Baby Berth! ಇನ್ಮುಂದೆ ಚಿಕ್ಕ ಮಕ್ಕಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕೊಡಲಿದೆ ಭಾರತೀಯ ರೈಲ್ವೆ!

ಭಾರತೀಯ ರೈಲ್ವೆಯು ನವಜಾತ ಶಿಶುಗಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ನವಜಾತ ಶಿಶುಗಳ ಜೊತೆಗೆ ಪೋಷಕರು ರೈಲುಗಳಲ್ಲಿ ಸಂಚರಿಸುವಾಗ ಪಡುತ್ತಿರುವ ಪಡಿಪಾಟಲನ್ನು ಮನಗಂಡು ರೈಲ್ವೆ ಇಲಾಖೆಯು ಇನ್ನು ಮುಂದೆ ಹೊಸ ಸೌಕರ್ಯ ಕಲ್ಪಿಸಲಿದೆ. ಅದೇ ನವಜಾತ ಶಿಶುಗಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕಲ್ಪಿಸಿಕೊಡುವ ಯೋಜನೆ

Baby Berth! ಇನ್ಮುಂದೆ ಚಿಕ್ಕ ಮಕ್ಕಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕೊಡಲಿದೆ ಭಾರತೀಯ ರೈಲ್ವೆ!
ಭಾರತೀಯ ರೈಲ್ವೆ
Follow us
| Updated By: ಸಾಧು ಶ್ರೀನಾಥ್​

Updated on:May 11, 2022 | 6:06 PM

ನವದೆಹಲಿ: ಭಾರತೀಯ ರೈಲ್ವೆಯು ನವಜಾತ ಶಿಶುಗಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ನವಜಾತ ಶಿಶುಗಳ ಜೊತೆಗೆ ಪೋಷಕರು ರೈಲುಗಳಲ್ಲಿ ಸಂಚರಿಸುವಾಗ ಪಡುತ್ತಿರುವ ಪಡಿಪಾಟಲನ್ನು ಮನಗಂಡು ರೈಲ್ವೆ ಇಲಾಖೆಯು ಇನ್ನು ಮುಂದೆ ಹೊಸ ಸೌಕರ್ಯ ಕಲ್ಪಿಸಲಿದೆ. ಅದೇ ನವಜಾತ ಶಿಶುಗಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ (baby berth) ಕಲ್ಪಿಸಿಕೊಡುವ ಯೋಜನೆ.

@RailMinIndiaIndian ರೈಲ್ವೆ ಇಲಾಖೆಯು ಶಿಶುಗಳಿಗಾಗಿ ತನ್ನ ರೈಲುಗಳಲ್ಲಿ ಪ್ರತ್ಯೇಕ ಸೀಟ್​ ವ್ಯವಸ್ಥೆ ಕಲ್ಪಿಸಲಿದೆ. ಆದರೆ ಇದು ಸದ್ಯಕ್ಕೆ ಉತ್ತರ ರೈಲ್ವೆ ವಿಭಾಗದಲ್ಲಿ (Northern Railways) ಪ್ರಯೋಗಾರ್ಥವಾಗಿ ಸಂಚರಿಸಲಿದೆ. ಲಖ್ನೋ – ನವದೆಹಲಿ ಮೈಲ್ (Lucknow- New Delhi Mail) ಟ್ರೈನ್​​ನಲ್ಲಿ ಮಾತ್ರ ಈ ವ್ಯವಸ್ಥೆ ಲಭಿಸಲಿದೆ. ಈಗಾಗಲೇ ಮಹಿಳೆಯರಿಗೆ ಮೀಸಲಿಟ್ಟಿರುವ ಸೀಟ್​ ಪಕ್ಕದಲ್ಲಿಯೇ (ಕೆಳಗಿನ ಸೀಟ್​) ಬೇಬಿ ಬರ್ತ್​​ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಯಾವುದೇ ತೊಂದರೆ ಪಡದೆ ತಾಯಂದಿರು ತಮ್ಮ ಮಕ್ಕಳ ಜೊತೆ ರೈಲ್ವೆಯಲ್ಲಿ ಆರಾಮವಾಗಿ ಸಂಚರಿಸಬಹುದಾಗಿದೆ. ಇದು ಎಸಿ ಕೋಚ್​ಗಳಲ್ಲಿ ಮಾತ್ರ ಲಭ್ಯವಿದ್ದು, ಎರಡು ಬರ್ಥ್​​ಗಳ ಮಧ್ಯೆ ಶಿಶುವಿನ ಬರ್ತ್​​ ಅಳವಡಿಸಲಾಗಿದೆ. ಗಮನಾರ್ಹವೆಂದರೆ ಭಾರತೀಯ ರೈಲ್ವೆ ಮಕ್ಕಳ ಈ ವಿಶೇಷ ಸೌಲಭ್ಯಕ್ಕಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಸೌಲಭ್ಯಕ್ಕೆ ಜನರಿಂದ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ, ಈ ವ್ಯವಸ್ಥೆಯನ್ನು ಇತರೆ ವಿಭಾಗಗಳ ಟ್ರೈನ್​​ನಲ್ಲಿಯೂ ಕೊಡಮಾಡಲಾಗುವುದು ಎಂದು ಉತ್ತರ ವಿಭಾಗದ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್​ ತಿಳಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:59 pm, Wed, 11 May 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ