AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಮ್ ಕೋರ್ಟ್​ನಲ್ಲಿರುವ ಪೆಂಡಿಂಗ್ ಪ್ರಕರಣಗಳ ಹೊರೆ ತಗ್ಗಿಸಲು ಪ್ರತಿದಿನ ಹತ್ತತ್ತು ವೈವಾಹಿಕ ಕಲಹ ಮತ್ತು ಜಾಮೀನು ಮನವಿಗಳ ವಿಚಾರಣೆಗೆ ತೀರ್ಮಾನ

ವಿಚಾರಣೆಗೆ ಶೆಡ್ಯೂಲ್ ಅಗಿರುವ ಪೂರಕ ಪಟ್ಟಿಗೆ ಕೊನೆ ಕ್ಷಣಗಳಲ್ಲಿ ಸೇರಿಸಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಸಹ ಕಡಿತಗೊಳಿಸಲಾಗುವುದು ಅಂತ ಮುಖ್ಯ ನ್ಯಾಯಾಧೀಶರು ಹೇಳಿದರು. ಹಾಗೆ ಮಾಡಿದಾಗಲೇ ನ್ಯಾಯಾಧೀಶರು ತಡರಾತ್ರಿಯವರೆಗೆ ವಿಚಾರಣೆ ನಡೆಸುವುದು ತಪ್ಪುತ್ತದೆ ಎಂದು ಅವರು ಹೇಳಿದರು.

ಸುಪ್ರೀಮ್ ಕೋರ್ಟ್​ನಲ್ಲಿರುವ ಪೆಂಡಿಂಗ್ ಪ್ರಕರಣಗಳ ಹೊರೆ ತಗ್ಗಿಸಲು ಪ್ರತಿದಿನ ಹತ್ತತ್ತು ವೈವಾಹಿಕ ಕಲಹ ಮತ್ತು ಜಾಮೀನು ಮನವಿಗಳ ವಿಚಾರಣೆಗೆ ತೀರ್ಮಾನ
ಸುಪ್ರೀಂಕೋರ್ಟ್
TV9 Web
| Edited By: |

Updated on: Nov 18, 2022 | 6:31 PM

Share

ನವದೆಹಲಿ: ಸುಪ್ರೀಮ್ ಕೋರ್ಟ್ ನಲ್ಲಿ (The Supreme Court) ಇತ್ಯರ್ಥಗೊಳ್ಳದ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ, ಸರ್ವೋಚ್ಛ ನ್ಯಾಯಾಲಯದ ಪ್ರತಿಯೊಂದು ಪೀಠವು ಪ್ರತಿದಿನ 10 ವೈವಾಹಿಕ ಕಲಹ ಮತ್ತು ಅಷ್ಟೇ ಸಂಖ್ಯೆಯ ಜಾಮೀನು ಅರ್ಜಿಗಳ ವಿಚಾರಣೆ ನಡೆಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಶುಕ್ರವಾರ ಬೆಳಗ್ಗೆ ದಿನದ ಕೋರ್ಟ್ ಕಲಾಪಗಳು (court proceedings) ಆರಂಭಿಸುವಾಗ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ಅವರು ಸಮಗ್ರ ಕೋರ್ಟಿನ ನಿರ್ಣಯವನ್ನು ಪ್ರಕಟಿಸಿದರು. ಜಾಮೀನು ಅರ್ಜಿಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದರಿಂದ ಅವುಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.

ಶುಕ್ರವಾರ ಬೆಳಿಗ್ಗೆ ನಡೆದ ಸಮಗ್ರ ಕೋರ್ಟ್ ಸಭೆಯಲ್ಲಿ, ‘ಸುಪ್ರೀಮ್ ಕೋರ್ಟ್ ನಲ್ಲಿರುವ ಪೆಂಡಿಂಗ್ ಇರುವ ಸಾವಿರಾರು ಪ್ರಕರಣಗಳ ಹೊರೆ ಕಡಿಮೆ ಮಾಡಲು ಎಲ್ಲ 13 ಪೀಠಗಳು ವೈವಾಹಿಕ ಕಲಹಗಳಿಗೆ ಸಂಬಂಧಿಸಿದ ಹತ್ತು ಮನವಿ ಮತ್ತು ಜಾಮೀನು ಕೋರಿ ದಾಖಲಾಗಿರುವ ಮನವಿಗಳ ಪೈಕಿ ಹತ್ತು ಮನವಿಗಳ ವಿಚಾರಣೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ,’ ಎಂದು ನ್ಯಾಯಮರ್ತಿಗಳು ಹೇಳಿದರು. ‘ಪ್ರತಿದಿನ ಹತ್ತತ್ತು ವೈವಾಹಿಕ ಕಲಹ ಮತ್ತು ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನಂತರ ನಿಗದಿತ ಕೇಸುಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದ ಅವರು, ‘ಜಾಮೀನು ಅರ್ಜಿಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದರಿಂದ ಅವುಗಳಿಗೆ ಆದ್ಯತೆ ನೀಡಲಾಗುವುದು,’ ಎಂದರು.

ವಿಚಾರಣೆಗೆ ಶೆಡ್ಯೂಲ್ ಅಗಿರುವ ಪೂರಕ ಪಟ್ಟಿಗೆ ಕೊನೆ ಕ್ಷಣಗಳಲ್ಲಿ ಸೇರಿಸಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಸಹ ಕಡಿತಗೊಳಿಸಲಾಗುವುದು ಅಂತ ಮುಖ್ಯ ನ್ಯಾಯಾಧೀಶರು ಹೇಳಿದರು. ಹಾಗೆ ಮಾಡಿದಾಗಲೇ ನ್ಯಾಯಾಧೀಶರು ತಡರಾತ್ರಿಯವರೆಗೆ ವಿಚಾರಣೆ ನಡೆಸುವುದು ತಪ್ಪುತ್ತದೆ ಎಂದು ಅವರು ಹೇಳಿದರು.

‘ರಾತ್ರಿ 12 ಗಂಟೆ ಮತ್ತು ಬೆಳಗಿನ ಜಾವದವರಗೆ ವಿಚಾರಣೆಯನ್ನು ಮುಂದುವರೆಸುವ ಅನಿವಾರ್ಯತೆ ತಲೆದೋರರುತ್ತಿರುವದರಿಂದ ಹೆಚ್ಚುವರಿ ಪ್ರಕರಣಗಳ ವಿಚಾರಣೆಗಳ ನಿರ್ವಹಣೆ ಬೇಡ ಎಂದು ಎಲ್ಲ ಪೀಠಗಳ ನ್ಯಾಯಾಧೀಶರು ನನಗೆ ಮನವಿ ಮಾಡಿದರು. ಹಾಗಾಗೇ, ನಾನು ಸಪ್ಲಿಮೆಂಟರಿ ಬೋರ್ಡನ್ನು ತಗ್ಗಿಸುವ ಪ್ರಯತ್ನ ಮಾಡುತ್ತಿದ್ದೇನೆ,’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರಿಗಿಂತ ಮೊದಲು ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಯುಯು ಲಲಿತ್ ಅವರು ಪೆಂಡಿಂಗ್ ಕೇಸುಗಳ ಹೊರೆಯನ್ನು ತಗ್ಗಿಸಲು ಹೊಸ ಲಿಸ್ಟಿಂಗ್ ಪದ್ಧತಿಯನ್ನು ಜಾರಿಗೊಳಿಸಿದ್ದರು. ಅದರಿಂದಾಗಿಯೇ ಆ 74-ದಿನಗಳ ಅವಧಿಯಲ್ಲಿ 10,000 ಕೇಸುಗಳ ಶೀಘ್ರ ವಿಲೇವಾರಿ ಸಾಧ್ಯವಾಗಿತ್ತು.

ಮತ್ತಷ್ಟು ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್