AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಂತಾ ಗ್ರೂಪ್​ ಸಂಸ್ಥಾಪಕ ಗೌತಮ್ ಥಾಪರ್​ ಅರೆಸ್ಟ್​​; ಇಂದು ಕೋರ್ಟ್​ಗೆ ಹಾಜರು ಪಡಿಸಲಿರುವ ಇ.ಡಿ.

ಗೌತಮ್​ ಥಾಪರ್​ ಈ ಅವಂತಾ ಗ್ರೂಪ್​ನ್ನು 2007ರಲ್ಲಿ ಹುಟ್ಟುಹಾಕಿದ್ದಾರೆ. ಬಹುಮುಖ್ಯವಾಗಿ ಯೆಸ್​ ಬ್ಯಾಂಕ್​ಗೆ 467 ಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಅವಂತಾ ಗ್ರೂಪ್​ ಸಂಸ್ಥಾಪಕ ಗೌತಮ್ ಥಾಪರ್​ ಅರೆಸ್ಟ್​​; ಇಂದು ಕೋರ್ಟ್​ಗೆ ಹಾಜರು ಪಡಿಸಲಿರುವ ಇ.ಡಿ.
ಗೌತಮ್​ ಥಾಪರ್​
TV9 Web
| Updated By: Lakshmi Hegde|

Updated on:Aug 04, 2021 | 10:05 AM

Share

ಅವಂತಾ ಗ್ರೂಪ್(Avantha Group)​ನ ಪ್ರವರ್ತಕ ಗೌತಮ್​ ಥಾಪರ್(Gautam Thapar)​ರನ್ನು, ಅಕ್ರಮ ಹಣ ವರ್ಗಾವಣೆ  ಪ್ರಕರಣ(Money Laundering case)ದಡಿ ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಗೌತಮ್​ ಥಾಪರ್​ಗೆ ಸೇರಿದ ಹಲವು ಪ್ರದೇಶಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ, ಇವರನ್ನು ಹಲವು ಬಾರಿ ವಿಚಾರಣೆಗೂ ಒಳಪಡಿಸಿದ್ದರು. ಥಾಪರ್​ ನಿವಾಸವನ್ನಷ್ಟೇ ಅಲ್ಲದೆ, ಅವಂತಾ ಗ್ರೂಪ್​ನ ಹಲವು ಹಿರಿಯ ಅಧಿಕಾರಿಗಳಿಗೆ ಸೇರಿದ ಜಾಗಗಳ ಮೇಲೆಯೂ ರೈಡ್ ಮಾಡಿದ್ದರು. ಅಂತಿಮವಾಗಿ ಗೌತಮ್​ ಅವರನ್ನೀಗ ಬಂಧಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಗೌತಮ್​ ಥಾಪರ್​ ಈ ಅವಂತಾ ಗ್ರೂಪ್​ನ್ನು 2007ರಲ್ಲಿ ಹುಟ್ಟುಹಾಕಿದ್ದಾರೆ. ಬಹುಮುಖ್ಯವಾಗಿ ಯೆಸ್​ ಬ್ಯಾಂಕ್​ಗೆ 467 ಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಇವರನ್ನು ಸದ್ಯ ಇಡಿ ಬಂಧಿಸಿದ್ದು, ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ವಿಚಾರಣೆ ವೇಳೆ, ಗೌತಮ್​​ ಅವರನ್ನು ತಮ್ಮ ಕಸ್ಟಡಿಗೆ ಕೊಡಿ. ಇನ್ನೂ ವಿಚಾರಣೆ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸಲಿದ್ದಾರೆ ಎನ್ನಲಾಗಿದೆ.

ಅವಂತಾ ರಿಯಾಲ್ಟಿ ಲಿಮಿಟೆಡ್​ಗೆ ಅಕ್ರಮವಾಗಿ ಸಾಲ ನೀಡಿದ್ದ ಯೆಸ್​ ಬ್ಯಾಂಕ್​​ ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್​, ಅದಕ್ಕೆ ಬದಲಾಗಿ ದೆಹಲಿಯ ಪ್ರಮುಖ ಪ್ರದೇಶವೊಂದರಲ್ಲಿ ಇದ್ದ, ಅವಂತಾ ಗ್ರೂಪ್​​ಗೆ ಸೇರಿದ್ದ ಆಸ್ತಿಯೊಂದನ್ನು ಮಾರುಕಟ್ಟೆ ಬೆಲೆಗಿಂತಲೂ ತುಂಬ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿದ್ದರು. ಇಲ್ಲಿ ಆವಂತಾ ಗ್ರೂಪ್​ ಮತ್ತು ಯೆಸ್​ ಬ್ಯಾಂಕ್​ನ ಅಂದಿನ ಎಂಡಿ ನಡುವೆ ಪರಸ್ಪರ ಸಹಕಾರ ಏರ್ಪಟ್ಟಿತ್ತಾದರೂ ಹಣದ ವಿಚಾರದಲ್ಲಿ ಅಕ್ರಮ ನಡೆದಿತ್ತು. ಇದನ್ನು ಇ.ಡಿ. ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಬರೀ ಇಷ್ಟೇ ಅಲ್ಲ, ಇನ್ನೊಂದು ಪ್ರಕರಣದಲ್ಲಿ ಎಸ್​ಬಿಐ ಗೌತಮ್​ ಥಾಪರ್​ ವಿರುದ್ಧ ದೂರು ನೀಡಿದೆ. ಎಸ್​ಬಿಐ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟಕ್ಕೆ ಸುಮಾರು 2435 ಕೋಟಿ ರೂ.ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರಣೆ ಸಿಬಿಐ ನಡೆಸುತ್ತಿದೆ.

ಇದನ್ನೂ ಓದಿ: Tirupati Temple : ತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ; 24 ಗಂಟೆಗಳಲ್ಲಿ 1.80 ಕೋಟಿ ರೂ. ಸಂಗ್ರಹ

ಕನ್ನಡ ಮಾಧ್ಯಮಕ್ಕೆ ಧಕ್ಕೆ ಆಗದಂತೆ ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಅಳವಡಿಕೆ: ಡಿಡಿಪಿಐಗಳಿಗೆ ಅಧಿಕಾರ

Published On - 9:56 am, Wed, 4 August 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ