AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛಾಯಾಗ್ರಾಹಕನಿಗೆ ಹೊಡೆದ ವರ: ಕೊನೆಗೂ ಬಯಲಾಯ್ತು ಅಸಲಿ ವಿಚಾರ

ಈ ಘಟನೆ ನಂತರ ಮದುವೆ ಹುಡುಗಿ ಬಿದ್ದು ಬಿದ್ದು ನಕ್ಕಿದ್ದಳು. ಅಷ್ಟೇ ಅಲ್ಲ, ಛಾಯಾಗ್ರಾಹಕನ ಮುಖದಲ್ಲಿ ಸಣ್ಣದಾದ ನಗು ಇತ್ತು. ಇದನ್ನು ನೋಡಿದ ಅನೇಕರು ಇದು ಯಾರೋ ಹೇಳಿ ಮಾಡಿಸಿದ ವಿಡಿಯೋ ಏಂದು ಹೇಳಿಕೊಂಡಿದ್ದರು.

ಛಾಯಾಗ್ರಾಹಕನಿಗೆ ಹೊಡೆದ ವರ: ಕೊನೆಗೂ ಬಯಲಾಯ್ತು ಅಸಲಿ ವಿಚಾರ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Feb 14, 2021 | 1:38 PM

Share

ಕೆಲ ದಿನಗಳ ಹಿಂದಿನ ಮಾತು. ವಾಟ್ಸಾಪ್​ ಸ್ಟೇಟಸ್​ಗಳಲ್ಲಿ, ಗ್ರೂಪ್​ಗಳಲ್ಲಿ ಬರುವ ವಿಡಿಯೋಗಳಲ್ಲಿ, ಫೇಸ್​ಬುಕ್​ನಲ್ಲಿ, ಇನ್​ಸ್ಟಾಗ್ರಾಂನಲ್ಲಿ….ಕೊನೆಗೆ ಟ್ವಿಟ್ಟರ್​ನಲ್ಲೂ ಅದೇ ವಿಡಿಯೋ. ಆ ವಿಡಿಯೋ ಬೇರೆ ಯಾವುದೂ ಅಲ್ಲ. ಫೋಟೋಗ್ರಾಫರ್​ ಓರ್ವ ವಧುವಿನ ಫೋಟೋ ತೆಗೆಯಲು ಹೋಗಿ ವರನಿಂದ ಹೊಡೆತ ತಿಂದಿದ್ದು. ಈ ವಿಡಿಯೋದ ಅಸಲಿ ಸತ್ಯ ಈಗ ಬಯಲಾಗಿದೆ.

ಈ ಘಟನೆಯನ್ನು ಒಮ್ಮೆ ಮೆಲುಕು ಹಾಕೋದಾದರೆ, ಮದುವೆ ದಿನ ಗಂಡು ಹೆಣ್ಣು ವೇದಿಕೆ ಮೇಲೆ ನಿಂತಿದ್ದರು. ವೇದಿಕೆಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮದುವೆ ಹುಡುಗಿಯ ಎದುರು ಬಂದ ಫೋಟೋಗ್ರಾಫರ್​ ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದ. ಕೆಲವೊಂದು ಹತ್ತಿರದ ಶಾಟ್​ಗಳನ್ನು ತೆಗೆದರೆ, ಇನ್ನೂ ಕೆಲವು ದೂರದ ಶಾಟ್​ಗಳನ್ನು ತೆಗೆಯುತ್ತಿದ್ದ. ಆದರೆ, ಹುಡುಗಿ ಪಕ್ಕ ನಿಂತ ಮದುವೆ ಗಂಡಿನ ಒಂದೇ ಒಂದು ಫೋಟೋವನ್ನು ಛಾಯಾಗ್ರಾಹಕ ತೆಗೆದಿರಲಿಲ್ಲ.

ವೇದಿಕೆಯ ಮೇಲೆ ಹುಡುಗಿ ಮಾತ್ರ ಇದ್ದಾಳೆ ಎಂಬಂತಿತ್ತು ಛಾಯಾಗ್ರಾಹಕನ ವರ್ತನೆ. ಮದುವೆ ಗಂಡು ಕೂಡ ತುಂಬಾನೇ ತಾಳ್ಮೆಯಿಂದ ಇದನ್ನು ನೋಡುತ್ತಲೇ ಇದ್ದ. ಸಮಯ ಕಳೆದಂತೆ ಹುಡುಗಿ ಸಮೀಪ ಹೋಗುತ್ತಿದ್ದದ್ದನ್ನು ನೋಡಿ ಮದುವೆ ಗಂಡಿನ ಪಿತ್ತ ನೆತ್ತಿಗೇರಿತ್ತು. ತಡ ಮಾಡದೆ, ಛಾಯಾಗ್ರಾಹಕನ ತಲೆಗೆ ಹೊಡೆದೇ ಬಿಟ್ಟ ಮದುಮಗ.

ಈ ಘಟನೆ ನಂತರ ಮದುವೆ ಹುಡುಗಿ ಬಿದ್ದು ಬಿದ್ದು ನಕ್ಕಿದ್ದಳು. ಅಷ್ಟೇ ಅಲ್ಲ, ಛಾಯಾಗ್ರಾಹಕನ ಮುಖದಲ್ಲಿ ಸಣ್ಣದಾದ ನಗು ಇತ್ತು. ಇದನ್ನು ನೋಡಿದ ಅನೇಕರು ಇದು ಯಾರೋ ಹೇಳಿ ಮಾಡಿಸಿದ ವಿಡಿಯೋ ಏಂದು ಹೇಳಿಕೊಂಡಿದ್ದರು. ಈ ವಿಡಿಯೋದ ಅಸಲಿ ವಿಚಾರ ಕೊನೆಗೂ ಬಯಲಾಗಿದೆ. ವಿಡಿಯೋದಲ್ಲಿದ್ದ ಹುಡುಗಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿರುವವರು ಛತ್ತೀಸ್​​ಗಢದ ನಟಿ ಅನಿಕೃತಿ ಚೌಹಾಣ್​​. ಇದೊಂದು ಸಿನಿಮಾದ ಶೂಟಿಂಗ್​ ದೃಶ್ಯವಂತೆ. ಈ ಬಗ್ಗೆ ಬರೆದುಕೊಂಡಿರುವ ನಟಿ, ಇದು ನನ್ನ ಸಿನಿಮಾ ‘ಡಾರ್ಲಿಂಗ್​ ಪ್ಯಾರ್ ಜುಕ್ತಾ ನಹಿ’ ವೀಡಿಯೊ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ವಧುವಿನ ಫೋಟೋ ತೆಗೆಯಹೋದ ಫೋಟೋಗ್ರಾಫರ್​ ಬುರುಡೆ ಕಳಚಿ ಬೀಳುವಂತೆ ಹೊಡೆದ ಮದುಮಗ: ವಿಡಿಯೋ ವೈರಲ್

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!