Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋ ಶಾಲಾ ಆಧರಿತ ಆರ್ಥಿಕತೆ ಅಭಿವೃದ್ದಿಗೆ ಪ್ಲ್ಯಾನ್; ಭಾರತದ ಗೋ ಶಾಲೆಗಳ ಸ್ಥಿತಿಗತಿ ಪರಿಶೀಲನೆ

ಜಾನುವಾರುಗಳ ಆರ್ಥಿಕ ಸಾಮರ್ಥ್ಯ ಮತ್ತು ಗೋಶಾಲೆಯ ಆರ್ಥಿಕತೆಯನ್ನು ಬಳಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ವಿವರಿಸುವ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋ ಶಾಲಾ ಆಧರಿತ ಆರ್ಥಿಕತೆ ಅಭಿವೃದ್ದಿಗೆ ಪ್ಲ್ಯಾನ್; ಭಾರತದ ಗೋ ಶಾಲೆಗಳ ಸ್ಥಿತಿಗತಿ ಪರಿಶೀಲನೆ
ಗೋ ಶಾಲೆ
Follow us
S Chandramohan
| Updated By: preethi shettigar

Updated on: Jan 28, 2022 | 12:48 PM

ದೆಹಲಿ: ನೀತಿ ಆಯೋಗವು ದೇಶದ ಅಭಿವೃದ್ಧಿಗೆ ಅಗತ್ಯವಾದ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ನಿರ್ಧರಿಸಿದೆ. ಈಗ ನೀತಿ ಆಯೋಗದ ಕಣ್ಣು ನಮ್ಮ ದೇಶದ ಜಾನುವಾರಗಳ ಮೇಲೆ ಬಿದ್ದಿದೆ. ದೇಶದಲ್ಲಿ ಗೋ ಶಾಲಾ(Gou shala) ಆರ್ಥಿಕತೆಯನ್ನು ಬಲಪಡಿಸಲು ನೀತಿ ಆಯೋಗವು ಪ್ಲ್ಯಾನ್(Plan) ರೂಪಿಸುತ್ತಿದೆ.  ನೀತಿ ಆಯೋಗದ ಸದಸ್ಯರು ಈಗ ದೇಶದ ವಿವಿಧ ಗೋ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ. ಭಾರತದ ನೀತಿ ಆಯೋಗವು ಥಿಂಕ್ ಟ್ಯಾಂಕ್ (Think tank) ಎಂದೇ ಹೆಸರಾಗಿದೆ. ಮೊದಲಿದ್ದ ಕೇಂದ್ರ ಯೋಜನಾ ಆಯೋಗವನ್ನು ರದ್ದುಪಡಿಸಿ ಮೋದಿ ಸರ್ಕಾರ ನೀತಿ ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ. ನೀತಿ ಆಯೋಗವು ದೇಶದ ಅಭಿವೃದ್ದಿಗೆ ಬೇಕಾದ ಯೋಜನೆಗಳನ್ನು ರೂಪಿಸಿ ರಾಜ್ಯಗಳ ಸಹಕಾರದೊಂದಿಗೆ ಜಾರಿಗೊಳಿಸುತ್ತದೆ. ಈಗ ನೀತಿ ಆಯೋಗವು ಗೋ ಆಧರಿತ ಆರ್ಥಿಕತೆಯ ಬೆಳವಣಿೆಗೆಗೆ ಯೋಜನೆ ರೂಪಿಸುತ್ತಿದೆ.

ಭಾರತ ಮತ್ತು ವಿದೇಶಗಳಲ್ಲಿ ಗೋಮೂತ್ರವನ್ನು ವಾಣಿಜ್ಯ ಬಳಕೆಗೆ ಅನುಕೂಲವಾಗುವಂತೆ ಬಳಸಲು  ಗೋಶಾಲಾ (ಗೋ ಆಶ್ರಯ) ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ನೀತಿ ಆಯೋಗವು ನೀಲಿನಕಾಶೆಯನ್ನು ತಯಾರಿಸುತ್ತಿದೆ.

ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ನೇತೃತ್ವದ ಸರ್ಕಾರಿ ಅಧಿಕಾರಿಗಳ ತಂಡವು ವೃಂದಾವನ, ರಾಜಸ್ಥಾನ ಮತ್ತು ಭಾರತದ ಇತರ ಭಾಗಗಳಲ್ಲಿನ ದೊಡ್ಡ ಗೋಶಾಲೆಗಳಿಗೆ ಭೇಟಿ ನೀಡುತ್ತಿದೆ. ಅವುಗಳ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡುತ್ತಿದೆ. ಇದಾದ ಬಳಿಕ ಗೋಶಾಲಾ ಆರ್ಥಿಕತೆಗೆ ಪೂರಕವಾಗಿ ಯೋಜನೆ ರೂಪಿಸಿ ವರದಿಯನ್ನು ಸಲ್ಲಿಸಲಿದೆ.

ಜಾನುವಾರುಗಳ ಆರ್ಥಿಕ ಸಾಮರ್ಥ್ಯ ಮತ್ತು ಗೋಶಾಲೆಯ ಆರ್ಥಿಕತೆಯನ್ನು ಬಳಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ವಿವರಿಸುವ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಶಾಲೆಗಳನ್ನು ಆರ್ಥಿಕವಾಗಿ ಲಾಭದಾಯಕವಾಗಿಸುವ ಆಲೋಚನೆ ಇದೆ. ನೈಸರ್ಗಿಕ ಕೃಷಿಯತ್ತ ಗಮನಹರಿಸುವುದರೊಂದಿಗೆ, ನೈಸರ್ಗಿಕ ಕೃಷಿಯಲ್ಲಿ ಗೋಮೂತ್ರ ಮತ್ತು ಸಗಣಿ ಬಳಕೆಗೆ ಅಪಾರ ಸಾಮರ್ಥ್ಯವಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕಾರಿಯ ಪ್ರಕಾರ, ಹಾಲಿನ ಉತ್ಪಾದನೆ ಕಡಿಮೆಯಾದ ನಂತರ ಭಾರತೀಯ ಜಾನುವಾರುಗಳು ಅನುತ್ಪಾದಕ ಆಸ್ತಿಗಳಾಗುತ್ತವೆ. ಜಾನುವಾರುಗಳಿಂದ ಇತರ ಉತ್ಪನ್ನಗಳತ್ತ ಗಮನಹರಿಸುವುದರ ಮೂಲಕ ರೈತರು ಗೋಶಾಲೆಗಳಿಗೆ ಮತ್ತು ಇಡೀ ದೇಶಕ್ಕೆ ಆದಾಯ ಉತ್ಪಾದಕರಾಗಿ ಮುಂದುವರಿಯಬಹುದು ಎಂದು ಅಧಿಕಾರಿ ಹೇಳಿದ್ದಾರೆ.

ಗೊಬ್ಬರವಾಗಿ ಸಗಣಿಯ ಬಳಕೆಯನ್ನು ಹೊರತುಪಡಿಸಿ, ಗೋಮೂತ್ರವು ಔಷಧೀಯ ಮತ್ತು ಗಿಡಮೂಲಿಕೆ ಉತ್ಪನ್ನಗಳಂತಹ ವಲಯಗಳಲ್ಲಿ ವ್ಯಾಪಕವಾದ ಬೇಡಿಕೆಯನ್ನು ಹೊಂದಿದೆ. ಅದಲ್ಲದೆ, ಹಸುವಿನ ಸಗಣಿಯನ್ನು ಗೋಬರ್ ಗ್ಯಾಸ್ ಆಗಿ ಪರಿವರ್ತಿಸಬಹುದು ಅಥವಾ ಸ್ಮಶಾನಗಳಲ್ಲಿ ಬಳಸಬಹುದಾದ ಹಸುವಿನ ಸಗಣಿಯಿಂದ ಮಾಡಿದ ದಿಮ್ಮಿಗಳನ್ನು ಮಾಡಬಹುದು.

ಮಧ್ಯಪ್ರದೇಶವು ರೈತರನ್ನು ಜಾನುವಾರುಗಳನ್ನು ಸಾಕಲು ಮತ್ತು ನೈಸರ್ಗಿಕ ಕೃಷಿಯನ್ನು ಕೈಗೊಳ್ಳಲು ಪ್ರೋತ್ಸಾಹಿಸುವ ಮೂಲಕ ದೇಶದಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯವು ತನ್ನ ಜಾನುವಾರುಗಳನ್ನು ಸರಿಯಾಗಿ ನೋಡಿಕೊಳ್ಳಲು ಗೋವುಗಳ ಅಭಯಾರಣ್ಯಗಳು ಮತ್ತು ಆಶ್ರಯಗಳನ್ನು ಸ್ಥಾಪಿಸಿದೆ. ಇಂಥ ಮಾದರಿಗಳನ್ನು ಭಾರತದಾದ್ಯಂತ ಪುನರಾವರ್ತಿಸಬಹುದು.

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಕಾರ, 2019 ರಲ್ಲಿ ಭಾರತವು 19.2 ಕೋಟಿ( 192.5 ಮಿಲಿಯನ್) ಜಾನುವಾರುಗಳನ್ನು ಮತ್ತು 10.9 ಕೋಟಿ( 109.9 ಮಿಲಿಯನ್) ಎಮ್ಮೆಗಳನ್ನು ಹೊಂದಿದ್ದು, ಒಟ್ಟು ಗೋವಿನ ಸಂಖ್ಯೆಯು 30.2 ಕೋಟಿ( 302.3 ಮಿಲಿಯನ್‌) ಗೆ ತಲುಪಿದೆ. ಈ ಸಂಖ್ಯೆಯು 2021 ರಲ್ಲಿ 30.5 ಕೋಟಿ (305 ಮಿಲಿಯನ್‌) ಗಿಂತಲೂ ಹೆಚ್ಚಾಯಿತು, ಇದು ವಿಶ್ವದಲ್ಲೇ ಅತಿ ಹೆಚ್ಚು. ಜಾಗತಿಕ ಜಾನುವಾರು ಸಂಖ್ಯೆಯು 996 ಮಿಲಿಯನ್ ಆಗಿದೆ.

ಇದನ್ನೂ ಓದಿ: ಆಂಡ್ರಾಯ್ಡ್, iOS ಗೆ ಶುರುವಾಗಿದೆ ನಡುಕ: ಭಾರತೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ಕೇಂದ್ರದ ಒಲವು

ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಾಗಿರಲಿದೆ : ಸಿಎಂ ಬಸವರಾಜ ಬೊಮ್ಮಾಯಿ

ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ