ಹಿಂಸಾಚಾರಕ್ಕೆ ತಿರುಗಿದ ಕೌಟುಂಬಿಕ ಕಲಹ; ಮನೆಯ ಛಾವಣಿ ಕುಸಿದು 10 ಜನರ ಸ್ಥಿತಿ ಗಂಭೀರ

|

Updated on: Apr 04, 2025 | 10:07 PM

ಮಹಾರಾಷ್ಟ್ರದ ಭಿವಾಂಡಿಯ ದೇನೆನಗರದಲ್ಲಿ ಎರಡು ಕುಟುಂಬಗಳ ನಡುವಿನ ಹಿಂಸಾತ್ಮಕ ವಾಗ್ವಾದ ತಾರಕಕ್ಕೇರಿದ್ದು, ಮನೆಯ ಛಾವಣಿ ಕುಸಿದು 10 ಜನರು ಕೆಳಗಿನ ಮಹಡಿಯೊಳಗೆ ಉರುಳಿಬಿದ್ದಿದ್ದಾರೆ. ಈ ಘಟನೆಯಿಂದ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡೂ ಕುಟುಂಬಗಳು ಪರಸ್ಪರ ವಿರುದ್ಧ ಕಾನೂನು ದೂರು ದಾಖಲಿಸಿದ್ದು, ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಕೌಟುಂಬಿಕ ಕಲಹ; ಮನೆಯ ಛಾವಣಿ ಕುಸಿದು 10 ಜನರ ಸ್ಥಿತಿ ಗಂಭೀರ
Roof Collapse
Follow us on

ಭಿವಾಂಡಿ, ಏಪ್ರಿಲ್ 4: ಮಹಾರಾಷ್ಟ್ರದ (Maharashtra) ಥಾಣೆಯ ಭಿವಾಂಡಿಯ ದೇನೆನಗರದಲ್ಲಿ 2 ಕುಟುಂಬಗಳ ನಡುವಿನ ಹಿಂಸಾತ್ಮಕ ಹಲ್ಲೆಯಿಂದಾಗಿ ಮನೆಯ ಛಾವಣಿ ಕುಸಿದು ಬಿದ್ದಿದೆ. ಇದರಿಂದ ಮೇಲಿನ ಮಹಡಿಯಿಂದ ಕೆಳಗಿನ ಮಹಡಿಯೊಳಗೆ 10 ಜನರು ಉರುಳಿಬಿದ್ದಿದ್ದಾರೆ. ಸಣ್ಣ ವಿವಾದವೊಂದು ದೊಡ್ಡ ಪ್ರಮಾಣದ ಜಗಳವಾಗಿ ಬೆಳೆದ ನಂತರ ನಡೆದ ಈ ಆಘಾತಕಾರಿ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಟಿವಿ 9 ವರದಿಯ ಪ್ರಕಾರ, ಮೊಯಿನುದ್ದೀನ್ ನಸ್ರುದ್ದೀನ್ ಶೇಖ್ ಮತ್ತು ನಸ್ರುದ್ದೀನ್ ಇಮಾಮುದ್ದೀನ್ ಶೇಖ್ ಅವರ ಕುಟುಂಬಗಳ ನಡುವಿನ ಫೋನ್ ಕರೆಯಲ್ಲಿ ನಡೆದ ಮಾತಿನ ಚಕಮಕಿಯಿಂದ ಘರ್ಷಣೆ ಪ್ರಾರಂಭವಾಯಿತು. ಮಾತಿನ ಚಕಮಕಿಯಾಗಿ ಆರಂಭವಾದ ಈ ಘಟನೆ, ನಂತರ ಹಲ್ಲೆಗೆ ತಿರುಗಿ, ಎರಡೂ ಕುಟುಂಬಗಳು ನೆರೆಮನೆಯವರ ಮನೆಯ ಛಾವಣಿಗೆ ಮೇಲೆ ನಿಂತು ಜಗಳವಾಡಿದರು. ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಇದ್ದಕ್ಕಿದ್ದಂತೆ ಮನೆಯ ಛಾವಣಿ ಕುಸಿದು ಬಿದ್ದ ಕಾರಣ 10 ಜನರು ನೆಲಕ್ಕೆ ಬಿದ್ದರು. ಅವರ ಮೇಲೆ ಫ್ಲೋರ್​ನ ಅವಶೇಷಗಳು ಬಿದ್ದವು.

ಇದನ್ನೂ ಓದಿ
WITT 2025: ಪ್ರಧಾನಿಯನ್ನು ಶ್ಲಾಘಿಸಿದ ಟಿವಿ9 ನೆಟ್ವರ್ಕ್ ಸಿಇಒ
WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಮೋದಿ ಭಾಷಣ
WITT 2025: ಪಿಎಂ ಮೋದಿ ಭಾಗಿ; ನೇರಪ್ರಸಾರ ವೀಕ್ಷಿಸಿ
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾರ್ಬನ್ ಮಾನಾಕ್ಸೈಡ್ ಉಸಿರಾಡಿ 27 ವರ್ಷದ ವ್ಯಕ್ತಿ ಆತ್ಮಹತ್ಯೆ

ಈ ಘಟನೆಯ ನಂತರ, ಎರಡೂ ಕುಟುಂಬಗಳ ಸದಸ್ಯರು ಛಾವಣಿ ಕುಸಿತದಿಂದ ಉಂಟಾದ ಹಾನಿಗೆ ಮನೆ ಮಾಲೀಕರಿಗೆ ಪರಿಹಾರ ನೀಡಲು ಒಪ್ಪಿಕೊಂಡರು. ಆದರೆ, ಎರಡೂ ಕುಟುಂಬಗಳು ಪರಸ್ಪರ ವಿರುದ್ಧ ಕಾನೂನು ದೂರು ದಾಖಲಿಸಿವೆ ಮತ್ತು ಪೊಲೀಸ್ ಅಧಿಕಾರಿಗಳು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ