AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದನವಿರಾಮ ಪ್ರಸಂಗ: ಬೇರೆಯೇ ಕಥೆ ಹೇಳುತ್ತವೆ ಭಾರತ ಮತ್ತು ಪಾಕಿಸ್ತಾನ ನಾಯಕರ ಹೇಳಿಕೆಗಳು

India and Pakistan leaders' statement on ceasefire: ಭಾರತ ಮತ್ತು ಪಾಕಿಸ್ತಾನದ ನಾಯಕರು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲು ಘೋಷಣೆ ಮಾಡಿದರು. ಪಾಕಿಸ್ತಾನದ ನಾಯಕರು ಟ್ರಂಪ್ ಅವರನ್ನು ಹೊಗಳುತ್ತಾ, ಕದನ ವಿರಾಮ ಘೋಷಣೆ ಸ್ವಾಗತಿಸಿದರು. ಆದರೆ, ಭಾರತದ ನಾಯಕರು ನೀಡಿದ ಹೇಳಿಕೆಯಲ್ಲಿ ಟ್ರಂಪ್ ಇರಲಿ, ಅಮೆರಿಕದ ಹೆಸರನ್ನೂ ಎತ್ತದೇ ಇದ್ದದ್ದು ಗಮನಾರ್ಹ.

ಕದನವಿರಾಮ ಪ್ರಸಂಗ: ಬೇರೆಯೇ ಕಥೆ ಹೇಳುತ್ತವೆ ಭಾರತ ಮತ್ತು ಪಾಕಿಸ್ತಾನ ನಾಯಕರ ಹೇಳಿಕೆಗಳು
ಡೊನಾಲ್ಡ್ ಟ್ರಂಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 11, 2025 | 1:57 PM

ನವದೆಹಲಿ, ಮೇ 11: ಭಾರತ ಮತ್ತು ಪಾಕಿಸ್ತಾನ ನಡುವೆ ಮಿಸೈಲ್, ಡ್ರೋನ್, ಬಾಂಬುಗಳ ಚಕಮಕಿಯ ನಡುವೆ ನಿನ್ನೆ ಸಂಜೆ ಡೊನಾಲ್ಡ್ ಟ್ರಂಪ್ ದಿಢೀರ್ ತಮ್ಮ ಎಕ್ಸ್​​ನಲ್ಲಿ ಸೀಸ್ ಫೈರ್ (Ceasefire) ಘೋಷಣೆ ಮಾಡಿದರು. ಭಾರತ ಮತ್ತು ಪಾಕಿಸ್ತಾನ ದೇಶಗಳು (India-Pakistan) ತತ್​ಕ್ಷಣದ ಮತ್ತು ಪೂರ್ಣ ಕದನ ವಿರಾಮಕ್ಕೆ ಒಪ್ಪಿವೆ ಎಂದು ಆ ಪೋಸ್ಟ್​​​ನಲ್ಲಿ ಟ್ರಂಪ್ ಬರೆದರು. ಅಷ್ಟೇ ಅಲ್ಲ, ಸಾಮಾನ್ಯ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬಳಸಿದ ಎರಡೂ ದೇಶಗಳಿಗೆ ಧನ್ಯವಾದ ಎಂದು ಹೇಳಿದರು. ಅವರ ಭಾಷೆಯ ಬಳಕೆಯಲ್ಲಿ ವ್ಯಂಗ್ಯವೂ ಕಂಡಿದ್ದರೆ ಅಚ್ಚರಿ ಇಲ್ಲ. ಈ ಹಿಂದೆಯೂ ಅವರು ಆಪರೇಷನ್ ಸಿಂದೂರದ ಬಳಿಕ ಉದ್ಧಟತನ ಎಂದನಿಸುವ ಹೇಳಿಕೆ ನೀಡಿದ್ದರು. ಭಾರತ ಮತ್ತು ಪಾಕಿಸ್ತಾನದ ವರ್ತನೆಯನ್ನು ನಾಚಿಕೆಗೇಡಿತನ ಎಂದು ಮಾತಿನಿಂದ ತಿವಿದಿದ್ದರು. ಈ ಎರಡೂ ದೇಶಗಳು ದಶಕಗಳು, ಶತಮಾನಗಳಿಂದಲೂ ಕಿತ್ತಾಡುತ್ತಿವೆ ಎಂದು ಲೇವಡಿ ಮಾಡಿದ್ದರು.

ನಿನ್ನೆ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಒಪ್ಪಿವೆ ಎಂದು ಮೊದಲು ಘೋಷಣೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕಕ್ಕೆ ಧನ್ಯವಾದ ಹೇಳಿ ಪೋಸ್ಟ್ ಹಾಕಿದ್ದರು. ಪಾಕಿಸ್ತಾನದ ಇತರ ಮುಖಂಡರೂ ಕೂಡ ಕದನ ವಿರಾಮದಿಂದ ಖುಷಿಪಟ್ಟು ಪೋಸ್ಟ್ ಹಾಕಿದ್ದುಂಟು.

ಇದನ್ನೂ ಓದಿ
Image
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ
Image
ಶಾಂತಿ ಕಾಪಾಡಿ ಎಂದ ಚೀನಾ ವಿದೇಶಾಂಗ ಸಚಿವಗೆ ಅಜಿತ್ ದೋವಲ್ ಹೇಳಿದ್ದೇನು?
Image
ಭಾರತ ಯುದ್ಧದಲ್ಲಿ ಮೇಲುಗೈ ಸಾಧಿಸಿದಾಗಲೆಲ್ಲಾ ಅಮೆರಿಕದ ಮೊರೆ ಹೋಗುವ ಪಾಕ್
Image
ಆಪರೇಷನ್​ ಸಿಂಧೂರ್​ನಿಂದ ಕದನ ವಿರಾಮದವರೆಗೆ, 86 ಗಂಟೆಗಳಲ್ಲಿ ಏನೇನು ನಡೀತು?

ಸಂಜೆ 6ಗಂಟೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿರುವ ಸಂಗತಿ ಘೋಷಿಸಿದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿರುವುದನ್ನು ತಿಳಿಸಿದರು. ಆದರೆ, ಇಬ್ಬರೂ ಕೂಡ ಅಮೆರಿಕದ ಮಧ್ಯಪ್ರವೇಶದ ವಿಚಾರ ಇರಲಿ, ಅದರ ಹೆಸರನ್ನೇ ಎತ್ತಲಿಲ್ಲ ಎಂಬುದು ಕುತೂಹಲ. ವಿಕ್ರಮ್ ಮಿಸ್ರಿ ಅವರಂತೂ ಪತ್ರಿಕಾಗೋಷ್ಠಿಯಲ್ಲಿ ಬಹಳ ಚಿಕ್ಕದಾಗಿ ಕದನ ವಿರಾಮ ನಿರ್ಧಾರ ಪ್ರಕಟಿಸಿ ಹಾಗೇ ಎದ್ದುಹೋಗಿಬಿಟ್ಟರು. ಅವರ ಮಾತಿನಲ್ಲಿ ಉತ್ಸಾಹ ಇರಲಿಲ್ಲ. ಮಾಧ್ಯಮದವರ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ಹೇಳುವ ಉತ್ಸಾಹವೂ ಇರಲಿಲ್ಲ.

ಇದನ್ನೂ ಓದಿ: ಹೇಗಾದ್ರೂ ಕಿತ್ತಾಡಿಕೊಳ್ಳಿ ಎನ್ತಿದ್ದ ಅಮೆರಿಕ ದಿಢೀರ್ ಮಧ್ಯಪ್ರವೇಶಿಸಲು ಕಾರಣವಾಗಿತ್ತು ಭಾರತದ ಈ ಒಂದು ಅಟ್ಯಾಕ್

ಪಾಕಿಸ್ತಾನದ ವಿಚಾರದಲ್ಲಿ ಅಮೆರಿಕವಾಗಲೀ, ಮೂರನೇ ದೇಶವಾಗಲಿ ಮೂಗು ತೋರಿಸುವುದು ಭಾರತಕ್ಕೆ ಮೊದಲಿಂದಲೂ ಇಷ್ಟ ಇರಲಿಲ್ಲ. ಈಗಲೂ ಅದು ಇದ್ದಂತಿಲ್ಲ ಎಂದೆನ್ನುತ್ತಾರೆ ಅಮೆರಿಕದ ಥಿಂಕ್ ಟ್ಯಾಂಕ್ ಎನಿಸಿದ ಹಡ್ಸನ್ ಇನ್ಸ್​​ಟಿಟ್ಯೂಟ್​ನಲ್ಲಿ ರಿಸರ್ಚ್ ಫೆಲೋ ಆಗಿರುವ ಡಾ. ಅಪರ್ಣಾ ಪಾಂಡೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Sun, 11 May 25

ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ