AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಜನೆಯಲ್ಲ, ತಾಯಿ ಶ್ರಾದ್ಧದ ದಿನ ರಾತ್ರಿ ಇಡೀ ನಡೆದಿದ್ದು ಇದೆಂಥಾ ನೃತ್ಯ

ಬಿಹಾರದ ಬೇಗುಸರಾಯ್‌ನಲ್ಲಿ ತಾಯಿಯ ಶ್ರಾದ್ಧ ಕಾರ್ಯಕ್ರಮದಲ್ಲಿ ಮಗ ಸಾಂಪ್ರದಾಯಿಕ ಭಜನೆ ಬದಲು ಲಾಂಡ್ ನೃತ್ಯ ಆಯೋಜಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವೀಡಿಯೋ ವೈರಲ್ ಆಗಿದ್ದು, ಕೆಲವರು ಸಂಪ್ರದಾಯದ ಅಪಚಾರವೆಂದರೆ, ಇನ್ನು ಕೆಲವರು ವೈಯಕ್ತಿಕ ಆಯ್ಕೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದು ಸಾಂಸ್ಕೃತಿಕ ಪದ್ಧತಿಗಳ ವಿಕಸನ ಮತ್ತು ವೈಯಕ್ತಿಕ ಆಯ್ಕೆಯ ನಡುವಿನ ಸಮತೋಲನದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.

ಭಜನೆಯಲ್ಲ, ತಾಯಿ ಶ್ರಾದ್ಧದ ದಿನ ರಾತ್ರಿ ಇಡೀ ನಡೆದಿದ್ದು ಇದೆಂಥಾ ನೃತ್ಯ
ನೃತ್ಯ
ನಯನಾ ರಾಜೀವ್
|

Updated on: Jun 01, 2026 | 9:14 AM

Share

ಬೇಗುಸರಾಯ್, ಜೂನ್ 01: ಯಾರಾದರೂ ಮನೆಯಲ್ಲಿ ಸತ್ತಿದ್ದಾರೆಂದರೆ ಎಲ್ಲರ ಕಣ್ಣಂಚಲ್ಲೂ ನೀರು, ಊಟವೂ ಬೇಡ ಏನೂ ಬೇಡವೆಂಬ ಭಾವನೆ. ಸಂಜೆ ಹೊತ್ತು ದೇವರ ಮುಂದೆ ಒಂದಿಷ್ಟು ಭಜನೆ ವಾತಾವರಣ ಹೀಗಿರುವುದು ಸಾಮಾನ್ಯ. ಆದರೆ ಇಲ್ಲೊಂದು ಮನೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ, ಅವರ ಶ್ರಾದ್ಧ(Shraddha) ಕಾರ್ಯದ ದಿನ ಆ ಮಹಿಳೆಯ ಮಗ ಭಜನೆ ಬದಲು ಲಾಂಡ್ ನೃತ್ಯ ಮಾಡಿಸಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶಿವನಗರ ಗ್ರಾಮದಲ್ಲಿ ನಡೆದ ಶ್ರಾದ್ಧ ಕಾರ್ಯಕ್ರಮವೊಂದು ಸಾಂಪ್ರದಾಯಿಕ ಪದ್ಧತಿಗಿಂತ ಸಂಪೂರ್ಣ ಭಿನ್ನವಾಗಿ ನಡೆದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿನ ನಿವಾಸಿ ಮೈನಾ ದೇವಿ ಎಂಬುವವರು ಮೇ 19 ರಂದು ನಿಧನರಾಗಿದ್ದರು. ಮೇ 30 ರಂದು ಅವರ 12ನೇ ದಿನದ ಪುಣ್ಯತಿಥಿ (ಶ್ರಾದ್ಧ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಗ ಮಹಾರಾಣಾ ಪ್ರತಾಪ್ ಪಾಸ್ವಾನ್, ಸಾಂಪ್ರದಾಯಿಕ ಭಜನೆ-ಪ್ರವಚನಗಳ ಬದಲಿಗೆ ಬಿಹಾರದ ಪ್ರಸಿದ್ಧ ಜಾನಪದ ಕಲೆಯಾದ ‘ಲಾಂಡ್ ನೃತ್ಯ’ (Launda Dance) ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ವೇದಿಕೆಯ ಮೇಲೆ ಮೃತ ಮಹಿಳೆಯ ದೊಡ್ಡ ಫೋಟೋ ಇಟ್ಟು, ಅದರ ಮುಂದೆಯೇ ನೃತ್ಯಗಾರರು ರಾತ್ರಿಯಿಡೀ ಭೋಜ್‌ಪುರಿ ಮತ್ತು ಹಿಂದಿ ಹಾಡುಗಳಿಗೆ ಜೋರಾದ ಸಂಗೀತದೊಂದಿಗೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಮದುವೆ ಅಥವಾ ಆರ್ಕೆಸ್ಟ್ರಾ ಕಾರ್ಯಕ್ರಮದಂತಿದ್ದ ಈ ವಿಚಿತ್ರ ಶ್ರಾದ್ಧದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಸಂಪ್ರದಾಯಕ್ಕೆ ಮಾಡಿದ ಅಪಚಾರ ಎಂದರೆ, ಇನ್ನು ಕೆಲವರು ಇದು ಆ ಕುಟುಂಬದ ವೈಯಕ್ತಿಕ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಓದಿ:Video: ಬತ್ತದ ಜೀವನೋತ್ಸಾಹ; ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ

ಈ ಘಟನೆಯು ವಿಕಸನಗೊಳ್ಳುತ್ತಿರುವ ಸಾಂಸ್ಕೃತಿಕ ಪದ್ಧತಿಗಳು ಮತ್ತು ವೈಯಕ್ತಿಕ ಆಯ್ಕೆ ಮತ್ತು ದೀರ್ಘಕಾಲೀನ ಸಾಮಾಜಿಕ ಪದ್ಧತಿಗಳ ನಡುವಿನ ಸಮತೋಲನದ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಸ್ಥಳೀಯರು ಹೇಳುವ ಪ್ರಕಾರ, ಈ ಕಾರ್ಯಕ್ರಮವು ಸಾಂಪ್ರದಾಯಿಕ ಸಂತಾಪ ಸೂಚಕ ಸಭೆಯಾಗಿ ಪ್ರಾರಂಭವಾಯಿತು, ಆದರೆ ಕ್ರಮೇಣ ವಿವಾಹ ಆಚರಣೆ ಅಥವಾ ಆರ್ಕೆಸ್ಟ್ರಾ ಪ್ರದರ್ಶನವನ್ನು ಹೋಲುವ ಕಾರ್ಯಕ್ರಮವಾಗಿ ರೂಪಾಂತರಗೊಂಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More