ಮದ್ಯದ ಅಮಲಿನಲ್ಲಿ ಹಾಡಿ ಉರುಳಾಡಿ ಬೀದಿರಂಪ ಮಾಡಿದ ಪೇದೆ ಸಸ್ಪೆಂಡ್​

ಹೈದರಾಬಾದ್: ದೇಶದ ಹಿತಕ್ಕಾಗಿ ಸದಾ ಸಿದ್ದ ಎಂದು ನಿಂತಿರುವ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ ಹಾಡಿ ಉರುಳಾಡಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿ ಕಾನ್ ಸ್ಟೇಬಲ್ ಬೆಕಾಬಿಟ್ಟಿಯಾಗಿ ಹಂಗಾಮ ನಡೆಸಿದ ಘಟನೆ ಹೈದರಾಬಾದನ ಗೋಶಾಲ ರಸ್ತೆಯ ಮೇಲೆ ನಡೆದಿದೆ. ಮದ್ಯದ ನಶೆಯಲ್ಲಿದ್ದ ಫಲಕನುಮಾ ಠಾಣೆಯ ಕಾನ್ ಸ್ಟೇಬಲ್ ಈಶ್ವರಯ್ಯ ನಡುರಸ್ತೆಯಲ್ಲಿ ಅಡ್ಡ ಮಲಗಿ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ವಾಹನ ಸವಾರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೇದೆಯ ಈ ದುರ್ವರ್ತನೆಗೆ ಅಲ್ಲಿನ ಜನ ಬೇಸತ್ತು, ವಿಷಯವನ್ನು ಪೊಲೀಸ್ ಕಮೀಷನರ್ ಗಮನಕ್ಕೆ […]

ಮದ್ಯದ ಅಮಲಿನಲ್ಲಿ ಹಾಡಿ ಉರುಳಾಡಿ ಬೀದಿರಂಪ ಮಾಡಿದ ಪೇದೆ ಸಸ್ಪೆಂಡ್​

Updated on: Dec 03, 2019 | 5:51 PM

ಹೈದರಾಬಾದ್: ದೇಶದ ಹಿತಕ್ಕಾಗಿ ಸದಾ ಸಿದ್ದ ಎಂದು ನಿಂತಿರುವ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ ಹಾಡಿ ಉರುಳಾಡಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿ ಕಾನ್ ಸ್ಟೇಬಲ್ ಬೆಕಾಬಿಟ್ಟಿಯಾಗಿ ಹಂಗಾಮ ನಡೆಸಿದ ಘಟನೆ ಹೈದರಾಬಾದನ ಗೋಶಾಲ ರಸ್ತೆಯ ಮೇಲೆ ನಡೆದಿದೆ.

ಮದ್ಯದ ನಶೆಯಲ್ಲಿದ್ದ ಫಲಕನುಮಾ ಠಾಣೆಯ ಕಾನ್ ಸ್ಟೇಬಲ್ ಈಶ್ವರಯ್ಯ ನಡುರಸ್ತೆಯಲ್ಲಿ ಅಡ್ಡ ಮಲಗಿ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ವಾಹನ ಸವಾರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೇದೆಯ ಈ ದುರ್ವರ್ತನೆಗೆ ಅಲ್ಲಿನ ಜನ ಬೇಸತ್ತು, ವಿಷಯವನ್ನು ಪೊಲೀಸ್ ಕಮೀಷನರ್ ಗಮನಕ್ಕೆ ತಂದಿದ್ದಾರೆ. ಕೂಡಲೆ ಪೊಲೀಸ್ ಕಮೀಷನರ್ ಅಂಜನಿಕುಮಾರ್ ಪೇದೆ ಈಶ್ವರಯ್ಯನನ್ನು ಅಮಾನತ್ತು ಗೊಳಿಸಿದ್ದಾರೆ.

Published On - 5:50 pm, Tue, 3 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us