AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್​ ತಪಾಸಣೆಗೆ ನಿರ್ದಿಷ್ಟ ವಿಧಾನ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ; 90 ನಿಮಿಷದಲ್ಲಿ ವರದಿ ಪಡೆಯಬಹುದು !

ಈ ಹಿಂದೆ ಕೂಡ ಕೊರೊನಾದ ನೈಜ ಸಮಯದ ಪಿಸಿಆರ್​ ಆಧಾರಿತ ರೋಗ ಪತ್ತೆಗಾಗಿ ಐಸಿಎಂಆರ್​ನಿಂದ ಅನುಮೋದನೆ ಪಡೆದ ಮೊದಲ ಸಂಸ್ಥೆ ಐಐಟಿ. ಕೊವಿಡ್​ 19 ಪತ್ತೆಗಾಗಿ ಇದು ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನ ಕಡಿಮೆ ವೆಚ್ಚದ್ದಾಗಿದೆ.

ಒಮಿಕ್ರಾನ್​ ತಪಾಸಣೆಗೆ ನಿರ್ದಿಷ್ಟ ವಿಧಾನ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ; 90 ನಿಮಿಷದಲ್ಲಿ ವರದಿ ಪಡೆಯಬಹುದು !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Dec 14, 2021 | 9:08 AM

Share

ವಿಶ್ವದೆಲ್ಲೆಡೆ ಒಮಿಕ್ರಾನ್​ ರೂಪಾಂತರ ವೈರಸ್ ಆತಂಕ ಹೆಚ್ಚುತ್ತಿದೆ. ಹೀಗಿರುವಾಗ ಅದರ ತಪಾಸಣೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸರಳಗೊಳಿಸಿದೆ. ದೆಹಲಿ ಐಐಟಿಯ ಸಂಶೋಧಕರು ಇದೀಗ COVID-19 ನ ಒಮಿಕ್ರಾನ್​ ರೋಪಾಂತರಿ ಸೋಂಕನ್ನು ಪತ್ತೆಹಚ್ಚಲು ಆರ್​ಟಿ-ಪಿಸಿಆರ್​ ಆಧಾರಿತ ಪರೀಕ್ಷಾ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಕೇವಲ 90 ನಿಮಿಷಗಳಲ್ಲಿ ವರದಿ ಪಡೆಯಬಹುದಾದ ತಪಾಸಣೆ ಇದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವಿಶ್ವದಾದ್ಯಂತ ಎಲ್ಲಿಯೂ ಒಮಿಕ್ರಾನ್​ ಪತ್ತೆಗೆ ನಿರ್ದಿಷ್ಟ ತಪಾಸಣೆಯಿಲ್ಲ. ಕೊವಿಡ್ 19 ಪಾಸಿಟಿವ್​ ಬಂದವರ ಮಾದರಿಯನ್ನು ಜನರೇಶನ್​ ಸಿಕ್ವೆನ್ಸಿಂಗ್​ ಆಧಾರಿತ ವಿಧಾನಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬರಲು ಮೂರು ದಿನಗಳಾದರೂ ಬೇಕಾಗಿದೆ. 

ಸದ್ಯ ದೆಹಲಿ ಐಐಟಿಯ ಕುಸುಮಾ ಸ್ಕೂಲ್ ಆಫ್​ ಬಯಲಾಜಿಕಲ್​ ಸೈನ್ಸಸ್​ ಅಭಿವೃದ್ಧಿಪಡಿಸಿದ ಕ್ಷಿಪ್ರ ಪರೀಕ್ಷಾ ಮಾದರಿಯ ಬಳಕೆಗಾಗಿ ಇಂಡಿಯನ್ ಪೇಟೆಂಟ್​ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಮತ್ತು ಒಂದಷ್ಟು ಉದ್ಯಮ ಪಾಲುದಾರರೊಟ್ಟಿಗೆ ಮಾತುಕತೆಯನ್ನೂ ನಡೆಸುತ್ತಿದೆ. ಒಮಿಕ್ರಾನ್​ ತಳಿಯಲ್ಲಿರುವ ನಿರ್ಧಿಷ್ಟ ರೂಪಾಂತರಗಳನ್ನು ಪತ್ತೆ ಹಚ್ಚುವ ಮತ್ತು ಕೊವಿಡ್​ 19 ಸೋಂಕಿತ ಇತರ ತಳಿಗಳಲ್ಲಿ (ಈಗಾಗಲೇ ಹರಡುತ್ತಿರುವ)ಇಲ್ಲದಿರುವ ರೂಪಾಂತರಗಳನ್ನು ಪತ್ತೆಮಾಡುವುದರ ಮೇಲೆ ಪ್ರಸ್ತುತ ಅಭಿವೃದ್ಧಿಪಡಿಸಿದ ಪರೀಕ್ಷೆ ಆಧಾರಿತವಾಗಿದೆ ಎಂದು ಐಐಟಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಕೂಡ ಕೊರೊನಾದ ನೈಜ ಸಮಯದ ಪಿಸಿಆರ್​ ಆಧಾರಿತ ರೋಗ ಪತ್ತೆಗಾಗಿ ಐಸಿಎಂಆರ್​ನಿಂದ ಅನುಮೋದನೆ ಪಡೆದ ಮೊದಲ ಸಂಸ್ಥೆ ಐಐಟಿ. ಕೊವಿಡ್​ 19 ಪತ್ತೆಗಾಗಿ ಇದು ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನ ಕಡಿಮೆ ವೆಚ್ಚದ್ದಾಗಿದ್ದು, ಜನರಿಗೆ ಕೈಗೆಟುವಂತೆ ಇದೆ.  ಐಸಿಎಂಆರ್​ನಿಂದ ಅನುಮೋದನೆ ಪಡೆದ ನಂತರ ಕೊವಿಡ್​ 19 ಟೆಸ್ಟ್ ಕಿಟ್​ಗಳು ಮಾರುಕಟ್ಟೆಯಲ್ಲಿ ಚಾಲನೆಗೆ ಬಂದವು.  ಇದೀಗ ಒಮಿಕ್ರಾನ್​ ಪತ್ತೆಗಾಗಿಯೂ ನಿರ್ದಿಷ್ಟ ತಪಾಸಣಾ ವಿಧಾನವನ್ನು ಅದು ಅಭಿವೃದ್ಧಿಪಡಿಸಿದೆ.

ದೇಶದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ಕೂಡ ಮಹಾರಾಷ್ಟ್ರದಲ್ಲಿ ಎರಡು ಹೊಸದಾದ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಅದರಲ್ಲಿ 20 ಪ್ರಕರಣಗಳು ಮಹಾರಾಷ್ಟ್ರದ್ದೇ ಆಗಿವೆ. ಹೀಗೆ ಒಮಿಕ್ರಾನ್​ ಹೆಚ್ಚುತ್ತಿರುವಾಗ ನಿಧಾನಗತಿಯ ತಪಾಸಣೆಯಿಂದ ತೊಂದರೆಯಾಗುವುದೇ ಹೆಚ್ಚು. ಹೀಗಾಗಿ ದೆಹಲಿ ಐಐಟಿ ಈ ವಿಧಾನ ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: ಟೇಸ್ಟ್​ ಆಫ್​ ಇಂಡಿಯಾ ರೆಸ್ಟೋರೆಂಟ್​​ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್​ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ

Published On - 9:02 am, Tue, 14 December 21

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ