AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharat Jodo Yatra Finale ಕಾಶ್ಮೀರಕ್ಕೆ ಬರುವ ಮುನ್ನ ರಾಹುಲ್ ತಮಗೆ ಕಳುಹಿಸಿದ ಭಾವನಾತ್ಮಕ ಸಂದೇಶವನ್ನು ನೆನೆದ ಪ್ರಿಯಾಂಕಾ

“ನನ್ನ ಸಹೋದರ ಕಾಶ್ಮೀರಕ್ಕೆ ಬಂದಾಗ, ಅವರು ಅಮ್ಮನಿಗೆ ಮತ್ತು ನನಗೆ ಸಂದೇಶವನ್ನು ಕಳುಹಿಸಿದ್ದರು. ಮನೆಗೆ ಹೋಗುವ ವಿಶಿಷ್ಟ ಭಾವನೆ ನನ್ನಲ್ಲಿದೆ. ನನ್ನ ಕುಟುಂಬ ಸದಸ್ಯರು ನನಗಾಗಿ ಕಾಯುತ್ತಿದ್ದಾರೆ. ಅವರು ಬಂದು ಕಣ್ಣೀರಿನೊಂದಿಗೆ ಅವರನ್ನು ತಬ್ಬಿಕೊಳ್ಳುತ್ತಾರೆ. ಅವರ ನೋವು ಮತ್ತು ಭಾವನೆಗಳು ನನ್ನ ಕಿವಿ ಪ್ರವೇಶಿಸುತ್ತವೆ ಎಂದಿದ್ದರು.

Bharat Jodo Yatra Finale ಕಾಶ್ಮೀರಕ್ಕೆ ಬರುವ ಮುನ್ನ ರಾಹುಲ್ ತಮಗೆ ಕಳುಹಿಸಿದ ಭಾವನಾತ್ಮಕ ಸಂದೇಶವನ್ನು ನೆನೆದ ಪ್ರಿಯಾಂಕಾ
ಪ್ರಿಯಾಂಕಾ ಗಾಂಧಿ ವಾದ್ರಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 30, 2023 | 3:17 PM

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಕಾಶ್ಮೀರಕ್ಕೆ ಪ್ರವೇಶಿಸುವ ಮೊದಲು ತಮ್ಮ ಹಿರಿಯ ಸಹೋದರ ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿಯವರ (Rahul Gandhi) ಸಂದೇಶವನ್ನು ಸೋಮವಾರ ನೆನಪಿಸಿಕೊಂಡಿದ್ದಾರೆ. ಮನೆಗೆ ಹೋಗುವ ಅನನ್ಯ ಭಾವ ಇದು ಎಂದು ರಾಹುಲ್ ಹೇಳಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ಪೂರ್ಣಗೊಂಡ ಸಂದರ್ಭದಲ್ಲಿ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ (Bharat Jodo Yatra), ಸುಮಾರು ಐದು ತಿಂಗಳ ಕಾಲ ನಡೆದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಜನರು ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಿದರು. ಈ ನೆಲ ಮತ್ತು ಅದರ ವೈವಿಧ್ಯತೆಗಾಗಿ ಈ ದೇಶದಲ್ಲಿ ಇನ್ನೂ ಉತ್ಸಾಹ ಉಳಿದಿದೆ ಎಂಬುದನ್ನು ಇದು ತೋರಿಸುತ್ತದೆ.

ನನ್ನ ಸಹೋದರ ಕನ್ಯಾಕುಮಾರಿಯಿಂದ 4-5 ತಿಂಗಳ ಕಾಲ ನಡೆದರು. ಅವರು ಹೋದಲ್ಲೆಲ್ಲಾ ಜನರು ಅವರಿಗಾಗಿ ಮುಗಿಬಿದ್ದರು. ಯಾಕೆ? ಏಕೆಂದರೆ ಈ ದೇಶದಲ್ಲಿ ಇನ್ನೂ ಉತ್ಸಾಹವಿದೆ. ದೇಶಕ್ಕಾಗಿ, ಈ ಭೂಮಿಗಾಗಿ, ಅದರ ವೈವಿಧ್ಯತೆಯ ಬಗ್ಗೆ ಆ ಉತ್ಸಾಹ ಎಲ್ಲಾ ಭಾರತೀಯರ ಹೃದಯದಲ್ಲಿ ನೆಲೆಸಿದೆ ಎಂದು ಅವರು ಹೇಳಿದರು.

“ನನ್ನ ಸಹೋದರ ಕಾಶ್ಮೀರಕ್ಕೆ ಬಂದಾಗ, ಅವರು ಅಮ್ಮನಿಗೆ ಮತ್ತು ನನಗೆ ಸಂದೇಶವನ್ನು ಕಳುಹಿಸಿದ್ದರು. ಮನೆಗೆ ಹೋಗುವ ವಿಶಿಷ್ಟ ಭಾವನೆ ನನ್ನಲ್ಲಿದೆ. ನನ್ನ ಕುಟುಂಬ ಸದಸ್ಯರು ನನಗಾಗಿ ಕಾಯುತ್ತಿದ್ದಾರೆ. ಅವರು ಬಂದು ಕಣ್ಣೀರಿನೊಂದಿಗೆ ಅವರನ್ನು ತಬ್ಬಿಕೊಳ್ಳುತ್ತಾರೆ. ಅವರ ನೋವು ಮತ್ತು ಭಾವನೆಗಳು ನನ್ನ ಕಿವಿಗೆ ತಾಕುತ್ತವೆ ಎಂದಿದ್ದರು.

ಇದನ್ನೂ ಓದಿ: Bharat Jodo Yatra: ಶ್ರೀನಗರದ ಸುರಿವ ಹಿಮದಲ್ಲಿ ರಾಹುಲ್ ಗಾಂಧಿ ಭಾಷಣ, ಸಂಪನ್ನಗೊಂಡಿತು ಯಾತ್ರೆ!

“ಇಲ್ಲಿ ನಿಂತು ನಾನು ಹೇಳಬಲ್ಲೆ, ದೇಶದಲ್ಲಿ ನಡೆಯುತ್ತಿರುವ ರಾಜಕೀಯವು ರಾಷ್ಟ್ರಕ್ಕೆ ಪ್ರಯೋಜನವಾಗದ ಸಂಗತಿಯಾಗಿದೆ. ವಿಭಜಿಸುವ ಮತ್ತು ಒಡೆಯುವ ರಾಜಕೀಯವು ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಇದು ಒಂದು ರೀತಿಯಲ್ಲಿ ಆಧ್ಯಾತ್ಮಿಕ ಯಾತ್ರೆಯಾಗಿತ್ತು. ಶೆರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಿಗಿ ಭದ್ರತೆ ಮತ್ತು ಭಾರೀ ಹಿಮಪಾತದ ನಡುವೆ ಕಾಂಗ್ರೆಸ್ ರ್ಯಾಲಿ ನಡೆಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಲ್ಲದೆ, ಡಿಎಂಕೆ, ಜೆಎಂಎಂ, ಬಿಎಸ್‌ಪಿ, ಎನ್‌ಸಿ, ಪಿಡಿಪಿ, ಸಿಪಿಐ, ಆರ್‌ಎಸ್‌ಪಿ, ವಿಸಿಕೆ ಮತ್ತು ಐಯುಎಂಎಲ್‌ನ ನಾಯಕರು ಕೂಡ ಭಾಗಿಯಾಗಿದ್ದರು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ಅವರು ದೇಶದ ಪಶ್ಚಿಮದಿಂದ ಪೂರ್ವಕ್ಕೆ ಮತ್ತೊಂದು ಯಾತ್ರೆಯನ್ನು ಕೈಗೊಳ್ಳುವಂತೆ ರಾಹುಲ್ ಗಾಂಧಿಗೆ ಕೇಳಿಕೊಂಡರು.

ಯಾತ್ರೆಯ ಈ ಕೊನೆಯ ಕಾರ್ಯಕ್ರಮದಲ್ಲಿ ನನ್ನ, ನನ್ನ ತಂದೆ ಮತ್ತು ನನ್ನ ಪಕ್ಷದ ಪರವಾಗಿ ನಾನು ರಾಹುಲ್ ಗಾಂಧಿ ಅವರನ್ನು ಅಭಿನಂದಿಸುತ್ತೇನೆ. ಈ ಯಾತ್ರೆ ಯಶಸ್ವಿಯಾಗಿದೆ. ದೇಶದಲ್ಲಿ ಬಿಜೆಪಿಯನ್ನು ಇಷ್ಟಪಡುವ ಜನರಿದ್ದಾರೆ. ಆದರೆ ಸಹೋದರತ್ವವನ್ನೂ ಇಷ್ಟ ಪಡುವ ಜನರಿದ್ದಾರೆ ಎಂದು ಈ ಯಾತ್ರೆ ತೋರಿಸಿದೆ.

“ಪಶ್ಚಿಮದಿಂದ ಪೂರ್ವಕ್ಕೆ ಯಾತ್ರೆ ಕೈಗೊಳ್ಳಲು ರಾಹುಲ್ ಗಾಂಧಿ ಅವರಲ್ಲಿ ವಿನಂತಿಸುತ್ತೇನೆ. ನಾನು ಅವರೊಂದಿಗೆ ನಡೆಯಲು ಬಯಸುತ್ತೇನೆ” ಎಂದು ಅಬ್ದುಲ್ಲಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್