AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಗಿಂತ ದೊಡ್ಡ ರಾಮ ಮಂದಿರವನ್ನು ಸೀತಾಮಾರಿಯಲ್ಲಿ ಕಟ್ಟುತ್ತೇವೆ -ಚಿರಾಗ್​ ಪಾಸ್ವಾನ್​ ಘೋಷಣೆ

ಪಾಟ್ನಾ: ಬಿಹಾರದಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ಚುನಾವಣಾ ಱಲಿಗಳಂತೂ ಆರೋಪ, ಪ್ರತ್ಯಾರೋಪಗಳಿಂದ ತುಂಬಿವೆ. ಈ ಮಧ್ಯೆ, ಇತ್ತೀಚೆಗೆ NDAಯಿಂದ ಅನಧಿಕೃತವಾಗಿ ಹೊರ ಬಂದಿರುವ ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅಯೋಧ್ಯೆಯಲ್ಲಿ ಕಟ್ಟಲು ಹೊರಟಿರುವ ರಾಮ ಮಂದಿರಕ್ಕಿಂತ ದೊಡ್ಡದಾದ ರಾಮನ ದೇಗುಲವನ್ನು ಬಿಹಾರದ ಸೀತಾಮಾರಿಯಲ್ಲಿ ಕಟ್ಟುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಬಿಹಾರದ ಮಿಥಿಲಾ ವಿಭಾಗದಲ್ಲಿರುವ ಸೀತಾಮಾರಿ ಜಿಲ್ಲೆಗೆ ಪೌರಾಣಿಕ ನಂಟಿದೆ. ಇದೇ ಸೀತಾಮಾರಿಯಲ್ಲಿ ಸೀತೆ ಹುಟ್ಟಿದ್ದು ಎಂದು ಜನ ನಂಬಿದ್ದಾರೆ. ಈಗ […]

ಅಯೋಧ್ಯೆಗಿಂತ ದೊಡ್ಡ ರಾಮ ಮಂದಿರವನ್ನು ಸೀತಾಮಾರಿಯಲ್ಲಿ ಕಟ್ಟುತ್ತೇವೆ -ಚಿರಾಗ್​ ಪಾಸ್ವಾನ್​ ಘೋಷಣೆ
KUSHAL V
|

Updated on: Oct 26, 2020 | 12:22 PM

Share

ಪಾಟ್ನಾ: ಬಿಹಾರದಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ಚುನಾವಣಾ ಱಲಿಗಳಂತೂ ಆರೋಪ, ಪ್ರತ್ಯಾರೋಪಗಳಿಂದ ತುಂಬಿವೆ. ಈ ಮಧ್ಯೆ, ಇತ್ತೀಚೆಗೆ NDAಯಿಂದ ಅನಧಿಕೃತವಾಗಿ ಹೊರ ಬಂದಿರುವ ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅಯೋಧ್ಯೆಯಲ್ಲಿ ಕಟ್ಟಲು ಹೊರಟಿರುವ ರಾಮ ಮಂದಿರಕ್ಕಿಂತ ದೊಡ್ಡದಾದ ರಾಮನ ದೇಗುಲವನ್ನು ಬಿಹಾರದ ಸೀತಾಮಾರಿಯಲ್ಲಿ ಕಟ್ಟುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಬಿಹಾರದ ಮಿಥಿಲಾ ವಿಭಾಗದಲ್ಲಿರುವ ಸೀತಾಮಾರಿ ಜಿಲ್ಲೆಗೆ ಪೌರಾಣಿಕ ನಂಟಿದೆ. ಇದೇ ಸೀತಾಮಾರಿಯಲ್ಲಿ ಸೀತೆ ಹುಟ್ಟಿದ್ದು ಎಂದು ಜನ ನಂಬಿದ್ದಾರೆ. ಈಗ ಈ ಭಾವನಾತ್ಮಕ ವಿಷಯವನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಲಾಭ ಪಡೆಯಲು ಚಿರಾಗ್ ಪಾಸ್ವಾನ್ ಹೊರಟಂತಿದೆ.

ರವಿವಾರ ಚುನಾವಣಾ ಱಲಿಯೊಂದರಲ್ಲಿ ಮಾತನಾಡಿರುವ ಪಾಸ್ವಾನ್ ಸೀತಾಮಾರಿಯಲ್ಲಿ ರಾಮಮಂದಿರವನ್ನು ಕಟ್ಟುತ್ತೇವೆ ಎಂದು ಘೋಷಿಸಿದ್ದಾರೆ. ಅಷ್ಟಕ್ಕೆ ನಿಲ್ಲದೆ, ಚಿರಾಗ್​ ಒಂದು ಹೆಜ್ಜೆ ಮುಂದೆ ಹೋಗಿ ಅಯೋಧ್ಯೆಗಿಂತ ದೊಡ್ಡದಾದ ಮಂದಿರ ನಿರ್ಮಾಣ ಮಾಡುತ್ತೇವೆ. ಆಮೇಲೆ ಅಯೋಧ್ಯೆ ಮತ್ತು ಸೀತಾಮಾರಿ ನಡುವೆ ನೇರ ರಸ್ತೆ ಸಂಪರ್ಕ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.

ಮೊದಲು NDA ಜೊತೆಗಿದ್ದ ಪಾಸ್ವಾನ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರಾಜಕೀಯ ಸಮರ ಸಾರಿದ್ದಾರೆ. ಈಗ NDA ವಿರೋಧ ಪಕ್ಷವಾದ RJD ಪಕ್ಷದ ಜೊತೆ ಕೈ ಜೋಡಿಸಿದ್ದಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ