AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ

ಗಾಯಕ ಮತ್ತು ಪಂಜಾಬಿ ನಟ ದಿಲ್ಜಿತ್ ದೊಸಾಂಜ್ ರೈತರ ನೆರವಿಗೆ ಮುಂದಾಗಿದ್ದಾರೆ. ದಿಲ್ಜಿತ್ ದೊಸಾಂಜ್ ರೈತರಿಗೆ ಬೆಚ್ಚನೆಯ ಉಡುಪುಗಳನ್ನು ಖರೀದಿಸಲೆಂದು 1 ಕೋಟಿ ರೂಪಾಯಿ ಹಣವನ್ನು ಮರುಯೋಚಿಸದೆ ದಾನ ಮಾಡಿದ್ದಾರೆ ಎಂದು ಪಂಜಾಬಿ ಗಾಯಕ ಸಿಂಗ್ಗಾ ತಿಳಿಸಿದ್ದಾರೆ.

Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ
ನಟ,ಗಾಯಕ ದಿಲ್ಜಿತ್ ದೊಸಾಂಜ್ (ಸಾಂಕೇತಿಕ ಚಿತ್ರ)
guruganesh bhat
| Edited By: |

Updated on: Dec 06, 2020 | 2:50 PM

Share

ದೆಹಲಿ: ಬಲಗೈಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎನ್ನುತ್ತದೆ ಕನ್ನಡದ ನಾಣ್ಣುಡಿ. ದೆಹಲಿಯ ಕೊರೆವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಕೃಷಿಕರಿಗೆ ಇದೀಗ ಇತರ ರಾಜ್ಯಗಳ ಲಕ್ಷಾಂತರ ಜನರು ಸಹನಾಭೂತಿ ತೋರುತ್ತಿದ್ದಾರೆ. ಆದರೆ, ಇಲ್ಲೋರ್ವರು ಕಾಳಜಿ ವ್ಯಕ್ತಪಡಿಸುವ ಜೊತೆಗೆ, ಅವರ ಹಿತರಕ್ಷಣೆಗೂ ಮುಂದಾಗಿದ್ದಾರೆ. ಅದೂ, ಯಾವುದೇ ಪ್ರಚಾರದ ಆಸೆಯಿಲ್ಲದೆ!

ಹೌದು, ಗಾಯಕ ಮತ್ತು ಪಂಜಾಬಿ ನಟ ದಿಲ್ಜಿತ್ ದೊಸಾಂಜ್ ರೈತರ ನೆರವಿಗೆ ಮುಂದಾಗಿದ್ದಾರೆ. ದಿಲ್ಜಿತ್ ದೊಸಾಂಜ್ ರೈತರಿಗೆ ಬೆಚ್ಚನೆಯ ಉಡುಪುಗಳನ್ನು ಖರೀದಿಸಲೆಂದು 1 ಕೋಟಿ ರೂಪಾಯಿ ಹಣವನ್ನು ಮರುಯೋಚಿಸದೆ ದಾನ ಮಾಡಿದ್ದಾರೆ ಎಂದು ಪಂಜಾಬಿ ಗಾಯಕ ಸಿಂಗ್ಗಾ ತಿಳಿಸಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ದೊಸಾಂಜ್​ಗೆ ಧನ್ಯವಾದ ಅರ್ಪಿಸಿ ವಿಡಿಯೋ ಪೋಸ್ಟ್ ಮಾಡಿರುವ ಸಿಂಗ್ಗಾ ಯಾವುದೇ ಪ್ರಚಾರ ಬಯಸದೆ ದೊಸಾಂಜ್​ ರೈತರಿಗೆ ದಾನ ಮಾಡಿರುವುದನ್ನು ಕೊಂಡಾಡಿದ್ದಾರೆ. ನಮ್ಮಲ್ಲಿ ಕೇವಲ 10 ರೂ. ದಾನ ಮಾಡಿದರೂ ಪ್ರಚಾರ ಬಯಸುವವರ ಸಂಖ್ಯೆಯೇ ಹೆಚ್ಚು. ಅಂಥದ್ರಲ್ಲಿ, 1 ಕೋಟಿ ದಾನ ನೀಡಿದರೂ ದೊಸಾಂಜ್ ಎಲ್ಲೂ ಹೇಳಿಕೊಂಡಿಲ್ಲ ಎಂದು ನಟನ ಕಾರ್ಯವನ್ನು ಹಾಡಿಹೊಗಳಿದ್ದಾರೆ.

ದಿಲ್ಜಿತ್ ದೊಸಾಂಜ್

ಪ್ರತಿಭಟನೆಯ ಆರಂಭದಿಂದಲೂ ದಿಲ್ಜಿತ್ ದೊಸಾಂಜ್ ಪಂಜಾಬ್ ರೈತರ ಪರ ನಿಲುವು ತಳೆದಿದ್ದರು. ಟ್ವಿಟ್ಟರ್​ನಲ್ಲಿ ದೆಹಲಿ ಚಲೋವನ್ನು ಟೀಕಿಸಿದ್ದ ಬಾಲಿವುಡ್​ ನಟಿ ಕಂಗನಾ ರನೌತ್ ಮೇಲೂ ಮುಗಿಬಿದ್ದಿದ್ದ ದೊಸಾಂಜ್​ ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಪಂಜಾಬ್ ರೈತರನ್ನುದ್ದೇಶಿಸಿ ಪ್ರತಿಕ್ರಿಯಿಸಿರುವ ದಿಲ್ಜಿತ್ ದೆಹಲಿ ಚಲೋ ಭವಿಷ್ಯದ ಪೀಳಿಗೆಗಳಿಗೂ ಸ್ಪೂರ್ತಿದಾಯಕವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೈತರನ್ನು ಅವಮಾನಿಸಿದರೂ ಸತ್ಯ ಎಂದಿಗೂ ಬದಲಾಗದು. ಕೇಂದ್ರ ಸರ್ಕಾರ ತಕ್ಷಣವೇ ರೈತರ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಆಗ್ರಹಿಸಿದ್ದರು.

ಟ್ವಿಟರ್​ನಲ್ಲಿ ದಿಲ್​​ಜಿತ್ ದೊಸಾಂಜ್-ಕಂಗನಾ ಫೈಟ್: ಪಂಜಾಬಿ ಅನುವಾದಕ್ಕೆ ಗೂಗಲ್ ಮೊರೆ ಹೋದ ನೆಟ್ಟಿಗರು

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ