ಮಧ್ಯರಾತ್ರಿ ಬೆಂಕಿಯಿಂದ ಹೊತ್ತಿ ಉರಿದ ಮನೆ; ಎಂಟು ತಿಂಗಳ ಮಗು ಸೇರಿ ಐವರ ದುರ್ಮರಣ, ಒಬ್ಬನಿಗೆ ಗಂಭೀರ ಗಾಯ

ಪ್ರತಾಪನ್​ ಅವರ ಹಿರಿಯ ಮಗ ನಿಹುಲ್​ಗೆ ಗಂಭೀರ ಗಾಯಗಳಾಗಿವೆ. ತಡರಾತ್ರಿ ಇವರ ಮನೆಗೆ ಬೆಂಕಿ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ.

ಮಧ್ಯರಾತ್ರಿ ಬೆಂಕಿಯಿಂದ ಹೊತ್ತಿ ಉರಿದ ಮನೆ; ಎಂಟು ತಿಂಗಳ ಮಗು ಸೇರಿ ಐವರ ದುರ್ಮರಣ, ಒಬ್ಬನಿಗೆ ಗಂಭೀರ ಗಾಯ
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Mar 08, 2022 | 8:53 AM

ತಡರಾತ್ರಿ ಮನೆಯೊಂದಕ್ಕೆ ಬೆಂಕಿ ಬಿದ್ದು, ಒಟ್ಟು ಐದು ಮಂದಿ ಮೃತಪಟ್ಟ ದುರ್ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ. ಇಲ್ಲಿನ ದಲವಾಪುರಂ ಎಂಬಲ್ಲಿದ್ದ ಮನೆಗೆ ನಿನ್ನೆ ತಡರಾತ್ರಿ 1.45ರ ಹೊತ್ತಿಗೆ ಬೆಂಕಿ ಹೊತ್ತಿದೆ.  ಮೃತರನ್ನು ಪ್ರತಾಪನ್​ (62), ಶೆರ್ಲಿ (53), ಅಭಿರಾಮಿ (25), ಅಖಿಲ್​ (29) ಮತ್ತು ರಿಯಾನ್​ ಎಂದು ಗುರುತಿಸಲಾಗಿದೆ. ಇದರಲ್ಲಿ ರಿಯಾನ್​ ಪುಟ್ಟ ಮಗು. ಅಭಿರಾಮಿಯ ಎಂಟು ತಿಂಗಳ ಪುತ್ರ. ಪ್ರತಾಪನ್​ ಅವರು ವರ್ಕಳದಲ್ಲಿ ತರಕಾರಿ ವ್ಯಾಪಾರಿಯಾಗಿದ್ದರು.

ಇವರಲ್ಲೀಗ ಪ್ರತಾಪನ್​ ಅವರ ಹಿರಿಯ ಮಗ ನಿಹುಲ್​ಗೆ ಗಂಭೀರ ಗಾಯಗಳಾಗಿವೆ. ತಡರಾತ್ರಿ ಇವರ ಮನೆಗೆ ಬೆಂಕಿ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ. ಈ ದುರಂತದಲ್ಲಿ ಐದು ಬೈಕ್​​ಗಳು ಧ್ವಂಸಗೊಂಡಿವೆ. ಮನೆಯಲ್ಲಿದ್ದ ಎಸಿ ಕೂಡ ಸಂಪೂರ್ಣವಾಗಿ ಹಾಳಾಗಿವೆ.  ಬೆಂಕಿ ಬೀಳಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ವಿಧಿವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ತನಿಖೆ ಶುರು ಮಾಡಲಾಗುತ್ತದೆ ಎಂದು ಗ್ರಾಮಾಂತರ ಎಸ್​ಪಿ ದಿವ್ಯಾ ಗೋಪಿನಾಥ್​ ತಿಳಿಸಿದ್ದಾರೆ.

ಇದನ್ನೂ ಓದಿ: Women’s Day: ಮಹಿಳಾ ಪ್ರಧಾನ ಸಿನಿಮಾಗಳಿಗೆ ವಿಶೇಷ ಮನ್ನಣೆ ನೀಡಿರುವ ಕನ್ನಡ ಪ್ರೇಕ್ಷಕ; ಇಲ್ಲಿವೆ ಜನಮನ ಗೆದ್ದ ಚಿತ್ರಗಳು