AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಇನ್ನು ದೆಹಲಿ ಪೊಲೀಸ ಕಮೀಶನರ್, ಗೃಹ ಇಲಾಖೆಯಿಂದ ಆದೇಶ

ಅಪರಾಧಗಳ ತನಿಖೆಯಲ್ಲಿ ನಿಸ್ಸೀಮರೆನಿಸಿಕೊಂಡಿರುವ ಅಸ್ಥಾನಾ ಅವರು ದಶಕದ ಹಿಂದೆ ಗುಜರಾತಿನಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಸದೆಬಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಇನ್ನು ದೆಹಲಿ ಪೊಲೀಸ ಕಮೀಶನರ್, ಗೃಹ ಇಲಾಖೆಯಿಂದ ಆದೇಶ
ರಾಕೇಶ್ ಅಸ್ಥಾನಾ
TV9 Web
| Edited By: |

Updated on: Jul 28, 2021 | 1:12 AM

Share

ನವದೆಹಲಿ: ಗಡಿ ಭದ್ರತಾ ದಳದ (ಬಿ ಎಸ್ ಎಫ್) ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ದೆಹಲಿ ಪೋಲಿಸ್ ಅಯುಕ್ತರಾಗಿ ನೇಮಕ ಮಾಡಿ ನರೇಂದ್ರ ಮೋದಿ ಅವರ ಸರ್ಕಾರವು ಮಂಗಳವಾರ ಆದೇಶ ಹೊರಡಿಸಿದೆ. ಸೇವೆಯಿಂದ ನಿವೃತ್ತರಾಗಲು ಕೇವಲ ಮೂರು ದಿನ ಬಾಕಿಯಿರುವಾಗ 1984ರ ಬ್ಯಾಚ್​ನ ಐಪಿಎಸ್​ ಅಧಿಕಾರಿ (ಗುಜರಾತ್ ಕೇಡರ್) ಅಸ್ಥಾನಾ ಅವರನ್ನು ದೆಹಲಿ ಪೊಲೀಸ್ ಕಮೀಶನರ್ ಆಗಿ ಸರ್ಕಾರ ನೇಮಕ ಮಾಡಿದೆ.

‘ಅಸ್ಥಾನಾ ಅವರನ್ನು ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ, ಒಬ್ಬ ಹೊಸ ಮಹಾ ನಿರ್ದೇಶಕರ ನೇಮಕ ಇಲ್ಲವೇ ಈ ಕಚೇರಿಯಿಂದ ಮುಂದಿನ ಆದೇಶ ಹೊರಡಿಸುವವರೆಗೆ 1984 ರ ಬ್ಯಾಚ್​ನ ಐಪಿಎಸ್ ಅಧಿಕಾರಿ (ಹರಿಯಾಣ ಕೇಡರ್) ಮತ್ತು ಇಂಡೊ-ಟಿಬೆಟನ್ ಬಾರ್ಡರ್ ಪೊಲೀಸ್ ಮಹಾ ನಿರ್ದೇಶಕ ಎಸ್​ ಎಸ್​ ದೇಸ್ವಾಲ್ ಅವರು ಹೆಚ್ಚುವರಿಯಾಗಿ ಬಿ ಎಸ್ ಎಫ್ ಮಹಾ ನಿರ್ದೇಶಕನ ಜವಾಬ್ದಾರಿಯನ್ನು ನಿರ್ವಹಿಸಲು ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿದೆ,’ ಎಂದು ಕೇಂದ್ರ ಗೃಹ ಖಾತೆ ಸಚಿವಾಲಯದಿಂದ ಹೊರಬಿದ್ದಿರುವ ಆದೇಶದಲ್ಲಿ ತಿಳಿಸಲಾಗಿದೆ.

ವೃತ್ತಿಪರ ದಕ್ಷತೆ ಮತ್ತು ಸಮಗ್ರತೆಗೆ ಹೆಸರಾಗಿರುವ ಅಸ್ಥಾನಾ ಅವರು ಹಿಂದೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರಾಗಿದ್ದ ಅಲೋಕ್ ವರ್ಮ ಅವರೊಂದಿಗೆ ಉನ್ನತ ಪ್ರೊಫೈಲ್ ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಒಬ್ಬ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುವಾಗ ಇಬ್ಬರ ನಡುವೆ ತಗಾದೆ ಶುರುವಾಗಿ ವಿವಾದಕ್ಕೀಡಾಗಿದ್ದರು. ಜನೆವರಿ 10, 2019ರಂದು ಅಲೋಕ್ ವರ್ಮ ಅವರೊಂದಿಗೆ ಸಿಬಿಐನಿಂದ ಹೊರಬಿದ್ದ ಅಸ್ಥಾನಾ ಅವರನ್ನು ನಾಗರಿಕ ವಿಮಾನಯಾನ ಭದ್ರತೆ ಮತ್ತು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​ಸಿಬಿ) ಮಹಾ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.

ಜೂನ್ 30 ರಂದು ದೆಹಲಿ ಪೊಲೀಸ್ ಕಮೀಶನರ್ ಆಗಿದ್ದ ಎಸ್​ ಎನ್ ಶ್ರೀವಾಸ್ತವ ಅವರು ನಿವೃತ್ತರಾದ ನಂತರ ದೆಹಲಿ ಪೊಲೀಸ್​ನ ಹೆಚ್ಚುವರಿ ಹೊಣೆಗಾರಿಕೆಯನ್ನು ಬಾಲಾಜಿ ಶ್ರೀವಾಸ್ತವ ಅವರಿಗೆ ವಹಿಸಲಾಗಿದೆಯಾದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್​ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಅದನ್ನು ಮತ್ತಷ್ಟು ವೃತ್ತಿಪರ ಮತ್ತು ಸ್ಪಂದನಾಶೀಲವನ್ನಾಗಿಸುವ ಇಚ್ಛೆ ಇಟ್ಟುಕೊಂಡಿರುವುರಿಂದ ಅಸ್ಥಾನಾ ಅವರನ್ನು ನೇಮಕ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಪರಾಧಗಳ ತನಿಖೆಯಲ್ಲಿ ನಿಸ್ಸೀಮರೆನಿಸಿಕೊಂಡಿರುವ ಅಸ್ಥಾನಾ ಅವರು ದಶಕದ ಹಿಂದೆ ಗುಜರಾತಿನಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಸದೆಬಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ರಿಷಿ ಶುಕ್ಲಾ ಅವರ ನಂತರ ಸಿಬಿಐ ನಿರ್ದೇಶಕನ ಹುದ್ದೆಗೆ ಅಸ್ಥಾನಾ ನೇಮಕಗೊಳ್ಳವುದು ಖಚಿತವೆನಿಸಿದ್ದರೂ ಸಮಿತಿಯ ಸದಸ್ಯರು ಎತ್ತಿದ್ದ ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಅದನ್ನು ತಡೆಯಲಾಗಿತ್ತು.

ಎನ್​ಸಿಬಿಯ ಮಹಾ ನಿರ್ದೇಶಕರಾಗಿದ್ದಾಗ ಅನೇಕ ಕಡೆಗಳಲ್ಲಿ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡ ಆಸ್ಥಾನ ಅವರು ಮುಂಬೈ ಸಿನಿಮಾ ಉದ್ಯಮಕ್ಕೆ ಸರಬರಾಜಾಗುತ್ತಿದ್ದ ಕೋಕೇನ್ ಮತ್ತು ಸಿಂಥೆಟಿಕ್ ಡ್ರಗ್​ಗಳ ತನಿಖೆ ನಡೆಸಲು ಆದೇಶ ನೀಡಿದ್ದರು. ಬಿಎಸ್​ಎಫ್ ಡಿಜಿ ಆಗಿಯೂ ಅವರು ಬಾರತದ ಗಡಿಗಳನ್ನು ಹೆಚ್ಚು ಸುಭದ್ರಗೊಳಿಸಿದರಲ್ಲದೆ ಪಾಕಿಸ್ತಾನ ನೆಲೆಯ ಉ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ಗಳಲ್ಲಿ ಬಳಸುತ್ತಿದ್ದ ಸುರಂಗ ಮಾರ್ಗಗಳನ್ನು ಪತ್ತೆ ಮಾಡಿದರು.

ಇದನ್ನೂ ಓದಿ: ಮುಂಗಾರು ಅಧಿವೇಶನದ ವೇಳೆ ಪ್ರತಿಭಟನೆ ನಡೆಸಲು ಸಂಸತ್ ಬದಲು ಬೇರೆ ಸ್ಥಳ ಆಯ್ಕೆ ಮಾಡಿ: ರೈತರಿಗೆ ದೆಹಲಿ ಪೊಲೀಸ್ ಸಲಹೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ