AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಯಾಣ ರಾಜಕೀಯ ಬಿಕ್ಕಟ್ಟು: ವಿಶ್ವಾಸ ಮತ ಸಾಬೀತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ ಬರೆದ ದುಷ್ಯಂತ್ ಚೌಟಾಲ

ಮೇ 7 ರಂದು, ಮೂವರು ಸ್ವತಂತ್ರ ಶಾಸಕರ ಹಠಾತ್ ನಡೆಯ ನಂತರ ಹರ್ಯಾಣ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಪುಂಡ್ರಿಯಿಂದ ರಣಧೀರ್ ಗೋಲನ್, ನಿಲೋಖೇರಿಯಿಂದ ಧರ್ಮಪಾಲ್ ಗೊಂಡರ್ ಮತ್ತು ಚಾರ್ಖಿ ದಾದ್ರಿಯಿಂದ ಸೋಂಬಿರ್ ಸಿಂಗ್ ಸಾಂಗ್ವಾನ್ ಮೂವರು ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

ಹರ್ಯಾಣ ರಾಜಕೀಯ ಬಿಕ್ಕಟ್ಟು: ವಿಶ್ವಾಸ ಮತ ಸಾಬೀತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ ಬರೆದ ದುಷ್ಯಂತ್ ಚೌಟಾಲ
ದುಷ್ಯಂತ್ ಚೌಟಾಲ
ರಶ್ಮಿ ಕಲ್ಲಕಟ್ಟ
|

Updated on:May 09, 2024 | 4:32 PM

Share

ದೆಹಲಿ ಮೇ 09: ಮೂರು ಪಕ್ಷೇತರ ಶಾಸಕರು ನಯಾಬ್ ಸಿಂಗ್ ಸೈನಿಗೆ ಬೆಂಬಲವನ್ನು ಹಿಂತೆಗೆದುಕೊಂಡ ದಿನಗಳ ನಂತರ, ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿಶ್ವಾಸಮತ ಸಾಬೀತಿಗೆ ಆಗ್ರಹಿಸಿ ಜನನಾಯಕ್ ಜನತಾ ಪಾರ್ಟಿ (JJP) ಯ ದುಷ್ಯಂತ್ ಚೌಟಾಲ (Dushyant Chautala) ಗುರುವಾರ ಹರ್ಯಾಣ (Haryana) ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬಿಜೆಪಿಯ ಮಾಜಿ ಮಿತ್ರ ಪಕ್ಷವಾದ ಜನನಾಯಕ್ ಜನತಾ ಪಕ್ಷವು ಹರ್ಯಾಣದಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್‌ಗೆ (Congress) ಸಹಾಯ ಮಾಡಲು ಸಿದ್ಧವಾಗಿದೆ ಎಂದು ಈಗಾಗಲೇ ಹೇಳಿದೆ.  ಹರ್ಯಾಣದ ಬಿಜೆಪಿ ಸರ್ಕಾರಕ್ಕೆ ಇನ್ನು ಮುಂದೆ ಬಹುಮತವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಬುಧವಾರ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ತಮ್ಮ ಪತ್ರದಲ್ಲಿ ಜೆಜೆಪಿ ನಾಯಕ ರಾಜ್ಯಪಾಲರಲ್ಲಿ ತಕ್ಷಣವೇ ವಿಶ್ವಾಸ ಮತ ಸಾಬೀತು ಪಡೆಸಲು ನಿರ್ದೇಶಿಸುವಂತೆ ಒತ್ತಾಯಿಸಿದ್ದಾರೆ.

ಮೇ 7 ರಂದು, ಮೂವರು ಸ್ವತಂತ್ರ ಶಾಸಕರ ಹಠಾತ್ ನಡೆಯ ನಂತರ ಹರ್ಯಾಣ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಪುಂಡ್ರಿಯಿಂದ ರಣಧೀರ್ ಗೋಲನ್, ನಿಲೋಖೇರಿಯಿಂದ ಧರ್ಮಪಾಲ್ ಗೊಂಡರ್ ಮತ್ತು ಚಾರ್ಖಿ ದಾದ್ರಿಯಿಂದ ಸೋಂಬಿರ್ ಸಿಂಗ್ ಸಾಂಗ್ವಾನ್ ಮೂವರು ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

“ಎರಡು ತಿಂಗಳ ಹಿಂದೆ ರಚನೆಯಾದ ಸರ್ಕಾರವು ಈಗ ಬಹುಮತ ಕಳೆದುಕೊಂಡಿದೆ. ಅವರನ್ನು ಬೆಂಬಲಿಸಿದ ಇಬ್ಬರು ಶಾಸಕರು- ಒಬ್ಬರು ಬಿಜೆಪಿ ಮತ್ತು ಇನ್ನೊಬ್ಬರ ಪಕ್ಷೇತರ ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರನ್ನು ಬೆಂಬಲಿಸುತ್ತಿದ್ದ ಮೂವರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ. ರಾಜ್ಯಪಾಲರಿಗೆ ಪತ್ರ ಬರೆದಿರುವ ಜೆಜೆಪಿ ಈ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ನಾವು ಬೆಂಬಲ ನೀಡುತ್ತೇವೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅವರು ಪ್ರಸ್ತುತ ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕು ”ಎಂದು ಎಎನ್ಐ ಜತೆ ಮಾತನಾಡಿದ ಚೌಟಾಲ ಹೇಳಿದ್ದಾರೆ.

ರಾಜ್ಯ ಸರ್ಕಾರವು “ಬಹುಮತ” ಹೊಂದಿಲ್ಲದಿದ್ದರೆ ರಾಜ್ಯಪಾಲರು ಹರ್ಯಾಣ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು. ಸರ್ಕಾರಕ್ಕೆ ಬಹುಮತ ಇಲ್ಲದಿದ್ದಲ್ಲಿ ತಕ್ಷಣವೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲು ವಿಶ್ವಾಸಮತ ಪರೀಕ್ಷೆಗೆ ಆದೇಶಿಸಲು ರಾಜ್ಯಪಾಲರಿಗೆ ಅಧಿಕಾರವಿದೆ ಎಂದು ಹೇಳಿದ್ದಾರೆ.

ಆದರೂ ತಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ. ಅವರ ಹಿಂದಿನ ಮತ್ತು ಪಕ್ಷದ ಸಹೋದ್ಯೋಗಿ ಎಂಎಲ್ ಖಟ್ಟರ್ ಅವರ ಅನೇಕ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು “ಚಿಂತಿಸಲು ಏನೂ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ದೂರನ್ನು ಹಿಂಪಡೆದ ಸಂದೇಶ್​ಖಾಲಿಯ ಇಬ್ಬರು ಮಹಿಳೆಯರು

ಲೋಕಸಭೆ ಚುನಾವಣೆಗೆ ಕೇವಲ ಹದಿನೈದು ದಿನಗಳು ಬಾಕಿ ಇರುವಾಗ ಮತ್ತು ಅಕ್ಟೋಬರ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಸಮಯದಲ್ಲಿ ರಾಜ್ಯದಲ್ಲಿ ತ್ವರಿತ ಗತಿಯ ರಾಜಕೀಯ ಬೆಳವಣಿಗೆಗಳು ಬಂದಿವೆ. 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯು ಪ್ರಸ್ತುತ 88 ಸದಸ್ಯರ ಬೆಂಬ ಹೊಂದಿದೆ. ಕರ್ನಾಲ್ ಮತ್ತು ರಾನಿಯಾ ವಿಧಾನಸಭಾ ಸ್ಥಾನಗಳು ಖಾಲಿ ಇವೆ. ಸದನದಲ್ಲಿ ಬಿಜೆಪಿ 40, ಕಾಂಗ್ರೆಸ್ 30 ಮತ್ತು ಜೆಜೆಪಿ 10 ಶಾಸಕರನ್ನು ಹೊಂದಿದೆ. INLD ಮತ್ತು ಹರ್ಯಾಣ ಲೋಕಿತ್ ಪಕ್ಷವು ಒಬ್ಬ ಸದಸ್ಯರನ್ನು ಹೊಂದಿದೆ. ಆರು ಪಕ್ಷೇತರರು ಇದ್ದಾರೆ.

ಸರ್ಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರ ಬೆಂಬಲವಿದೆ. ಪಕ್ಷೇತರ ಶಾಸಕ ನಯನ್ ಪಾಲ್ ರಾವತ್ ಅವರು 2019 ರಲ್ಲಿ ಬಿಜೆಪಿಗೆ ಬೇಷರತ್ ಬೆಂಬಲ ನೀಡಿದ್ದು ಅದು ಈಗಲೂ ಮುಂದುವರೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Thu, 9 May 24