆ ಮುಸ್ಲಿಮರು ಚಳವಳಿ ಆರಂಭಿಸುತ್ತಾರೆ ಇದು ಭಾರತವನ್ನು ನಡುಗಿಸುತ್ತದೆ ಎಂದು ಅಂಜುಮಾನ್ ಕಮಿಟಿಯ ಕಾರ್ಯದರ್ಶಿ ಆಗಿರುವ ಚಿಸ್ತಿ ಹೇಳಿದ್ದರು. ಸರವರ್ ಚಿಸ್ತಿ ಮತ್ತು ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಜ್ಮೇರ್ ಡೆಪ್ಯುಟಿ ಮೇಯರ್ ನೀರಜ್ ಜೈನ್ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ
Image
Unparliamentary Words: ಲೋಕಸಭೆ ಸಚಿವಾಲಯದಿಂದ ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ; ಈ ಪದಗಳನ್ನ ಬಳಕೆ ಮಾಡಿದರೆ ಕಲಾಪದಿಂದ ಹೊರಗೆ
Image
ಸಾಹಿತಿ, ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೆ ಜೀವ ಬೆದರಿಕೆ
Image
ಹಿಂದೂ ಧರ್ಮವನ್ನು ಬಿಜೆಪಿ ಗುತ್ತಿಗೆ ತೆಗೆದುಕೊಂಡಿದೆಯೇ?: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
Image
ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್​: ಬೆದರಿಕೆ ಬಂದರೆ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ

ಪ್ರಚೋದನಾಕಾರಿ ಭಾಷಣ ಮಾಡಿದ ನಂತರ ಚಿಸ್ತಿ ರಾಜಸ್ಥಾನದಲ್ಲಿ ನಡೆದ ಶಾಂತಿ ಸಮಾಧಾನ ಬಯಸುವ  ರ್ಯಾಲಿಯಲ್ಲಿ ಭಾಗವಹಿಸಿದ್ದು ಹಿಂದೂ ಮತ್ತು ಮುಸ್ಲಿಮರು ಶಾಂತಿಯಿಂದ ಸಹಬಾಳ್ವೆ ನಡೆಸಬೇಕು ಎಂದು ಮನವಿ ಮಾಡಿದ್ದರು. ದೇಶದಲ್ಲಿ ಶಾಂತಿ ಮತ್ತು  ಸಾಮರಸ್ಯವನ್ನು ನೋಡಲು ನಾನು ಬಯಸುತ್ತೇನೆ. ಎರಡೂ ಸಮುದಾಯದ ಜನರು ಶಾಂತ, ಸಾಮರಸ್ಯದಿಂದ ಬಾಳಬೇಕು ಎಂದು ಅವರು ಹೇಳಿದ್ದರು.

Published On - 12:46 pm, Thu, 14 July 22

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ