AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baby Berth! ಇನ್ಮುಂದೆ ಚಿಕ್ಕ ಮಕ್ಕಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕೊಡಲಿದೆ ಭಾರತೀಯ ರೈಲ್ವೆ!

ಭಾರತೀಯ ರೈಲ್ವೆಯು ನವಜಾತ ಶಿಶುಗಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ನವಜಾತ ಶಿಶುಗಳ ಜೊತೆಗೆ ಪೋಷಕರು ರೈಲುಗಳಲ್ಲಿ ಸಂಚರಿಸುವಾಗ ಪಡುತ್ತಿರುವ ಪಡಿಪಾಟಲನ್ನು ಮನಗಂಡು ರೈಲ್ವೆ ಇಲಾಖೆಯು ಇನ್ನು ಮುಂದೆ ಹೊಸ ಸೌಕರ್ಯ ಕಲ್ಪಿಸಲಿದೆ. ಅದೇ ನವಜಾತ ಶಿಶುಗಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕಲ್ಪಿಸಿಕೊಡುವ ಯೋಜನೆ

Baby Berth! ಇನ್ಮುಂದೆ ಚಿಕ್ಕ ಮಕ್ಕಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕೊಡಲಿದೆ ಭಾರತೀಯ ರೈಲ್ವೆ!
ಭಾರತೀಯ ರೈಲ್ವೆ
TV9 Web
| Updated By: ಸಾಧು ಶ್ರೀನಾಥ್​|

Updated on:May 11, 2022 | 6:06 PM

Share

ನವದೆಹಲಿ: ಭಾರತೀಯ ರೈಲ್ವೆಯು ನವಜಾತ ಶಿಶುಗಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ನವಜಾತ ಶಿಶುಗಳ ಜೊತೆಗೆ ಪೋಷಕರು ರೈಲುಗಳಲ್ಲಿ ಸಂಚರಿಸುವಾಗ ಪಡುತ್ತಿರುವ ಪಡಿಪಾಟಲನ್ನು ಮನಗಂಡು ರೈಲ್ವೆ ಇಲಾಖೆಯು ಇನ್ನು ಮುಂದೆ ಹೊಸ ಸೌಕರ್ಯ ಕಲ್ಪಿಸಲಿದೆ. ಅದೇ ನವಜಾತ ಶಿಶುಗಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ (baby berth) ಕಲ್ಪಿಸಿಕೊಡುವ ಯೋಜನೆ.

@RailMinIndiaIndian ರೈಲ್ವೆ ಇಲಾಖೆಯು ಶಿಶುಗಳಿಗಾಗಿ ತನ್ನ ರೈಲುಗಳಲ್ಲಿ ಪ್ರತ್ಯೇಕ ಸೀಟ್​ ವ್ಯವಸ್ಥೆ ಕಲ್ಪಿಸಲಿದೆ. ಆದರೆ ಇದು ಸದ್ಯಕ್ಕೆ ಉತ್ತರ ರೈಲ್ವೆ ವಿಭಾಗದಲ್ಲಿ (Northern Railways) ಪ್ರಯೋಗಾರ್ಥವಾಗಿ ಸಂಚರಿಸಲಿದೆ. ಲಖ್ನೋ – ನವದೆಹಲಿ ಮೈಲ್ (Lucknow- New Delhi Mail) ಟ್ರೈನ್​​ನಲ್ಲಿ ಮಾತ್ರ ಈ ವ್ಯವಸ್ಥೆ ಲಭಿಸಲಿದೆ. ಈಗಾಗಲೇ ಮಹಿಳೆಯರಿಗೆ ಮೀಸಲಿಟ್ಟಿರುವ ಸೀಟ್​ ಪಕ್ಕದಲ್ಲಿಯೇ (ಕೆಳಗಿನ ಸೀಟ್​) ಬೇಬಿ ಬರ್ತ್​​ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಯಾವುದೇ ತೊಂದರೆ ಪಡದೆ ತಾಯಂದಿರು ತಮ್ಮ ಮಕ್ಕಳ ಜೊತೆ ರೈಲ್ವೆಯಲ್ಲಿ ಆರಾಮವಾಗಿ ಸಂಚರಿಸಬಹುದಾಗಿದೆ. ಇದು ಎಸಿ ಕೋಚ್​ಗಳಲ್ಲಿ ಮಾತ್ರ ಲಭ್ಯವಿದ್ದು, ಎರಡು ಬರ್ಥ್​​ಗಳ ಮಧ್ಯೆ ಶಿಶುವಿನ ಬರ್ತ್​​ ಅಳವಡಿಸಲಾಗಿದೆ. ಗಮನಾರ್ಹವೆಂದರೆ ಭಾರತೀಯ ರೈಲ್ವೆ ಮಕ್ಕಳ ಈ ವಿಶೇಷ ಸೌಲಭ್ಯಕ್ಕಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಸೌಲಭ್ಯಕ್ಕೆ ಜನರಿಂದ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ, ಈ ವ್ಯವಸ್ಥೆಯನ್ನು ಇತರೆ ವಿಭಾಗಗಳ ಟ್ರೈನ್​​ನಲ್ಲಿಯೂ ಕೊಡಮಾಡಲಾಗುವುದು ಎಂದು ಉತ್ತರ ವಿಭಾಗದ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್​ ತಿಳಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:59 pm, Wed, 11 May 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!