ಮಾಧ್ಯಮ ಸಂದರ್ಶನಗಳಿಂದ ಸಿನಿಮಾ ರಂಗದವರೆಗೆ; ಆರ್​​​ಎಸ್​ಎಸ್​​ ಹೇಗೆ, ಏಕೆ ಬದಲಾಗುತ್ತಿದೆ? ಇಲ್ಲಿದೆ ವಿವರ

ತನ್ನ ಸಾಮಾಜಿಕ ಕಾರ್ಯವನ್ನು ದಾಖಲಿಸುವ ರಚನಾತ್ಮಕ ಕಾರ್ಯಕ್ರಮದ ಮೂಲಕ ಆರ್​ಎಸ್​ಎಸ್ ಬದಲಾಗುತ್ತಿದೆ. ಸಾಂಪ್ರದಾಯಿಕವಾಗಿ ಮಾಧ್ಯಮಗಳ ಜತೆ ತೆರೆದುಕೊಳ್ಳಲು ಹಿಂಜರಿಯುತ್ತಿದ್ದ ಸಂಘವು ಈಗ ತನ್ನ ದೈನಂದಿನ ಕೆಲಸ ಮತ್ತು ಆಂತರಿಕ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಸಕ್ರಿಯವಾಗಿ ಹಂಚಿಕೊಳ್ಳುತ್ತಿದೆ. ಆರ್​​​ಎಸ್​ಎಸ್​​ ಹೇಗೆ ಮತ್ತು ಏಕೆ ಬದಲಾಗುತ್ತಿದೆ ಎಂಬ ವಿವರ ಇಲ್ಲಿದೆ.

ಮಾಧ್ಯಮ ಸಂದರ್ಶನಗಳಿಂದ ಸಿನಿಮಾ ರಂಗದವರೆಗೆ; ಆರ್​​​ಎಸ್​ಎಸ್​​ ಹೇಗೆ, ಏಕೆ ಬದಲಾಗುತ್ತಿದೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
| Updated By: ಡಾ. ಭಾಸ್ಕರ ಹೆಗಡೆ

Updated on:Sep 30, 2023 | 12:31 PM

ತೆರೆಯ ಮರೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರೂ ಆರ್​ಎಸ್​ಎಸ್​ (RSS) ಅನ್ನು ಬಹುಸಂಖ್ಯಾತವಾದದ ಮೂಲಕವಷ್ಟೇ ನೋಡಲಾಗುತ್ತದೆ. ಈ ದೃಷ್ಟಿಕೋನದಿಂದ ಆರ್​ಎಸ್​​ಎಸ್​ ಅನ್ನು ನೋಡುವುದು ತಪ್ಪಾಗುತ್ತದೆ ಮತ್ತು ಅದು ಮಾಡಿದ ಅನೇಕ ಸಾಮಾಜಿಕ ಕಾರ್ಯಗಳನ್ನು ನಿರ್ಲಕ್ಷಿಸಿದಂತೆ ಎಂದು ಕೇಂದ್ರ ಸಚಿವ ಸಚಿವ ಭೂಪೇಂದ್ರ ಯಾದವ್ (Bhupendra Yadav) ಇತ್ತೀಚೆಗೆ ಹೇಳಿದ್ದರು. ನಾವು ಸಮಾಜವನ್ನು ಒಟ್ಟುಗೂಡಿಸಲು ಕೆಲಸ ಮಾಡುತ್ತೇವೆ. ಭಗವಾನ್ ಬುದ್ಧನ ಆಲೋಚನೆಗಳು ಮತ್ತು ಸಂಘದ ಆಲೋಚನೆಗಳು ಒಂದೇ ಆಗಿವೆ ಅವರು ಹೇಳಿದ್ದರು. ಈ ಹೇಳಿಕೆಯು ಆರ್​ಎಸ್​​ಎಸ್ ತನ್ನ ಜಾಗತಿಕ ದೃಷ್ಟಿಕೋನದ ಸಂಪೂರ್ಣ ಚಿತ್ರವನ್ನು ಜನರಿಗೆ ತಲುಪಿಸಲು ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತೆಯೇ ಆಗಿದೆ. ಆದರೆ, ಇದಕ್ಕೆ ಮುಖ್ಯ ಕಾರಣವೆಂದರೆ ಸಮೂಹ ಮಾಧ್ಯಮದೊಂದಿಗೆ ಆರ್‌ಎಸ್‌ಎಸ್‌ನ ಸಂವಹನದ ಕೊರತೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಆರ್​​ಎಸ್​​ಎಸ್ ಬದಲಾಗುತ್ತಿದೆ ಎಂದು.

ತನ್ನ ಸಾಮಾಜಿಕ ಕಾರ್ಯವನ್ನು ದಾಖಲಿಸುವ ರಚನಾತ್ಮಕ ಕಾರ್ಯಕ್ರಮದ ಮೂಲಕ ಆರ್​ಎಸ್​ಎಸ್ ಬದಲಾಗುತ್ತಿದೆ. ಸಾಂಪ್ರದಾಯಿಕವಾಗಿ ಮಾಧ್ಯಮಗಳ ಜತೆ ತೆರೆದುಕೊಳ್ಳಲು ಹಿಂಜರಿಯುತ್ತಿದ್ದ ಸಂಘವು ಈಗ ತನ್ನ ದೈನಂದಿನ ಕೆಲಸ ಮತ್ತು ಆಂತರಿಕ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಸಕ್ರಿಯವಾಗಿ ಹಂಚಿಕೊಳ್ಳುತ್ತಿದೆ. ಸಂಘದ ಉನ್ನತ ನಾಯಕರು ಪತ್ರಕರ್ತರೊಂದಿಗೆ ಸಂವಹನ ನಡೆಸಲು ಉತ್ಸುಕರಾಗುತ್ತಿರುವುದಲ್ಲದೆ ಕಾರ್ಯಕ್ರಮಗಳನ್ನು ಎಲ್ಲರಿಗೂ ಮುಕ್ತವಾಗಿರಿಸಿಕೊಳ್ಳುತ್ತಾರೆ. ಈ ಮೂಲಕ ಆರ್​ಎಸ್​ಎಸ್ ಬದಲಾಗುತ್ತಿದೆ ಮತ್ತು ಹೇಗೆ ಬದಲಾಗುತ್ತಿದೆ ಎಂಬ ವಿವರವನ್ನು ‘ದಿ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಆರ್​​​ಎಸ್​ಎಸ್​​ ಹೇಗೆ ಮತ್ತು ಏಕೆ ಬದಲಾಗುತ್ತಿದೆ ಎಂಬ ವಿವರ ಇಲ್ಲಿದೆ.

  1. ಸಂಘವು ಮುಖ್ಯವಾಹಿನಿಯ ಶಕ್ತಿಯಾಗಿರುವುದರಿಂದ ಇನ್ನು ಮುಂದೆ ನಾವು ಮಾಧ್ಯಮಗಳ ಜತೆ ಸಂವಹನ ತಪ್ಪಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆರ್​ಎಸ್​ಎಸ್ ಸಂಯೋಜಿತ ಸಂದರ್ಶನವೊಂದರಲ್ಲಿ ಹೇಳಿದ್ದರು. ಜನವರಿಯಲ್ಲಿ ನಿಯತಕಾಲಿಕೆಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್​​ನಲ್ಲಿ ಈ ವಿಚಾರದ ಬಗ್ಗೆ ಉಲ್ಲೇಖಿಸಲಾಗಿತ್ತು.
  2. ನಾವು ಅನೇಕ ವಿಷಯಗಳ ಬಗ್ಗೆ ಮಾಧ್ಯಮಗಳ ಬಳಿ ಹೇಳಬೇಕೆಂದು ಬಯಸುವುದಿಲ್ಲವಾದರೂ, ಹಾಗೆ ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇದು ಪ್ರತಿಕೂಲವಾಗಬಹುದು. ನಾವು ಏಕೆ ಅಡಗಿಕೊಳ್ಳುತ್ತಿದ್ದೇವೆ ಎಂದು ಅವರು ಆಶ್ಚರ್ಯಪಡಬಹುದು. ನಾವು ಮಾಧ್ಯಮವನ್ನು ಎದುರಿಸಬೇಕಾಗಿದೆ ಎಂದು ಭಾಗವತ್ ಹೇಳಿದ್ದರು.
  3. ಆರ್​​ಎಸ್​ಎಸ್ ಬದಲಾಗುತ್ತಿರುವುದರ ಮೊದಲ ಲಕ್ಷಣವೆಂದರೆ, 2016 ರಲ್ಲಿ ಆರ್​​ಎಸ್​​​ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಇಂಡಿಯಾ ಟುಡೇ ಕಾನ್​​ಕ್ಲೇವ್‌ನಲ್ಲಿ ಭಾಗವಹಿಸಿದ್ದಾಗಿದೆ.
  4. ಸಂಘದ ಉನ್ನತ ನಾಯಕರು ಸಾಂಪ್ರದಾಯಿಕವಾಗಿ ಕಾರ್ಪೊರೇಟ್ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮಗಳನ್ನು ಹಿಂದೆಲ್ಲ ತಪ್ಪಿಸಿದ್ದರು. ಆದರೆ 2017 ರಲ್ಲಿ ಹೊಸಬಾಳೆ ಹಾಗೂ ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಅವರು ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ್ದರು. ಇದು ಸಂಘವು ಮೊದಲು ಭಾಗವಹಿಸಿದ ಗಣ್ಯರ ಲೇಖಕರ ಸಭೆಯಾಗಿದೆ.
  5. ಸಿನಿಮಾ ರಂಗದ ಜತೆ ಕೂಡ ಈಗ ಆರ್‌ಎಸ್‌ಎಸ್ ತೊಡಗಿಸಿಕೊಂಡಿದೆ. ಸಂಘದ ಸಿದ್ಧಾಂತದೊಂದಿಗೆ ಹೊಂದಿಕೊಳ್ಳುವ ಚಲನಚಿತ್ರಗಳಿಗೆ ಬೆಂಬಲ ನೀಡುತ್ತಿದೆ. ಭಾಗವತ್ ಅವರು ಜೂನ್‌ನಲ್ಲಿ ಸಾಮ್ರಾಟ್ ಪೃಥ್ವಿರಾಜ್ ಅವರ ಪ್ರದರ್ಶನಕ್ಕೆ ಹಾಜರಾಗಿದ್ದರು ಮತ್ತು ಅದನ್ನು ವಿಶ್ವ ದರ್ಜೆಯ ಸಿನಿಮಾ ಎಂದು ಬಣ್ಣಿಸಿದ್ದರು.
  6. ಸಿನಿಮಾ ರಂಗದ ಜತೆಗಿನ ಹೆಚ್ಚಿನ ಕೆಲಸಗಳು 2016 ರಲ್ಲಿ ಸ್ಥಾಪಿಸಲಾದ ‘ಭಾರತೀಯ ಚಿತ್ರ ಸಾಧನ’ದ ಮೂಲಕ ನಡೆಯುತ್ತಿವೆ.
  7. ಇದರ ಗುರಿ ಭಾರತೀಯ ಮೌಲ್ಯಗಳು ಮತ್ತು ನೀತಿಗಳಿಗೆ ಬದ್ಧತೆ ಹೊಂದಿರುವ ಚಲನಚಿತ್ರ ನಿರ್ಮಾಪಕರನ್ನು ಪ್ರೋತ್ಸಾಹಿಸುವುದು ಮತ್ತು ಉತ್ತೇಜಿಸುವುದಾಗಿದೆ.
  8. ಆರ್​ಎಸ್​ಎಸ್ ತನ್ನ ಕೆಲಸವನ್ನು ದಾಖಲಿಸುವ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಕೂಡ ಹೊರತರುತ್ತಿದೆ. ಇವುಗಳನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಸಂಘವು ಕೇವಲ ಆಂತರಿಕ ಬಳಕೆಗಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು. ಆದರೆ, ಈಗ ನಾವು ಸಾರ್ವಜನಿಕರಿಗಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ ಎಂದು ಹಿರಿಯ ಆರ್‌ಎಸ್‌ಎಸ್ ಸ್ವಯಂಸೇವಕರೊಬ್ಬರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Sat, 30 September 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ