AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚುತ್ತಿದೆ ಉಸಿರಾಟದ ತೊಂದರೆ; ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಏನು ಮಾಡಬೇಕು?

ಕಳೆದ ಕೆಲವು ದಿನಗಳಲ್ಲಿ, ಉಸಿರಾಟದ ಕಾಯಿಲೆಗಳ ಇತಿಹಾಸ ಹೊಂದಿರುವ ರೋಗಿಗಳು ದೇಶದ ಅತಿದೊಡ್ಡ ಸಾರ್ವಜನಿಕ ಆಸ್ಪತ್ರೆಯಾದ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ(ಏಮ್ಸ್) ಸಾಲುಗಟ್ಟಿ ನಿಲ್ಲಲು ಪ್ರಾರಂಭಿಸಿದ್ದಾರೆ.

ಹೆಚ್ಚುತ್ತಿದೆ ಉಸಿರಾಟದ ತೊಂದರೆ; ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಏನು ಮಾಡಬೇಕು?
ಉಸಿರಾಟ
S Chandramohan
| Updated By: ಸುಷ್ಮಾ ಚಕ್ರೆ|

Updated on: Nov 10, 2021 | 8:50 PM

Share

ನವದೆಹಲಿ: ಭಾರತದ ನಗರಗಳಲ್ಲಿ ಈ ವರ್ಷ ಕೊರೊನಾ ಹಾಗೂ ವಾಯು ಮಾಲಿನ್ಯ ಎರಡೂ ಒಟ್ಟೊಟ್ಟಿಗೆ ಬಂದಿವೆ. ಇದರಿಂದ ಭಾರತದಲ್ಲಿ ಈ ವರ್ಷ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ವಾಯು ಮಾಲಿನ್ಯದ ಜೊತೆಗೆ ಚಳಿಗಾಲ ಕೂಡ ಬರುತ್ತಿರುವುದರಿಂದ ಉಸಿರಾಟದ ಸಮಸ್ಯೆಯ ರೋಗಿಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಹೀಗಾಗಿ ಜನರು ಚಳಿಗಾಲದಲ್ಲಿ ಏನೇನು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ದೆಹಲಿ ಹಾಗೂ ಉತ್ತರ ಭಾರತದಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿರುವುದರಿಂದ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಶ್ವಾಸಕೋಶ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸೌಮ್ಯ, ಮಧ್ಯಮ ಅಥವಾ ಗಂಭೀರ ಕೊರೊನಾ ಸೋಂಕಿಗೆ ತುತ್ತಾಗಿದ್ದ ಹೊಸ ವರ್ಗದ ಜನರಲ್ಲಿ ಶ್ವಾಸಕೋಶದ ಸಮಸ್ಯೆ ಸೃಷ್ಟಿಯಾಗಿದ್ದು, ಈ ಹೊಸ ಜನರ ಗುಂಪು ಈಗ ವೈದ್ಯರು ಹೇಳುವಂತೆ ಹೆಚ್ಚು ದುರ್ಬಲರಾಗಿದ್ದಾರೆ. ಈಗ ವಾಯು ಮಾಲಿನ್ಯದ ಕಾರಣದಿಂದಾಗಿ ಹೆಚ್ಚಿನ ತೊಂದರೆಯನ್ನು ಎದುರಿಸಬೇಕಾಗಬಹುದು.

ದೆಹಲಿ, ಬೆಂಗಳೂರು, ಅಹಮದಾಬಾದ್ ಮತ್ತು ಇಂದೋರ್‌ನಂತಹ ನಗರಗಳನ್ನು ಒಳಗೊಂಡಂತೆ ಭಾರತದಾದ್ಯಂತದ ವೈದ್ಯರು ದೀರ್ಘಕಾಲದ ಕೆಮ್ಮು , ಆಸ್ತಮಾ ಮತ್ತು ಶ್ವಾಸನಾಳದ ಸುತ್ತಲಿನ ಅಂಗಾಂಶಗಳ ಉರಿಯೂತದ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗಿದ್ದಾರೆ. ಮುಂದಿನ ತಿಂಗಳು ಚಳಿಗಾಲವು ದೇಶವನ್ನು ಆವರಿಸಿಕೊಳ್ಳುವುದರಿಂದ ಈ ಪ್ರಕರಣಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ವೈದ್ಯರು ನಿರೀಕ್ಷಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ಉಸಿರಾಟದ ಕಾಯಿಲೆಗಳ ಇತಿಹಾಸ ಹೊಂದಿರುವ ರೋಗಿಗಳು ದೇಶದ ಅತಿದೊಡ್ಡ ಸಾರ್ವಜನಿಕ ಆಸ್ಪತ್ರೆಯಾದ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ(ಏಮ್ಸ್) ಸಾಲುಗಟ್ಟಿ ನಿಲ್ಲಲು ಪ್ರಾರಂಭಿಸಿದ್ದಾರೆ.

“ಇದು ಈಗ ಪ್ರತಿ ವರ್ಷದ ಪ್ರವೃತ್ತಿಯಾಗಿದೆ. ಈ ವರ್ಷ, ಕೋವಿಡ್-19 ಸೋಂಕಿನಿಂದ (ಶ್ವಾಸಕೋಶದ ಸೋಂಕು) ಬಳಲುತ್ತಿರುವ ಜನರಲ್ಲಿ ಹದಗೆಡುತ್ತಿರುವ ರೋಗಲಕ್ಷಣಗಳ ಪ್ರಕರಣಗಳನ್ನು ಸಹ ನಾವು ನೋಡಬಹುದು. ಶ್ವಾಸಕೋಶದ ಫೈಬ್ರೋಸಿಸ್ ಅಥವಾ ದುರ್ಬಲಗೊಂಡ ಶ್ವಾಸಕೋಶದ ಕಾರ್ಯವನ್ನು ಹೊಂದಿರುವ ಜನರು ಈ ತಿಂಗಳುಗಳಲ್ಲಿ ಹೆಚ್ಚು ದುರ್ಬಲರಾಗುತ್ತಾರೆ. ಮುಂದಿನ 3-4 ತಿಂಗಳುಗಳಲ್ಲಿ ಚಳಿಗಾಲ, ವಾಯುಮಾಲಿನ್ಯ ಮತ್ತು ಕೋವಿಡ್‌ನ ಉಸಿರಾಟದ ಪರಿಣಾಮ ಸೇರಿದಂತೆ ವಿವಿಧ ಅಂಶಗಳ ಸಂಯೋಜನೆಯಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಜನರು ಉಸಿರಾಟದ ಕಾಯಿಲೆಗಳಿಗೆ ಆಸ್ಪತ್ರೆಗೆ ಭೇಟಿ ನೀಡುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಶ್ವಾಸಕೋಸ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಅನಂತ ಮೋಹನ್ ಹೇಳಿದರು. ಜಾಗತಿಕ ಜನಸಂಖ್ಯೆಯ 18% ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಭಾರತದ ಜನಸಂಖ್ಯೆಯ 4.2% ಜನರು COPD ಮತ್ತು ಇತರ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ.

ಬೆಂಗಳೂರಿನ ನಾರಾಯಣ ಹೆಲ್ತ್‌ನ ಶ್ವಾಸಕೋಶ ತಜ್ಞ ವೈದ್ಯ ಡಾ ಮಂಜುನಾಥ್ ಪ್ರಕಾರ, ಪ್ರತಿ ವರ್ಷ ದೀಪಾವಳಿಯ ನಂತರ, ವಾಯುಮಾಲಿನ್ಯದಿಂದ ಉಂಟಾಗುವ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನಾವು ಗಮನಿಸುತ್ತಿದ್ದೇವೆ. ಇದೀಗ, ಪ್ರತಿ 10 ರೋಗಿಗಳಲ್ಲಿ, 6-7 ರೋಗಿಗಳ ಸ್ಥಿತಿಯು ಹದಗೆಡಲು ಗಾಳಿಯ ಗುಣಮಟ್ಟ ಕುಸಿತವು ಕಾರಣವಾಗಿದೆ.

“ಉಸಿರಾಟದ ಕಾಯಿಲೆಯ ಇತಿಹಾಸ ಹೊಂದಿರುವ ಜನರು, ತೀವ್ರವಾದ ಕೆಮ್ಮು, ಉಸಿರಾಟದ ತೊಂದರೆ ಅಥವಾ ಶ್ವಾಸಕೋಶದಲ್ಲಿ ಸೋಂಕಿನ ಬಗ್ಗೆ ದೂರು ನೀಡುತ್ತಾರೆ. ಆದರೆ ಶ್ವಾಸಕೋಶದ ಸ್ಥಿತಿಯನ್ನು ಎಂದಿಗೂ ಎದುರಿಸದ ಜನರು ಸಾಮಾನ್ಯವಾಗಿ ನಿರಂತರ ಮತ್ತು ತೀವ್ರವಾದ ಕೆಮ್ಮಿನ ಬಗ್ಗೆ ದೂರು ನೀಡಲು ಪ್ರಾರಂಭಿಸಿದ್ದಾರೆ.”

ಇದೇ ರೀತಿಯ ಅಂದಾಜುಗಳನ್ನು ಇತರ ವೈದ್ಯರು ಹಂಚಿಕೊಂಡಿದ್ದಾರೆ. ನನ್ನ ಕ್ಲಿನಿಕ್‌ನಲ್ಲಿರುವ ಪ್ರತಿ 10 ರೋಗಿಗಳಲ್ಲಿ, ಪ್ರತಿದಿನ 6-7 ರೋಗಿಗಳು ವಾಯುಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಾರೆ. AQI ಮಟ್ಟ ಕುಸಿಯುತ್ತಿದ್ದಂತೆ, ರೋಗಿಗಳು ಕೆಲವೊಮ್ಮೆ ಜನದಟ್ಟಣೆಯ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ ಎಂದು ಇಂದೋರ್‌ನ ಮೇದಾಂತ ಆಸ್ಪತ್ರೆಯ ಸಲಹೆಗಾರ ಡಾ ತನಯ್ ಜೋಶಿ ಹೇಳಿದ್ದಾರೆ.

“ತಾಪಮಾನವು ಕುಸಿಯುತ್ತಿದ್ದಂತೆ, AQI ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಮುಂದಿನ 20 ದಿನಗಳಲ್ಲಿ, ಪ್ರಕರಣಗಳಲ್ಲಿ ನಿಜವಾದ ಏರಿಕೆಯನ್ನು ನಾನು ನಿರೀಕ್ಷಿಸುತ್ತೇನೆ. ಈ ಬಾರಿ ಕೋವಿಡ್ -19 ಕಾರಣದಿಂದಾಗಿ ಶ್ವಾಸಕೋಶದ ಫೈಬ್ರೋಸಿಸ್‌ನಿಂದ ಬಳಲುತ್ತಿರುವ ರೋಗಿಗಳಿಂದಲೂ ಪ್ರಕರಣಗಳು ಬರುತ್ತವೆ ಎಂದು ಅಹಮದಾಬಾದ್‌ನ ನಾರಾಯಣ ಹೆಲ್ತ್‌ನ ಶ್ವಾಸಕೋಶ ಶಾಸ್ತ್ರಜ್ಞ ಡಾ ಮಿತೇಶ್ ದೇವ್ ಹೇಳಿದ್ದಾರೆ.

ದೀರ್ಘಾವಧಿಯಲ್ಲಿ, ಶ್ವಾಸಕೋಶದ ಕ್ಯಾನ್ಸರ್ ವಾಯುಮಾಲಿನ್ಯದೊಂದಿಗೆ ಸಂಬಂಧ ಹೊಂದಿದೆ. ಇನ್ನೂ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳಬಹುದು. “ಭಯಾನಕವಾಗಿ ಕಳಪೆ ಗಾಳಿಯನ್ನು ಉಸಿರಾಡುವುದು ಬ್ರಾಂಕೈಟಿಸ್ ಗೆ ಕಾರಣವಾಗಬಹುದು, ಇದು ವಾಯುಮಾರ್ಗಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಇತರ ಸಂಭವನೀಯ ರೋಗಗಳು ಬ್ರಾಂಕಿಯೋಲೈಟಿಸ್ ಮತ್ತು ಬ್ರಾಂಕಿಯೆಕ್ಟಾಸಿಸ್. ಮಾಲಿನ್ಯದ ಹೆಚ್ಚಳ ಮತ್ತು ಕಳಪೆ ಗಾಳಿಯ ಗುಣಮಟ್ಟ ಸೂಚ್ಯಂಕದಿಂದಾಗಿ ಇವುಗಳು ಪ್ರತಿಬಂಧಕ ವಾಯುಮಾರ್ಗ ರೋಗಗಳಾಗಿವೆ ಎಂದು ಡಾ ಜೋಶಿ ಹೇಳಿದ್ದಾರೆ.

ಅನೇಕ ಅಧ್ಯಯನಗಳು ಧೂಮಪಾನಿಗಳು ಅಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಳಕ್ಕೆ ಸಂಬಂಧಿಸಿಲ್ಲ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು ಕಳಪೆ ಗಾಳಿಯ ಗುಣಮಟ್ಟ ಸೂಚ್ಯಂಕದಿಂದ ಉಂಟಾಗುತ್ತವೆ ಎಂದು ಸಾಬೀತಾಗಿದೆ ಎಂದು ಡಾ ಮಂಜುನಾಥ್ ಹೇಳಿದರು. ಇದೇ ರೀತಿಯ ಅವಲೋಕನಗಳನ್ನು ಇತರ ಆರೋಗ್ಯ ತಜ್ಞರು ಪ್ರತಿಧ್ವನಿಸಿದ್ದಾರೆ. “ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯ (COPD) ತೀವ್ರ ಉಲ್ಬಣಕ್ಕೆ ಮಾಲಿನ್ಯವು ಒಂದು ಕೊಡುಗೆಯಾಗಿದೆ. ಕಳೆದ ಕೆಲವು ದಿನಗಳಲ್ಲಿ, ಮಾಲಿನ್ಯವು ದೆಹಲಿ-ಎನ್‌ಸಿಆರ್, ಬೆಂಗಳೂರು ಮತ್ತು ಇತರ ನಗರಗಳ ನಿವಾಸಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇದು ಜನರ ಒಪಿಡಿ ಭೇಟಿಗಳ ಹೆಚ್ಚಳಕ್ಕೆ ಮತ್ತು ಮುಖ್ಯವಾಗಿ ಬ್ರಾಂಕೈಟಿಸ್, ಅಸ್ತಮಾ ಮತ್ತು ಸಿಒಪಿಡಿಯ ತೀವ್ರ ದಾಳಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಆಸ್ಪತ್ರೆಯ ದಾಖಲಾತಿಗಳ ಹೆಚ್ಚಳಕ್ಕೆ ಕಾರಣವಾಯಿತು ಎಂದು ರೆಸ್ಮೆಡ್‌ನ ಡಾ ಸಿಬಾಸಿಶ್ ಡೇ ಹೇಳಿದ್ದಾರೆ.

ಏನು ಮಾಡಬಾರದು?: ನವದೆಹಲಿಯ ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಉಸಿರಾಟದ ಔಷಧದ ಹಿರಿಯ ಸಲಹೆಗಾರ ಡಾ. ಅನಿಮೇಶ್ ಆರ್ಯ ಅವರ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಹಬ್ಬದ ಪೂರ್ವ ಋತುವಿಗೆ ಹೋಲಿಸಿದರೆ ಉಸಿರಾಟದ ಸಮಸ್ಯೆಗಳನ್ನು ವರದಿ ಮಾಡುವ ರೋಗಿಗಳಲ್ಲಿ ಸುಮಾರು 20% ಹೆಚ್ಚಳವನ್ನು ಕಾಣಬಹುದು. COPD ಮತ್ತು ಆಸ್ತಮಾದಂತಹ ಉಸಿರಾಟದ ಕಾಯಿಲೆಗಳನ್ನು ಹೊಂದಿರುವ ಹಾಲಿ ರೋಗಿಗಳು ವೈದ್ಯರು ಸೂಚಿಸಿದ ಔಷಧಿಗಳೊಂದಿಗೆ ಮುಂದುವರಿಯಬೇಕು. “ಉಸಿರಾಟದಲ್ಲಿ ತೊಂದರೆ ಅಥವಾ ಉಸಿರಾಟದ ತೊಂದರೆಯ ಸಂದರ್ಭದಲ್ಲಿ ಬೇಗನೇ ಹೋಗಿ ಚಿಕಿತ್ಸೆ ನೀಡುವ ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯ. ಮುಂದುವರಿದ ಉಸಿರಾಟದ ಕಾಯಿಲೆ ಇರುವ ವ್ಯಕ್ತಿಗಳು ರೋಗಲಕ್ಷಣಗಳನ್ನು ಉಲ್ಬಣಗೊಳಿಸುವುದನ್ನು ತಪ್ಪಿಸಲು ಸೂಚಿಸಲಾದ ಮನೆ-ಆಧಾರಿತ ನಾನ್-ಇನ್ವೇಸಿವ್ ವೆಂಟಿಲೇಷನ್ (ಎನ್ಐವಿ) ಮತ್ತು ದೀರ್ಘಾವಧಿಯ ಆಮ್ಲಜನಕ ಚಿಕಿತ್ಸೆ (ಎಲ್ಟಿಒಟಿ) ಯೊಂದಿಗೆ ಮುಂದುವರಿಯಬೇಕು ಎಂದು ರೆಸ್ಮೆಡ್​ನ ಡಾ. ಸಿಬಾಸಿಶ್ ಡೇ ಹೇಳಿದ್ದಾರೆ. ಏರ್ ಪ್ಯೂರಿಫೈಯರ್ ಗಳಿಂದ ಒಳಾಂಗಣ ಮಾಲಿನ್ಯವನ್ನು ಕಡಿಮೆ ಮಾಡಲು ಸಾಧ್ಯ ಎಂದು ಸಾಬೀತಾಗಿದೆ ಎಂದು ವೈದ್ಯರು ಹೇಳಿದ್ದಾರೆ. ” ಏರ್ ಫ್ಯೂರಿಫೈಯರ್ ಗಳ ಬಳಕೆಯ ಮೂಲಕ ಒಳಾಂಗಣ ಮಾಲಿನ್ಯದಲ್ಲಿ ಉತ್ತಮ ಪ್ರಮಾಣದ ಕಡಿತವನ್ನು ತೋರಿಸಿದ್ದಾರೆ. ವಿಶೇಷವಾಗಿ ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುವವರಿಗೆ ಅಥವಾ ಯಾವುದೇ ನಿರ್ಮಾಣ ಸ್ಥಳವು ಹತ್ತಿರದಲ್ಲಿದ್ದರೆ ಇದು ಉತ್ತಮ ಆಯ್ಕೆಯಾಗಿದೆ ಎಂದು ಡಾ. ಮಂಜುನಾಥ್ ಹೇಳಿದರು.

“ಜನರು ಮನೆಯಲ್ಲಿ ಸೊಳ್ಳೆ ಸುರುಳಿಗಳು ಅಥವಾ ಅಗರಬತ್ತಿಗಳನ್ನು ಬಳಸುವುದರಿಂದ ದೂರವಿರಬೇಕು. ಏಕೆಂದರೆ ಅವು ಒಳಾಂಗಣ ಮಾಲಿನ್ಯಕ್ಕೆ ಕಾರಣವಾಗುತ್ತವೆ” ಎಂದು ನಾರಾಯಣ್ ಹೆಲ್ತ್‌ನ ಡಾ. ದೇವ್ ಸಲಹೆ ನೀಡಿದರು. ಅಲ್ಲದೆ, ವಿಶೇಷವಾಗಿ ದಟ್ಟ ಹೊಗೆಯು ಸುತ್ತಲೂ ಇರುವಾಗ ವ್ಯಾಯಾಮ ಮತ್ತು ನಡಿಗೆಯನ್ನು ತಪ್ಪಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Air Pollution: ದೀಪಾವಳಿ ಹಬ್ಬದ ಬಳಿಕ ಬೆಂಗಳೂರಿನಲ್ಲಿ ಕೊಂಚ ಮಟ್ಟಿಗೆ ಏರಿಕೆಯಾದ ವಾಯುಮಾಲಿನ್ಯ

Air Pollution: ಕಲುಷಿತವಾಗುತ್ತಿದೆ ಪ್ರಾಣವಾಯು; ಅತಿ ಹೆಚ್ಚು ವಾಯು ಮಾಲಿನ್ಯವಿರುವ ಭಾರತದ ಟಾಪ್ 10 ನಗರಗಳಿವು

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!