ಹರ್ದೀಪ್ ನಿಜ್ಜರ್ ಹತ್ಯೆ ವಿವಾದ: ಭಾರತ ಮತ್ತು ಕೆನಡಾ ಸಂಬಂಧ ಹೇಗಿದೆ? ಅಂಕಿ ಅಂಶಗಳಲ್ಲಿ ನೋಡೋಣ

India-Canada relations: ಕೆನಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು ಒಟ್ಟಾರೆ ಅಂತಾರಾಷ್ಟ್ರೀಯ ದಾಖಲಾತಿಯಲ್ಲಿ ಶೇಕಡಾ 40 ರಷ್ಟಿದ್ದಾರೆ.  ಕೆನಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್ (ಸಿಬಿಐಇ) ಪ್ರಕಾರ, ಭಾರತೀಯ ವಿದ್ಯಾರ್ಥಿಗಳು 2021 ರಲ್ಲಿ ಕೆನಡಾದ ಆರ್ಥಿಕತೆಗೆ 4.9 ಬಿಲಿಯನ್ ಅಮೆರಿಕನ್ ಡಾಲರ್ ಕೊಡುಗೆ ನೀಡಿದ್ದಾರೆ.

ಹರ್ದೀಪ್ ನಿಜ್ಜರ್ ಹತ್ಯೆ ವಿವಾದ: ಭಾರತ ಮತ್ತು  ಕೆನಡಾ ಸಂಬಂಧ ಹೇಗಿದೆ? ಅಂಕಿ ಅಂಶಗಳಲ್ಲಿ ನೋಡೋಣ
ಜಸ್ಟಿನ್ ಟ್ರುಡೊ- ನರೇಂದ್ರ ಮೋದಿ
Follow us
|

Updated on: Sep 22, 2023 | 4:47 PM

ದೆಹಲಿ ಸೆಪ್ಟೆಂಬರ್ 22: ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Nijjar) ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರ ಸಂಭಾವ್ಯ ಒಳಗೊಳ್ಳುವಿಕೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಸೋಮವಾರ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತೀಯ ಏಜೆಂಟರಿಗೆ ಕೊಲೆಗೆ ಸಂಬಂಧವಿದೆ ಎಂಬ ಕೆನಡಾದ (Canada) ಅನುಮಾನಗಳನ್ನು ಭಾರತ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಬುಧವಾರ, ಭಾರತವು ಕೆನಡಾದಲ್ಲಿರುವ ತನ್ನ ಪ್ರಜೆಗಳನ್ನು, ವಿಶೇಷವಾಗಿ ವಿದ್ಯಾರ್ಥಿಗಳು, ನಿಜ್ಜರ್ ಘಟನೆಯ ಮೇಲೆ ಉಲ್ಬಣಗೊಳ್ಳುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಲ್ಲಿರುವಂತೆ ಹೇಳಿದೆ. ಕೆನಡಾದ ಆರೋಪದ ಬೆನ್ನಲ್ಲೇ ಉಭಯ ರಾಷ್ಟ್ರಗಳು ರಾಜತಾಂತ್ರಿಕರನ್ನು ಹೊರ ಹಾಕಿದ್ದವು.

ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ-ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯವಾಗಿ ಮನ್ನಿಸಲಾದ ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ, ಅಲ್ಲಿನ ಎಲ್ಲಾ ಭಾರತೀಯರು ಮತ್ತು ಪ್ರಯಾಣದ ಯೋಜನೆ ಹೊಂದಿರುವವರು ಅತ್ಯಂತ ಜಾಗರೂಕರಾಗಿರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತದ ಪ್ರಯಾಣ ಸಲಹೆಯ ಕೆಲವೇ ಗಂಟೆಗಳ ನಂತರ, ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್ ಸುದ್ದಿಗಾರರಿಗೆ ಕೆನಡಾ ಸುರಕ್ಷಿತ ದೇಶ ಎಂದು ಹೇಳಿದ್ದಾರೆ

ಗುರುವಾರ, ಕೆನಡಾದಲ್ಲಿ ಭಾರತದ ವೀಸಾ ಪ್ರಕ್ರಿಯೆ ಕೇಂದ್ರವು ಸೇವೆಗಳನ್ನು ಸ್ಥಗಿತಗೊಳಿಸಿತು.”ಭಾರತೀಯ ಮಿಷನ್‌ನಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ, ಸೆಪ್ಟೆಂಬರ್ 21 ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೆ ರದ್ದು ಮಾಡಲಾಗಿದೆ ಎಂದು ಕೆನಡಾದ BLS ಭಾರತೀಯ ವೀಸಾ ಅರ್ಜಿ ಕೇಂದ್ರ ತಿಳಿಸಿದೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. BLS ಸಂಸ್ಥೆಯು ಭಾರತಕ್ಕೆ ವೀಸಾ ವಿನಂತಿಗಳನ್ನು ಪ್ರಕ್ರಿಯೆಗೊಳಿಸುತ್ತದೆ.

ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಭಾರತದಲ್ಲಿನ ತನ್ನ ಎಲ್ಲಾ ದೂತಾವಾಸಗಳು ತೆರೆದಿವೆ ಮತ್ತು ಸೇವೆಗಳನ್ನು ಒದಗಿಸುವುದನ್ನು ಮುಂದುವರೆಸಿದೆ, ಆದರೆ ಸಿಬ್ಬಂದಿ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿರುವುದಾಗಿ ಹೇಳಿದೆ. ಇತ್ತೀಚೆಗೆ, ಕೆನಡಾ ಕೂಡ ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ನಿಲ್ಲಿಸಿದೆ. ಆದಾಗ್ಯೂ, ಈ ಎರಡು ರಾಷ್ಟ್ರಗಳು ದೀರ್ಘಕಾಲದ ಸಂಬಂಧವನ್ನು ಹೊಂದಿವೆ.

ಭಾರತ ಮತ್ತು ಕೆನಡಾ ಸಂಬಂಧ ಹೇಗಿದೆ?

ಭಾರತೀಯ ವಿದ್ಯಾರ್ಥಿಗಳು

ಕೆನಡಾ ಭಾರತೀಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಆಕರ್ಷಕ ತಾಣವಾಗಿದೆ. 2022 ರಲ್ಲಿ, ಸುಮಾರು 300,000 ಭಾರತೀಯರು ಕೆನಡಾದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಭಾರತದ ಬ್ಯೂರೋ ಆಫ್ ಇಮಿಗ್ರೇಷನ್ ತಿಳಿಸಿದೆ. ಕೆನಡಾದಲ್ಲಿ 2022 ರಲ್ಲಿ ಅಧ್ಯಯನ ಪರವಾನಗಿ ಹೊಂದಿರುವವರ ಅಗ್ರ 10 ಮೂಲದ ದೇಶಗಳಲ್ಲಿ ಭಾರತ ಮೊದಲನೆಯದು.

ಕೆನಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು ಒಟ್ಟಾರೆ ಅಂತಾರಾಷ್ಟ್ರೀಯ ದಾಖಲಾತಿಯಲ್ಲಿ ಶೇಕಡಾ 40 ರಷ್ಟಿದ್ದಾರೆ.  ಕೆನಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್ (ಸಿಬಿಐಇ) ಪ್ರಕಾರ, ಭಾರತೀಯ ವಿದ್ಯಾರ್ಥಿಗಳು 2021 ರಲ್ಲಿ ಕೆನಡಾದ ಆರ್ಥಿಕತೆಗೆ 4.9 ಬಿಲಿಯನ್ ಅಮೆರಿಕನ್ ಡಾಲರ್ ಕೊಡುಗೆ ನೀಡಿದ್ದಾರೆ.

ಭಾರತ ಮತ್ತು ಕೆನಡಾ ಬಲವಾದ ಶಿಕ್ಷಣ ಪಾಲುದಾರಿಕೆಯನ್ನು ಹೊಂದಿವೆ. ಭಾರತೀಯ ಮತ್ತು ಕೆನಡಾದ ಸಂಸ್ಥೆಗಳ ನಡುವೆ 200 ಕ್ಕೂ ಹೆಚ್ಚು ಶೈಕ್ಷಣಿಕ ಪಾಲುದಾರಿಕೆಗಳಿವೆ.

ಭಾರತದಲ್ಲಿ ಕೆನಡಾದ ಪ್ರವಾಸಿಗರ ಸಂಖ್ಯೆ ಎಷ್ಟಿದೆ?

2021ರಲ್ಲಿ, 80,000 ಕೆನಡಾದ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಬ್ಯೂರೋ ಆಫ್ ಇಮಿಗ್ರೇಷನ್ ಪ್ರಕಾರ, ಹೀಗೆ ಭೇಟಿ ನೀಡದವರ ಸಂಖ್ಯೆಯಲ್ಲಿ ಕೆನಡಾ ನಾಲ್ಕನೇ ಸ್ಥಾನದಲ್ಲಿದೆ.

ವ್ಯಾಪಾರ ಸಂಬಂಧಗಳು

ಕೆನಡಾಕ್ಕೆ ಆದ್ಯತೆಯ ಮಾರುಕಟ್ಟೆ ಆಗಿದ್ದು, 2022 ರಲ್ಲಿ ಭಾರತವು ಕೆನಡಾದ 10 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದು, 2022-23ರಲ್ಲಿ $8.16 ಬಿಲಿಯನ್ ತಲುಪಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಔಷಧಗಳು, ರತ್ನಗಳು ಮತ್ತು ಆಭರಣಗಳು, ಜವಳಿ ಮತ್ತು ಯಂತ್ರೋಪಕರಣಗಳನ್ನು ಕೆನಡಾಕ್ಕೆ ಭಾರತ ರಫ್ತು ಮಾಡುತ್ತದೆ. ಇಲ್ಲಿ ರಫ್ತು ಮೌಲ್ಯ $4.1 ಶತಕೋಟಿ ಡಾಲರ್ ಇದೆ. ಅದೇ ವೇಳೆ ಭಾರತಕ್ಕೆ ಕೆನಡಾ $4.06 ಬಿಲಿಯನ್ ಡಾಲರ್ ಮೌಲ್ಯದಲ್ಲಿ ಬೇಳೆಕಾಳುಗಳು, ಮರ, ತಿರುಳು ಮತ್ತು ಕಾಗದ ಮತ್ತು ಗಣಿಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

ಇದನ್ನೂ ಓದಿ: ಕೆನಡಾದಲ್ಲಿದ್ದ ಮಹೀಂದ್ರ ಅಂಗಸಂಸ್ಥೆ ಬಂದ್; ದಿಢೀರ್ ಮುಚ್ಚಿದ ಪರಿಣಾಮ ಭಾರತೀಯ ಕಂಪನಿಗೆ ಸಾವಿರಾರು ಕೋಟಿ ನಷ್ಟ

2023-24 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೆನಡಾಕ್ಕೆ ಭಾರತದ ರಫ್ತುಗಳು ಸುಮಾರು $ 911 ಮಿಲಿಯನ್ ಆಗಿದ್ದರೆ, ಕೆನಡಾದಿಂದ ಆಮದು $ 990 ಮಿಲಿಯನ್ ಆಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ