AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ

ಉದ್ಯೋಗದ ಹೆಸರಿನಲ್ಲಿ ನಡೆಯುವ ವಂಚನೆಗಳು ಕೇವಲ ಸಾಧಾರಣ ಜನರಿಗಷ್ಟೇ ಅಲ್ಲ, ದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ಓದಿದ ಪದವೀಧರರಿಗೂ ತಪ್ಪಿದ್ದಲ್ಲ ಎಂಬುದಕ್ಕೆ ಈ ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ದೇಶದ ಪ್ರತಿಷ್ಠಿತ ಐಐಎಂ (IIM) ಸಂಸ್ಥೆಯೊಂದರ ವಿದ್ಯಾರ್ಥಿನಿಯೇ ದೆಹಲಿಯಲ್ಲಿ ಉದ್ಯೋಗದ ಹೆಸರಿನಲ್ಲಿ ವಂಚನೆಗೊಳಗಾಗಿ, ಮಾನಸಿಕ ಹಾಗೂ ಆರ್ಥಿಕವಾಗಿ ನೊಂದ ಕಥೆ ಇಲ್ಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಬೋಧ್ ಗಯಾದ ಎಂಬಿಎ ಪದವೀಧರೆಯಾದ ಸಾನ್ಯಾ, ತನಗೆ ಸಿಕ್ಕ ಉದ್ಯೋಗದ ಆಫರ್‌ನಿಂದಾಗಿ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ
ಸಾಂದರ್ಭಿಕ ಚಿತ್ರImage Credit source: Google Gemini
ನಯನಾ ರಾಜೀವ್
|

Updated on: May 21, 2026 | 7:50 AM

Share

ನವದೆಹಲಿ, ಮೇ 21: ಕೆಲಸ(Job) ಸಿಕ್ಕಿದ ಖುಷಿಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೆಹಲಿಗೆ ಹೋದ ಯುವತಿಗೆ ಕಾದಿತ್ತು ನಿರಾಸೆ, ಸೋಮವಾರ ಬೆಳಗ್ಗೆ ಬೇಗ ಆಫೀಸ್ ಇರುವ ಜಾಗಕ್ಕೆ ಹೋದರೆ ಆ ಹೆಸರಿನ ಕಂಪನಿಯೇ ಅಲ್ಲಿರದಿರುವುದನ್ನು ಕಂಡು ಬೇಸರವಾಗಿತ್ತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಬೋಧ್ ಗಯಾದ ಎಂಬಿಎ ಪದವೀಧರೆಯಾದ ಸಾನ್ಯಾ, ತನಗೆ ಸಿಕ್ಕ ಉದ್ಯೋಗದ ಆಫರ್‌ನಿಂದಾಗಿ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಪಿಐಬಿ ವಿಮಾ ಬ್ರೋಕರ್ಸ್’ (PIB Insurance Brokers) ಕಂಪನಿಯಿಂದ ಅಧಿಕೃತ ಆಫರ್ ಲೆಟರ್ ಮತ್ತು ಕೆಲಸಕ್ಕೆ ಸೇರುವ ದಿನಾಂಕವನ್ನು ಪಡೆದ ನಂತರವೇ ಸಾನ್ಯಾ ಅವರು ದೆಹಲಿಗೆ ತೆರಳಿದ್ದರು. ತನ್ನ ಕೆಲಸ ಸುರಕ್ಷಿತವಾಗಿದೆ ಎಂದು ನಂಬಿ, ಹೊಸ ನಗರಕ್ಕೆ ಒಂಟಿಯಾಗಿ ಬಂದ ಅವರು ಸ್ಥಳಾಂತರ ಮತ್ತು ವಸತಿಗಾಗಿ ಸುಮಾರು 75,000 ರೂಪಾಯಿಗಳನ್ನು ಖರ್ಚು ಮಾಡಿದ್ದರು.

ವಿಳಾಸಕ್ಕೆ ಹೋದರೆ ಕಂಪನಿಯೇ ಇಲ್ಲ! ಮೇ 4 ರಂದು ಕಂಪನಿ ಒದಗಿಸಿದ್ದ ಕಚೇರಿ ವಿಳಾಸಕ್ಕೆ ಸನ್ಯಾ ತಲುಪಿದಾಗ ಅವರಿಗೆ ದೊಡ್ಡ ಆಘಾತ ಕಾದಿತ್ತು. ಆ ಜಾಗದಲ್ಲಿ ಯಾವುದೇ ಕಚೇರಿ ಇರಲಿಲ್ಲ, ಸುಮಾರು ಎರಡು ಗಂಟೆಗಳ ಕಾಲ ಕಚೇರಿಯ ಹೊರಗೆ ಕಾಯುತ್ತಾ ಕಂಪನಿ ಪ್ರತಿನಿಧಿಗಳಿಗೆ ಪದೇ ಪದೇ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ, ಆ ಕಚೇರಿ ಜಾಗದ ಗುತ್ತಿಗೆ (Lease) ಎಂದೋ ಮುಗಿದುಹೋಗಿದೆ ಎಂಬ ಕಹಿ ಸತ್ಯ ಅವರಿಗೆ ತಿಳಿಯಿತು. ಆದರೂ ಕಂಪನಿಯು ಆನ್‌ಬೋರ್ಡಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುಳ್ಳು ಭರವಸೆ ನೀಡುತ್ತಾ, ಸೇರ್ಪಡೆ ಪ್ರಕ್ರಿಯೆಯನ್ನು ವಾರಗಟ್ಟಲೆ ಮುಂದೂಡುತ್ತಾ ಬಂತು. ಅಂತಿಮವಾಗಿ ಜುಲೈ ವರೆಗೆ ಯಾವುದೇ ಕೆಲಸ ಇರುವುದಿಲ್ಲ ಎಂದು ಕಂಪನಿ ಕೈತೊಳೆದುಕೊಂಡಿತು.

ಕರೆ ಬ್ಲಾಕ್ ಮಾಡಿದ ಸಿಇಒ, ನೆರವಾದ ಐಐಎಂ ಕಮಿಟಿ ಈ ವೇಳೆಗೆ ದೆಹಲಿಯ ಜೀವನ ವೆಚ್ಚ ಹಾಗೂ ಸ್ಥಳಾಂತರಕ್ಕಾಗಿ ಸಾನ್ಯಾ ತಮ್ಮ ಉಳಿತಾಯದ ಬಹುಭಾಗವನ್ನು ಕಳೆದುಕೊಂಡಿದ್ದರು. ತಾವು ಮಾಡಿದ ವೆಚ್ಚದ ಮರುಪಾವತಿಯನ್ನು (Refund) ಕೇಳಿದಾಗ, ಕಂಪನಿಯ ಸಿಇಒ ಸನ್ಯಾ ಅವರ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರು. ಅಷ್ಟೇ ಅಲ್ಲದೆ, ಅವರ ಫೋನ್ ನಂಬರ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್ ಮಾಡಿದ್ದರು.

ಮತ್ತಷ್ಟು ಓದಿ: ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್

ತನ್ನ ವೃತ್ತಿಜೀವನದ ಆರಂಭದಲ್ಲೇ ಇಂತಹ ಭೀಕರ ಅನುಭವದಿಂದ ಬಳಲಿದ್ದ ಅವರಿಗೆ, ಕೊನೆಗೂ ಅವರು ಓದಿದ ಐಐಎಂ ಬೋಧ್ ಗಯಾದ ಉದ್ಯೋಗ ನಿಯೋಜನೆ ಸಮಿತಿಯು (Placement Committee) ಕ್ಯಾಂಪಸ್ ಸೆಲೆಕ್ಷನ್ ಮೂಲಕ ಮತ್ತೊಂದು ಉತ್ತಮ ಉದ್ಯೋಗದ ಅವಕಾಶವನ್ನು ಪಡೆಯಲು ಸಹಾಯ ಮಾಡಿತು.

ಯುವತಿ ತಮ್ಮ ಈ ಕಹಿ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ (LinkedIn) ಹಂಚಿಕೊಂಡ ತಕ್ಷಣ, ಆ ಪೋಸ್ಟ್ ವೈರಲ್ ಆಗಿ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಸ್ಟಾರ್ಟ್‌ಅಪ್‌ಗಳ ಬೇಜವಾಬ್ದಾರಿ ನೇಮಕಾತಿ ಮತ್ತು ಉದ್ಯೋಗಕ್ಕಾಗಿ ಹೊಸ ನಗರಗಳಿಗೆ ಸ್ಥಳಾಂತರಗೊಳ್ಳುವಾಗ ಯುವ ವೃತ್ತಿಪರರು ಎದುರಿಸುವ ಅಪಾಯಗಳ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ನನಗೂ ಹೀಗೆಯೇ ಉದ್ಯೋಗದ ವಿಷಯದಲ್ಲಿ ಹೆಚ್‌ಆರ್ (HR) ತಿಂಗಳುಗಟ್ಟಲೆ ಕಾಯಿಸಿ ಮೋಸ ಮಾಡಿದ್ದರು ಎಂದು ಮತ್ತೊಬ್ಬ ಉದ್ಯೋಗಾಕಾಂಕ್ಷಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More