AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ ಹೊರಟಿದ್ದ ವಿಮಾನದಲ್ಲಿ ಮಹಿಳೆಗೆ ಹೆರಿಗೆ; ಆಗಸದಲ್ಲಿ ಹುಟ್ಟಿದ ಪುಟ್ಟ ಮಗುವಿನ ಫೋಟೋ ಶೇರ್​ ಮಾಡಿದ ಇಂಡಿಗೋ

IndiGo: ಕಳೆದ ಅಕ್ಟೋಬರ್​​ನಲ್ಲಿ ಕೂಡ ಮಹಿಳೆಯೊಬ್ಬರು ಇಂಡಿಗೋ ಫ್ಲೈಟ್​​ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದರು. ಅಂದು ವಿಮಾನ ದೆಹಲಿಯಿಂದ ಬೆಳಗಾವಿಗೆ ಬರುತ್ತಿತ್ತು. ಅಂದು ಆ ಮಹಿಳೆಗೆ ಇನ್ನೂ 9 ತಿಂಗಳು ಪೂರ್ತಿ ತುಂಬಿರಲಿಲ್ಲ.

ಬೆಂಗಳೂರಿನಿಂದ ಹೊರಟಿದ್ದ ವಿಮಾನದಲ್ಲಿ ಮಹಿಳೆಗೆ ಹೆರಿಗೆ; ಆಗಸದಲ್ಲಿ ಹುಟ್ಟಿದ ಪುಟ್ಟ ಮಗುವಿನ ಫೋಟೋ ಶೇರ್​ ಮಾಡಿದ ಇಂಡಿಗೋ
ಇಂಡಿಗೋ ಫ್ಲೈಟ್​​ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯೊಂದಿಗೆ ಸಿಬ್ಬಂದಿ
Lakshmi Hegde
|

Updated on: Mar 17, 2021 | 2:49 PM

Share

ಬೆಂಗಳೂರಿನಿಂದ ಜೈಪುರಕ್ಕೆ ತೆರಳುರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಇಂಡಿಗೋ ವಿಮಾನ 6E-469ದಲ್ಲಿ ಈ ಮಹಿಳೆ ಪ್ರಯಾಣ ಮಾಡುತ್ತಿದ್ದರು. ಫ್ಲೈಟ್​ನಲ್ಲಿದ್ದ ವೈದ್ಯ ಡಾ. ಸುಬಾಹಾನಾ ನಜೀರ್​ ಮತ್ತು ವಿಮಾನ ಸಿಬ್ಬಂದಿ ಸೇರಿ ಅವರಿಗೆ ಸುಲಲಿತವಾಗಿ ಹೆರಿಗೆಯಾಗುವಂತೆ ನೋಡಿಕೊಂಡಿದ್ದಾರೆ. ಜೈಪುರಕ್ಕೆ ಬರುತ್ತಿದ್ದಂತೆ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಇಂಡಿಗೋ ಏರ್​ಲೈನ್​ ತಿಳಿಸಿದೆ. ಇನ್ನು ಮಹಿಳೆಯ ಹೆರಿಗೆ ಮಾಡಿಸಿದ ಡಾ. ನಜೀರ್​ ಅವರು ಜೈಪುರ ಏರ್​​ಪೋರ್ಟ್​​ನಲ್ಲಿ ಇಳಿಯುತ್ತಿದ್ದಂತೆ ಅಲ್ಲಿನ ಇಂಡಿಗೋ ಸಿಬ್ಬಂದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. Thank You ಎಂದು ಬರೆಯಲಾಗಿದ್ದ ದೊಡ್ಡ ಕಾರ್ಡ್​ನ್ನೂ ನೀಡಿದ್ದಾರೆ. ಈ ಚಿತ್ರವನ್ನೂ ಇಂಡಿಗೋ ಬಿಡುಗಡೆ ಮಾಡಿದೆ. ಹಾಗೇ ತಾಯಿ-ಮಗು ಹಾಗೂ ಅವರೊಂದಿಗೆ ಸಿಬ್ಬಂದಿ, ವೈದ್ಯೆ ಇರುವ ಫೋಟೋವನ್ನೂ ಶೇರ್​ ಮಾಡಿದೆ.

ಇದೇ ಮೊದಲಲ್ಲ ಕಳೆದ ಅಕ್ಟೋಬರ್​​ನಲ್ಲಿ ಕೂಡ ಮಹಿಳೆಯೊಬ್ಬರು ಇಂಡಿಗೋ ಫ್ಲೈಟ್​​ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದರು. ಅಂದು ವಿಮಾನ ದೆಹಲಿಯಿಂದ ಬೆಳಗಾವಿಗೆ ಬರುತ್ತಿತ್ತು. ಅಂದು ಆ ಮಹಿಳೆಗೆ ಇನ್ನೂ 9 ತಿಂಗಳು ಪೂರ್ತಿ ತುಂಬಿರಲಿಲ್ಲ. ಆಗ ಕೂಡ ಸುಲಲಿತವಾಗಿ ಹೆರಿಗೆಯಾಗಿತ್ತು ಮತ್ತು ತಾಯಿ-ಮಗು ಆರೋಗ್ಯವಾಗಿದ್ದಿದ್ದಾಗಿ ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿತ್ತು. ಆ ಮಹಿಳೆಗೆ ವಿಮಾನದ ಪ್ರಥಮ ಚಿಕಿತ್ಸೆ ವಿಭಾಗದ ಸಿಬ್ಬಂದಿ ಹೆರಿಗೆ ಮಾಡಿಸಿದ್ದರು. ಅಂದು ಪೈಲಟ್​ ತುರ್ತು ಭೂಸ್ಪರ್ಶಕ್ಕೆ ಮುಂದಾಗಿದ್ದರೂ, ಅಷ್ಟರಲ್ಲಾಗಲೇ ಆಕೆಯ ಹೆರಿಗೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರೂ ಸಹ ಈ ಬಗ್ಗೆ ಚರ್ಚಿಸಿದ್ದರು.

Indigo Flight

ಹೆರಿಗೆ ಮಾಡಿಸಿದ ವೈದ್ಯೆಗೆ ಧನ್ಯವಾದ ಸಲ್ಲಿಸಿದ ಇಂಡಿಗೋ ಸಿಬ್ಬಂದಿ

ಇದನ್ನೂ ಓದಿ: ಪ್ಲಾಸ್ಟಿಕ್ ತ್ಯಜಿಸಿದರೆ ಅದೇ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ; ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಅನಿಸಿಕೆ

Follow Us
Lakshmi Hegde
Lakshmi Hegde
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!