AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರಪ್ರದೇಶ: ಮಲೇರಿಯಾ ಬಾರದಂತೆ ತಡೆಯಲು ಸೇವಿಸಿದ್ದ ಮಾತ್ರೆಯಿಂದ ವಿದ್ಯಾರ್ಥಿನಿ ಸಾವು? 50 ಮಂದಿ ಅಸ್ವಸ್ಥ

ಆಂಧ್ರಪ್ರದೇಶದ ಪೋಲವರಂ ಜಿಲ್ಲೆಯಲ್ಲಿ ಮಲೇರಿಯಾ ತಡೆಗಟ್ಟಲು ವಿತರಿಸಲಾದ ಕ್ಲೋರೋಕ್ವಿನ್ ಮಾತ್ರೆ ಸೇವಿಸಿ 7 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಮಾತ್ರೆಗಳ ಗುಣಮಟ್ಟ ಮತ್ತು ಡೋಸೇಜ್ ಪರಿಶೀಲನೆ ನಡೆಯುತ್ತಿದೆ. ತಜ್ಞ ವೈದ್ಯರ ತಂಡಗಳು ಗ್ರಾಮದಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿವೆ.

ಆಂಧ್ರಪ್ರದೇಶ: ಮಲೇರಿಯಾ ಬಾರದಂತೆ ತಡೆಯಲು ಸೇವಿಸಿದ್ದ ಮಾತ್ರೆಯಿಂದ ವಿದ್ಯಾರ್ಥಿನಿ ಸಾವು? 50 ಮಂದಿ ಅಸ್ವಸ್ಥ
ಮಾತ್ರೆಗಳು
ನಯನಾ ರಾಜೀವ್
|

Updated on: Sep 02, 2026 | 10:31 AM

Share

ಹೈದರಾಬಾದ್, ಸೆಪ್ಟೆಂಬರ್ 02: ಮಲೇರಿಯಾ(Malaria) ಬಾರದಂತೆ ತಡೆಯಲು ಸೇವಿಸಿದ್ದ ಮಾತ್ರೆಯಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, 50 ಮಂದಿ ಅಸ್ವಸ್ಥಗೊಂಡಿರುವ ಘಟನೆ ಆಂಧ್ರಪ್ರದೇಶದ ಪೋಲವರಂ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮವೊಂದರಲ್ಲಿ ಆರೋಗ್ಯ ಇಲಾಖೆ ವತಿಯಿಂದ ವಿತರಿಸಲಾದ ಮಲೇರಿಯಾ ವಿರೋಧಿ ಕ್ಲೋರೋಕ್ವಿನ್ (Chloroquine) ಮಾತ್ರೆಗಳನ್ನು ಸೇವಿಸಿದ ನಂತರ 7 ವರ್ಷದ ಶಾಲಾ ಬಾಲಕಿ ಸಾವನ್ನಪ್ಪಿದ್ದು, 52ಕ್ಕೂ ಹೆಚ್ಚು ಗ್ರಾಮಸ್ಥರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ತೆಲಂಗಾಣ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪೋಲವರಂನ ಗೊಲ್ಲಗುಪ್ಪ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಉನ್ನತ ಮಟ್ಟದ ವೈದ್ಯಕೀಯ ತನಿಖೆಗೆ ಆದೇಶಿಸಿದ್ದಾರೆ.

ದುರಂತ ಸಂಭವಿಸಿದ್ದು ಹೇಗೆ?

71 ಮಂದಿಗೆ ಮಾತ್ರೆ ವಿತರಣೆ: ಮಲೇರಿಯಾ ಸೋಂಕು ಹರಡುವುದನ್ನು ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ 71 ಜನರಿಗೆ ಕ್ಲೋರೋಕ್ವಿನ್ ಮಾತ್ರೆಗಳನ್ನು ನೀಡಲಾಗಿತ್ತು.

ತೀವ್ರ ಅಡ್ಡಪರಿಣಾಮ: ಮಾತ್ರೆ ಸೇವಿಸಿದ ಕೆಲವೇ ಗಂಟೆಗಳಲ್ಲಿ ಹಲವರಿಗೆ ತೀವ್ರ ವಾಂತಿ, ತಲೆತಿರುಗುವಿಕೆ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು 29 ಜನರನ್ನು ಪಕ್ಕದ ತೆಲಂಗಾಣದ ಭದ್ರಾಚಲಂ ಆಸ್ಪತ್ರೆಗೆ ಹಾಗೂ 24 ಮಂದಿಯನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

ಬಾಲಕಿ ಸಾವು: ಅಸ್ವಸ್ಥಗೊಂಡವರಲ್ಲಿ ಎರಡನೇ ತರಗತಿಯ ವಿದ್ಯಾರ್ಥಿನಿ ಮಡಿವಿ ಜಮುನಾ (7) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಉಳಿದ ರೋಗಿಗಳ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮಕ್ಕಳ‌ಲ್ಲಿ ಕಾಣಿಸಿಕೊಳ್ಳುತ್ತಿದೆ ಕಾಲುಬಾಯಿ ರೋಗ; ಲಕ್ಷಣಗಳು, ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಸರ್ಕಾರದ ತುರ್ತು ರಕ್ಷಣಾ ಕ್ರಮಗಳು

ವೈದ್ಯಕೀಯ ಶಿಬಿರ ಹಾಗೂ ತಜ್ಞರ ನಿಯೋಜನೆ: ಕಾಕಿನಾಡ ಸರ್ಕಾರಿ ಜನರಲ್ ಆಸ್ಪತ್ರೆಯಿಂದ ಒಂಬತ್ತು ಸದಸ್ಯರ ತಜ್ಞ ವೈದ್ಯರ ತಂಡ ಗೊಲ್ಲಗುಪ್ಪ ಗ್ರಾಮಕ್ಕೆ ದೌಡಾಯಿಸಿದೆ. ಜೊತೆಗೆ ರಾಜಮಹೇಂದ್ರವರಂ, ವಿಜಯವಾಡ ಮತ್ತು ಕಾಕಿನಾಡದಿಂದ ಮಕ್ಕಳ ತಜ್ಞರನ್ನೊಳಗೊಂಡ ಹೆಚ್ಚುವರಿ ತಂಡಗಳು ಗ್ರಾಮದಲ್ಲಿ ಬೀಡುಬಿಟ್ಟು ಆರೋಗ್ಯ ತಪಾಸಣೆ ನಡೆಸುತ್ತಿವೆ.

ಔಷಧದ ಮಾದರಿ ಪರೀಕ್ಷೆ: ವಿತರಿಸಲಾದ ಕ್ಲೋರೋಕ್ವಿನ್ ಬ್ಯಾಚ್‌ನ ಗುಣಮಟ್ಟ, ನಿಗದಿತ ಡೋಸೇಜ್ ಮಕ್ಕಳಿಗೆ ನೀಡಬೇಕಾದ ಪ್ರಮಾಣಕ್ಕಿಂತ ಹೆಚ್ಚು ನೀಡಲಾಗಿದೆಯೇ? ಅಥವಾ ಮಾತ್ರೆಗಳು ಕಲಬೆರಕೆಯಾಗಿದ್ದವೇ ಎಂಬುದನ್ನು ಪತ್ತೆಹಚ್ಚಲು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ.

ಕ್ಲೋರೋಕ್ವಿನ್ ಹೇಗೆ ಕೆಲಸ ಮಾಡುತ್ತದೆ?: ಇದು ಮಲೇರಿಯಾ ಪರಾವಲಂಬಿ (Plasmodium) ವಿರುದ್ಧ ಹೋರಾಡುವ ಪರಾವಲಂಬಿ ವಿರೋಧಿ ಔಷಧಿಯಾಗಿದೆ. ಇದು ರಕ್ತದಲ್ಲಿ ಹೀಮ್ ಮಟ್ಟವನ್ನು ಹೆಚ್ಚಿಸಿ ಪರಾವಲಂಬಿಗಳನ್ನು ಕೊಲ್ಲುತ್ತದೆ.

ಮಕ್ಕಳಿಗೆ ನೀಡುವಾಗ ಅಪಾಯ ಹೆಚ್ಚು: ಕ್ಲೋರೋಕ್ವಿನ್ ಅತ್ಯಂತ ಕಿರಿದಾದ ಸುರಕ್ಷತಾ ಮಿತಿಯನ್ನು ಹೊಂದಿದೆ. ನಿರ್ದಿಷ್ಟ ತೂಕಕ್ಕೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ನೀಡದಿದ್ದರೆ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಇದು ಹೃದಯದ ಬಡಿತದಲ್ಲಿ ಏರುಪೇರು , ನರಮಂಡಲದ ಕುಸಿತ ಮತ್ತು ಮಾರಣಾಂತಿಕ ವಿಷಕಾರಿ ಪರಿಣಾಮವನ್ನು ಬೀರಬಲ್ಲದು.

ವಿ. ಸೂ: ಇದು ಟಿವಿ9 ಕನ್ನಡದ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಗೂಗಲ್ ಆಧರಿಸಿ ನೀಡಿರುವ ಮಾಹಿತಿಯಾಗಿರುತ್ತದೆ. ನಿಮಗೆ ಯಾವುದೇ ಅನಾರೋಗ್ಯ ಕಾಣಿಸಿಕೊಂಡಲ್ಲಿ, ವೈದ್ಯರನ್ನು ಸಂಪರ್ಕಿಸಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ