Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಚುನಾವಣೆಗೂ ಮುನ್ನ ಆಪ್​ಗೆ ದೊಡ್ಡ ಆಘಾತ; 8 ಶಾಸಕರು, ಕೌನ್ಸಿಲರ್​ಗಳು ಬಿಜೆಪಿಗೆ ಸೇರ್ಪಡೆ

ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಆದರೆ, ಚುನಾವಣೆಗೂ ಮುನ್ನವೇ ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್ ಉಂಟಾಗಿದೆ. ದೆಹಲಿ ವಿಧಾನಸಭಾ ಚುನಾವಣೆ ಎಎಪಿಗೆ ಭಾರಿ ಹೊಡೆತ ಬಿದ್ದಿದ್ದು, 8 ಶಾಸಕರು, ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ರಾಜೀನಾಮೆ ನೀಡುವಾಗ ಶಾಸಕರು ಭ್ರಷ್ಟಾಚಾರ ಆರೋಪ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸಿದ್ಧಾಂತದ ಬಗ್ಗೆ ನಂಬಿಕೆಯಿಲ್ಲ ಎಂಬ ಮುಂತಾದ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ಬಾರಿ 8 ಶಾಸಕರಿಗೆ ಆಪ್ ಚುನಾವಣಾ ಟಿಕೆಟ್ ನಿರಾಕರಿಸಿತ್ತು.

ದೆಹಲಿ ಚುನಾವಣೆಗೂ ಮುನ್ನ ಆಪ್​ಗೆ ದೊಡ್ಡ ಆಘಾತ; 8 ಶಾಸಕರು, ಕೌನ್ಸಿಲರ್​ಗಳು ಬಿಜೆಪಿಗೆ ಸೇರ್ಪಡೆ
Delhi Bjp
Follow us
ಸುಷ್ಮಾ ಚಕ್ರೆ
|

Updated on: Feb 01, 2025 | 7:26 PM

ನವದೆಹಲಿ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಕೇವಲ 4 ದಿನಗಳು ಬಾಕಿ ಇವೆ. ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ, ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ ತೊರೆದಿರುವ ಆಪ್​ನ ಎಂಟು ಶಾಸಕರು ಮತ್ತು ಪಕ್ಷದ ಕೆಲವು ಕೌನ್ಸಿಲರ್‌ಗಳು ಬಿಜೆಪಿಗೆ ಸೇರಿದ್ದಾರೆ. ಫೆಬ್ರವರಿ 5ರ ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ 4 ದಿನಗಳು ಬಾಕಿ ಇರುವಾಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ್ದರಿಂದ ಆಮ್ ಆದ್ಮಿ ಪಕ್ಷ (ಎಎಪಿ) ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.

ಪಲಂನಿಂದ 2 ಬಾರಿ ಶಾಸಕರಾಗಿರುವ ಭಾವನಾ ಗೌರ್, ಕಸ್ತೂರ್ಬಾ ನಗರದಿಂದ 3 ಬಾರಿ ಶಾಸಕರಾಗಿರುವ ಮದನ್ ಲಾಲ್, 3 ಬಾರಿ ಶಾಸಕರಾಗಿರುವ ಗಿರೀಶ್ ಸೋನಿ, 2 ಬಾರಿ ಶಾಸಕರಾಗಿರುವ ರಾಜೇಶ್ ರಿಷಿ, ನರೇಶ್ ಯಾದವ್, ಪವನ್ ಶರ್ಮಾ, ಬಿಎಸ್ ಜೂನ್, ರೋಹಿತ್ ಮೆಹ್ರೋಲಿಯಾ ಮತ್ತು ಮಾಜಿ ಶಾಸಕ ಬಿಜೇಂದ್ರ ಗಾರ್ಗ್ ಇಂದು ಬಿಜೆಪಿ ಸೇರಿದ 8 ಶಾಸಕರು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಆಗಿದ್ದ ಅಜಯ್ ರೈ ಕೂಡ ಬಿಜೆಪಿಗೆ ಸೇರಿದ್ದಾರೆ.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಡಿಕೆ ಶಿವಕುಮಾರ್

ಶುಕ್ರವಾರ ರಾಜೀನಾಮೆ ನೀಡಿದ ಶಾಸಕರು, ಭ್ರಷ್ಟಾಚಾರ ಆರೋಪ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ಸಿದ್ಧಾಂತದಿಂದ ವಿಮುಖತೆ ಮುಂತಾದ ಕಾರಣಗಳನ್ನು ನೀಡಿದ್ದಾರೆ. ಈ ಬಾರಿ 8 ಶಾಸಕರಿಗೂ ಎಎಪಿ ಚುನಾವಣಾ ಟಿಕೆಟ್ ನಿರಾಕರಿಸಿದೆ. ಹೀಗಾಗಿ, ಈ ಶಾಸಕರು ಅಸಮಾಧಾನಗೊಂಡು ಬಿಜೆಪಿ ಸೇರಿದ್ದಾರೆ.

ಎಎಪಿಗೆ ರಾಜೀನಾಮೆ ನೀಡಿದ ನಂತರ, ಅವರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾ ಸ್ಪೀಕರ್‌ಗೆ ಕಳುಹಿಸಿದ್ದಾರೆ ಮತ್ತು ಸದನದ ಸದಸ್ಯತ್ವವನ್ನು ತ್ಯಜಿಸಿದ್ದಾರೆ. 70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶಗಳು ಪ್ರಕಟವಾಗಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದಿಗಂತ್ ಫೋನ್ ಬಂದಾಗ ಸುಜಾತಾಗೆ ಏನು ಮಾತಾಡುವುದೆಂದು ಗೊತ್ತಾಗಿಲ್ಲ!
ದಿಗಂತ್ ಫೋನ್ ಬಂದಾಗ ಸುಜಾತಾಗೆ ಏನು ಮಾತಾಡುವುದೆಂದು ಗೊತ್ತಾಗಿಲ್ಲ!
ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ
ಪುಂಡ ವಿದ್ಯಾರ್ಥಿಗಳ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ಪುಂಡ ವಿದ್ಯಾರ್ಥಿಗಳ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ಪಕ್ಷದ ನಾಯಕರು ಮೂಲತಃ ಕಾರ್ಯಕರ್ತರು ಅಂತ ಮರೆಯಬಾರದು: ರವಿ
ಪಕ್ಷದ ನಾಯಕರು ಮೂಲತಃ ಕಾರ್ಯಕರ್ತರು ಅಂತ ಮರೆಯಬಾರದು: ರವಿ