AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2022: 75 ಅಡಿ ಉದ್ದದ ಪರಿಸರ ಸ್ನೇಹಿ ತ್ರಿವರ್ಣ ಧ್ವಜ ರಚಿಸಿದ ವಿಕಲಚೇತನ ಯುವಕರು

40 ವಿಕಲಚೇತನ ಮಕ್ಕಳು ನಾಲ್ಕು ಗಂಟೆಗಳಲ್ಲಿ 75 ಅಡಿ ಉದ್ದದ ರಾಷ್ಟ್ರಧ್ವಜವನ್ನು ರಚಿಸಿದ್ದಾರೆ. 5-25 ವರ್ಷ ವಯಸ್ಸಿನವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಧ್ವಜಗಳ ಬಣ್ಣಗಳನ್ನು ಸೂಚಿಸಲು ತುಳಸಿ, ಕಾಗದ ಮತ್ತು ಹೂವುಗಳಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದ್ದಾರೆ.

Independence Day 2022: 75 ಅಡಿ ಉದ್ದದ ಪರಿಸರ ಸ್ನೇಹಿ ತ್ರಿವರ್ಣ ಧ್ವಜ ರಚಿಸಿದ ವಿಕಲಚೇತನ ಯುವಕರು
75 feet long eco-friendly tricolor
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 15, 2022 | 9:50 AM

Share

ಮುಂಬೈ: ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 40 ವಿಕಲಚೇತನ ಮಕ್ಕಳು ನಾಲ್ಕು ಗಂಟೆಗಳಲ್ಲಿ 75 ಅಡಿ ಉದ್ದದ ರಾಷ್ಟ್ರಧ್ವಜವನ್ನು ರಚಿಸಿದ್ದಾರೆ. 5-25 ವರ್ಷ ವಯಸ್ಸಿನವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಧ್ವಜಗಳ ಬಣ್ಣಗಳನ್ನು ಸೂಚಿಸಲು ತುಳಸಿ, ಕಾಗದ ಮತ್ತು ಹೂವುಗಳಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದ್ದಾರೆ. ಧ್ವಜದಲ್ಲಿ ಕೇಸರಿ ಬಣ್ಣವನ್ನು ಮಾರಿಗೋಲ್ಡ್ ಹೂಗಳನ್ನು ಬಳಸಿ, ಹಸಿರು ಬಣ್ಣಕ್ಕೆ ತುಳಸಿ ಎಲೆಗಳನ್ನು ಬಳಸಿ ಮತ್ತು ಧ್ವಜದ ಬಿಳಿ ಭಾಗವನ್ನು ನೀಲಿ ಬಣ್ಣದ ಅಶೋಕ ಚಕ್ರವನ್ನು ಕಾಗದಗಳನ್ನು ಬಳಸಿ ರಚಿಸಲಾಗಿದೆ.

ಈವೆಂಟ್ ಅನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ), ಜಿ/ನಾರ್ತ್ ವಾರ್ಡ್ ಕಚೇರಿ ಆಯೋಜಿಸಲಾಗಿತ್ತು ಮತ್ತು ಹಿರಿಯ ಅಧಿಕಾರಿಗಳು ಈ ಕಾರ್ಯವನ್ನು ಲಿಮ್ಕಾ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು. ಈ ಮಕ್ಕಳ ಹೆಸರು ದಾಖಲೆ ಪುಸ್ತಕದಲ್ಲಿ ದಾಖಲಾಗುವ ವಿಶ್ವಾಸವಿದೆ, ದೇಶದಲ್ಲಿಯೇ ಪ್ರಥಮ ಬಾರಿಗೆ ಇಂತಹದೊಂದು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಧ್ವಜವನ್ನು ತಯಾರಿಸಲು ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರು ಎಂದು ಅವರು ಹೇಳಿದರು. ನಾವು ಬೆಳಿಗ್ಗೆ 9 ಗಂಟೆಯಿಂದ ಧ್ವಜವನ್ನು ತಯಾರಿಸಲು ಪ್ರಾರಂಭಿಸಿದ್ದೇವೆ ಮತ್ತು ಮಧ್ಯಾಹ್ನ 1 ಗಂಟೆಗೆ ಮುಗಿಸಿದ್ದೇವೆ. ಉತ್ತಮ ಅನುಭವವನ್ನು ಮತ್ತು ಒಂದು ಒಳ್ಳೆಯ ಅವಕಾಶವನ್ನು ನೀಡಲಾಗಿದೆ ಎಂದು ಭೂಷಣ್ ಥೋಮ್ರೆ ಹೇಳಿದರು. ಸ್ಪರ್ಧಿ ಮನಶ್ರೀ ಸೋಮನ್, ಇದು ಪರಿಸರ ತ್ರಿವರ್ಣ ಧ್ವಜವಾಗಿದ್ದು, ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದಲ್ಲಿ ಭಾಗವಹಿಸುವ ಪ್ರಾಥಮಿಕ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ
Image
Independence Day 2022: ಅನಾಮಧೇಯ ಹೋರಾಟಗಾರರಿಗೆ ಅಮೃತ ಮಹೋತ್ಸವ ಅರ್ಪಣೆ: ಬಸವರಾಜ ಬೊಮ್ಮಾಯಿ
Image
Independence Day 2022: ಭಾರತ ಪ್ರಜಾಪ್ರಭುತ್ವದ ತಾಯಿ, ವೈವಿಧ್ಯತೆಯೇ ಅದರ ಶಕ್ತಿ; ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ
Image
Independence Day 2022: ಆಗಸ್ಟ್ 15ರಂದೇ ಭಾರತ ಸ್ವತಂತ್ರ್ಯದಿನವನ್ನು ಆಚರಿಸುವುದೇಕೆ? ಈ ದಿನದ ಇತಿಹಾಸ, ಮಹತ್ವವೇನು?
Image
President Speech ಭಾರತದ ಹೊಸ ಆತ್ಮವಿಶ್ವಾಸದ ಮೂಲ ಯುವಕರು, ರೈತರು ಮತ್ತು ಮಹಿಳೆಯರು: ದ್ರೌಪದಿ ಮುರ್ಮು

ಕಳೆದ 15 ವರ್ಷಗಳಿಂದ ಈ ಮಕ್ಕಳಿಗೆ ತರಬೇತಿ ನೀಡುತ್ತಿರುವ ಎನ್‌ಜಿಒ ಶ್ರೀರಂಗ ಚಾರಿಟಬಲ್ ಟ್ರಸ್ಟ್‌ನ ಸುಮಿತ್ ಪಾಟೀಲ್, ಈ ಮಕ್ಕಳಿಗೆ ರಾಷ್ಟ್ರಧ್ವಜ ಹೇಗಿದೆ ಎಂದು ತಿಳಿದಿಲ್ಲ ಆದರೆ ಅವರ ಈ ಸಮರ್ಪಣೆ ಶ್ಲಾಘನೀಯ.

ತ್ರಿವರ್ಣ ಧ್ವಜ ಹೇಗಿದೆ ಎಂದು ತಿಳಿಯದಿದ್ದರೂ ಈ ಮಕ್ಕಳು ಧ್ವಜವನ್ನು ವಿನ್ಯಾಸಗೊಳಿಸಿರುವುದು ಒಂದು ವಿಶೇಷವಾಗಿದೆ. ನಾವು ತಯಾರಿಸಿದ ಸಂಪೂರ್ಣ ಪರಿಸರ ಸ್ನೇಹಿ ಧ್ವಜ ಇದಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಮುಗಿದ ನಂತರ ಅಗರಬತ್ತಿ (ಅಗರಬತ್ತಿ) ನಿರ್ಮಿಸಲು ಹೂಳುಗಳನ್ನು ಬಳಸುತ್ತೇವೆ ಎಂದು ಪಾಟೀಲ್ ಹೇಳಿದರು.

Published On - 9:50 am, Mon, 15 August 22

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ