AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News ಶಿವಸೇನಾದ ಏಕನಾಥ್ ಶಿಂಧೆ ಬಣಕ್ಕೆ ಎರಡು ಖಡ್ಗ ಮತ್ತು ಗುರಾಣಿ ಚಿಹ್ನೆ ನೀಡಿದ ಚುನಾವಣಾ ಆಯೋಗ

ಚುನಾವಣಾ ಆಯೋಗವು ಏಕನಾಥ್  ಶಿಂಧೆ ಬಣಕ್ಕೆ  ಸೋಮವಾರ 'ಬಾಳಾಸಾಹೆಬಂಚಿ ಶಿವಸೇನಾ' ಎಂಬ ಹೆಸರನ್ನು ನೀಡಿತ್ತು.

Breaking News ಶಿವಸೇನಾದ ಏಕನಾಥ್ ಶಿಂಧೆ ಬಣಕ್ಕೆ ಎರಡು ಖಡ್ಗ ಮತ್ತು ಗುರಾಣಿ ಚಿಹ್ನೆ ನೀಡಿದ ಚುನಾವಣಾ ಆಯೋಗ
ಏಕನಾಥ್ ಶಿಂಧೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 11, 2022 | 6:41 PM

ಶಿವಸೇನಾದ (Shiv Sena) ಏಕನಾಥ್ ಶಿಂಧೆ ಬಣಕ್ಕೆ (Eknath Shinde) ಭಾರತದ ಚುನಾವಣಾ ಆಯೋಗವು ‘ಎರಡು ಖಡ್ಗ ಮತ್ತು ಗುರಾಣಿ’ ಚಿಹ್ನೆಯನ್ನು ನೀಡಿದೆ. ಚುನಾವಣಾ ಆಯೋಗವು (Election Commission)  ಶಿಂಧೆ ಬಣಕ್ಕೆ  ನಿನ್ನೆ ‘ಬಾಳಾಸಾಹೆಬಂಚಿ ಶಿವಸೇನಾ’ ಎಂಬ ಹೆಸರನ್ನು ನೀಡಿತ್ತು. ಶಿವಸೇನಾದ ಶಿಂಧೆ ನೇತೃತ್ವದ ಬಣವಾದ “ಬಾಳಾಸಾಹೆಬಂಚಿ ಶಿವಸೇನಾ ಮಂಗಳವಾರ ತನ್ನ ಮೂರು ಚುನಾವಣಾ ಚಿಹ್ನೆಗಳ ಆಯ್ಕೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಸೋಮವಾರ, ಶಿಂಧೆ ಬಣದ ಮೂರು ಆಯ್ಕೆಗಳನ್ನು ಚುನಾವಣಾ ಸಮಿತಿ ತಿರಸ್ಕರಿಸಿದ್ದುಮಂಗಳವಾರ ಹೊಸ ಪಟ್ಟಿಯನ್ನು ಕಳುಹಿಸಲು ಕೇಳಲಾಯಿತು. ವರದಿಗಳ ಪ್ರಕಾರ, ಶಿಂಧೆ ಗುಂಪು ಸಲ್ಲಿಸಿದ ಇತರ ಎರಡು ಚಿಹ್ನೆಗಳೆಂದರೆ ‘ಪೀಪಲ್ ಮರ’ ಮತ್ತು ಸೂರ್ಯ.

ನವೆಂಬರ್ 3 ರಂದು ನಡೆಯಲಿರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಬಳಸದಂತೆ ಉದ್ಧವ್ ಠಾಕ್ರೆ ಬಣ ಮತ್ತು ಶಿಂಧೆ ಬಣವನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಶಿವಸೇನಾದ ಎರಡು ಬಣಗಳ ನಡುವಿನ ವಿವಾದವನ್ನು ಚುನಾವಣಾ ಆಯೋಗವು ನಿರ್ಣಯಿಸುವವರೆಗೂ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗವು ಶಿವಸೇನಾದ ಠಾಕ್ರೆ ಬಣಕ್ಕೆ ಉರಿಯುತ್ತಿರುವ ದೊಂದಿ (ಮಶಾಲ್) ಚುನಾವಣಾ ಚಿಹ್ನೆಯನ್ನು ಮಂಜೂರು ಮಾಡಿತು. ಅದನ್ನು ‘ಶಿವಸೇನಾ – ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎಂದು ಗುರುತಿಸಿತು.

ಇದು ಶಿಂಧೆ ಬಣವನ್ನು ‘ಬಾಳಾಸಾಹೇಬಂಚಿ ಶಿವಸೇನೆ’ (ಬಾಳಾಸಾಹೇಬರ ಶಿವಸೇನೆ) ಎಂದು ಗುರುತಿಸಿತು ಆದರೆ ‘ತ್ರಿಶೂಲ’, ಗಧೆ ಮತ್ತು ‘ಉದಯಸೂರ್ಯ’ ತನ್ನ ಚುನಾವಣಾ ಚಿಹ್ನೆಗಳಾಗಿ ತಿರಸ್ಕರಿಸಿತು. ತ್ರಿಶೂಲ್ ಮತ್ತು ಗಧೆ ಧಾರ್ಮಿಕ ಅರ್ಥಗಳನ್ನು ಹೊಂದಿದ್ದರಿಂದ ತಿರಸ್ಕರಿಸಲಾಯಿತು. ಠಾಕ್ರೆ ಬಣವೂ ತ್ರಿಶೂಲ ಮತ್ತು ಉದಯಿಸುವ ಸೂರ್ಯನನ್ನು ತನ್ನ ಆಯ್ಕೆಯಾಗಿ ನೀಡಿತ್ತು.

ಉದಯಿಸುತ್ತಿರುವ ಸೂರ್ಯ ಮಾನ್ಯತೆ ಪಡೆದ  ಪಕ್ಷವಾದ ಡಿಎಂಕೆಯ ಸಂಕೇತವಾಗಿದೆ.

ಶಿವಸೇನೆಯ 55 ಶಾಸಕರ ಪೈಕಿ 40 ಶಾಸಕರು ಮತ್ತು ಲೋಕಸಭೆಯಲ್ಲಿ ಅದರ 18 ಸದಸ್ಯರಲ್ಲಿ 12 ಮಂದಿ ಬೆಂಬಲ ನೀಡುವುದಾಗಿ ಶಿಂಧೆ ಅವರು ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಒಕ್ಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ ನೀಡಿದ ನಂತರ, ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಮುಖ್ಯಮಂತ್ರಿಯಾದರು.

Published On - 5:53 pm, Tue, 11 October 22

11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ
ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿ ಲೈವ್
ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿ ಲೈವ್
‘ಜನರಿಗೆ ಮನು ಬುದ್ಧಿ ತೋರಿಸಲು ಆ ಆಡಿಯೋ ಬಿಟ್ಟೆ’; ಸಂತ್ರಸ್ತೆಯ ನೇರ ಮಾತು
‘ಜನರಿಗೆ ಮನು ಬುದ್ಧಿ ತೋರಿಸಲು ಆ ಆಡಿಯೋ ಬಿಟ್ಟೆ’; ಸಂತ್ರಸ್ತೆಯ ನೇರ ಮಾತು
ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಒಂದೇ ವಿಮಾನದಲ್ಲಿ ದೆಹಲಿಗೆ ಹೊರಟ ಸಿದ್ದರಾಮಯ್ಯ ಮತ್ತು ಶಿವಕುಮಾರ್
Daily Devotional: ಶನಿ ಅಥವಾ ಸಾಡೇಸಾತಿಯಿಂದ ಪಾರಾಗಲು ಏನು ಮಾಡಬೇಕು?
Daily Devotional: ಶನಿ ಅಥವಾ ಸಾಡೇಸಾತಿಯಿಂದ ಪಾರಾಗಲು ಏನು ಮಾಡಬೇಕು?
Daily Horoscope: ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ತಿಳಿಯಿರಿ
Daily Horoscope: ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ತಿಳಿಯಿರಿ
ಹೆಂಡತಿ, ಮಕ್ಕಳು ಇರುವ ಮನು ಹಿಂದೆ ಯಾಕೆ ಹೋದೆ? ಉತ್ತರಿಸಿದ ಸಂತ್ರಸ್ತ ಮಹಿಳೆ
ಹೆಂಡತಿ, ಮಕ್ಕಳು ಇರುವ ಮನು ಹಿಂದೆ ಯಾಕೆ ಹೋದೆ? ಉತ್ತರಿಸಿದ ಸಂತ್ರಸ್ತ ಮಹಿಳೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ