AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಾಂಜಲಿಯ ಕೊರೋನಿಲ್ ಅನ್ನು ಕೋವಿಡ್ ಔಷಧಿ ಕಿಟ್​ನಲ್ಲಿ ಸೇರಿಸದಿರುವಂತೆ ಐಎಮ್​ಎ ಆಗ್ರಹ

ಈಗ ಜಾರಿಯಲ್ಲಿರುವ ತಿಕ್ಕಾಟದ ನಡುವೆಯೇ ಉತ್ತರಾಖಂಡ್ ಕೋವಿಡ್-10ಕಿಟ್​ನಲ್ಲಿ ಕೊರೋನಿಲ್ ಸೇರಿಸಬೇಕೆನ್ನುವ ಪ್ರಸ್ತಾಪವನ್ನು ಪತಾಂಜಲಿ ಮಾಡಿದೆ. ಅಲೋಪಥಿ ಮತ್ತು ಅಯುರ್ವೇದವನ್ನು ಬೆರೆಸುವುದು ವೈದ್ಯಕೀಯ ಪ್ರಮಾದ ಎಂದು ಐಎಮ್​ಎ ಹೇಳಿದೆ.

ಪತಾಂಜಲಿಯ ಕೊರೋನಿಲ್ ಅನ್ನು ಕೋವಿಡ್ ಔಷಧಿ ಕಿಟ್​ನಲ್ಲಿ ಸೇರಿಸದಿರುವಂತೆ ಐಎಮ್​ಎ ಆಗ್ರಹ
ಪತಾಂಜಲಿಯ ಕೊರೋನಾ ಕಿಟ್
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on:Jun 06, 2021 | 1:44 AM

Share

ಭಾರತೀಯ ವೈದ್ಯಕೀಯ ಸಂಸ್ಥೆ (ಐಎಮ್​ಎ)ಯ ಉತ್ತರಾಖಂಡ್ ಚಾಪ್ಟರ್ ಪತಾಂಜಲಿ ಆಯುರ್ವೇದ ಸಂಸ್ಥೆಯ ಕೊರೋನಿಲ್ ಔಷಧಿಯನ್ನು ಉತ್ತರಾಖಂಡ್ ಸರ್ಕಾರದ ಕೋವಿಡ್-19 ಕಿಟ್​ನಲ್ಲಿ ಸೇರಿಸುವುದನ್ನು ವಿರೋಧಿಸಿದೆ. ವೈದ್ಯರ ಮಂಡಳಿಯು ಕರೋನಿಲ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆದಿಲ್ಲ ಮತ್ತ ಭಾರತದ ಔಷಧ ಮಹಾ ನಿಯಂತ್ರಕರಿಂದಲೂ (ಡಿಸಿಜಿಐ ) ಅದೊಂದು ಔಷಧಿ ಎಂಬಂತೆ ದೃಢಪಟ್ಟಿಲ್ಲ ಎಂದು ಹೇಳಿದೆ. ‘ಆದರೆ ಕೇಂದ್ರ ಸರ್ಕಾರದ ಆಯುಷ್ ವಿಭಾಗದಿಂದ ಕೊರೋನಿಲ್ ಒಂದು ಪೂರಕ ಆಹಾರ ವಸ್ತುವಾಗಿ ಅಂಗೀಕೃತಗೊಂಡಿದೆ ಮತ್ತು ಬಾಬಾ ರಾಮದೇವ್ ಅವರು ರಾಷ್ಟ್ರೀಯ ಟಿವಿ ಚ್ಯಾನಲ್​ಗಳಲ್ಲಿ ಪ್ರತಿಗಂಟೆ ಜಾಹೀರಾತುಗಳ ಮೂಲಕ ದಾವೆ ಮಾಡುತ್ತಿರುವ ಹಾಗೆ ಅದು ಡ್ರಗ್ ಅಥವಾ ಔಷಧಿ ಅಲ್ಲ,’ ಎಂದು ಉತ್ತರಾಖಂಡ್ ಐಎಮ್​ಎನ ರಾಜ್ಯ ಕಾರ್ಯದರ್ಶಿಯಾಗಿರುವ ಡಾ ಅಜಯ ಖನ್ನಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಅಲೋಫೆಥಿಕ್ ಔಷಧಿಗಳ ಬಗ್ಗೆ ಯೋಗ ಗುರು ಬಾಬಾ ರಾಮ್​​ದೇವ್ ಅವರು ಹಗುರವಾಗಿ ಮಾತಾಡಿದ ನಂತರ ರೊಚ್ಚಿಗೆದ್ದಿರುವ ಭಾರತೀಯ ವೈದ್ಯಕೀಯ ಸಂಸ್ಥೆ ಅವರ ವಿರುದ್ಧ ಯುದ್ಧವನ್ನೇ ಸಾರಿದೆ. ವಿವಾದ ಇನ್ನೂ ಬಿಸಿಯಾಗಿದ್ದು ರಾಮ್​ದೇವ್ ಅವರ ವಿರುದ್ಧ ಐಎಮ್​ಎ ದೂರುಗಳನ್ನು ದಾಖಲಿಸಿದೆ.

ಈಗ ಜಾರಿಯಲ್ಲಿರುವ ತಿಕ್ಕಾಟದ ನಡುವೆಯೇ ಉತ್ತರಾಖಂಡ್ ಕೋವಿಡ್-10ಕಿಟ್​ನಲ್ಲಿ ಕೊರೋನಿಲ್ ಸೇರಿಸಬೇಕೆನ್ನುವ ಪ್ರಸ್ತಾಪವನ್ನು ಪತಾಂಜಲಿ ಮಾಡಿದೆ. ಅಲೋಪಥಿ ಮತ್ತು ಅಯುರ್ವೇದವನ್ನು ಬೆರೆಸುವುದು ವೈದ್ಯಕೀಯ ಪ್ರಮಾದ ಎಂದು ಐಎಮ್​ಎ ಹೇಳಿದೆ.

‘ಕೊರೋನಿಲ್ ಅನ್ನು ಅಲೋಪೆಥಿಕ್ ಔಷಧಿಗಳೊಂದಿಗೆ ಬೆರಸುವುದು ಮಿಕ್ಸೊಪಥಿಗೆ ಎಡೆಮಾಡಿಕೊಟ್ಟಂತಾಗುತ್ತದೆ ಹಾಗೂ ಗೌರವಾನ್ವಿತ ಸುಪ್ರೀಮ್ ಕೋರ್ಟಿನ ರೂಲಿಂಗ್ ಒಂದರ ಪ್ರಕಾರ ಅಲೋಪಥಿ ಮತ್ತು ಅಯುರ್ವೇದದ ಕಾಕ್​ಟೇಲ್​ಗೆ ಅನುಮತಿಯಿಲ್ಲ. ಅಪೆಕ್ಸ್ ಕೋರ್ಟ್​ ಅಲ್ಲದೆ ವಿವಿಧ ರಾಜ್ಯಗಳಲ್ಲಿನ ಕೋರ್ಟುಗಳೂ ಮಿಕ್ಸೊಪಥಿ ಸಲ್ಲದು ಎಂದು ಹೇಳಿವೆ,’ ಎಂದು ಐಎಮ್​ಎ ಹೇಳಿದೆ.

ಕೊರೋನಿಲ್ ಲಾಂಚ್​ ಆದಾಗಿನಿಂದ ವಿವಾದದಲ್ಲಿ ಮುಳುಗಿದೆ. ಕಳೆದ ವರ್ಷ ಉತ್ತರಾಖಂಡ್ ಸರ್ಕಾರವು ಪತಾಂಜಲಿಗೆ ರೋಗ ಇರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಪಾದನೆ ತಯಾರಿಸಲು ಅನುಮತಿ ನೀಡಲಾಗಿತ್ತೇ ಹೊರತು ಕೊರೋನಾ ವೈರಸ್​ ಸೋಂಕಿನ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಔಷಧಿ ತಯಾರಿಸಲು ಅಲ್ಲವೆಂದು ಹೇಳಿತ್ತು.

ರೂ. 545 ಬೆಲೆಯ ಈ ಕಿಟ್ ಮೂರು ವಸ್ತುಗಳನ್ನು ಹೊಂದಿದೆ-ಕೊರೋನಿಲ್ ಮಾತ್ರೆ, ಸ್ವಸಾರಿ ವಾಟಿ, ಮತ್ತು ಅನು ತೈಲ. ಹರಿಯಾಣ ಸರ್ಕಾರವು ಒಂದು ಲಕ್ಷ ಕೊರೋನಿಲ್ ಕಿಟ್​ಗಳನ್ನು ಕೋವಿಡ್​-19 ಸೋಂಕಿತರಿಗೆ ಉಚಿತವಾಗಿ ಹಂಚಲಾಗುವುದು ಎಂದು ಕಳೆದ ತಿಂಗಳು ಹೇಳಿತ್ತು.

ಇದನ್ನೂ ಓದಿ: Ramdev: ಅಲೋಪತಿ ವೈದ್ಯವನ್ನು ಸ್ಟುಪಿಡ್​ ಅಂದಿದ್ದ ಪತಂಜಲಿ ಬಾಬಾ ರಾಮದೇವ್​​ಗೆ ದೆಹಲಿ ಹೈಕೋರ್ಟ್​ ಸಮನ್ಸ್​

Published On - 1:44 am, Sun, 6 June 21

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ