AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಮತ್ತೊಂದು ಬರೆ; ರಸಗೊಬ್ಬರದ ಬೆಲೆ ಹೆಚ್ಚಿಸಿದ ಇಫ್ಕೊ

ಯೂರಿಯಾ ರಹಿತ ರಸಗೊಬ್ಬರಗಳು ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ದರ ಪರಿಷ್ಕರಣೆ ನಡೆಯುತ್ತದೆ. ದರ ಏರಿಕೆಗೆ ಯಾವುದೇ ಸರ್ಕಾರ, ಯಾವುದೇ ರಾಜಕೀಯ ಬೆಳವಣಿಗೆ ಜತೆ ಸಂಬಂಧವಿಲ್ಲ ಎಂದು ಐಎಫ್ಎಫ್ಒ ವಕ್ತಾರರು ಹೇಳಿದ್ದಾರೆ.

ರೈತರಿಗೆ ಮತ್ತೊಂದು ಬರೆ; ರಸಗೊಬ್ಬರದ ಬೆಲೆ ಹೆಚ್ಚಿಸಿದ ಇಫ್ಕೊ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ| Edited By: |

Updated on:Apr 10, 2021 | 9:39 AM

Share

ದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮತ್ತು ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಮುಂದುವರಿಯುತ್ತಿರುವ ಹೊತ್ತಲ್ಲಿ ಭಾರತೀಯ ರೈತರ ರಸಗೊಬ್ಬರ ಸಹಕಾರ ನಿಗಮವು (IFFCO) ರಸಗೊಬ್ಬರ ಬೆಲೆಯನ್ನು ಏರಿಕೆ ಮಾಡಿದೆ. ಯೂರಿಯಾ ಹೊರತು ಪಡಿಸಿ ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ರಸಗೊಬ್ಬರ ಡಿ-ಅಮೋನಿಯಂ ಫೋಸ್ಪೇಟ್ (DAP). ಅದರ 50 ಕೆಜಿ ತೂಕದ ಚೀಲಕ್ಕೆ ₹1,900 ಆಗಲಿದೆ. ಈ ಹಿಂದೆ ಒಂದು ಚೀಲದ ಬೆಲೆ ₹1,200 ಇತ್ತು. ಹಿಂದಿನ ಬೆಲೆಗಿಂತ ಈ ಬಾರಿ ಶೇ 58 ಏರಿಕೆ ಮಾಡಲಾಗಿದೆ.

ಎನ್​ಪಿಕೆಎಸ್ (nitrogen, phosphorus, potash and sulphur) ಮಿಶ್ರಿತ ಜನಪ್ರಿಯ ರಸಗೊಬ್ಬಗಳ ಬೆಲೆಯಲ್ಲಿಯೂ ಏರಿಕೆ ಮಾಡಲಾಗಿದೆ. ರಸಗೊಬ್ಬರಗಳಲ್ಲಿ ಎನ್​ಪಿಕೆಎಸ್ ಪ್ರಮಾಣವು 10:26:26 ಆಗಿದ್ದರೆ ಚೀಲವೊಂದರ ಬೆಲೆ ₹1,175 ಆಗಿರಲಿದೆ. ಅದೇ ವೇಳೆ 12:32:16 (₹1,185ರಿಂದ ₹1,800), 20:20:0:13 ಆಗಿದ್ದರೆ (₹1,350) ಆಗಿರಲಿದೆ. ಪರಿಷ್ಕೃತ ಬೆಲೆ ಏಪ್ರಿಲ್ 1ರ ನಂತ ಜಾರಿಗೆ ಬಂದಿದೆ.

ಯೂರಿಯಾ ರಹಿತ ರಸಗೊಬ್ಬರಗಳು ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ದರ ಪರಿಷ್ಕರಣೆ ನಡೆಯುತ್ತದೆ. ದರ ಏರಿಕೆಗೆ ಯಾವುದೇ ಸರ್ಕಾರ, ಯಾವುದೇ ರಾಜಕೀಯ ಬೆಳವಣಿಗೆ ಜತೆ ಸಂಬಂಧವಿಲ್ಲ ಎಂದು ಐಎಫ್ಎಫ್ಒ ವಕ್ತಾರರು ಹೇಳಿದ್ದಾರೆ.

ಕಳೆದ 5-6 ತಿಂಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಪರಿಣಾಮ ಇಲ್ಲಿ ದರ ಏರಿಕೆ ಮಾಡಲಾಗಿದೆ. ಆಮದು ಮಾಡಿದ ಡಿಎಪಿಯ ಬೆಲೆ ಭಾರತದಲ್ಲಿ ಟನ್​ಗೆ ₹ 540 ಇದೆ. ಅಕ್ಟೋಬರ್ ತಿಂಗಳಲ್ಲಿ ಇದರ ಬೆಲೆ  400 ಡಾಲರ್ ಆಗಿತ್ತು. ಅದೇ ರೀತಿ ಅಮೊನಿಯ ಮತ್ತು ಸಲ್ಪರ್ ಮೊದಲಾದವುಗಳ ಬೆಲೆ ಟನ್​ಗೆ ಕ್ರಮವಾಗಿ 280 ಡಾಲರ್ ಮತ್ತು 85 ಡಾಲರ್ ಇದ್ದದ್ದು ಟನ್​ಗೆ 300 ಡಾಲರ್ ಮತ್ತು 220 ಡಾಲರ್ ಏರಿಕೆ ಆಗಿದೆ. ಯೂರಿಯಾ ಮತ್ತು ಪೊಟಾಶ್ ಬೆಲೆಯು ಟನ್​ಗೆ ಕ್ರಮವಾಗಿ 380 ಡಾಲರ್ ಮತ್ತು280 ಡಾಲರ್  ಏರಿಕೆಯಾಗಿದೆ.

ಹೆಚ್ಚಿನ ರಸಗೊಬ್ಬರಗಳ ಬೆಲೆಗಳು ಕೃಷಿ ಸರಕುಗಳಲ್ಲಿ ಕಂಡುಬರುತ್ತಿರುವ ತೇಜಿ ಮನಸ್ಥಿತಿಯ ಪರಿಣಾಮವಾಗಿದೆ. ಗುರುವಾರ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತನ್ನ ಆಹಾರ ಬೆಲೆ ಸೂಚ್ಯಂಕ (ಎಫ್‌ಪಿಐ) ಸಂಖ್ಯೆಯನ್ನು ಬಿಡುಗಡೆ ಮಾಡಿದ್ದು. ಇದು ಮಾರ್ಚ್‌ಗೆ 118.5 ಪಾಯಿಂಟ್‌ಗಳಷ್ಟಿದ್ದು, ಜೂನ್ 2014 ರ 119.3 ಪಾಯಿಂಟ್‌ಗಳ ನಂತರ ಗರಿಷ್ಠವಾಗಿದೆ. ವಿಶೇಷವೇನೆಂದರೆ ಎಫ್‌ಪಿಐ (ಮೂಲ ವರ್ಷ: 2014-16 = 100) ಜಾಗತಿಕ ಸಾಂಕ್ರಾಮಿಕ ಮತ್ತ ಲಾಕ್‌ಡೌನ್‌ನ ಉತ್ತುಂಗದಲ್ಲಿ ಮೇ 2020 ರಲ್ಲಿ ನಾಲ್ಕು ವರ್ಷಗಳ ಕನಿಷ್ಠ 91 ಪಾಯಿಂಟ್‌ಗಳನ್ನು ಮುಟ್ಟಿದೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್​ಪಿಜಿ ಬೆಲೆ ಏರಿಕೆ ನಂತರ ರಸಗೊಬ್ಬರದ ಬೆಲೆಯಲ್ಲಿನ ಏರಿಕೆಯು ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಪ್ರಭಾವ ಬೀರಲಿದೆ . ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇತ್ತ ದೆಹಲಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಿರತ ರೈತರ ಸಂಖ್ಯೆ ಕಡಿಮೆಯಾಗಿದ್ದು ಗೋಧಿ ಕೊಯ್ಲು ಮತ್ತು ಕಬ್ಬಿನ ನಾಟಿ ಮುಗಿದ ನಂತರ ಮತ್ತೆ ಈ ಪ್ರತಿಭಟನೆ ಚುರುಕುಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ:ಕೃಷಿಕ್ರಾಂತಿಗೆ ಮುಂದಾದ ಉಡುಪಿ ಜಿಲ್ಲೆ; ಶಾಸಕರ ಮುಂದಾಳತ್ವದಲ್ಲಿ ನಡೆಯಲಿದೆ ಹಡಿಲು ಭೂಮಿ ಬಿತ್ತನೆ ಕಾರ್ಯ

Narendra Modi: ಎಲ್ಲಾ ಚುನಾವಣೆಗಳಲ್ಲೂ ಗೆಲ್ಲುತ್ತಾ ಹೋಗಲು ಬಿಜೆಪಿ ಯಂತ್ರವಲ್ಲ: ಪ್ರಧಾನಿ ನರೇಂದ್ರ ಮೋದಿ

Published On - 10:27 pm, Thu, 8 April 21

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!