AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ರಫ್ತು ನಿಷೇಧಿಸಿದ ನಂತರ ದಾಖಲೆಯ ಏರಿಕೆ ಕಂಡ ಗೋಧಿ ಬೆಲೆ: ವರದಿ

ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ದೇಶವಾದ ಭಾರತ, ಮಾರ್ಚ್‌ನ ನಂತರ ರಫ್ತುಗಳನ್ನು ನಿಷೇಧಿಸುತ್ತಿದೆ ಎಂದು ಶನಿವಾರ ಹೇಳಿದೆ. ಕಡಿಮೆ ಉತ್ಪಾದನೆ ಮತ್ತು ತೀವ್ರವಾಗಿ ಹೆಚ್ಚಿದ ಜಾಗತಿಕ ಬೆಲೆಗಳು ಸೇರಿದಂತೆ...

ಭಾರತ ರಫ್ತು ನಿಷೇಧಿಸಿದ ನಂತರ ದಾಖಲೆಯ  ಏರಿಕೆ ಕಂಡ ಗೋಧಿ ಬೆಲೆ: ವರದಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: May 16, 2022 | 6:19 PM

Share

ಬಿಸಿಗಾಳಿಯಿಂದಾಗಿ ಉತ್ಪಾದನೆಗೆ ಹೊಡೆತ ಬಿದ್ದ ಕಾರಣ ಸರಕುಗಳ ರಫ್ತುಗಳನ್ನು(Export) ನಿಷೇಧಿಸಲು ಭಾರತ ನಿರ್ಧರಿಸಿದ ನಂತರ ಸೋಮವಾರ ಗೋಧಿ ಬೆಲೆ (Wheat price) ಹೊಸ ದಾಖಲೆಯ ಏರಿಕೆ ಕಂಡಿವೆ. ಐರೋಪ್ಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ಪ್ರತಿ ಟನ್‌ಗೆ 435 ಯುರೋಗಳಿಗೆ ($453) ಜಿಗಿಯಿತು.ಈ ಹಿಂದೆ ಜಾಗತಿಕ ರಫ್ತಿನ ಶೇಕಡ 12 ರಷ್ಟನ್ನು ಹೊಂದಿದ್ದ ಕೃಷಿ ಶಕ್ತಿ ಕೇಂದ್ರವಾದ ಉಕ್ರೇನ್‌ನ ಮೇಲೆ ರಷ್ಯಾ ಫೆಬ್ರವರಿಯಲ್ಲಿ ಆಕ್ರಮಣ ಮಾಡಿದ ನಂತರ ಪೂರೈಕೆ ಭಯದಿಂದಾಗಿ ಜಾಗತಿಕ ಗೋಧಿ ಬೆಲೆ ಗಗನಕ್ಕೇರಿದೆ ಎಂದು ಎಎಫ್​​ಪಿ ವರದಿ ಮಾಡಿದೆ. ಗೊಬ್ಬರದ ಕೊರತೆ ಮತ್ತು ಕಳಪೆ ಫಸಲುಗಳಿಂದಾಗಿ ಬೆಲೆ ಏರಿಕೆ ಆಗಿದ್ದು, ಜಾಗತಿಕವಾಗಿ ಹಣದುಬ್ಬರವನ್ನು ಉತ್ತೇಜಿಸುವುದರ ಜತೆಗೆ ಬಡ ದೇಶಗಳಲ್ಲಿ ಕ್ಷಾಮ ಮತ್ತು ಸಾಮಾಜಿಕ ಅಶಾಂತಿಯ ಭಯವನ್ನು ಹೆಚ್ಚಿಸಿದೆ. ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ದೇಶವಾದ ಭಾರತ, ಮಾರ್ಚ್‌ನ ನಂತರ ರಫ್ತುಗಳನ್ನು ನಿಷೇಧಿಸುತ್ತಿದೆ ಎಂದು ಶನಿವಾರ ಹೇಳಿದೆ. ಕಡಿಮೆ ಉತ್ಪಾದನೆ ಮತ್ತು ತೀವ್ರವಾಗಿ ಹೆಚ್ಚಿದ ಜಾಗತಿಕ ಬೆಲೆಗಳು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಚಿಂತಿಸುತ್ತಿದೆ ಎಂದು ಭಾರತ ಹೇಳಿದೆ. ಮೇ 13 ರಂದು ನೀಡಲಾದ ನಿರ್ದೇಶನದ ಮೊದಲು ಒಪ್ಪಿದ ರಫ್ತು ವ್ಯವಹಾರಗಳನ್ನು ಇನ್ನೂ ಪರಿಗಣಿಸಬಹುದು. ಆದರೆ ಭವಿಷ್ಯದ ಸಾಗಣೆಗೆ ಸರ್ಕಾರದ ಅನುಮೋದನೆ ಅಗತ್ಯವಿದೆ ಎಂದು ಅದು ಹೇಳಿದೆ.

ಆದಾಗ್ಯೂ, “ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು” ಇತರ ಸರ್ಕಾರಗಳ ವಿನಂತಿಗಳನ್ನು ಭಾರತ ಸರ್ಕಾರ ಅನುಮೋದಿಸಿದರೆ ರಫ್ತುಗಳು ನಡೆಯಬಹುದು. ಪ್ರಮುಖ ಬಫರ್ ಸ್ಟಾಕ್‌ಗಳನ್ನು ಹೊಂದಿರುವ ಭಾರತ, ಉಕ್ರೇನ್ ಯುದ್ಧದಿಂದ ಉಂಟಾದ ಕೆಲವು ಪೂರೈಕೆ ಕೊರತೆಯನ್ನು ತುಂಬಲು ಸಹಾಯ ಮಾಡಲು ಸಿದ್ಧವಾಗಿದೆ ಎಂದು ಹಿಂದೆ ಹೇಳಿತ್ತು.

ಇದನ್ನೂ ಓದಿ
Image
Wheat Export Ban: ಗೋಧಿ ದರ ಇಳಿಕೆಗೆ ಪ್ಲ್ಯಾನ್: ರಫ್ತು ನಿಷೇಧಿಸಿದ ಭಾರತ
Image
ಗೋಧಿ ಮತ್ತು ಮೋದಿ: ವಿಶ್ವದಲ್ಲೀಗ ಗೋಧಿ ಬಿಕ್ಕಟ್ಟಿನ ಆತಂಕ, ಸಹಾಯ ಮಾಡುವ ಸ್ಥಿತಿಯಲ್ಲಿದೆಯೇ ಭಾರತ
Image
12 ವರ್ಷಗಳಲ್ಲೇ ಗರಿಷ್ಠ ಬೆಲೆಗೆ ತಲುಪಿದ ಗೋಧಿ, ಹಿಟ್ಟಿನ ದರವೂ ಗಗನಕ್ಕೆ
Image
ಇನ್ಮುಂದೆ ಈಜಿಪ್ಟ್​ಗೆ ಗೋಧಿ ರಫ್ತು ಮಾಡಲಿದೆ ಭಾರತ; ಆಹಾರ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ ನಮ್ಮ ರಾಷ್ಟ್ರ

ರಫ್ತು ನಿಷೇಧವು ಏಳು ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಗುಂಪಿನಿಂದ ತೀವ್ರ ಟೀಕೆಗೆ ಗುರಿಯಾಯಿತು. ಅಂತಹ ಕ್ರಮಗಳು ಹೆಚ್ಚುತ್ತಿರುವ ಸರಕು ಬೆಲೆಗಳ “ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತವೆ” ಎಂದು ಈ ಗುಂಪು ಹೇಳಿದೆ.