ಇಂಡಿಯಾ ಮೈತ್ರಿಕೂಟವನ್ನು ಗೇಲಿ ಮಾಡಿದ್ದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್

|

Updated on: Sep 14, 2023 | 5:40 PM

ಪ್ರಧಾನಿಯವರ ವಾಗ್ದಾಳಿಗೆ ಪ್ರತಿಕ್ರಿಯಿಸಿದ ರಮೇಶ್, ಪ್ರಧಾನಿ ಅವರು ಉತ್ತಮವಾಗಿ ಏನು ಮಾಡುತ್ತಾರೋ ಅದನ್ನು ಮತ್ತೆ ಮಾಡುತ್ತಿದ್ದಾರೆ. ಅದೇ ಅವಮಾನ. ಅವರು ಇಂಡಿಯಾ ಮೈತ್ರಿ ಕೂಟದ ಪಕ್ಷಗಳನ್ನು ಘಮಾಂಡಿಯಾ ಪಕ್ಷಗಳು ಎಂದು ನಿಂದಿಸುವುದನ್ನು ಪುನರಾವರ್ತಿಸಿದರು. ನೋಡಿ, ಯಾರು ಮಾತನಾಡುತ್ತಿದ್ದಾರೆ! ಪ್ರತಿಪಕ್ಷಗಳನ್ನು ನಿಂದಿಸಲು ಸರ್ಕಾರಿ ಕಾರ್ಯಕ್ರಮದ ಸಂದರ್ಭವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ಅವರ ಮಟ್ಟಕ್ಕೆ ಇಳಿಯುವುದಾದರೆ ಅವರದ್ದು GA-NDA ಒಕ್ಕೂಟ, ಗೌತಮ್ ಅದಾನಿ ಅವರ ಎನ್‌ಡಿಎ ಎಂದು ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟವನ್ನು ಗೇಲಿ ಮಾಡಿದ್ದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್
ಜೈರಾಮ್ ರಮೇಶ್
Follow us on

ದೆಹಲಿ ಸೆಪ್ಟೆಂಬರ್ 14: ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ‘ಘಮಾಂಡಿಯಾ’ ಗೇಲಿಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh)ತಿರುಗೇಟು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿರುವ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಐಎನ್‌ಡಿಐಎ (INDIA) ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿ, ‘ಘಮಾಂಡಿಯಾ’ (ಅಹಂಕಾರಿ) ಮೈತ್ರಿ ಎಂದು ಕರೆದಿದ್ದರು. ಎಲ್ಲರೂ ಜಾಗೃತರಾಗಿರಬೇಕು. ‘ಸನಾತನ’ವನ್ನು ತೆಗೆದುಹಾಕುವ ಮೂಲಕ, ಈ ಜನರು ನಮ್ಮನ್ನು ಸಾವಿರಾರು ವರ್ಷಗಳ ಹಿಂದೆ ತಳ್ಳಲು ಬಯಸುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಧಾನಿಯವರ ವಾಗ್ದಾಳಿಗೆ ಪ್ರತಿಕ್ರಿಯಿಸಿದ ರಮೇಶ್, ಪ್ರಧಾನಿ ಅವರು ಉತ್ತಮವಾಗಿ ಏನು ಮಾಡುತ್ತಾರೋ ಅದನ್ನು ಮತ್ತೆ ಮಾಡುತ್ತಿದ್ದಾರೆ. ಅದೇ ಅವಮಾನ. ಅವರು ಇಂಡಿಯಾ ಮೈತ್ರಿ ಕೂಟದ ಪಕ್ಷಗಳನ್ನು ಘಮಾಂಡಿಯಾ ಪಕ್ಷಗಳು ಎಂದು ನಿಂದಿಸುವುದನ್ನು ಪುನರಾವರ್ತಿಸಿದರು. ನೋಡಿ, ಯಾರು ಮಾತನಾಡುತ್ತಿದ್ದಾರೆ! ಪ್ರತಿಪಕ್ಷಗಳನ್ನು ನಿಂದಿಸಲು ಸರ್ಕಾರಿ ಕಾರ್ಯಕ್ರಮದ ಸಂದರ್ಭವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ಅವರ ಮಟ್ಟಕ್ಕೆ ಇಳಿಯುವುದಾದರೆ ಅವರದ್ದು GA-NDA ಒಕ್ಕೂಟ, ಗೌತಮ್ ಅದಾನಿ ಅವರ ಎನ್‌ಡಿಎ ಎಂದು ಹೇಳಿದ್ದಾರೆ.


ಇಂಡಿಯಾ ಮೈತ್ರಿಕೂಟ ಸದಸ್ಯ ಡಿಎಂಕೆಯ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮ’ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಬಂದಿದೆ.

ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ತೆಗೆದುಹಾಕಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನವನ್ನು ನಿರ್ಮೂಲನೆ ಮಾಡಬೇಕು. ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು  ಎಂದು ತಮಿಳುನಾಡು ಸಚಿವರು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿತ್ತು.

ಉದಯನಿಧಿ ಹೇಳಿಕೆಯನ್ನು ಅವರ  ತಂದೆ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ. ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ದೈನಂದಿನ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೌನವಾಗಿದ್ದರೂ, ಅವರ ಕ್ಯಾಬಿನೆಟ್ ಸುಳ್ಳು ನಿರೂಪಣೆಗಳನ್ನು ಹರಡುವ ಮೂಲಕ ಮತ್ತು ಕೆಲವು ಮಾಧ್ಯಮಗಳ ಬೆಂಬಲದೊಂದಿಗೆ ಅದನ್ನು ಉತ್ತೇಜಿಸುವ ಮೂಲಕ ಸನಾತನಧರ್ಮದ ಮೇಲೆ ಗಮನ ಕೇಂದ್ರೀಕರಿಸುತ್ತದೆ” ಎಂದು ಸ್ಟಾಲಿನ್ ಬುಧವಾರ ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಸನಾತನ ಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ: ನರೇಂದ್ರ ಮೋದಿ

ನಮ್ಮ ಡಿಎಂಕೆ ನಾಯಕರು ಮತ್ತು ಕಾರ್ಯಕರ್ತರು ಇಂತಹ ದಿಕ್ಕು ತಪ್ಪಿಸುವ ತಂತ್ರಗಳಿಗೆ ಪ್ರತಿಕ್ರಿಯಿಸಬೇಡಿ. ಮಣಿಪುರ ಹಿಂಸಾಚಾರ, ಅದಾನಿ ಹಿಂಡೆನ್‌ಬರ್ಗ್, ಸಿಎಗ್ರಿಪೋರ್ಟ್‌ನಲ್ಲಿ ಹಿಡಿದಿಟ್ಟ 7.50 ಲಕ್ಷ ಕೋಟಿ ರೂಪಾಯಿಗಳು ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಬಿಜೆಪಿಗೆ ಪ್ರಶ್ನೆಗಳನ್ನು ಹಾಕುವುದನ್ನು ಮುಂದುವರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಬಿಜೆಪಿಯ 9 ವರ್ಷಗಳ ವೈಫಲ್ಯಗಳ ಬಗ್ಗೆ ನಾವು ಮತ್ತು ಇಂಡಿಯಾ ಪ್ರಶ್ನೆಗಳನ್ನು ಹಾಕುತ್ತಲೇ ಇರುತ್ತೇವೆ ಎಂದು ಡಿಎಂಕೆ ಮುಖ್ಯಸ್ಥರು ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ