AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​​ಗೆ 20 ಕೋಟಿ ರೂ.ವಂಚನೆ ಕೇಸ್​​; 10 ವರ್ಷಗಳ ನಂತರ ಗುಜರಾತ್​ ಮೂಲದ ಉದ್ಯಮಿಯನ್ನು ಬಂಧಿಸಿದ ಸಿಬಿಐ

2012ರ ಜೂನ್​​ನಲ್ಲಿ ಮೊಟ್ಟಮೊದಲು ಅಹ್ಮದಾಬಾದ್​​ನ ಕೆನರಾ ಬ್ಯಾಂಕ್​ ಈ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಂದರೆ ಇಡೀ ನೋವಾ ಶಿಪ್ಪಿಂಗ್​ ಮತ್ತು ಅದರ ನಿರ್ದೇಶಕರು, ಪ್ರಚಾರಕರ ವಿರುದ್ಧ ದೂರು ನೀಡಿತ್ತು.

ಬ್ಯಾಂಕ್​​ಗೆ 20 ಕೋಟಿ ರೂ.ವಂಚನೆ ಕೇಸ್​​; 10 ವರ್ಷಗಳ ನಂತರ ಗುಜರಾತ್​ ಮೂಲದ ಉದ್ಯಮಿಯನ್ನು ಬಂಧಿಸಿದ ಸಿಬಿಐ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Mar 27, 2022 | 9:40 PM

Share

2012ರಲ್ಲಿ ನಡೆದ ಬ್ಯಾಂಕ್​ ವಂಚನೆ ಪ್ರಕರಣದ ಆರೋಪಿಯೊಬ್ಬನನ್ನು ಸಿಬಿಐ (CBI) ಈಗ ಬಂಧಿಸಿದೆ. ಅಂದರೆ ಬರೋಬ್ಬರಿ 10 ವರ್ಷಗಳ ನಂತರ ಆರೋಪಿಯ ಅರೆಸ್ಟ್ ಆಗಿದೆ. ಬಂಧಿತ ಗುಜರಾತ್ ಮೂಲದ ಉದ್ಯಮಿ ಸಂಜಯ್​ ಆರ್​ ಗುಪ್ತಾ. ನೋವಾ ಶಿಪ್ಪಿಂಗ್​ ಪ್ರೈವೇಟ್​ ಲಿಮಿಟೆಡ್​​ನಲ್ಲಿ ನಿರ್ದೇಶಕನಾಗಿದ್ದು, ಬ್ಯಾಂಕ್​​ಗಳಿಗೆ ಸುಮಾರು 20 ಕೋಟಿ ರೂಪಾಯಿ ವಂಚನೆ (Bank Fraud) ಮಾಡಿ, ಪ್ರಕರಣ ದಾಖಲಾಗುತ್ತಿದ್ದಂತೆ ಕೀನ್ಯಾದ ನೈರೋಬಿಗೆ ಪರಾರಿಯಾಗಿದ್ದ.  ಅಂದು ಸಿಬಿಐ  ಗುಪ್ತಾ ವಿರುದ್ಧ ಲುಕ್​ಔಟ್ ನೋಟಿಸ್​, ರೆಡ್​ ಕಾರ್ನರ್​ ನೋಟಿಸ್​, ಇಂಟರ್​ಪೋಲ್ ನೋಟಿಸ್​ಗಳನ್ನು ಜಾರಿ ಮಾಡಿತ್ತು. ಇದೀಗ ನೈರೋಬಿಯಿಂದ ವಾಪಸ್ ಆಗುತ್ತಿದ್ದಂತೆ ಸಿಬಿಐ ಬಂಧಿಸಿದೆ.

2012ರ ಜೂನ್​​ನಲ್ಲಿ ಮೊಟ್ಟಮೊದಲು ಅಹ್ಮದಾಬಾದ್​​ನ ಕೆನರಾ ಬ್ಯಾಂಕ್​ ಈ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಂದರೆ ಇಡೀ ನೋವಾ ಶಿಪ್ಪಿಂಗ್​ ಮತ್ತು ಅದರ ನಿರ್ದೇಶಕರು, ಪ್ರಚಾರಕರ ವಿರುದ್ಧ ದೂರು ನೀಡಿತ್ತು. ಈ ಕಂಪನಿ ಸುಮಾರು 20.68 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿತ್ತು. ಅದರ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿಯನ್ನು ಬಂಧಿಸಿರುವ ಸಿಬಿಐ ಅಹ್ಮದಾಬಾದ್​ನ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಸದ್ಯ ಉದ್ಯಮಿಯನ್ನು ಎರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿದೆ.

ಈ ಬಗ್ಗೆ ಸಿಬಿಐ ವಕ್ತಾರ ಆರ್.ಸಿ.ಜೋಶಿ ಪ್ರತಿಕ್ರಿಯೆ ನೀಡಿದ್ದು, ತನಿಖೆಯೆಲ್ಲ ಸಂಪೂರ್ಣವಾಗಿ ಪೂರ್ಣಗೊಂಡು ಗುಪ್ತಾ ಸೇರಿ ಎಂಟು ಆರೋಪಿಗಳ ವಿರುದ್ಧ 2013ರಲ್ಲಿಯೇ ಚಾರ್ಜ್​ಶೀಟ್ ದಾಖಲಾಗಿದೆ. ಗುಪ್ತಾ ತುಂಬ ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇದೀಗ ಬಂಧಿಸಲಾಗಿದ್ದು, ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Weather Alert: ಇನ್ನು ಐದು ದಿನ ದೇಶದ ಹಲವು ರಾಜ್ಯಗಳಲ್ಲಿ ಉಷ್ಣ ಅಲೆ, ಮಳೆಯೂ ಇರಲಿದೆ: ಹವಾಮಾನ ಇಲಾಖೆ

Follow Us
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ