Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಮಹಾ ಶಿವರಾತ್ರಿಯ ಹಿಂದಿನ ದಿನ ಮಹಾ ಕುಂಭದಲ್ಲಿ ವಾಯುಪಡೆಯ ಜೆಟ್‌ಗಳು ತ್ರಿಶೂಲಾಕಾರದಲ್ಲಿ ಹಾರಾಡಿವೆಯೇ?

Maha KumbhMela 2025: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ. ಆಕಾಶದಲ್ಲಿ ಹಾರಾಡುತ್ತಿರುವ ಮೂರು ವಿಮಾನಗಳಿಂದ ತ್ರಿಶೂಲ ರಚನೆಯ ಚಿತ್ರವೊಂದು ಹರಿದಾಡುತ್ತಿದ್ದು, ಇದನ್ನು ಮಹಾ ಕುಂಭಮೇಳದ ಕೊನೆಯಲ್ಲಿ IAF ಹಾರಾಟಕ್ಕೆ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆ ಏನು?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Fact Check: ಮಹಾ ಶಿವರಾತ್ರಿಯ ಹಿಂದಿನ ದಿನ ಮಹಾ ಕುಂಭದಲ್ಲಿ ವಾಯುಪಡೆಯ ಜೆಟ್‌ಗಳು ತ್ರಿಶೂಲಾಕಾರದಲ್ಲಿ ಹಾರಾಡಿವೆಯೇ?
Mahakumbh Mela Thrishool Photo Fact Check
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on: Feb 28, 2025 | 7:39 AM

ಬೆಂಗಳೂರು (ಫೇ. 28): ಉತ್ತರ ಪ್ರದೇಶದಲ್ಲಿ ನಡೆದ ಮಹಾ ಕುಂಭಮೇಳ 2025 (Maha KumbhaMela 2025), ಮಹಾ ಶಿವರಾತ್ರಿಯಂದು ಭಾರತೀಯ ವಾಯುಪಡೆಯ (IAF) ಅದ್ಭುತ ಹಾರಾಟದೊಂದಿಗೆ ಮುಕ್ತಾಯಗೊಂಡಿತು. ತ್ರಿವೇಣಿ ಸಂಗಮದಲ್ಲಿ ನಡೆದ ಅಂತಿಮ ಶಾಹಿ ಸ್ನಾನಕ್ಕಾಗಿ 1.5 ಕೋಟಿ ಭಕ್ತರು ಜಮಾಯಿಸಿದರೆ, ಸುಖೋಯ್ ಯುದ್ಧ ವಿಮಾನಗಳು, AN-32 ಸಾರಿಗೆ ವಿಮಾನಗಳು ಮತ್ತು ಚೇತಕ್ ಹೆಲಿಕಾಪ್ಟರ್‌ಗಳು ವೈಮಾನಿಕ ಕುಶಲತೆಯನ್ನು ಪ್ರದರ್ಶಿಸಿದವು. ಹೆಲಿಕಾಪ್ಟರ್‌ಗಳು ಯಾತ್ರಿಕರ ಮೇಲೆ ಗುಲಾಬಿ ದಳಗಳನ್ನು ಸುರಿಸಿದ್ದು ಅಮೋಘವಾಗಿತ್ತು. ಇದು ಮಹಾ ಕುಂಭಮೇಳ ಅದ್ಧೂರಿ ಸಮಾರೋಪಕ್ಕೆ ಸ್ಮರಣೀಯ ಸ್ಪರ್ಶವನ್ನು ನೀಡಿತು.

ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ. ಆಕಾಶದಲ್ಲಿ ಹಾರಾಡುತ್ತಿರುವ ಮೂರು ವಿಮಾನಗಳಿಂದ ತ್ರಿಶೂಲ ರಚನೆಯ ಚಿತ್ರವೊಂದು ಹರಿದಾಡುತ್ತಿದ್ದು, ಇದನ್ನು ಮಹಾ ಕುಂಭಮೇಳದ ಕೊನೆಯಲ್ಲಿ IAF ಹಾರಾಟಕ್ಕೆ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಮಹಾಕುಂಭಮೇಳದಲ್ಲಿ ಇಂದು ಆಗಸದಲ್ಲಿ ಮೂಡಿ ಬಂದ ಅತ್ಯದ್ಭುತ ಚಿತ್ರವಿದು…’’ ಎಂದು ಬರೆದುಕೊಂಡಿದ್ದಾರೆ.

ಮಹಾ ಕುಂಭದಲ್ಲಿ ವಾಯುಪಡೆಯ ಜೆಟ್‌ಗಳು ತ್ರಿಶೂಲಾಕಾರದಲ್ಲಿ ಹಾರಾಡಿಲ್ಲ:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವ9 ಕನ್ನಡ ಪರಿಶೋದಿಸಿದಾಗ ಈ ಫೋಟೋಕ್ಕೂ ಮಹಾ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ. ವೈರಲ್ ಆದ ಫೋಟೋ 2019 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಾ ಕುಂಭದಲ್ಲಿ ನಡೆದ ವಾಯುಪಡೆಯ ವಾಯು ಪ್ರದರ್ಶನದ ಸಮಯದಲ್ಲಿ ಅಂತಹ ಯಾವುದೇ ತ್ರಿಶೂಲ ರಚನೆಯನ್ನು ಮಾಡಲಾಗಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದು 2019 ಮತ್ತು 2020 ರಲ್ಲಿ ಎಕ್ಸ್ ಮತ್ತು ಫೇಸ್​ಬುಕ್ ಖಾತೆಗಳಲ್ಲಿ ಪೋಸ್ಟ್ ಆಗಿರುವುದನ್ನು ನಾವು ಕಂಡುಕೊಂಡೆವು.

ಇದೇ ಸಮಯದಲ್ಲಿ, ಮಾರ್ಚ್ 4, 2019 ರಂದು ಕಿರ್ಲೋಸ್ಕರ್ ಆಯಿಲ್ ಎಂಜಿನ್ಸ್ ಲಿಮಿಟೆಡ್ (KOEL) ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದ ಅದೇ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಗೆ ನಮನ ಸಲ್ಲಿಸುವ ಪೋಸ್ಟ್ ಇದಾಗಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೈರಲ್ ಆಗಿರುವ ಚಿತ್ರವು KOEL ಹಂಚಿಕೊಂಡ ಮೂಲ ಚಿತ್ರದ ಕತ್ತರಿಸಿದ ಆವೃತ್ತಿಯಾಗಿರಬಹುದು ಎಂದು ನಾವು ಕಂಡುಕೊಂಡಿದ್ದೇವೆ. ಇದೇ ರೀತಿಯ ಡಿಜಿಟಲ್ ರೂಪದಲ್ಲಿ ರಚಿಸಲಾದ ಪೋಸ್ಟರ್‌ಗಳನ್ನು KOEL ನ ಫೇಸ್‌ಬುಕ್ ಪುಟದಲ್ಲಿಯೂ ಕಾಣಬಹುದು.

Fact Check: ಮಹಾಕುಂಭ ಮೇಳಕ್ಕೆ ಜೊತೆಯಾಗಿ ತೆರಳಿದ ವಿರಾಟ್ ಕೊಹ್ಲಿ-ತಮನ್ನಾ ಭಾಟಿಯಾ?: ವೈರಲ್ ಫೋಟೋದ ಸತ್ಯ ಏನು?

ಇನ್ನು ಮಹಾ ಕುಂಭಮೇಳದ ಅಂತಿಮ ದಿನದಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಭಾರತೀಯ ವಾಯುಪಡೆಯ ವಾಯು ಪ್ರದರ್ಶನದ ದೃಶ್ಯಗಳನ್ನು ನಾವು ಪರಿಶೀಲಿಸಿದ್ದೇವೆ. ಇದನ್ನು ಡಿಡಿ ನ್ಯೂಸ್ ಮತ್ತು ನ್ಯೂಸ್ 9 ಲೈವ್ ಪ್ರಕಟಿಸಿವೆ. ಆದಾಗ್ಯೂ, ವೈರಲ್ ಆದ ಚಿತ್ರವನ್ನು ಹೋಲುವ ತ್ರಿಶೂಲ ರಚನೆಯ ಯಾವುದೇ ದೃಶ್ಯಗಳು ನಮಗೆ ಕಂಡುಬಂದಿಲ್ಲ. ಅಲ್ಲದೆ, ತ್ರಿಶೂಲ ರಚನೆಯ ಕುರಿತು ವಿಶ್ವಾಸಾರ್ಹ ಮಾಧ್ಯಮಗಳಿಂದ ಯಾವುದೇ ವರದಿ ಕೂಡ ನಮಗೆ ಕಂಡುಬಂದಿಲ್ಲ.

ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಸಲಹೆಗಾರ ಅವನೀಶ್ ಕೆ ಅವಸ್ಥಿ ಅವರು ಮಹಾ ಕುಂಭದ ಕೊನೆಯಲ್ಲಿ ನಡೆದ ಏರ್ ಶೋನ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಅವುಗಳಲ್ಲಿ ಯಾವುದೂ ವೈರಲ್ ಚಿತ್ರಕ್ಕೆ ಹೋಲುವ ದೃಶ್ಯವನ್ನು ಒಳಗೊಂಡಿಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗಿರುವ ಫೋಟೋವು ಹಳೆಯದು ಮತ್ತು ಮಹಾ ಕುಂಭಮೇಳದ ಕೊನೆಯಲ್ಲಿ IAF ಗಾಳಿಯಲ್ಲಿ ತ್ರಿಶೂಲ ರಚನೆಯನ್ನು ಮಾಡಿದೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಏಕತೆಯ ಮಹಾಯಜ್ಞ ಎಂದು ಕರೆದ ಪ್ರಧಾನಿ:

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾಕುಂಭ ಮೇಳವನ್ನು ಪ್ರಧಾನಿ ಮೋದಿ ‘ಏಕತೆಯ ಮಹಾಯಜ್ಞ’ ಎಂದು ಬಣ್ಣಿಸಿದ್ದಾರೆ. ಈ ಕುರಿತು ಬ್ಲಾಗ್​ ಬರೆದಿದ್ದು, ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಲು ಒಟ್ಟಾಗಿ ಬಂದ 140 ಕೋಟಿ ಭಾರತೀಯರ ಭಕ್ತಿ ಮತ್ತು ಭಾಗವಹಿಸುವಿಕೆಗೆ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದರು. 45 ದಿನಗಳ ಕಾಲ ನಡೆದ ಮಹಾಕುಂಭವನ್ನು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿಬಿಂಬ ಎಂದು ಬಣ್ಣಿಸಿದರು. ಸಮಾಜದ ಎಲ್ಲಾ ವರ್ಗಗಳ ಜನರು ನಂಬಿಕೆ ಮತ್ತು ಭಕ್ತಿಯಲ್ಲಿ ಹೇಗೆ ಒಂದಾಗುತ್ತಾರೆ ಎಂಬುದನ್ನು ಒತ್ತಿ ಹೇಳಿದರು. ಈ ಮಹಾಕುಂಭದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರು ಒಟ್ಟಿಗೆ ಬಂದರು. ಈ ಅವಿಸ್ಮರಣೀಯ ಏಕತೆಯ ದೃಶ್ಯವು ಕೋಟ್ಯಂತರ ಭಾರತೀಯರಿಗೆ ಆತ್ಮ ವಿಶ್ವಾಸದ ಹಬ್ಬವಾಯಿತು. ಈ ಉತ್ಸವವನ್ನು ಯಶಸ್ವಿಗೊಳಿಸುವಲ್ಲಿ ಜನರ ಪ್ರಯತ್ನಗಳು, ಸಮರ್ಪಣೆ ಮತ್ತು ದೃಢಸಂಕಲ್ಪವು ನನ್ನನ್ನು ತುಂಬಾ ಪ್ರಭಾವಿಸಿದೆ ಎಂದು ಬರೆದಿದ್ದಾರೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ