AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಪ್ತಚರ ದಳದ ಮಾಹಿತಿ ಸೋರಿಕೆ ಕೇಸ್​​; ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್​ ಜೈಸ್ವಾಲ್​ಗೆ ಸಮನ್ಸ್​ ನೀಡಿದ ಮುಂಬೈ ಸೈಬರ್​​ ಪೊಲೀಸ್​

ಪ್ರಸ್ತುತ ಪ್ರಕರಣ ಸುಬೋಧ್​ ಕುಮಾರ್​ ಅವರು ಮಹಾರಾಷ್ಟ್ರ ಪೊಲೀಸ್​ ನಿರ್ದೇಶಕರಾಗಿದ್ದಾಗಿನದು.  ಆಗ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ರಷ್ಮಿ ಶುಕ್ಲಾ, ಮಹಾರಾಷ್ಟ್ರದಲ್ಲಿ ಪೊಲೀಸ್​ ವರ್ಗಾವಣೆ, ಪೋಸ್ಟಿಂಗ್​ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ವರದಿ ಸಿದ್ಧಪಡಿಸಿದ್ದರು.

ಗುಪ್ತಚರ ದಳದ ಮಾಹಿತಿ ಸೋರಿಕೆ ಕೇಸ್​​; ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್​ ಜೈಸ್ವಾಲ್​ಗೆ ಸಮನ್ಸ್​ ನೀಡಿದ ಮುಂಬೈ ಸೈಬರ್​​ ಪೊಲೀಸ್​
ಸುಬೋಧ್​ ಕುಮಾರ್ ಜೈಸ್ವಾಲ್​
TV9 Web
| Edited By: |

Updated on:Oct 09, 2021 | 8:42 PM

Share

ಪೊಲೀಸ್​ ಸಿಬ್ಬಂದಿ ವರ್ಗಾವಣೆ, ಪೋಸ್ಟಿಂಗ್​ಗೆ ಸಂಬಂಧಪಟ್ಟ ಮಹಾರಾಷ್ಟ್ರ ಗುಪ್ತಚರ ಇಲಾಖೆಯ ಮಾಹಿತಿ ಸೋರಿಕೆ, ಫೋನ್​ ಟ್ಯಾಪಿಂಗ್​​ ಪ್ರಕರಣದಲ್ಲಿ ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್ ಜೈಸ್ವಾಲ್​​ರಿಗೆ ಮುಂಬೈ ಸೈಬರ್​ ಶಾಖೆ ಪೊಲೀಸರು ಸಮನ್ಸ್​ ನೀಡಿದ್ದಾರೆ.  ಇ-ಮೇಲ್ ಮೂಲಕ ಸುಬೋಧ್​ರಿಗೆ ಸಮನ್ಸ್​ ನೀಡಲಾಗಿದ್ದು, ಅಕ್ಟೋಬರ್​ 14ರೊಳಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ತಿಳಿಸಿದ್ದಾರೆ ಎಂದು ಎಎನ್​​ಐ ವರದಿ ಮಾಡಿದೆ. 

ಸುಬೋಧ್​ ಕುಮಾರ್ 1985ರ ಬ್ಯಾಚ್​​ನ ಮಹಾರಾಷ್ಟ್ರ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಿಬಿಐ ಮುಖ್ಯಸ್ಥರಾಗಿ ನೇಮಕವಾಗಿದ್ದು, ಇವರ ಅವಧಿ ಎರಡು ವರ್ಷ. ಸಿಬಿಐ ಮುಖ್ಯಸ್ಥರಾಗಿ ನೇಮಕವಾಗುವುದಕ್ಕೂ ಮೊದಲು ಇವರು ಮುಂಬೈ ಮತ್ತು ಮಹಾರಾಷ್ಟ್ರ ಪೊಲೀಸ್​ ಚೀಫ್​ ಆಗಿ ಕರ್ತವ್ಯ ನಿರ್ವಹಿಸಿದವರಾಗಿದ್ದಾರೆ.  ಪ್ರಸ್ತುತ ಪ್ರಕರಣ ಸುಬೋಧ್​ ಕುಮಾರ್​ ಅವರು ಮಹಾರಾಷ್ಟ್ರ ಪೊಲೀಸ್​ ನಿರ್ದೇಶಕರಾಗಿದ್ದಾಗಿನದು.  ಆಗ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ರಷ್ಮಿ ಶುಕ್ಲಾ, ಮಹಾರಾಷ್ಟ್ರದಲ್ಲಿ ಪೊಲೀಸ್​ ವರ್ಗಾವಣೆ, ಪೋಸ್ಟಿಂಗ್​ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ವರದಿ ಸಿದ್ಧಪಡಿಸಿದ್ದರು. ಅದರ ವಿಚಾರಣೆ ವೇಳೆ, ಹಿರಿಯ ರಾಜಕಾರಣಿಗಳು, ಅಧಿಕಾರಿಗಳ ಫೋನ್​ ಕದ್ದಾಲಿಕೆ ನಡೆದಿದೆ. ಗುಪ್ತಚರ ಇಲಾಖೆ ವರದಿಯನ್ನು ಉದ್ದೇಶಪೂರ್ವಕವಾಗಿಯೇ ಸೋರಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಎಫ್​ಐಆರ್​ ಕೂಡ ದಾಖಲಾಗಿದೆ. ಎಫ್​ಐಆರ್​​ನಲ್ಲಿ ರಷ್ಮಿ ಶುಕ್ಲಾ ಸೇರಿ ಇನ್ಯಾವುದೇ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ ಈಗ ಸಿಬಿಐ ಮುಖ್ಯಸ್ಥರಾಗಿರುವ ಸುಬೋಧ್​ ಕುಮಾರ್​ರನ್ನು ವಿಚಾರಣೆಗೆ ಕರೆಯಲಾಗಿದೆ.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 451 ಜನರಿಗೆ ಕೊರೊನಾ ದೃಢ; 9 ಮಂದಿ ಸಾವು

IPL 2021: ಲೀಗ್ ಸುತ್ತಿನ ಅಂತ್ಯಕ್ಕೆ ಅತಿ ಹೆಚ್ಚು ರನ್​ ಗಳಿಸಿ ಆರೆಂಜ್ ಕ್ಯಾಪ್‌ ರೇಸ್​ನಲ್ಲಿರುವ ಬ್ಯಾಟರ್​ಗಳಿವರು

Published On - 8:24 pm, Sat, 9 October 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ