ದೆಹಲಿ-ಎನ್‌ಸಿಆರ್‌ನಲ್ಲಿ 2 ದಿನಗಳಲ್ಲಿ ಇಂದು ಎರಡನೇ ಬಾರಿ ಭೂಕಂಪ

ದೆಹಲಿ-ಎನ್‌ಸಿಆರ್‌ನಲ್ಲಿ ಎರಡು ದಿನಗಳಲ್ಲಿ ಎರಡನೇ ಬಾರಿಗೆ ಭೂಕಂಪನವಾಗಿದೆ. ಹರಿಯಾಣದಲ್ಲಿ ಕೂಡ ಭೂಮಿ ಅದುರಿದೆ. ಇಂದು (ಶುಕ್ರವಾರ) ಸಂಜೆ 7.49ಕ್ಕೆ 3.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ನೆರೆಯ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭೂಕಂಪನ ಉಂಟಾಗಿದೆ. ಶುಕ್ರವಾರ ದೆಹಲಿ-ಎನ್‌ಸಿಆರ್‌ನಲ್ಲಿ ಸತತ ಎರಡನೇ ದಿನ ಭೂಕಂಪನದ ಅನುಭವವಾಯಿತು, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಮತ್ತೆ ಹರಿಯಾಣದ ಜಜ್ಜರ್‌ನಲ್ಲಿ ಭೂಕಂಪ ಉಂಟಾಗಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ 2 ದಿನಗಳಲ್ಲಿ ಇಂದು ಎರಡನೇ ಬಾರಿ ಭೂಕಂಪ
Earthquake

Updated on: Jul 11, 2025 | 8:39 PM

ನವದೆಹಲಿ, ಜುಲೈ 11: ದೆಹಲಿ-ಎನ್‌ಸಿಆರ್‌ನಲ್ಲಿ ಇಂದು (ಶುಕ್ರವಾರ) ಸತತ ಎರಡನೇ ಬಾರಿ ಭೂಕಂಪನ ಸಂಭವಿಸಿದ್ದು, ಜಜ್ಜರ್‌ನಲ್ಲಿ ಮತ್ತೆ ಭೂಕಂಪನ (Delhi Earthquake) ಸಂಭವಿಸಿದೆ. ಇಂದು ಸಂಜೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಭೂಕಂಪನ ಸಂಭವಿಸಿದ್ದು, ಹರಿಯಾಣದ ಜಜ್ಜರ್‌ನಲ್ಲಿ ಸತತ ಎರಡನೇ ದಿನವೂ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಇಂದು ಸಂಜೆ 7.49ಕ್ಕೆ ಹರಿಯಾಣದ ಜಜ್ಜರ್‌ನಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಉಂಟಾಗಿದೆ. ಜಜ್ಜರ್ ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ.

ಇದಕ್ಕೂ ಒಂದು ದಿನದ ಮೊದಲು ಅಂದರೆ ಗುರುವಾರ ಬೆಳಿಗ್ಗೆ 9.04ಕ್ಕೆ ಅದೇ ಪ್ರದೇಶದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ಭೂಕಂಪವು ಜಜ್ಜರ್‌ನಲ್ಲಿ ಹುಟ್ಟಿಕೊಂಡಿತ್ತು ಮತ್ತು ಕೆಲವು ಸೆಕೆಂಡುಗಳ ಕಾಲ ಭೂಕಂಪನ ಉಂಟಾಗಿತ್ತು. ಇದು ನಿವಾಸಿಗಳಲ್ಲಿ ಭೀತಿಯನ್ನುಂಟುಮಾಡಿದೆ. ಈ ಭೂಕಂಪ ಕೆಲವು ದಿನಗಳವರೆಗೆ ಮುಂದುವರಿಯಬಹುದು.

ಇದನ್ನೂ ಓದಿ: Delhi Earthquake: ಉತ್ತರ ಪ್ರದೇಶ, ದೆಹಲಿ ಮತ್ತು ಹರ್ಯಾಣದಲ್ಲಿ 4.4 ತೀವ್ರತೆಯ ಭೂಕಂಪ

ಸಾಮಾನ್ಯವಾಗಿ, ಇವು ಮೂಲ ಕಂಪನಕ್ಕಿಂತ ಕಡಿಮೆ ತೀವ್ರತೆಯನ್ನು ಹೊಂದಿರುತ್ತವೆ. ತಜ್ಞರು ಇದನ್ನು ಸಕಾರಾತ್ಮಕ ಚಿಹ್ನೆ ಎಂದು ಪರಿಗಣಿಸುತ್ತಾರೆ. ಏಕೆಂದರೆ ಇದು ನಿರ್ಮಿತ ಟೆಕ್ಟೋನಿಕ್ ಶಕ್ತಿಯ ಕ್ರಮೇಣ ಬಿಡುಗಡೆಯನ್ನು ಸೂಚಿಸುತ್ತದೆ. ಇದು ದೊಡ್ಡ ಘಟನೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.


ಜಜ್ಜರ್‌ನ ಈಶಾನ್ಯಕ್ಕೆ ಮೂರು ಕಿಲೋಮೀಟರ್ ಮತ್ತು ದೆಹಲಿಯಿಂದ ಪಶ್ಚಿಮಕ್ಕೆ 51 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರವಿತ್ತು. ಜಜ್ಜರ್ ಜೊತೆಗೆ, ನೆರೆಯ ರೋಹ್ಟಕ್ ಮತ್ತು ಗುರುಗ್ರಾಮದ ಜಿಲ್ಲೆಗಳು, ಪಾಣಿಪತ್, ಹಿಸಾರ್ ಮತ್ತು ಮೀರತ್‌ಗಳಲ್ಲಿ ಭೂಕಂಪನದ ಅನುಭವವಾಗಿದೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:37 pm, Fri, 11 July 25