AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಧಿ ರಫ್ತಿನ ಮೇಲಿನ ನಿಷೇಧ ಸಡಿಲಗೊಳಿಸಿದ ಕೇಂದ್ರ; ಮೇ 13 ರೊಳಗೆ ನೋಂದಾಯಿಸಲಾದ ಸರಕುಗಳಿಗೆ ಅನುಮತಿ

ಈಜಿಪ್ಟ್‌ಗೆ ಹೋಗುವ ಗೋಧಿ ರವಾನೆಗೆ ಸರ್ಕಾರವು ಅನುಮತಿ ನೀಡಿದೆ. ಅದು ಈಗಾಗಲೇ ಕಾಂಡ್ಲಾ ಬಂದರಿನಲ್ಲಿ ಲೋಡ್ ಆಗುತ್ತಿದೆ. ಕಾಂಡ್ಲಾ ಬಂದರಿನಲ್ಲಿ ಗೋಧಿ ಸರಕನ್ನು ಲೋಡ್ ಮಾಡಲು ಅನುಮತಿ ನೀಡುವಂತೆ ಈಜಿಪ್ಟ್ ಸರ್ಕಾರ ಮಾಡಿದ ವಿನಂತಿಯ ಬೆನ್ನಲ್ಲೇ ಈ ಕಾರ್ಯನಡೆದಿದೆ.

ಗೋಧಿ ರಫ್ತಿನ ಮೇಲಿನ ನಿಷೇಧ ಸಡಿಲಗೊಳಿಸಿದ ಕೇಂದ್ರ; ಮೇ 13 ರೊಳಗೆ ನೋಂದಾಯಿಸಲಾದ ಸರಕುಗಳಿಗೆ ಅನುಮತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:May 17, 2022 | 7:31 PM

Share

ದೆಹಲಿ: ಗೋಧಿ ರಫ್ತು(wheat exports) ನಿರ್ಬಂಧಿಸುವ ತನ್ನ ಆದೇಶವನ್ನು ಮಂಗಳವಾರ ಕೇಂದ್ರ ಸರ್ಕಾರ (Central Government) ಮಂಗಳವಾರ ಸಡಿಲಗೊಳಿಸಿದೆ .” ಗೋಧಿ ರವಾನೆಗಳನ್ನು ಪರೀಕ್ಷೆಗಾಗಿ ಕಸ್ಟಮ್ಸ್‌ಗೆ ಹಸ್ತಾಂತರಿಸಲಾಗಿದೆ. ಮೇ 13 ರಂದು ಅಥವಾ ಅದಕ್ಕಿಂತ ಮೊದಲು ಅವರ ವ್ಯವಸ್ಥೆಗಳಲ್ಲಿ ನೋಂದಾಯಿಸಲಾಗಿದೆಯೇ ಎಂದು ನೋಡಲಾಗುವುದು. ಮೇ 13ರೊಳಗೆ ನೋಂದಾಯಿಸಲಾದ ಸರಕುಗಳಿಗೆ ಅನುಮತಿ ನೀಡಲಾಗುವುದು ಎಂದು ವಾಣಿಜ್ಯ ಸಚಿವಾಲಯದ (Commerce Ministry) ಹೇಳಿಕೆ ಹೇಳಿದೆ. “ಈಜಿಪ್ಟ್‌ಗೆ ಹೋಗುವ ಗೋಧಿ ರವಾನೆಗೆ ಸರ್ಕಾರ ಅನುಮತಿ ನೀಡಿದೆ. ಅದು ಈಗಾಗಲೇ ಕಾಂಡ್ಲಾ ಬಂದರಿನಲ್ಲಿ ಲೋಡ್ ಆಗುತ್ತಿದೆ. ಕಾಂಡ್ಲಾ ಬಂದರಿನಲ್ಲಿ ಗೋಧಿ ಸರಕನ್ನು ಲೋಡ್ ಮಾಡಲು ಅನುಮತಿ ನೀಡುವಂತೆ ಈಜಿಪ್ಟ್ ಸರ್ಕಾರ ಮಾಡಿದ ವಿನಂತಿಯ ಬೆನ್ನಲ್ಲೇ ಈ ಕಾರ್ಯನಡೆದಿದೆ. M/s ಮೇರಾ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈ. ಲಿಮಿಟೆಡ್, ಈಜಿಪ್ಟ್‌ಗೆ ಗೋಧಿ ರಫ್ತು ಮಾಡಲು ತೊಡಗಿರುವ ಕಂಪನಿಯು 61,500 MT ಗೋಧಿಯ ಲೋಡಿಂಗ್ ಪೂರ್ಣಗೊಳಿಸಲು ಪ್ರಾತಿನಿಧ್ಯವನ್ನು ನೀಡಿತ್ತು. ಅದರಲ್ಲಿ 44,340 MT ಗೋಧಿಯನ್ನು ಈಗಾಗಲೇ ಲೋಡ್ ಮಾಡಲಾಗಿದೆ. 17,160 MT ಮಾತ್ರ ಲೋಡ್ ಮಾಡಲು ಉಳಿದಿದೆ. ಸರ್ಕಾರವು 61,500 MT ಸಂಪೂರ್ಣ ರವಾನೆಗೆ ಅನುಮತಿ ನೀಡಲು ನಿರ್ಧರಿಸಿದ್ದು ಕಾಂಡ್ಲಾದಿಂದ ಈಜಿಪ್ಟ್‌ಗೆ ನೌಕೆ ಮೂಲಕ ಸಾಗಿಸಲು ಅನುಮತಿ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್​​ಪ್ರೆಸ್  ವರದಿ ಮಾಡಿದೆ.

ಕೇಂದ್ರವು ಶನಿವಾರದಂದು ತಕ್ಷಣವೇ ಜಾರಿಗೆ ಬರುವಂತೆ ಗೋಧಿಯ ಎಲ್ಲಾ ಸಾಗಣೆಯನ್ನು ನಿಷೇಧಿಸಿತ್ತು. ಹೆಚ್ಚಿನ ಪ್ರೊಟೀನ್ ಡುರಮ್ ಮತ್ತು ಸಾಮಾನ್ಯ ಮೃದುವಾದ ಬ್ರೆಡ್ ಪ್ರಭೇದಗಳು ಸೇರಿದಂತೆ ಎಲ್ಲಾ ಗೋಧಿಗಳ ರಫ್ತುಗಳನ್ನು “ಉಚಿತ” ದಿಂದ “ನಿಷೇಧಿತ” ವರ್ಗಕ್ಕೆ ವರ್ಗಾಯಿಸಲಾಯಿತು.

“ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು” ಮತ್ತು “ಅವರ ಸರ್ಕಾರಗಳ ಕೋರಿಕೆಯ ಮೇರೆಗೆ” ಇತರ ದೇಶಗಳಿಗೆ ಕೇಂದ್ರವು ನೀಡಿದ ಅನುಮತಿಯ ಆಧಾರದ ಮೇಲೆ ರಫ್ತು ಮಾಡಲು ಅನುಮತಿ ನೀಡಲಾಗಿದೆ. ನಿಷೇಧದ ನಂತರ, ಜಾಗತಿಕ ಮಾರುಕಟ್ಟೆಗಳು ಸೋಮವಾರ ತೆರೆದಾಗ ಅಂತರರಾಷ್ಟ್ರೀಯ ಬೆಲೆಗಳು ಬುಶೆಲ್ ಗೆ (27.21 ಕೆಜಿ) ಸುಮಾರು 6 ಪ್ರತಿಶತದಷ್ಟು ಹೆಚ್ಚಿದವು. ಸ್ಥಳೀಯವಾಗಿ ವಿವಿಧ ರಾಜ್ಯಗಳಲ್ಲಿ 4-8 ಪ್ರತಿಶತದಷ್ಟು ಬೆಲೆಗಳು ತೀವ್ರವಾಗಿ ಕುಸಿದವು. ರಾಜಸ್ಥಾನದಲ್ಲಿ ಗೋಧಿ ಬೆಲೆ ಕ್ವಿಂಟಲ್‌ಗೆ 200-250 ರೂ., ಪಂಜಾಬ್‌ನಲ್ಲಿ 100-150 ರೂ. ಮತ್ತು ಉತ್ತರ ಪ್ರದೇಶದಲ್ಲಿ ಕ್ವಿಂಟಲ್‌ಗೆ 100 ರೂ. ಆಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:29 pm, Tue, 17 May 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್